ಬೇಕು ಬೇಕೆಂಬ ಹಂಬಲ ಬೇಡ


Team Udayavani, Nov 16, 2022, 5:45 AM IST

ಬೇಕು ಬೇಕೆಂಬ ಹಂಬಲ ಬೇಡ

ಶ್ರೀರಾಮಕೃಷ್ಣ ಪರಮಹಂಸರು ಮನುಷ್ಯರಲ್ಲಿ ಪ್ರಾಪಂಚಿಕ ಸುಖದ ಆಸೆಗಳು ಅತಿಯಾಗಿ ಇರಬಾರದು ಎಂಬು ದನ್ನು ಹೀಗೆ ಹೇಳಿದ್ದಾರೆ- “ನೀರಿನ ಮೇಲೆ ದೋಣಿ ಇರಬಹುದು, ಆದರೆ ದೋಣಿಯೊಳಗೆ ನೀರು ಇರಕೂಡದು. ಸಾಧಕ ‌ನು ಪ್ರಪಂಚದಲ್ಲಿರಬಹುದು. ಆದರೆ ಪ್ರಾಪಂಚಿಕತೆಯು ಅವನಲ್ಲಿ ಇರಕೂಡದು’ ಎಂದು. ಆಸೆ ಎಂಬುದರ ಮಾನವ ಬದುಕಿನ ಸಂಜೀವಿನಿ, ಎಲ್ಲ ಕ್ರಿಯೆ, ಚೈತನ್ಯಗಳ ಮೂಲ ಸೆಲೆ’ ಎಲ್ಲ ಸಾಧನೆಗಳ ಪ್ರಾರಂಭಿಕ ಬಿಂದುವೇ ಆಸೆ; ಅದನ್ನು ಮರೆಯುವಂತಿಲ್ಲ. ಆದರೆ ಅದ ಕ್ಕೊಂದು ಮಿತಿ ಹಾಕಿಕೊಳ್ಳದಿದ್ದರೆ ಪೂರ್ಣವಿ ರಾಮವಿಲ್ಲದ ವಾಕ್ಯದಂತೆ ದೀರ್ಘ‌ ವಾಗುತ್ತಲೇ ಹೋಗುತ್ತದೆ.

ಆಸೆ ಎಂಬುದು ರಕ್ತ ಬೀಜಾಸುರನ ಸಂತತಿ. ಒಂದು ತರಿಸಿದರೆ ಮತ್ತೊಂದರ ಮೊಳಕೆ. ಇದು ಒಬ್ಬನ ಸಮಸ್ಯೆಯಲ್ಲ, ಬಹುತೇಕ ಎಲ್ಲರ ಆಸೆಯೂ ಇದೇ. ಆಸೆ ಎಂಬ ಆಕ್ಟೋಪಸ್‌ ಹಿಡಿತದಿಂದ ಪಾರಾಗು ವುದು ಕಷ್ಟ ಸಾಧ್ಯ. ಅದು ಅಪಾರ ಮನೋ ನಿಗ್ರಹವನ್ನು ಬಯಸುತ್ತದೆ. ಆಸೆಯೇ ಇಲ್ಲದಾತ ಹಾಗೂ ನಿರ್ವಿಕಾರ ಚಿತ್ತದಿಂದ ಆಸೆ ನಿಯಂತ್ರಿಸಿಕೊಳ್ಳ ಬಲ್ಲಾತನೇ ಮಹಾತ್ಮ.

ಕನ್ನಡದ ಭಗವದ್ಗೀತೆ ಎಣಿಸಿದ “ಮಂಕುತಿಮ್ಮನ ಕಗ್ಗ’ದ ದಾರ್ಶನಿಕ ಕವಿ ಡಿ.ವಿ.ಜಿ. ಅವರು “ಬೇಕು ಬೇಕೆನುತ ಬೊಬ್ಬಿಡುವಂತಹ ಘಟವನಿದನು ಏಕೆಂದು ರಚಿಸಿದನೋ ಬೊಬ್ಬಿನು, ಈ ಬೇಕು ಜಪ ಸಾಕೆನಿಪುದೆಂದಿಗೆಲೊ ಮಂಕು ತಿಮ್ಮ’ ಎಂದು ವ್ಯಂಗ್ಯವಾಡಿದ್ದಾರೆ! ಇನ್ನೂ ಬೇಕು ಎನ್ನುವವನೇ ಬಡವ, ಸಾಕೆನ್ನುವವನೇ ಸಾಹುಕಾರ… ಎಂಬುದು ಯಥಾರ್ಥವಾದ ಮಾತು. ಮನದೊಳಗಿನ ಆಸೆಗೆ ಕುದುರೆಯ ವೇಗ ಲಗಾಮು ಬೇಕೇ ಬೇಕು, ಇಲ್ಲದಿರೆ ಅವನದಕ್ಕೆ ಗುಲಾಮ.

ಸಂತೃಪ್ತಿ ಮನಸ್ಸಿಗೆ ಸುಖದ ಸ್ಥಿತಿ. ಈ ಹಿನ್ನೆಲೆಯಲ್ಲಿಯೇ ಗೌತಮ ಬುದ್ಧನು ‘ಆಸೆಯೇ ದುಃಖಕ್ಕೆ ಮೂಲ’ ಎಂದಿ ರುವುದು. ಆದರೆ ಆಸೆಯೇ ಬೇಡ ಎನ್ನುವಂತಿಲ್ಲ. ಅತ್ಯಾಸೆಯನ್ನು ತ್ಯಜಿ ಸಬೇಕು ಅಷ್ಟೇ. ಅಲ್ಲದೆ ಪರಸ್ಪರ ಹೋಲಿಕೆಯಿಂದ ಅಶಾಂತಿ, ಮನಸ್ಸಿನಲ್ಲಿ ಕಿರಿಕಿರಿ ಹುಟ್ಟಿ ಬೆಳೆಯುತ್ತ ಜೀವಿತವು ದುಃಖಮಯವಾಗುತ್ತದೆ. ಹೋಲಿಕೆ ಬೇಕೆನಿಸಿದರೆ ನಮಗಿಂತ ಕೆಳಗಿನವರೊಂದಿಗೇ. ಆಗ ನಮ್ಮ ಸುಖದ ಮಟ್ಟವು ತಟ್ಟನೆ ಮೇಲೇರಿದ ಅರಿವು ನಮಗೆ ಆಗುತ್ತಲೇ ತೃಪ್ತಿ, ಶಾಂತಿ ಲಭಿಸುತ್ತದೆ. “ಹಳೆಯ ಹರಿದ ಚಪ್ಪಲಿಧಾರಿಯು, ಬರಿಗಾಲಿನಲ್ಲಿ ನಡೆಯುವನನ್ನು ಕಂಡು ಸಂತೃಪ್ತಿಯ ಉಸಿರೆಳೆದಂತೆ! ಈ ಸಂತೃಪ್ತಿಯು ಕಲ್ಲುಸಕ್ಕರೆಯಂತೆ ಸವಿಯೂ, ಔಷಧದಂತೆ ಸತ್ವಶಾಲಿಯೂ ಆಗಿ ಉಳಿಯುತ್ತದೆ.

ದುರಾಶೆಯ ಮಾನವನು ಪ್ರಕೃತಿಜನ್ಯವಾದ ಸಕಲ ಸಂಪನ್ಮೂಲಗಳನ್ನು ಧಾರಾಳವಾಗಿ ಬಳಸಿಕೊಂಡು ಇದೀಗ ಸಸ್ಯರಾಶಿಯಾದ ಕಾಡನ್ನು ಕಡಿಯುತ್ತಿದ್ದಾನೆ. ಇದು ಪ್ರಕೃತಿ ವಿಕೋಪ, ಪ್ರಾಣಿಗಳ ವಿನಾಶ, ಹವಾಮಾನ ವೈಪರೀತ್ಯ ಹತ್ತು ಹಲವು ಸಮಸ್ಯೆಗಳಿಗೆ ಆಗರವಾಗಿದೆ. ಶ್ರೀ ಶಂಕರಾಚಾರ್ಯರು ತಮ್ಮ ‘ಭಜ ಗೋವಿಂದಂ’ ಸ್ತೋತ್ರದಲ್ಲಿನ ಒಂದು ಪದ್ಯದಲ್ಲಿ “ಆಸೆಯು ಚಿರಾಯು” ಎಂಬ ಭೇದವನ್ನು ಹೀಗೆ ವ್ಯಕ್ತಪಡಿಸಿದ್ದಾರೆ.
ದಿನರಪಿ ರಜನಿ ಸಾಯಂ ಪ್ರಾತಃ
ಶಿಶಿರ ವಸಂತಾ ಪುನರಾಯತಃ
ಕಾಲಃ ಕ್ರೀಡಾ ಗಚ್ಚತ್ಯಾಯು
ಸ್ತದಪಿ ಮುಂಚತ್ಯಾಶಾವಾಯಃ
ಹಗಲು ಇರುಳು, ಬೆಳಗು, ಬೈಗು, ಶಿಶಿರ ವಸಂತಗಳು ಬಂದು ಹೋಗುತ್ತಲೇ ಇರು ತ್ತವೆ. ಕಾಲವು ಆಟವಾಡುತ್ತಿದೆ. ಆಯಸ್ಸು ಕಳೆಯುತ್ತಿದೆ. ಆದರೂ ಆಸೆಯು ಹೋಗು ವುದಿಲ್ಲ… ಎಂಥ ಸುಂದರ ಚಿತ್ರಣ, ಹಿನ್ನೆಲೆ ಮಾತ್ರ ವಿಷಾದನೀಯ.

ಇಂದಿನ ದಿನಗಳಲ್ಲಿ ಕೆಲವರು, ಕೊಳ್ಳುಬಾಕ ಚಟಕ್ಕೆ ಬಲಿಯಾಗಿರುವುದು, ಬೇಕು ಇನ್ನೂ ಬೇಕೆಂಬ ಹಂಬಲದ ಮತ್ತೂಂದು ಮುಖವಾಗಿದ್ದು ಅದಕ್ಕೂ ಕಡಿ ವಾಣ ಬಿದ್ದರೆ ಒಳಿತು. ಒಂದು ಅರ್ಥದಲ್ಲಿ ಆಸೆಗಳ ವಿರುದ್ಧ ನಮ್ಮನ್ನು ನಾವು ಗೆಲ್ಲುವುದೇ ನಿಜವಾದ ವಿಜಯ! ಅಂಥವರು ಮಹಾತ್ಮರ ಪಟ್ಟಕ್ಕೆ ಏರಿ ಬಹು ಮಾನ್ಯತೆ ಗಳಿಸಿದ್ದಾರೆ. ಕಳಿಂಗ ಯುದ್ಧದ ವಿಜಯಶಾಲಿ ಅಶೋಕ ಚಕ್ರವರ್ತಿ ಅಪಾರ ರಕ್ತಪಾತ, ಜೀವಹಾನಿಗಳನ್ನು ಕಂಡು ಯುದ್ಧಕ್ಕೇ ತಿಲಾಂಜಲಿಯಿತ್ತ. ರಾಜ್ಯಲಕ್ಷ್ಮೀಯನ್ನು, ಸಕಲ ಸುಖವೈಭೋಗಗಳನ್ನು ತಾನಾಗಿ ತ್ಯಜಿಸಿದ ರಾಜ ಕುಮಾರ ಸಿದ್ಧಾರ್ಥ ಬುದ್ಧನಾಗಿ ಕಂಗೊಳಿಸಿದ. ದೇಶಬಾಂಧವರ ದಾರಿದ್ರéಕ್ಕೆ ಮನ ನೊಂದು, ಸರಳ ವಸ್ತ್ರಧಾರಿಯಾದ ಮಹಾತ್ಮಾ ಗಾಂಧೀಜಿ ನಮ್ಮ ಮುಂದಿನ ಜ್ವಲಂತ ನಿದರ್ಶನ.

ಬೇಕುಬೇಕೆಂಬ ಹಂಬಲಕ್ಕೆ ಕೆಲವು ಅಪವಾದಗಳಿವೆ. ಒಳ್ಳೆಯ ಅಪೇಕ್ಷೆಗಳು ತಪ್ಪೇನಲ್ಲ. ಜ್ಞಾನ ತೃಷೆ, ದಾನ ಧರ್ಮಾದಿ ಸತ್ಕಾರ್ಯ, ಪರೋಪಕಾರ, ಸಮಾಜಸೇವೆ ಇತ್ಯಾದಿಗಳಿಗೆ ಮಿತಿ ಹೇರಬೇಕಾಗಿಲ್ಲ.

- ಸುಶೀಲಾ ಆರ್‌. ರಾವ್‌, ಬೈಲೂರು, ಉಡುಪಿ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.