ಹೀಗೊಂದು ಕನಸ ಕಂಡೆ!


Team Udayavani, Apr 11, 2021, 9:00 AM IST

ಹೀಗೊಂದು ಕನಸ ಕಂಡೆ!

ಉದಯಿಸುತ್ತಿರುವ ಸೂರ್ಯ. ಅವನ ಕಿರಣಗಳು ತಾಕಿದಂತೆ, ಮೊಗ್ಗುಗಳೆಲ್ಲ ಮುಗುಳ್ನಗುತ್ತಾ ಹೂವಾಗುತ್ತವೆ. ಪ್ರತೀ ದಿನ ನನ್ನ ಪುಟ್ಟ ಕೈದೋಟದಲ್ಲಿ ಅಡ್ಡಾಡುವುದು ನನ್ನ ಇಷ್ಟದ ಹೊತ್ತು. ದಿನವೂ ಇದೇ ಸಮಯಕ್ಕೆ ನನ್ನ ಮೂರು ವರ್ಷದ ಮುದ್ದು ಕಂದ ಎದ್ದು ಬರುತ್ತಾನೆ. ಆಗ ಅವನ ಉಲ್ಲಸಿತ ಮೊಗವನ್ನು ನೋಡೋದು ಇನ್ನೂ ಚಂದ.

ಇವತ್ತು ಪ್ರತೀ ದಿನಕ್ಕಿಂತಲೂ ಏನೋ ಬದಲಾದ ಭಾವ! ನನ್ನ ಕಂದ ಇದುವರೆಗೂ “ಅಮ್ಮ’ ಎಂದಿಲ್ಲ. ಆದರೆ ಇಂದು, ನನ್ನನ್ನು ಹುಡುಕುತ್ತಾ, “ಅಮ್ಮ’ ಎನ್ನುತ್ತಾ ಓಡೋಡಿ ಬರುತ್ತಿದ್ದಾನೆ. ಅದನ್ನು ಕೇಳುತ್ತಿದ್ದರೆ ನನಗೆ ಎಲ್ಲಿಲ್ಲದ ಖುಷಿ. ಇದು ಕನಸೋ ಅಥವಾ ನನಸೋ ತಿಳಿಯಲಿಲ್ಲ. ಇನ್ನೂ ಬೆಳಕು ಹರಿಯಬೇಕಿತ್ತು. ಇದೇ ನಿಜವಾಗಿರಲಿ ಎಂದು ಮನಸ್ಸು ಹಂಬಲಿಸಿತು. ಅಂದು ಬೆಳಗ್ಗೆ ಎಂದಿಗಿಂತ ಬೇಗ ಎಚ್ಚರವಾಯಿತು. ನನ್ನ ಕಂದನ ಬರವನ್ನೇ ಎದುರು ನೋಡುತ್ತಿದ್ದೆ. ಅವನು ಬಂದು, ಎಂದಿನಂತೆ ನಕ್ಕ, ಮಾತಾಡಲಿಲ್ಲ. ಅಮ್ಮ ಎನ್ನಲಿಲ್ಲ. ಒಂದೆಡೆ ಖುಷಿಯಾದರೂ ಮನಸ್ಸಿನಲ್ಲಿ ಕನಸು ನನಸಾಗಲಿಲ್ಲ ಎಂಬ ಭಾವ. ಅರಳಿ ನಿಂತ ಹೂವು ಬಾಡಿದ ಹಾಗೆ!

ಹೀಗೆ ತನ್ನ ಕನಸಿನ ಬಗ್ಗೆ ಹೇಳಿಕೊಂಡು, ವಾಕ್‌ ತಜ್ಞರ ಎದುರು ಕೈಚೆಲ್ಲಿ ಕೂತಿದ್ದಳು ಅವಳು.

“ನನ್ನ ಮಗನಿಗೆ ಹೇಗಾದರೂ ಮಾತು ಕಲಿಸಿ. ಅವನು ಮಾತನಾಡಬೇಕು. ಮೂರು ವರ್ಷಗಳಾದರೂ ಒಂದೂ ಮಾತನಾಡುತ್ತಿಲ್ಲ. ನನ್ನನ್ನು ಒಮ್ಮೆ ಬಾಯ್ತುಂಬಾ ಅಮ್ಮಾ ಎಂದರೆ ಸಾಕು, ಮತ್ತಿನ್ನೇನನ್ನೂ ನಿಮ್ಮಲ್ಲಿ ಕೇಳುವುದಿಲ್ಲ’ ಎಂದು ಕೈ ಮುಗಿದು ಕೋರಿದಾಗ ನನಗೆ ಮನಸ್ಸು ತೀರಾ ಭಾರವೆನ್ನಿಸಿತು.

ಅವನು ಮುಂಚೆ ಮಾತನಾಡುತ್ತಿದ್ದ. ಮಗುವಾಗಿದ್ದಾಗ ಎಲ್ಲರಂತೆ ಕೆಲವು ಶಬ್ದವನ್ನು ಮಾಡಿ, ಸುಲಭವಾದ ಪದಗಳನ್ನು ಹೇಳುತ್ತಿದ್ದನಂತೆ. ಆದರೆ ಕ್ರಮೇಣ ಇವನ ಆಟದ ಕ್ರಮದಲ್ಲಿ ಬದಲಾವಣೆಯಾಗತೊಡಗಿತು. ಮನೆಯಲ್ಲಿ ಜನರಿದ್ದರೆ ಇವನಿಗೆ  ಯಾರೂ ಬೇಡ. ತಾನೊಬ್ಬನೇ ಆಟವಾಡಬೇಕು ಎಂದು ಹಠ ಹಿಡಿಯತೊಡಗಿದ. ಬೇರೆಯವರನ್ನು ದೃಷ್ಟಿಯಿಟ್ಟು ನೋಡುವುದನ್ನೇ ಮರೆತ ಎಂದರೆ ತಪ್ಪಲ್ಲ.  ನಿಧಾನವಾಗಿ ಮಾತಾಡುತ್ತಿದ್ದ ಆ ಕೆಲವೇ ಪದಗಳನ್ನೂ ಮರೆತ. ಇವೆಲ್ಲವನ್ನೂ ಕಂಡ ವೈದ್ಯರು, “ಈ ಹುಡುಗನಿಗೆ ಆಟಿಸಂ ಇರುವ ಎಲ್ಲ ಲಕ್ಷಣಗಳಿವೆ. ಆದರೆ ಖಚಿತ ಪಡಿಸಲು ಕನಿಷ್ಠ ಮೂರು ವರ್ಷಗಳಾದರೂ ಆಗಬೇಕು’ ಎಂದಿದ್ದರಂತೆ. ಹಾಗಾಗಿ ಆತನಿಗೆ ಮೂರು ವರ್ಷವಾಗುವ ಮೊದಲು ಎಷ್ಟು ಸಾಧ್ಯವೋ ಅಷ್ಟು “ವಾಕ್‌ ಚಿಕಿತ್ಸೆ’ಯನ್ನು ಕೊಡಿಸಿ, ತನ್ನ ಕನಸನ್ನು ದಕ್ಕಿಸಿಕೊಳ್ಳಲೆಂದೇ ಅವನ ಅಮ್ಮ ವಾಕ್‌ ಚಿಕಿತ್ಸಕರ ಬಳಿಗೆ ಆಗಾಗ್ಗೆ ಬರುತ್ತಿದ್ದಳು.

ಹೀಗೆ ಆ ಅಮ್ಮ ತನ್ನ ಕೈಲಾದವೆಲ್ಲವನ್ನೂ ಮಾಡುತ್ತಿದ್ದಳು. ಕೆಲವೊಮ್ಮೆ ವಾಕ್‌ ಚಿಕಿತ್ಸೆಯಲ್ಲಿ ಸಾಂಪ್ರದಾಯಿಕ ಮಾತಿನ ವಿಧಾನಗಳಲ್ಲಿ ಮಗು ಮಾತನಾಡಲು ಕಲಿಯುತ್ತಿಲ್ಲ ಅಥವಾ ಕಲಿಯಲು ನಿಧಾನವಾಗುತ್ತಿದೆ ಎನಿಸಿದರೆ “ಎಎಸಿ’ ಎಂಬ ಸಂವಹನ ವ್ಯವಸ್ಥೆಯನ್ನು ಬಳಸುತ್ತೇವೆ. ಇದು ನಾವು ನೀವು ಬಳಸುವ ಮೊಬೈಲು ಅಥವಾ ಐಪಾಡ್‌ ಇದ್ದ ಹಾಗೆ. ಆದರೆ ಇದು ಕೇವಲ ಮಾತನಾಡಲು ಬಳಸುವ ಉಪಕರಣ. ಮೊಬೈಲಿನಲ್ಲಿ ಹೇಗೆ ಬೇರೆ ಬೇರೆ ಆ್ಯಪ್ಲಿಕೇಶನ್‌ಗಳಿವೆಯೋ ಹಾಗೆ ಇದರಲ್ಲೂ ಇದೆ. ಇತ್ತೀಚಿನ ಸಂಶೋಧನೆಯ ಪ್ರಕಾರ, ಇಂಥ ಉಪಕರಣವು ಮಾತನಾಡಲು ಕಲಿಯುತ್ತಿರುವ ಮಕ್ಕಳಿಗೆ ವಿಶೇಷವಾಗಿ ಆಟಿಸಮ್‌ ಮಕ್ಕಳಿಗೆ ತುಂಬಾ ಉಪಯುಕ್ತ. ಈ ಕಾರಣದಿಂದ ಇದರ ಬಳಕೆಯೂ ಹೆಚ್ಚುತ್ತಿದೆ.

ನಾವು ಅಸಹಾಯಕರಾದಾಗ ಒಂದು ಹುಲ್ಲುಕಡ್ಡಿ ಸಿಕ್ಕಿದರೂ ಅದನ್ನು ಏರಿಕೊಂಡು ನಮ್ಮ ಗಮ್ಯವನ್ನು ತಲುಪುವ ಎಂದೆನಿಸುವುದುಂಟು. ಯಾರೇ ಏನೇ ಸಲಹೆ ಹೇಳಿದರೂ ಅದೊಮ್ಮೆ ಮಾಡಿ ನೋಡುವ ಎಂದುಕೊಂಡು ಕ್ರಿಯಾಶೀಲವಾಗುತ್ತೇವೆ. ಈ ಅಮ್ಮಳಿಗೂ ಅದೇ ಆದದ್ದು. ತನ್ನ ಗೆಳೆಯರಲ್ಲಿ ಯಾರೋ ಒಬ್ಬರು, ತಂತ್ರಜ್ಞಾನವನ್ನು ಬಳಸಿ ಮಗುವಿಗೆ ಸಂವಹನ ಹೇಳಿಕೊಡಬಹುದು ಎಂದು ತಿಳಿಸಿದ್ದೇ ತಡ, ನನ್ನ ಬಳಿ ಬಂದು ನಿಂತಳು.

ಅಂದು ಬೆಳಗ್ಗೆ ಅವನಿಗೆ ಹೊಸ ಐಪಾಡ್‌ ಬಳಸಲು ಹೇಳಿಕೊಡುತ್ತಿದ್ದೆ. ಹುಡುಗ ಅದೆಷ್ಟು ಚುರುಕು ಎಂದರೆ, ಹೇಳಿಕೊಟ್ಟ ಹತ್ತೇ ನಿಮಿಷಕ್ಕೆ, ಕೆಲವು ಪದಗಳೆಲ್ಲಿದೆ. ಅದರ ಅರ್ಥವೇನು ಎಂದು ತಿಳಿದು ಬಿಟ್ಟ. ಸಾಮಾನ್ಯವಾಗಿ ಇದನ್ನು ಕಲಿಯಲು ಹಲವು ದಿನಗಳಾದರೂ ಬೇಕು. ನಮಗೆಲ್ಲರಿಗೂ ಹೇಳಿಕೊಡೋ ಹುಮ್ಮಸ್ಸು ದುಪ್ಪಟ್ಟಾಯಿತು. ಆಟಿಸಮ್‌ನ ತೀವ್ರತೆಯ ಮೇಲೆ ಮುಂದೆ ಈ ಮಗು ಇದರಿಂದ ಎಷ್ಟು ಮಾತನ್ನು ಕಲಿಯುತ್ತದೆ ಎನ್ನುವುದು ತಿಳಿಯಬಲ್ಲದು. ಕೆಲವರು ಕೆಲವು ವರ್ಷ ಮಾತ್ರ ಬಳಸಬೇಕು. ಆ ಬಳಿಕ ಎಲ್ಲರಂತೆ ಅವರು ಮಾತನಾಡಬಲ್ಲರು. ಇನ್ನು ಕೆಲವರಿಗೆ ಅದು ಅವರ ಬದುಕಿನ ಭಾಗವಾಗಿಯೇ ಉಳಿದು  ಬಿಡುವುದುಂಟು. ಹಾಗಾಗಿ ಹೇಳಿ ಕೊಡುವುದರಲ್ಲಿ ತಂದೆ-ತಾಯಿಯ ಪಾತ್ರ ಬಹು ದೊಡ್ಡದು. ಯಾಕೆಂದರೆ, ಈ ಸಾಧನವು ನಮ್ಮ ಭಾಷೆಯಲ್ಲಿರುವ ಪದಗಳನ್ನೆಲ್ಲ ಒಟ್ಟಿಗೆ ನಮ್ಮ ಮುಂದಿಡುತ್ತದೆ. ಅದನ್ನು ಹೇಗೆ ಬಳಸಬೇಕು, ಒಂದೊಂದು ಪದದ ಅರ್ಥವೇನು ಎಂಬುದನ್ನು ನಾವೇ ಹೇಳಿಕೊಡಬೇಕು. ಹೀಗೆ ಹೇಳಿಕೊಡುವಾಗ, ಮಗು ಇದ್ದಲ್ಲೆಲ್ಲ, ಹೋದಲ್ಲೆಲ್ಲ ಈ ಸಾಧನವನ್ನು ಕೊಂಡೊಯ್ಯಬೇಕು. ಯಾವಾಗ ಮಗುವಿಗೆ “ಇದು ನನ್ನದು, ನನ್ನ ಧ್ವನಿಯಿದು’ ಎಂದು ಅರ್ಥವಾಗುತ್ತದೋ ಅಂದು ನಾವು ಶೇ. 50 ರಷ್ಟು ಗೆದ್ದ ಹಾಗೆ.ಯಾಕೆಂದರೆ ನನ್ನದು ಅನ್ನೋ ನಂಬಿಕೆಯೇ ಬದಲಾವಣೆಯ ಮೊದಲ ಮೆಟ್ಟಿಲು, ಮಹತ್ವವಾದುದೂ ಸಹ. ಇದಾದ ಅನಂತರ ಮಗು ಪ್ರತಿಯೊಂದು ಪದವನ್ನೂ ಬಳಸಲು ಮುನ್ನುಗ್ಗುತ್ತದೆ. ಇದರೊಟ್ಟಿಗೆ ಪದಗಳ, ಭಾಷೆಯ ಪ್ರಯೋಗ ಮಾಡುತ್ತದೆ. ತನ್ನದೇ ಲೋಕದಲ್ಲಿರಬೇಕು ಎಂದು ಆಶಿಸುವ ಮಗುವಿಗೆ ಇದೊಂದು ಪ್ರಮುಖ ಹಂತ. ಈ ದಿನಕ್ಕೆಂದೇ ಮಗುವಿನ ತಂದೆ -ತಾಯಿ ಕಾಯುತ್ತಿರುತ್ತಾರೆ. ಹಾಗಾಗಿ ಅದೊಂದು ಸುವರ್ಣ ದಿನ.

ಅಬ್ಟಾ! ಮಾತನಾಡಲು ಹೇಳಿಕೊಡಲು ಏನೆಲ್ಲ ಮಾಡುತ್ತಾರೆ ಕೆಲವರು. ನಾವು ಒಮ್ಮೆ ಯೋಚಿಸೋಣ, ನಮ್ಮ ಭಾಷೆಯಲ್ಲಿರುವ ಪ್ರತಿಯೊಂದು ಅಕ್ಷರವನ್ನು, ಪದವನ್ನು ಅರ್ಥವತ್ತಾಗಿ ಬಳಸಲಿಕ್ಕೆ ನಾವು ಚಿಕ್ಕವರಿರುವಾಗಲೇ ಹೇಗೆ ಕಲಿತೆವು? ಅದೊಂದು ಅಚ್ಚರಿಯೇ ತಾನೇ?

 

 

ಸ್ಫೂರ್ತಿ

ತಸ್ಮೇನಿಯಾ

ಟಾಪ್ ನ್ಯೂಸ್

ಮೂಡಿಗೆರೆ JDS ನಲ್ಲಿ ಭಿನ್ನಮತ: ಬಿ.ಬಿ ನಿಂಗಯ್ಯಗೆ ಟಿಕೇಟ್ ನೀಡಲು ಸ್ವಪಕ್ಷದಲ್ಲಿ ವಿರೋಧ

ಮೂಡಿಗೆರೆ JDS ನಲ್ಲಿ ಭಿನ್ನಮತ: ಬಿ.ಬಿ ನಿಂಗಯ್ಯಗೆ ಟಿಕೆಟ್ ನೀಡಲು ಸ್ವಪಕ್ಷದಲ್ಲೇ ವಿರೋಧ

ರಾಜ್ಯ ಸರಕಾರಕ್ಕೆ ಇನ್ನು 35 ದಿನ ಮಾತ್ರ ಆಯಸ್ಸು: ಸರಕಾರದ ವಿರುದ್ಧ ಯು.ಟಿ.ಖಾದರ್ ಟೀಕೆ

ರಾಜ್ಯ ಸರಕಾರಕ್ಕೆ ಇನ್ನು 35 ದಿನ ಮಾತ್ರ ಆಯಸ್ಸು: ಸರಕಾರದ ವಿರುದ್ಧ ಯು.ಟಿ.ಖಾದರ್ ಟೀಕೆ

1-sadsad-asd

ಪೂರ್ಣಿಮಾ ಹೆಗಲ ಮೇಲೆ ಕೈ ಇಟ್ಟು, ‘ನಮ್ಮ ಜೊತೆಯಲ್ಲೇ ಇದ್ದಾರೆ’ ಎಂದ ಬಿಎಸ್‌ವೈ

ಅಮೃತಾ ಫಡ್ನವಿಸ್ ಗೆ ಲಂಚದ ಆಮಿಷ, ಬೆದರಿಕೆ: ಡಿಸೈನರ್ ಅನಿಕ್ಷಾ ತಂದೆ ಅನಿಲ್ ಜೈಸಿಂಘಾನಿ ಬಂಧನ

ಅಮೃತಾ ಫಡ್ನವಿಸ್ ಗೆ ಲಂಚದ ಆಮಿಷ, ಬೆದರಿಕೆ: ಡಿಸೈನರ್ ಅನಿಕ್ಷಾ ತಂದೆ ಅನಿಲ್ ಜೈಸಿಂಘಾನಿ ಬಂಧನ

6-vitla

ವಿಟ್ಲ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

1——dasdsa

ನಡ್ಡಾ ಅವರ ರಿಮೋಟ್ ಕಂಟ್ರೋಲ್ ಯಾರ ಬಳಿ ಇದೆ?: ಖರ್ಗೆ ತಿರುಗೇಟು

PAN Aadhaar Link: 10 ದಿನ ಬಾಕಿ – ಆಧಾರ್ PAN ಲಿಂಕ್ ಆಗಿದೆಯಾ ಎಂದು ತಿಳಿಯುವುದು ಹೇಗೆ?

PAN Aadhaar Link: 10 ದಿನ ಬಾಕಿ – ಆಧಾರ್ PAN ಲಿಂಕ್ ಆಗಿದೆಯಾ ಎಂದು ತಿಳಿಯುವುದು ಹೇಗೆ?



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Sparrow Day 2023; ಎಲ್ಲಿ ಮರೆಯಾಗಿ ಹೋದವು…ಈ ಪುಟ್ಟ ಗುಬ್ಬಚ್ಚಿಗಳು!

World Sparrow Day 2023; ಎಲ್ಲಿ ಮರೆಯಾಗಿ ಹೋದವು…ಈ ಪುಟ್ಟ ಗುಬ್ಬಚ್ಚಿಗಳು!

ಭೂತಾನ್‌ ಇನ್ನು ಬಡ ರಾಷ್ಟ್ರವಲ್ಲ; ನೆರೆ ರಾಷ್ಟ್ರದ ಪ್ರಗತಿಯಲ್ಲಿ ಭಾರತದ ಕೊಡುಗೆ ಗಣನೀಯ

ಭೂತಾನ್‌ ಇನ್ನು ಬಡ ರಾಷ್ಟ್ರವಲ್ಲ; ನೆರೆ ರಾಷ್ಟ್ರದ ಪ್ರಗತಿಯಲ್ಲಿ ಭಾರತದ ಕೊಡುಗೆ ಗಣನೀಯ

ರುದ್ರಪಾದೆ: ಇದು ಕೇವಲ ಬಂಡೆಕಲ್ಲಲ್ಲ…

ರುದ್ರಪಾದೆ: ಇದು ಕೇವಲ ಬಂಡೆಕಲ್ಲಲ್ಲ…

ಬರೀ ಉಪ್ಪಿನ ಮಾತಲ್ಲ; ಊರಿನ ಮಾತು

ಬರೀ ಉಪ್ಪಿನ ಮಾತಲ್ಲ; ಊರಿನ ಮಾತು

ಲವ್‌ ಬ್ರೇಕಪ್‌ ಗೂ ಇದೆ ಇನ್ಶೂರೆನ್ಸ್‌!

ಲವ್‌ ಬ್ರೇಕಪ್‌ ಗೂ ಇದೆ ಇನ್ಶೂರೆನ್ಸ್‌!

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

ಮೂಡಿಗೆರೆ JDS ನಲ್ಲಿ ಭಿನ್ನಮತ: ಬಿ.ಬಿ ನಿಂಗಯ್ಯಗೆ ಟಿಕೇಟ್ ನೀಡಲು ಸ್ವಪಕ್ಷದಲ್ಲಿ ವಿರೋಧ

ಮೂಡಿಗೆರೆ JDS ನಲ್ಲಿ ಭಿನ್ನಮತ: ಬಿ.ಬಿ ನಿಂಗಯ್ಯಗೆ ಟಿಕೆಟ್ ನೀಡಲು ಸ್ವಪಕ್ಷದಲ್ಲೇ ವಿರೋಧ

1-sdsdsad

ಮಂಗಳೂರು: ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ; ಆರೋಪಿ ಬಂಧನ

ರಾಜ್ಯ ಸರಕಾರಕ್ಕೆ ಇನ್ನು 35 ದಿನ ಮಾತ್ರ ಆಯಸ್ಸು: ಸರಕಾರದ ವಿರುದ್ಧ ಯು.ಟಿ.ಖಾದರ್ ಟೀಕೆ

ರಾಜ್ಯ ಸರಕಾರಕ್ಕೆ ಇನ್ನು 35 ದಿನ ಮಾತ್ರ ಆಯಸ್ಸು: ಸರಕಾರದ ವಿರುದ್ಧ ಯು.ಟಿ.ಖಾದರ್ ಟೀಕೆ

1-sadsad-asd

ಪೂರ್ಣಿಮಾ ಹೆಗಲ ಮೇಲೆ ಕೈ ಇಟ್ಟು, ‘ನಮ್ಮ ಜೊತೆಯಲ್ಲೇ ಇದ್ದಾರೆ’ ಎಂದ ಬಿಎಸ್‌ವೈ

ಅಮೃತಾ ಫಡ್ನವಿಸ್ ಗೆ ಲಂಚದ ಆಮಿಷ, ಬೆದರಿಕೆ: ಡಿಸೈನರ್ ಅನಿಕ್ಷಾ ತಂದೆ ಅನಿಲ್ ಜೈಸಿಂಘಾನಿ ಬಂಧನ

ಅಮೃತಾ ಫಡ್ನವಿಸ್ ಗೆ ಲಂಚದ ಆಮಿಷ, ಬೆದರಿಕೆ: ಡಿಸೈನರ್ ಅನಿಕ್ಷಾ ತಂದೆ ಅನಿಲ್ ಜೈಸಿಂಘಾನಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.