ಉಚಿತ ಕೊಡುಗೆ ಜಮಾನ ಸರಿಯೇ?


Team Udayavani, Aug 8, 2022, 6:20 AM IST

ಉಚಿತ ಕೊಡುಗೆ ಜಮಾನ ಸರಿಯೇ?

ಚುನಾವಣೆಗೂ ಮುನ್ನ ಉಚಿತ ಕೊಡುಗೆಗಳನ್ನು ನೀಡುವುದಾಗಿ ಭರವಸೆ ನೀಡುವುದರ ಕುರಿತ ಸರಿ-ತಪ್ಪುಗಳ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಸುಪ್ರೀಂಕೋರ್ಟ್‌ ಹೇಳಿರುವ ಪ್ರಕಾರ, ರಾಜಕೀಯ ಪಕ್ಷಗಳಿಗೆ ಈ ಬಗ್ಗೆ ಚರ್ಚೆ ನಡೆಸುವ ಮನಸೇ ಇಲ್ಲ. ಆದರೂ ಇದನ್ನು ಸ್ಥಗಿತಗೊಳಿಸುವ ಅಗತ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗಾದರೆ ಈ ಬಗ್ಗೆ ಯಾರು ನಿರ್ಧಾರ ಮಾಡಬೇಕು? ಇದು ಸರಿಯೇ ಅಥವಾ ತಪ್ಪೇ? ಈ ಕುರಿತ ಒಂದು ನೋಟ ಇಲ್ಲಿದೆ.

ಏನಿದು ಉಚಿತ ಕೊಡುಗೆ?
ಯಥಾರ್ಥವಾಗಿ ತೆಗೆದುಕೊಳ್ಳುವುದಾದರೆ, ಉಚಿತವಾಗಿ ಹಂಚಿಕೆ ಮಾಡುವುದು ಎಂದರ್ಥ. ಯಾವುದೇ ಚುನಾವಣೆ ಬರಲಿ, ತಾವು ಗೆದ್ದು ಬಂದರೆ ಉಚಿತವಾಗಿ ಅಕ್ಕಿ, ವಿದ್ಯುತ್‌, ನೀರು, ಲ್ಯಾಪ್‌ಟಾಪ್‌, ಸೈಕಲ್‌ಗ‌ಳು, ಎಲೆಕ್ಟ್ರಾನಿಕ್‌ ವಸ್ತುಗಳು ಸೇರಿದಂತೆ ಇತರ ವಸ್ತುಗಳನ್ನು ನೀಡುತ್ತೇವೆ ಎಂದು ರಾಜಕೀಯ ಪಕ್ಷಗಳು ಭರವಸೆ ನೀಡುತ್ತವೆ.

ಉಚಿತ ಕೊಡುಗೆಗಳಿಗೆ ಕಾರಣಗಳೇನು?
1 ರಾಜಕೀಯದಲ್ಲಿನ ಅಪರಾಧೀಕರಣ
: ಸ್ವತ್ಛ ಮತ್ತು ನಿರಾಪೇಕ್ಷ ಚುನಾ­ವಣೆಗಳು ನಡೆದರೆ ಇಂಥ ಯಾವುದೇ ಆಶ್ವಾಸನೆಗಳನ್ನು ನೀಡುವ ಅಗತ್ಯವಿಲ್ಲ. ಆದರೆ ಭಾರತದ ರಾಜಕೀಯದಲ್ಲಿ ಹೆಚ್ಚಾಗಿ ಇರುವುದು ಅಪರಾಧದ ಹಿನ್ನೆಲೆ ಉಳ್ಳವರೇ. ಹಾಲಿ ಲೋಕಸಭೆಯಲ್ಲಿ 233 ಮಂದಿ ಸಂಸದರು ಅಪರಾಧದ ಹಿನ್ನೆಲೆ ಉಳ್ಳವರಾಗಿದ್ದಾರೆ. ಹೀಗಾಗಿ ತಾವು ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಮದ್ಯ, ಹಣ, ಇತರ ವಸ್ತುಗಳನ್ನು ಆಮಿಷವಾಗಿ ನೀಡುತ್ತಾರೆ.
2 ಶಾರ್ಟ್‌ ಟರ್ಮ್ ಖುಷಿ : ಇಂದಿಗೂ ಭಾರತದಲ್ಲಿ ದೀರ್ಘಾವಧಿ ಅನುಕೂಲಗಳಿಗಾಗಿ ಮತ ಹಾಕುವುದಕ್ಕಿಂತ, ಅಲ್ಪಾವಧಿ ಖುಷಿಯ ಸಂಗತಿಗಳಿಗಾಗಿ ಮತ ಹಾಕುತ್ತಾರೆ ಎಂಬ ಮಾತಿದೆ. ಹೀಗಾಗಿಯೇ ರಾಜಕಾರಣಿಗಳು, ಇದನ್ನು ದುರ್ಬಳಕೆ ಮಾಡಿಕೊಂಡು ಚುನಾವಣೆ ವೇಳೆ ಉಚಿತ ಕೊಡುಗೆಗಳ ಬಗ್ಗೆ ಹೇಳಿ ಮತ ಬಾಚುತ್ತಾರೆ.
3 ಯಾರಿಗೂ ಧೈರ್ಯವಿಲ್ಲ: ವಿಶೇಷವೆಂದರೆ ಈ ಉಚಿತ ಕೊಡುಗೆಗಳ ಸಂಗತಿ ಆರ್ಥಿಕತೆಗೆ ಹೊರೆಯಾಗುತ್ತದೆ ಎಂಬುದು ಗೊತ್ತಿದ್ದರೂ ಯಾರೂ ಇದನ್ನು ನಿಲ್ಲಿಸುವ ಗೋಜಿಗೆ ಹೋಗಿಲ್ಲ. ಇದು ಈಗಲ್ಲ, ಇತಿಹಾಸದಿಂದಲೂ ನಡೆದುಕೊಂಡೇ ಬರುತ್ತಿದೆ. ಉದಾ­ಹರಣೆಗೆ, ಒಂದು ಪಕ್ಷದವರು ಕೆಲವೊಂದು ಉಚಿತ ಕೊಡುಗೆಗಳ ಆಶ್ವಾಸನೆ ನೀಡಿ ಗೆದ್ದರೆ, ಮುಂದಿನ ಚುನಾವಣೆಯಲ್ಲಿ ಇನ್ನೊಂದು ಪಕ್ಷದವರೂ ಇಂಥದ್ದೇ ಭರವಸೆ ಕೊಟ್ಟು ಚುನಾವಣೆಯಲ್ಲಿ ಗೆಲ್ಲಲು ನೋಡುತ್ತಾರೆ.
4 ಸರಕಾರದ ಕಳಪೆ ಸಾಧನೆ ಮರೆಮಾಚುವ ಯತ್ನ: ಸಾಮಾನ್ಯವಾಗಿ ಸರಕಾರವೊಂದು ತನಗೆ ಸಿಕ್ಕಿದ್ದ ಐದು ವರ್ಷಗಳ ಕಾಲ ಉತ್ತಮವಾಗಿ ಕೆಲಸ ಮಾಡಿದ್ದರೆ, ಈ ಉಚಿತ ಕೊಡುಗೆಗಳ ಗೋಚಿಗೆ ಹೋಗುವ ಅಗತ್ಯವಿರುವುದಿಲ್ಲ. ಆದರೆ, ಕಳಪೆ ಸಾಧನೆ ಮಾಡಿದವರು, ಇದನ್ನು ಮುಚ್ಚಿಹಾಕಲು ಉಚಿತ ಕೊಡುಗೆಗಳ ಮೊರೆ ಹೋಗುತ್ತಾರೆ.
5 ಸಮ್ಮಿಶ್ರ ಪರಿಣಾಮ : 1990ರ ಬಳಿಕ ದೇಶದಲ್ಲಿ ಸಮ್ಮಿಶ್ರ ಸರಕಾರದ ರಾಜಕೀಯ ಹೆಚ್ಚಾಗಿ ಬಂದಿದೆ. ದೊಡ್ಡ ಪಕ್ಷಗಳಿಗಿಂತ ಸಣ್ಣ ಪಕ್ಷಗಳೇ ಹೆಚ್ಚು ಉಚಿತ ಕೊಡುಗೆಗಳ ಭರವಸೆ ನೀಡಿವೆ ಎಂಬುದು ಅಧ್ಯಯನದಿಂದ ಗೊತ್ತಾಗಿದೆ. ಅಂದರೆ, ದೊಡ್ಡ ಪಕ್ಷಗಳ ಜತೆ ಹೋರಾಡುವ ಕಾರಣದಿಂದಾಗಿ ಅನಿವಾರ್ಯವಾಗಿ ಇಂಥ ಕೊಡುಗೆಗಳನ್ನು ಆಶ್ರಯಿಸುತ್ತವೆ.

ಸರಿತಪ್ಪುಗಳ ಚರ್ಚೆ
ಉಚಿತ ಕೊಡುಗೆಗಳನ್ನು ನೀಡುವುದು ಸರಿಯೇ ಅಥವಾ ತಪ್ಪೇ ಎಂಬ ಬಗ್ಗೆ ಹಿಂದಿನಿಂದಲೂ ಚರ್ಚೆ ನಡೆಯುತ್ತಲೇ ಇದೆ. ಆದರೆ ಇದುವರೆಗೆ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಆದರೂ ಕೆಲವರು ಹೇಳುವ ಪ್ರಕಾರ, ಈ ಉಚಿತ ಕೊಡುಗೆಗಳಿಂದ ಬಡವರು ಮತ್ತು ಶೋಷಿತ ವರ್ಗದವರಿಗೆ ನ್ಯಾಯ ಸಿಗುತ್ತದೆ. ಅಂದರೆ, ಪಡಿತರ ಅಕ್ಕಿಯನ್ನು ಉಚಿತವಾಗಿ ಕೊಡುವುದರಿಂದ ಹೆಚ್ಚು ಉಪಯೋಗವೇ ಆಗುತ್ತದೆ.

ಹಾಗೆಯೇ, ಸದ್ಯ ಭಾರತದಲ್ಲಿರುವ ಸಾಮಾಜಿಕ ಅಸಮಾನತೆಯೂ ಕಡಿಮೆಯಾಗುತ್ತದೆ. ಅಂದರೆ, ದೇಶದಲ್ಲಿ ದಿನದಿಂದ ದಿನಕ್ಕೆ ಶ್ರೀಮಂತರು ಮತ್ತು ಬಡವರ ನಡುವಿನ ಅಂತರವೂ ಹೆಚ್ಚುತ್ತಿದೆ. ಈ ಉಚಿತ ಕೊಡುಗೆಗಳು ಖರೀದಿ ಶಕ್ತಿ ಇಲ್ಲದವರಿಗೆ ಸಹಾಯವಾಗುತ್ತವೆ. ಇತ್ತೀಚಿನ ಕೊರೊನಾ ಕಾಲದಲ್ಲಿ ಕಷ್ಟಕ್ಕೆ ಸಿಲುಕಿದವರೇ ಹೆಚ್ಚು. ಇಂಥವರಿಗೂ ಕೇಂದ್ರ ಸರಕಾರವೇ ನೀಡಿದ ಉಚಿತ ಅಕ್ಕಿ ಬಹಳಷ್ಟು ನೆರವಾಗಿದೆ. ಹಾಗೆಯೇ ಸಾಮಾಜಿಕ ಸ್ಥಿರತೆಯೂ ಹೆಚ್ಚಳವಾಗುತ್ತದೆ.

ಸವಾಲುಗಳೇನು?
1.ಪ್ರಜಾಪ್ರಭುತ್ವದ ಮೂಲ ಧ್ಯೇಯಕ್ಕೇ ಇದರಿಂದ ಭಂಗವಾಗುತ್ತದೆ.
2.ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಸಾಧ್ಯವಾಗುವುದಿಲ್ಲ.
3.ಸಾಲ ಮನ್ನಾದಂಥ ಯೋಜನೆಗಳು ಸಾಲ ಕಟ್ಟುವರರ ಪ್ರಮಾಣ ಕಡಿಮೆ ಮಾಡುತ್ತವೆ.
4.ಸರಕಾರಗಳ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಿ ವಿತ್ತೀಯ ಶಿಸ್ತು ಕಡಿಮೆಯಾಗುತ್ತದೆ.
5.ಸಂಪನ್ಮೂಲಗಳ ಬಳಕೆಯಲ್ಲಿ ಹಿಂದೆ ಉಳಿಯುವ ಸಾಧ್ಯತೆ ಹೆಚ್ಚಿರುತ್ತದೆ.

ಮುಂದೇನು ಮಾಡಬೇಕು?
1. ಪಕ್ಷಗಳ ಆಂತರಿಕ ಪ್ರಜಾಪ್ರಭುತ್ವಕ್ಕೆ ಶಕ್ತಿ ತುಂಬಬೇಕು.
2. ಕೇಂದ್ರ ಚುನಾವಣಾ ಆಯೋಗಕ್ಕೆ ಹೆಚ್ಚಿನ ಬಲ ನೀಡಬೇಕು.
3. ಸರಕಾರಗಳು ಉದ್ಯೋಗ ಸೃಷ್ಟಿ, ಮೂಲ ಸೌಕರ್ಯ ಹೆಚ್ಚಳಕ್ಕೆ ಹೆಚ್ಚಿನ ಹಣ ವಿನಿಯೋಗಿಸಬೇಕು.
4. ಕಪ್ಪು ಹಣ ಬಳಕೆಯ ಮೇಲೆ ಸಾಧ್ಯವಾದಷ್ಟು ನಿರ್ಬಂಧ ಹೇರಬೇಕು.
5.ಉಚಿತ ಕೊಡುಗೆಗಳಿಂದ ಆಗುವ ಅಪಾಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.