ಆನೆಗಳಿಗೆ ಖೆಡ್ಡಾ; ಅನುಭವವೇ ರೋಚಕ, ಹೇಗಿರುತ್ತೆ ಖೆಡ್ಡಾ ವಿನ್ಯಾಸ

ಹಳೇ ಮೈಸೂರು ಪ್ರಾಂತ್ಯದಲ್ಲಿ ಖೆಡ್ಡಾ ತೋಡಿ ಆನೆ ಹಿಡಿಯುವುದಕ್ಕೆ ಈಗಿನ ಎಚ್‌.ಡಿ. ಕೋಟೆ ತಾಲೂಕು ಕಾಕನಕೋಟೆ ಹೆಸರುವಾಸಿಯಾಗಿತ್ತು.

Team Udayavani, Oct 26, 2020, 10:19 AM IST

ಆನೆಗಳಿಗೆ ಖೆಡ್ಡಾ; ಅನುಭವವೇ ರೋಚಕ, ಹೇಗಿರುತ್ತೆ ಖೆಡ್ಡಾ ವಿನ್ಯಾಸ

ಮೈಸೂರು: ದಸರಾ ಎಂದರೆ ಜಂಬೂಸವಾರಿ…ಜಂಬೂ ಸವಾರಿ ಎಂದರೆ ಆನೆಗಳು ಎನ್ನುವ ಮಟ್ಟಕ್ಕೆ ಆನೆಗಳು ಮೈಸೂರು ದಸರೆಗಿರುವ ಸಂಬಂಧ. ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುವಾಗ ನೋಡುವುದೇ ಸೊಗಸು. ಅದರಲ್ಲೂ ಸಿಂಗರಿಸಿಕೊಂಡು ಅಂಬಾರಿ ಹೊತ್ತು ಮೆರವಣಿಗೆ ಹೋಗುವುದನ್ನು ನೋಡಲು ದೇಶ-ವಿದೇಶದಿಂದ ಜನ ಬರುತ್ತಾರೆ.

ಆದರೆ ಇಂತಹ ಆನೆಗಳನ್ನು ಸೆರೆ ಹಿಡಿಯುವುದೇ ಒಂದು ಸೋಜಿಗ ಮತ್ತು ಸವಾಲಿನ ಕೆಲಸ. ಸಾಮಾನ್ಯವಾಗಿ ಆನೆಗಳನ್ನು ಸೆರೆ ಹಿಡಿಯುವ ಕ್ರಮ ಎರಡು ರೀತಿಯಲ್ಲಿದೆ. ಖೆಡ್ಡಾಗಳನ್ನು ತೋಡಿ, ಅವುಗಳಿಗೆ ಆನೆಗಳು ಬೀಳುವಂತೆ ಮಾಡಿ ಸೆರೆ ಹಿಡಿಯುವುದು ಒಂದು ಕ್ರಮವಾದರೆ, ಸಾಕಾನೆಗಳ ಸಹಾಯದಿಂದ ಅರಿವಳಿಕೆ ನೀಡಿ ಸೆರೆ ಹಿಡಿಯುವುದು ಮತ್ತೂಂದು ಕ್ರಮ. ಸದ್ಯಕ್ಕೆ ಈಗ ಚಾಲ್ತಿಯಲ್ಲಿರುವುದು ಎರಡನೇ ಕ್ರಮ. ಆದರೆ ಇತ್ತೀಚೆಗೆ ಖೆಡ್ಡಾ ಆನೆಗಳನ್ನು ಸೆರೆ ಹಿಡಿಯುವುದನ್ನು ನಿಲ್ಲಿಸಲಾಗಿದೆ.

ಹಳೇ ಮೈಸೂರು ಪ್ರಾಂತ್ಯದಲ್ಲಿ ಖೆಡ್ಡಾ ತೋಡಿ ಆನೆ ಹಿಡಿಯುವುದಕ್ಕೆ ಈಗಿನ ಎಚ್‌.ಡಿ. ಕೋಟೆ ತಾಲೂಕು ಕಾಕನಕೋಟೆ ಹೆಸರುವಾಸಿಯಾಗಿತ್ತು. ಸ್ವಾತಂತ್ರ್ಯ ನಂತರ ಕಬಿನಿ ಜಲಾಶಯ ನಿರ್ಮಾಣದಿಂದಾಗಿ ಎಲ್ಲಾ ಖೆಡ್ಡಾಗಳು ಹಿನ್ನೀರಿನಿಂದ ಮುಳುಗಡೆಯಾದವು. ಇದಾದ ಬಳಿಕ ಆನೆಗಳನ್ನು ಖೆಡ್ಡಾದ ಮೂಲಕ ಸೆರೆ ಹಿಡಿಯುವುದನ್ನು ಕೈಬಿಡಲಾಗಿದೆ.

ವಿಶೇಷ ಬೋನು ಅಥವಾ ಸಣ್ಣ ಗುಂಡಿಗೆ ಆನೆಗಳನ್ನು ಬೀಳಿಸಿ, ಪಳಗಿಸುವ ಕಾರ್ಯಾಚರಣೆಗೆ ಖೆಡ್ಡಾ ಎನ್ನುತ್ತೇವೆ. ಕಾಡಿನಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿ ಅವು ಜನಗಳಿಗೂ ಬೆಳೆಗಳಿಗೂ ಹಾನಿಮಾಡತೊಡಗಿದಾಗ ಅವನ್ನು ಸೆರೆಹಿಡಿಯಲಾಗುತ್ತದೆ. ಒಂದೋ ಎರಡೋ ಪುಂಡಾನೆಗಳಾದರೆ ಬೆದರಿಸಿ ಕಾಡಿಗೆ ಅಟ್ಟುತ್ತಾರೆ. ಇಲ್ಲವೆ ಗುಂಡಿಟ್ಟು ಕೊಂದುಬಿಡುತ್ತಾರೆ.

ಬಹುಸಂಖ್ಯೆಯಲ್ಲಿ ಅವನ್ನು ಹಿಡಿಯ ಬೇಕಾದಾಗ ಮಾತ್ರ ಖೆಡ್ಡಾ ಯೋಜನೆ ಯನ್ನು ಹಾಕಲಾಗುತ್ತದೆ. ಇದಕ್ಕೆ ಕಾಡಿನಲ್ಲಿ ವಾಸಿಸುವ ಹಾಡಿ ಜನರ ಪಾತ್ರ ಮಹತ್ವದ್ದು. ಇವರಿಲ್ಲದೆ ಆನೆ ಹಿಡಿಯುವುದು ಮತ್ತು ಪಳಗಿಸುವುದು ಕನಸಿನ ಮಾತು. ಹಾಗಾಗಿ ಆನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಜೇನುಕುರುಬರ ಪಾತ್ರ ಮಹತ್ವದ್ದಾಗಿರುತ್ತದೆ.

ಕಾಡಾನೆ ಕಾರ್ಯಾಚರಣೆ ವಿಧಾನ ಆನೆಗಳನ್ನು ಹಿಡಿದು ಪಳಗಿಸುವುದು ಬಹಳ ಸೂಕ್ಷ್ಮ ಮತ್ತು ಆಯಾಸದ ಕೆಲಸ. ಹತ್ತಾರು ಜನ ದಟ್ಟಾರಣ್ಯದಲ್ಲಿ ಅಡಗಿ ಕುಳಿತು, ಆನೆಗಳ ಚಲನವಲನಗಳನ್ನು ಪರಿಶೀಲಿಸುತ್ತಾ, ಅವು ಮೇಯುವ, ನೀರು ಕುಡಿಯುವ, ವಿಶ್ರಾಂತಿಸುವ ಸ್ಥಳಗಳನ್ನು ಗುರುತುಮಾಡಿ ಬೇರೆ ಬೇರೆ ಸ್ಥಳಗಳಲ್ಲಿ ಆಳವಾದ ಕುಳಿಗಳನ್ನು ತೋಡುತ್ತಾರೆ.

ಹೀಗಿರುತ್ತೆ ಖೆಡ್ಡಾ ವಿನ್ಯಾಸ
ನದಿಯ ಒಂದು ಪಕ್ಕದಲ್ಲಿ ಖೆಡ್ಡಾ ಬೋನು ಇರುತ್ತದೆ. ಅದರ ಸುತ್ತಲೂ 8 ರಿಂದ 9 ಅಡಿ ಆಳವಾದ ಕಂದಕವೊಂದು ಇರುತ್ತದೆ. ಖೆಡ್ಡಾಕ್ಕೆ 3
ಪ್ರವೇಶದ್ವಾರಗಳಿರುತ್ತವೆ. ಒಂದೊಂದು ದ್ವಾರದ ಬಳಿಯೂ ಉದ್ದನೆಯ ಕಾಡುಮರಗಳ ಕಂಬಗಳನ್ನು ಆಳವಾಗಿ ಹೂಳಿ ಒಂದೊಂದು ಅಡ್ಡಪಟ್ಟಿಗಳಿರುವ ಬಾಗಿಲನ್ನು ಅಳವಡಿಸಲಾಗಿರುತ್ತದೆ. ಖೆಡ್ಡಾದಿಂದ 10-12 ಮೈಲಿಗಳವರೆಗೆ ಓಡಾಡಲು ಅನುಕೂಲವಾಗುವಂತೆ ನೇರದಾರಿಗಳನ್ನೂ ಅಡ್ಡದಾರಿಗಳನ್ನೂ ಮಾಡಿರುತ್ತಾರೆ. ಸೆರೆಸಿಕ್ಕುವ ಮೊದಲು, ಆ ಮೇಲೂ ಆನೆಗಳಿಗೆ ಅಸಹಜವೆನ್ನಿಸದಂತೆ ಈ ದಾರಿಗಳನ್ನು ಸೊಪ್ಪು, ತರಗೆಲೆಗಳಿಂದ ಮುಚ್ಚಿಬಿಡಲಾಗುತ್ತದೆ.

ಸುತ್ತಮುತ್ತ ಸಾವಿರಾರು ಜನ ಡೋಲು, ನಗಾರಿ
ಮೊದಲಾದ ವಾದ್ಯಗಳ ಗದ್ದಲ ಮಾಡುತ್ತ ಆನೆಗಳತ್ತ ಗುಂಡಿಯತ್ತ ಓಡಿಸುತ್ತಾರೆ. ಆನೆಗಳೆಲ್ಲ ಈ ಸದ್ದಿಗೆ ಕಂಗಾಲಾಗಿ ಅರಣ್ಯದ ಮಧ್ಯ ಧಾವಿಸಿ ಮುಚ್ಚಿದ ಕುಳಿಗಳು ಕಾಣದೇ ಅವುಗಳಲ್ಲಿ ಕುಸಿದು ಗಂಟಲು ಬಿರಿಯುವಂತೆ ಘೀಳಿಡುತ್ತವೆ. ಬಳಿಕ ಅವುಗಳನ್ನು ಪಳಗಿಸುವ ಕಾರ್ಯ ನಡೆಯುತ್ತದೆ. ಈ ಸಂದರ್ಭದಲ್ಲಿ ಬಲಿಷ್ಠ ಆನೆಗಳ ಶಕ್ತಿಯನ್ನು ಕುಂದಿಸಲು ಹಲವಾರು ದಿನ ಅವಕ್ಕೆ ಉಪವಾಸ ಹಾಕುತ್ತಾರೆ. ಮಾನವನ ಅಪ್ಪಣೆಯಂತೆ ನಡೆದರೆ ಸಾಕಾನೆಗೆ ಆಹಾರ ದೊರೆಯುತ್ತದೆ. ತನಗೂ ಏಕೆ ದೊರೆಯಬಾರದು ಎಂಬ ವಿವೇಕ ಕಾಡಾನೆಗೆ ಬಂದಾಗ ಅದು ಪಳಗಿದೆ ಎಂದರ್ಥ. ಒಟ್ಟಾರೆ ಕಾಡಾನೆಗಳನ್ನು ಸೆರೆ ಹಿಡಿದು
ಅವುಗಳನ್ನು ಪಳಗಿಸುವುದು ಸವಾಲಿನ ಕೆಲಸವಾದರೂ ಬೃಹತ್‌ ಪ್ರಾಣಿಯನ್ನು ಮಾನವ ತನ್ನ ಅಂಕೆಯಲ್ಲಿಟ್ಟುಕೊಳ್ಳುವಂತೆ ಮಾಡುವ ಕ್ರಮವೇ ಸೋಜಿಗ.

ಸತೀಶ್ ದೇಪುರ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಸ್ವಾತಂತ್ರ್ಯ ಅಮೃತಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಅಮೃತ ಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.