ಫೇಸ್ ರೆಕಗ್ನಿಷನ್ಗೆ ಫೇಸ್ಬುಕ್ ಗುಡ್ಬೈ
Team Udayavani, Nov 9, 2021, 5:50 AM IST
ಇನ್ನು ಕೆಲವೇ ದಿನಗಳಲ್ಲಿ ಫೇಸ್ಬುಕ್ ಸಂಸ್ಥೆ ತನ್ನ ಫೇಸಿಯಲ್ ರೆಕಗ್ನಿಷನ್ ವ್ಯವಸ್ಥೆಯನ್ನು ಮುಚ್ಚಲಿದೆ. 2010ರಲ್ಲಿ ಅಳವಡಿಸಿಕೊಳ್ಳಲಾಗಿದ್ದ ಈ ವ್ಯವಸ್ಥೆ ಬಗ್ಗೆ ನಾನಾ ದೂರುಗಳು ಕೇಳಿಬಂದಿದ್ದವು. ಹೀಗಾಗಿ ಸದ್ಯದಲ್ಲೇ ಈ ವ್ಯವಸ್ಥೆಯನ್ನು ಬಂದ್ ಮಾಡಲಾಗುತ್ತದೆ.
ಈ ಸಾಫ್ಟ್ ವೇರ್ ತೆಗೆಯುವುದರಿಂದ ಏನಾಗಲಿದೆ? ಫೇಸ್ಬುಕ್ನ ಮೂರನೇ ಒಂದು ಭಾಗದಷ್ಟು ಜನ ಈ ಫೇಸಿಯಲ್ ರೆಕಗ್ನಿಷನ್ ಸಾಫ್ಟ್ವೇರ್ ಬಳಕೆ ಮಾಡಿ ಬೇರೆಯವರಿಗೆ ಫೋಟೋ ಟ್ಯಾಗ್ ಮಾಡುತ್ತಿದ್ದರು. ಈಗ ಇದನ್ನು ತೆಗೆಯುವುದರಿಂದ ಕೋಟ್ಯಂತರ ಬಳಕೆದಾರರ ಫೇಸಿಯಲ್ ರೆಕಗ್ನಿಷನ್ ಟೆಂಪ್ಲೇಟ್ಗಳು ಡಿಲೀಟ್ ಆಗಲಿವೆ. ಜತೆಗೆ ಇನ್ನು ಮುಂದೆ ಗ್ರೂಫ್ ಫೋಟೋ ಹಾಕಿದಾಗ, ಆಟೋಮ್ಯಾಟಿಕ್ ಆಗಿ ಇತರರನ್ನು ಟ್ಯಾಗ್ ಮಾಡುವ ಆಪ್ಶನ್ ಕೇಳುವುದಿಲ್ಲ.
ಈ ವ್ಯವಸ್ಥೆಯನ್ನು ಫೇಸ್ಬುಕ್ ತೆಗೆಯುತ್ತಿರುವುದು ಏಕೆ?
ಫೇಸ್ಬುಕ್ ವಿರುದ್ಧ ಈ ಸಾಫ್ಟ್ವೇರ್ ಸಂಬಂಧವೇ ಖಾಸಗಿತನದ ಉಲ್ಲಂಘನೆಯ ದೂರುಗಳು ದಾಖಲಾಗಿವೆ. ಅಮೆರಿಕದಲ್ಲಿ ಈ ಬಗ್ಗೆ ತನಿಖೆಯೂ ನಡೆಯುತ್ತಿದೆ. ಹೀಗಾಗಿಯೇ ಫೇಸ್ಬುಕ್ ಈ ವ್ಯವಸ್ಥೆಯನ್ನೇ ತೆಗೆದುಹಾಕಲು ಹೊರಟಿದೆ.
ಫೇಸ್ಬುಕ್ನಿಂದ ಇದನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆಯೇ?
ಹೌದು, ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಈ ಡಿಸೆಂಬರ್ ವೇಳೆಗೆ ಫೇಸಿಯಲ್ ರೆಕಗ್ನಿಷನ್ನ ಟೆಂಪ್ಲೇಟ್ಗಳನ್ನು ಡಿಲೀಟ್ ಮಾಡಲಿದೆ. ಆದರೆ, ಇದಕ್ಕೆ ಬದಲಾಗಿ ಮುಂದುವರಿದ ದೀಪ್ಫೇಸ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಿದೆ.
ಭಾರತದಲ್ಲಿ ಫೇಸಿಯಲ್ ರೆಕಗ್ನಿಷನ್ ವ್ಯವಸ್ಥೆ ಇದೆಯೇ?
ಭಾರತದ ಕೆಲವು ವಿಮಾನ ನಿಲ್ದಾಣಗಳು ಮತ್ತು ರೈಲ್ವೇ ನಿಲ್ದಾಣಗಳಲ್ಲಿ ಈ ವ್ಯವಸ್ಥೆಯುಂಟು. ಈ ಮೂಲಕ ರಿಯಲ್ ಟೈಮ್ನಲ್ಲೇ ಜನರನ್ನು ವಿವಿಧ ಕೆಮರಾಗಳ ಮೂಲಕ ಪರಿಶೀಲಿಸಲಾಗುತ್ತಿದೆ.
ಏನಿದು ಫೇಸಿಯಲ್ ರೆಕಗ್ನಿಷನ್ ವ್ಯವಸ್ಥೆ?
ಬಳಕೆದಾರರೊಬ್ಬರು ಗುಂಪಿನ ಫೋಟೋವೊಂದನ್ನು ಅಪ್ಲೋಡ್ ಮಾಡಿದರೆ, ಈ ಫೋಟೋದಲ್ಲಿರುವ ಇತರರನ್ನು ಚಹರೆ ಆಧಾರದಲ್ಲಿ ಗುರುತಿಸಿ ಅವರನ್ನು ಈ ಫೋಟೋಗೆ ಟ್ಯಾಗ್ ಮಾಡಬಹುದೇ ಎಂದು ಕೇಳುತ್ತಿತ್ತು. ಈ ವ್ಯವಸ್ಥೆಯ ಮೂಲವೇ ಫೇಸಿಯಲ್ ರೆಕಗ್ನಿಷನ್ ಸಾಫ್ಟ್ವೇರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು