ಲಂಡನ್‌: ಕರ್ನಾಟಕದ ಜಾನಪದ ಕಲಾ ಉತ್ಸವ


Team Udayavani, May 16, 2021, 8:06 PM IST

Folk Art Festival of Karnataka

ಲಂಡನ್‌
ಭಾರತೀಯ ವಿದ್ಯಾ ಭವನ ಲಂಡನ್‌- ಕರ್ನಾಟಕದ ಸಹಯೋಗದೊಂದಿಗೆ ಸಂಸ್ಕೃತಿ ಸೆಂಟರ್‌ ಆಫ್ ಕಲ್ಚರಲ್‌ ಎಕ್ಸಲೆನ್ಸ್‌ ವತಿಯಿಂದ ಕರ್ನಾಟಕದ ಸಾಂಪ್ರದಾಯಿಕ ಹಾಗೂ ಐತಿಹಾಸಿಕ ಜಾನಪದ ಸಂಗೀತ ಹಾಗೂ ನೃತ್ಯ ಕಲೆಗಳ ಪ್ರದರ್ಶನ “ಕೌಸ್ತುಭಮ್‌ ಕರ್ನಾಟಕಂ’ ಮೇ 8ರಂದು ವರ್ಚುವಲ್‌ ವೇದಿಕೆಯಲ್ಲಿ ನಡೆಯಿತು. ಕನ್ನಡದ ಕಂಪು ಸಮುದ್ರದಾಚೆ ಪ್ರಸರಿಸಿ ಆಂಗ್ಲ ನಾಡಿನಲ್ಲಷ್ಟೇ ಅಲ್ಲದೆ ಭಾರತದಲ್ಲೂ ಕಲಾ ರಸಿಕರನ್ನು ರಂಜಿಸಿತು.

ಲಂಡನ್‌ನ ಭವನದ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಮತ್ತೂರು ನಂದಕುಮಾರ ಅವರು ಆರಂಭಿಕ ಮಾತುಗಳನ್ನಾಡಿದರು.
ಡಾ| ನಂದಾ ಅವರು ಭಾಗವತದ ಆಯ್ದ ಭಾಗದಿಂದ ಆರಂಭಗೊಳಿಸಿ ವಿಶೇಷವಾಗಿ ಪುರಂದರ ದಾಸರ ಕುರಿತು ಮಾತನಾಡುತ್ತಾ ಅವರ ಕೃತಿಗಳ ಮಹತ್ವ, ರಾಮಾಯಣ ಮಹಾಭಾರತದಂತಹ ಸಂಸ್ಕೃತ ಭಾಷೆಯ ಕಥೆಯನ್ನು ಸರಳ ಶಬ್ಧಗಳಲ್ಲಿ ಸಾಮಾನ್ಯ ಜನರಿಗೆ ತಿಳಿಸಿ ಸಮಾಜದ ಉದ್ಧಾರದ ಬಗ್ಗೆ ಅವರಿಗಿದ್ದ ಶ್ರದ್ಧೆ ಭಕ್ತಿಯನ್ನು ಹೊಗಳುತ್ತಾ, ಹರಿ ಕುಣಿದ ನಮ್ಮ.. ಹಾಡನ್ನು ಸಂಕ್ಷಿಪ್ತವಾಗಿ ಪ್ರಸ್ತುತಪಡಿಸಿದ್ದು ಈ ಸಂದರ್ಭಕ್ಕೆ ಮೆರುಗು ನೀಡಿತು.

ಅನಂತರ ಯೋಗೀಂದ್ರ ಮರವಂತೆ ಅವರು 500 ವರ್ಷಗಳ ಹಳೆಯ ಸಾಂಪ್ರದಾಯಿಕ ಭಾರತೀಯ ರಂಗಭೂಮಿ ಕಲಾ ಪ್ರಕಾರವಾದ “ಯಕ್ಷಗಾನ’ವನ್ನು ದೀರ್ಘ‌ವಾಗಿ ತಾಂತ್ರಿಕ ವಿವರಣೆ ಯೊಂದಿಗೆ ಪ್ರಸ್ತುತಪಡಿಸಿದರು.

ಶಿಮೊಗ್ಗದಿಂದ ಜೂಮ್‌ ಮೀಟ್‌ ಮೂಲಕ ಸೇರಿಕೊಂಡ ಅಂಜನೇಯ ಕಲಾ ಡೊಲ್ಲಿನ ಸಂಘದ ಮುಖ್ಯಸ್ಥ ರಾಘವೇಂದ್ರ ಗಾಮ ಅವರಿಂದ “ಡೊಳ್ಳು ಕುಣಿತದ’ ಬಗ್ಗೆ ವಿವರಣೆಯೊಂದಿಗೆ ಅವರ ತಂಡ ದಿಂದ ನೃತ್ಯ ಪ್ರದರ್ಶನ, ತಿಪಟೂರ್‌ ಮೂಲದ ಸದ್ಯಕ್ಕೆ ಲಂಡನ್‌ನಲ್ಲಿ ನೆಲೆಸಿದ ಹರ್ಷರಾಣಿ ಅವರಿಂದ “ಕಂಸಾಳೆಯ’ ಬಗ್ಗೆ ವಿವರಣೆ ಹಾಗೂ ಈಗಿನ ಪೀಳಿಗೆಯ ಮಹಿಳೆಯರು ಹೇಗೆ ಈ ಪುರುಷ ಪ್ರಾಬಲ್ಯ ಕಲೆಯನ್ನು ಕಲಿತು ಪ್ರದರ್ಶಿಸುತ್ತಿರುವ ವಿಚಾರ ತಿಳಿಸಿದರು. ಮಾತ್ರವಲ್ಲದೆ, ಮುಂದಿನ ಜನಾಂಗಕ್ಕೆ ಈ ಪರಂಪರೆಯನ್ನು ದಾಟಿಸುವಂತೆ ಕೇಳಿಕೊಂಡರು.

ಹರ್ಷ ಅವರೇ ನೃತ್ಯ ಸಂಯೋಜಿಸಿ ಕಲಿಸಿಕೊಟ್ಟ ಕಂಸಾಳೆಯನ್ನು ಇಬ್ಬರು ಪುಟ್ಟ ಮಕ್ಕಳಾದ ಪ್ರತೀಕ್‌ ದೇಶಪಾಂಡೆ ಮತ್ತು ಶರದ್‌ ಶ್ರೀನಿವಾಸ್‌ ಅವರು ಪ್ರಸ್ತುತಪಡಿಸಿದರು. ಗದುಗಿನಿಂದ ವೀರಭದ್ರ ಪುರವಂತಿಕೆ ಜನಪದ ಕಲಾ ಮೇಳದ ಹಿರಿಯರು ಹಾಗೂ ಮುಖ್ಯಸ್ಥರಾದ ಬಸವರಾಜ್‌ ಹರ್ಲಾಪುರ್‌ ಅವರಿಂದ “ವೀರಗಾಸೆ” ಪ್ರಸ್ತುತಿ ನೋಡುಗರನ್ನು ಮಂತ್ರಮುಗ್ಧ ಮಾಡಿತು.
ಅಮಿತಾ ರವಿಕಿರಣ ಅವರು ಪ್ರಸ್ತುತ ಪಡಿಸಿದ ಕರ್ನಾಟಕದ ಅದ್ಭುತ ಜಾನಪದ ಕಥೆಯಾದ ಎಲ್ಲಮ್ಮ ಪದ (ಚೌಡಿಕೆ ಪದ) ಕೇಳುಗರಲ್ಲಿ ರೋಮಾಂಚನ ಉಂಟು ಮಾಡಿತು.
ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸ ಸಂಯೋಜನೆಯನ್ನು ಪ್ರಸ್ತುತಪಡಿಸಿದ ಸ್ನೇಹಾ ತಯೂರ್‌, ಶ್ರೇಷ್ಠ ಗೀತರಚನೆಕಾರರು ಮತ್ತು ಸಂಯೋಜಕರ ಸಂಗೀತ ಹಾಗೂ ಸಾಹಿತ್ಯ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವ ಹೆಲವನಕಟ್ಟೆ ಗಿರಿಯಮ್ಮ ಸಂಯೋಜನೆಯನ್ನು ಪೂಜಾ ತಯೂರ್‌ ಅವರು ಸುಮಧುರವಾದ ಗಾಯನದ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿದರು ಮತ್ತು ಗುರು ಶಿಷ್ಯ ಕೃತಜ್ಞತಾ ಭಾವ ತುಂಬಿದ ಗೋಪಾಲದಾಸ ಅವರ ಸಂಯೋಜನೆಯನ್ನು ಸುಮನಾ ಧ್ರುವ ಅವರು ಅತ್ಯುತ್ತಮವಾಗಿ ಹಾಡಿದರು.

ಸಂಸ್ಕೃತಿ ಸೆಂಟರ್‌ ಆಫ್ ಕಲ್ಚರ್‌ ಎಕ್ಸಲೆ®Õ… ಸಂಸ್ಥಾಪಕರಾದ ಡಾ| ರಾಗಸುಧಾ ವಿನಿಜಮೂರಿ ಅವರು ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ರಾಧಿಕಾ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಶೋಭಾ ಸಾಗರ್‌ ಭಾರತದಲ್ಲಿ ಸಮನ್ವಯ ತಂಡದಲ್ಲಿದ್ದರು. ಈವೆಂಟ್‌ ಅನ್ನು ಫೇಸ್‌ಬುಕ್‌ನಲ್ಲಿ ನೇರಪ್ರಸಾರ ಮಾಡಲಾಗಿದ್ದು, ವಿವಿಡ್ಲಿಪಿ ಇದನ್ನು ಯೂಟ್ಯೂಬ್‌ನಲ್ಲಿ ಸ್ಟ್ರೀಮ್‌ ಮಾಡಿದೆ.
ಗಡಿಯಾಚೆ ಕಲಾವಿದರು ಕರ್ನಾಟಕದ ಈ ದುಃಖದ ಸಮಯದಲ್ಲೂ ಭಾಗವಹಿಸಿ ಪ್ರದರ್ಶನ ನೀಡಿದರು. ಚೈತನ್ಯವು ಉತ್ತುಂಗದಲ್ಲಿದ್ದು ಮತ್ತು ಭರವಸೆ ಶಾಶ್ವತವಾಗಿ ಮೂಡಿದ್ದು ಈ ಸಂದರ್ಭದಲ್ಲಿ ಕಲಾವಿದರೆಲ್ಲ ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪ್ರದರ್ಶಿಸುವ, ಹಂಚಿಕೊಳ್ಳುವ ಮತ್ತು ರವಾನಿಸುವ ಪ್ರತಿಜ್ಞೆಯನ್ನು ಮೂಡಿಸಿದರು.

ಟಾಪ್ ನ್ಯೂಸ್

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

signature

Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.