ಬೇಸಗೆಯಲ್ಲಿ ಆಹಾರ-ವಿಹಾರ, ಜೀವನಶೈಲಿ

ನಾವು ಅನೇಕ ಒಳ್ಳೆಯ ಸಾಧನೆಗಳನ್ನು ಮಾಡುವುದಕ್ಕೋಸ್ಕರ ಉಪಯೋಗಿಸಿಕೊಳ್ಳಬೇಕು.

Team Udayavani, Mar 28, 2022, 10:15 AM IST

ಬೇಸಗೆಯಲ್ಲಿ ಆಹಾರ-ವಿಹಾರ, ಜೀವನಶೈಲಿ

ಬೇಸಗೆಯ ಕಾವು ಹೆಚ್ಚಾಗತೊಡಗಿದೆ. ಮನೆಯ ಹೊರಗೆ ಕಾಲಿಟ್ಟರೆ ಸೂರ್ಯನ ಶಾಖದಿಂದ ದೇಹವೆಲ್ಲ ಸುಟ್ಟಂತೆ ಅನುಭವವಾಗುತ್ತದೆ. ಹಾಗೆಂದು ಮನೆಯೊಳಗಡೆ ಕುಳಿತರೂ ದೇಹದಿಂದ ಬೆವರಿಳಿಯಲಾರಂಭಿಸುತ್ತದೆ. ಫ್ಯಾನ್‌ ಎಷ್ಟೇ ರಭಸವಾಗಿ ತಿರುಗಿದರೂ ಅದರ ಗಾಳಿಯೂ ಬಿಸಿಯಾಗಿರುವಂತೆ ಭಾಸವಾಗುತ್ತದೆ. ಇನ್ನು ಹವಾನಿಯಂತ್ರಕದಡಿಯಲ್ಲಿ ಕುಳಿತರೆ ದೇಹ ತಣ್ಣಗಾದಂತೆ ಭಾಸವಾದರೂ ದಾಹ ಹೆಚ್ಚಾಗಿ ತಂಪಾದ ಪಾನೀಯ ಸೇವಿಸುವ ಎಂದೆನಿಸುತ್ತದೆ. ಇನ್ನು ಬೇಸಗೆಯಲ್ಲಿ ಕಾಡುವ ಸಾಂಕ್ರಾಮಿಕ ಕಾಯಿಲೆಗಳು, ಚರ್ಮದ ಸಮಸ್ಯೆಗಳು ಹಲವಾರು. ಮಕ್ಕಳ ಪರಿಸ್ಥಿತಿಯಂತೂ ಕೇಳುವುದೇ ಬೇಡ. ಒಟ್ಟಾರೆ ಬೇಸಗೆ ಋತು ವಯೋಮಾನ ಭೇದವಿಲ್ಲದೆ ಎಲ್ಲರನ್ನೂ ಹೈರಾಣಾಗಿಸುತ್ತದೆ. ಇವೆಲ್ಲದರ ಕುರಿತಂತೆ ಬೆಳಕು ಚೆಲ್ಲುವ ಮತ್ತು ಬೇಸಗೆಯಲ್ಲಿ ಆರೋಗ್ಯ ರಕ್ಷಣೆ ಹಾಗೂ ಜೀವನಶೈಲಿ ಹೇಗಿರಬೇಕು ಎಂಬ ಬಗೆಗೆ ಮಾಹಿತಿಗಳನ್ನು ಒಳಗೊಂಡ ಲೇಖನ ಸರಣಿ ಇಂದಿನಿಂದ.

ಮನುಷ್ಯ ಜನ್ಮವು ಎಲ್ಲ ಜೀವಿಗಳಿಗಿಂತ ಶ್ರೇಷ್ಠ ವಾದ ಜನ್ಮವಾಗಿರುತ್ತದೆ. ಮಾನವನ ಚತುರ್ವಿಧ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳಿಗೆ ಆರೋ ಗ್ಯವೇ ಮೂಲ ವಾಗಿ ರುತ್ತದೆ. ಈ ಜೀವನವನ್ನು ನಾವು ಅನೇಕ ಒಳ್ಳೆಯ ಸಾಧನೆಗಳನ್ನು ಮಾಡುವುದಕ್ಕೋಸ್ಕರ ಉಪಯೋಗಿಸಿಕೊಳ್ಳಬೇಕು.

ಈ ಸಾಧನೆಯ ಹಾದಿಯಲ್ಲಿ ಆರೋಗ್ಯವೇ ಮುಖ್ಯವಾದ ಸಾಧನವಾಗಿದೆ. ಹಾಗಾದರೆ ಆರೋಗ್ಯ ವೆಂದರೇನು?-ನಮ್ಮ ಆಯುರ್ವೆàದ ಶಾಸ್ತ್ರದಲ್ಲಿ ಈ ಪ್ರಕಾರವಾಗಿ ವ್ಯಾಖ್ಯಾನಿ ಸಲಾಗಿದೆ. “ಸಮ ದೋಷ, ಸಮಾಗ್ನಿಶ್ಚ, ಸಮ ಧಾತು, ಮಲಕ್ರಿಯಾ ಪ್ರಸನ್ನ ಆತ್ಮ ಇಂದ್ರಿಯ ಮನಃ ಸ್ವಸ್ಥ ಇತ್ಯಭಿದೀಯತೆ’ಇದರ ಅರ್ಥ ನಮ್ಮ ಶರೀರದಲ್ಲಿರುವ ತ್ರಿದೋಷ ಗಳು, ಸಪ್ತ ಧಾತುಗಳು, ಹದಿ ಮೂರು ಪ್ರಕಾರದ ಅಗ್ನಿಗಳು ಹಾಗೂ ತ್ರಿವಿಧ ಮಲ ಗಳು ಸಮತ್ವದಲ್ಲಿ ಅಂದರೆ ಸರಿ ಯಾಗಿ ಕಾರ್ಯ ನಿರ್ವ ಹಿಸಿ, ಇದರ ಜತೆಯಾಗಿ ನಮ್ಮ ಆತ್ಮ, ಮನಸ್ಸು ಮತ್ತು ಇಂದ್ರಿ ಯಗಳು ಪ್ರಸನ್ನವಾಗಿ (ತೃಪ್ತವಾಗಿ)ಇರುವುದೇ ಆರೋಗ್ಯ.

ಈ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಲು ಅನೇಕ ಕಾರಣಗಳಿವೆ. ಅದರಲ್ಲಿ ಮುಖ್ಯವಾದದ್ದು ಕಾಲ ಪರಿಣಾಮವು ಒಂದಾಗಿದೆ. ಭೂಮಿಯು ಸೂರ್ಯನ ಸುತ್ತ ತಿರುಗುತ್ತಿರುವ ಪರಿಣಾಮವಾಗಿ ಋತುಗಳು ಸಂಭವಿಸುತ್ತವೆ. ಅದನ್ನೇ ಋತು ಚಕ್ರವೆಂದು ಕರೆದರೆ ಆ ಋತುಗಳಿಗೆ ಅನುಗುಣವಾಗಿ ಆಹಾರ ಮತ್ತು ವಿಹಾರವನ್ನು ಕೈಗೊಳ್ಳುವುದೇ ಋತುಚರ್ಯೆಯಾಗಿದೆ.

ನಮ್ಮ ಆಚಾರ್ಯರು ಋತುಚರ್ಯೆವನ್ನು ವಿಸ್ತಾರವಾಗಿ ಹೇಳಿರುತ್ತಾರೆ. ಒಂದು ವರ್ಷವನ್ನು ಎರಡು ಅಯನಗಳಾಗಿ ಮತ್ತು ಒಂದು ಅಯನವನ್ನು 3 ಋತುಗಳಾಗಿ ವಿಭಾಗಿಸಲಾಗಿದೆ.

ಉತ್ತರಾಯಣದಲ್ಲಿ (ಆದಾನ ಕಾಲ) ಶಿಶಿರ, ವಸಂತ ಮತ್ತು ಗ್ರೀಷ್ಮ ಋತುಗಳು ಬರುತ್ತವೆ. ದಕ್ಷಿಣಾಯಣದಲ್ಲಿ (ವಿಸರ್ಗ ಕಾಲ) ವರ್ಷಾ, ಶರದ್‌ ಮತ್ತು ಹೇಮಂತ ಋತುಗಳು ಬರುತ್ತವೆ. ಬೇಸಗೆ ಕಾಲವು ವಸಂತ ಮತ್ತು ಗ್ರೀಷ್ಮ ಋತು ಗಳನ್ನು ಒಳಗೊಂಡಿರುತ್ತದೆ. ಆದಾನ ಕಾಲದಲ್ಲಿ ಸೂರ್ಯನು ಪ್ರಖರವಾಗಿರುವುದರಿಂದ ತಾಪವು ಏರುತ್ತಾ ಹೋಗಿ ಹಗಲು ದೀರ್ಘ‌ವಾಗಿ ಪ್ರಕೃತಿ ಯಲ್ಲಿ ಉಷ್ಣತೆಯು ಜಾಸ್ತಿಯಾಗುತ್ತದೆ. ಇದರಿಂದಾಗಿ ನೀರಿನ ಅಂಶವೂ ಬತ್ತಿ ಹೋಗುತ್ತದೆ.

ವಸಂತ ಋತುವನ್ನು ಬೇಸಗೆಯಂತಲೂ ಮತ್ತು ಗ್ರೀಷ್ಮ ಋತುವನ್ನು ಕಡುಬೇಸಗೆಯೆಂದು ವಿಭಾಗಿಸಬಹುದು. ಹೀಗಾಗಿ ನಾವು ಬೇಸಗೆ ಪ್ರಾರಂಭದಲ್ಲಿ ವಸಂತ ಋತುಚರ್ಯೆಯನ್ನು ಮತ್ತು ಅನಂತರದಲ್ಲಿ ಗ್ರೀಷ್ಮ ಋತುವಿನಲ್ಲಿ ಗ್ರೀಷ್ಮ ಋತುಚರ್ಯೆಯನ್ನು ಪಾಲಿಸಬೇಕು.

ಈ ಕಾಲದಲ್ಲಿ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಬೇಕು. ಈ ಕೆಳಗೆ ವಿವರಿಸಿದ ಆಹಾರವನ್ನು ಸೇವಿಸಿದರೆ ಆರೋಗ್ಯ ರಕ್ಷಣೆ ಸಾಧ್ಯ.

ಹಳೆಯ ಧಾನ್ಯಗಳು: ಹಳೆಯದಾದ ಅಕ್ಕಿ, ಗೋಧಿ, ಹೆಸರುಬೇಳೆ, ಬಾರ್ಲಿ ಮುಂತಾದ ಧಾನ್ಯ ಗಳನ್ನು ಬಳಸಿ ತಯಾರಿಸಿದ ಖಾದ್ಯಗಳನ್ನು ಸೇವಿಸಬೇಕು. ಕೆಂಪು ಅಕ್ಕಿಯ ಅನ್ನವನ್ನು ತಿಳಿಯಾದ ಸಾರು ಮತ್ತು ಮಜ್ಜಿಗೆಯ ಜತೆ ತೆಗೆದು ಕೊಳ್ಳಬ ಹುದು. ಎಣ್ಣೆಯ ಜಿಡ್ಡಿನಿಂದ ಕೂಡಿದ ಆಹಾರವು ಒಳ್ಳೆಯದಲ್ಲ.

ತರಕಾರಿಗಳು: ಪಡವಲಕಾಯಿ, ಹೀರೆಕಾಯಿ, ಸೌತೆಕಾಯಿ, ಕುಂಬಳಕಾಯಿ, ಮೂಲಂಗಿ, ಟೊಮೇಟೊ, ಈರುಳ್ಳಿ ಇತ್ಯಾದಿ ತರಕಾರಿಗಳು ಉತ್ತಮ. ಸೌತೆಕಾಯಿ, ಕ್ಯಾರೆಟ್‌, ಬೀಟ್‌ರೂಟ್‌ ಇತ್ಯಾದಿ ತರಕಾರಿಗಳನ್ನು ಸಲಾಡ್‌ ರೂಪದಲ್ಲಿ ಹಸಿಯಾಗಿ ಸೇವಿಸಬೇಕು.

ಅಂಬಲಿಗಳು: ಬಿಳಿಜೋಳದ ಹಿಟ್ಟಿನ ಅಂಬಲಿ, 2 ಚಮಚ ಹಿಟ್ಟನ್ನು ಒಂದು ಗ್ಲಾಸ್‌ ನೀರಿನಲ್ಲಿ ಕುದಿಸಿ, ಮಜ್ಜಿಗೆ, ಉಪ್ಪು, ಜೀರಿಗೆ ಪುಡಿಯನ್ನು ಸೇರಿಸಿ ಕುಡಿಯಬೇಕು. ಈ ರೀತಿಯಾಗಿ ರಾಗಿ ಅಂಬಲಿ, ಅಕ್ಕಿ ಅಂಬಲಿ, ಬಾರ್ಲಿ ಅಂಬಲಿ, ಕಾರ್ನ್ಫ್ಲೋರ್‌ ಅಂಬಲಿ ಮಾಡಬಹುದು.

ಪಾನಕಗಳು: ತಣ್ಣಗಿನ ಸಿಹಿಯಾಗಿರುವ ಕೋಕಂ ಪಾನಕ, ಸೊಗದೇ ಬೇರಿನ, ಕಲ್ಲಂಗಡಿ, ಕರಬೂಜ, ಮಾವಿನ ಹಣ್ಣಿನ ಪಾನಕಗಳನ್ನು ಸೇವಿಸ ಬೇಕು. ಇತರ ಎಲ್ಲ ಹಣ್ಣುಗಳ ರಸಗಳು ತುಂಬಾ ಶಕ್ತಿಯನ್ನು ನೀಡುತ್ತವೆ.

ರಸಾಲಗಳು: ಇದನ್ನು ಒಂದು ವಿಶೇಷವಾದ ಪೇಯ ಎಂದು ವಿವರಿಸಿದ್ದಾರೆ. ಮೊಸರಿ ನಲ್ಲಿ ಸಕ್ಕರೆ, ಶುಂಠಿ, ಕಾಳುಮೆಣಸು ಮತ್ತು ಜೀರಿಗೆಯನ್ನು ಸೇರಿಸಿ ಕಡೆದು ಸೇವಿಸಬೇಕು. ಇದು ಇಂದಿನ ಆಧುನಿಕ ಯುಗದಲ್ಲಿ Masala Lassi, Sweet Lassi, Mango Lassi ಇತ್ಯಾದಿ ರೂಪದಲ್ಲಿ ಲಭ್ಯವಿದೆ. ಸುಲಭವಾಗಿ ಸಕ್ಕರೆ, ಉಪ್ಪು ಬೆರೆಸಿದ ಮಜ್ಜಿಗೆ ಸೇವಿಸಬಹುದು.

ಮಂಥಗಳು: ಪಂಚಸಾರ(ದ್ರಾಕ್ಷಾ, ಮಧೂಕ, ಖರ್ಜೂರ, ಕಾಶ್ಮರ್ಯ ಮತ್ತು ಪರೂಷಕದ) ಮಂಥವನ್ನು ಸೇವಿಸಬೇಕು. ಇದನ್ನೇ ಈ ಕಾಲದಲ್ಲಿ Dryfruits Milk Shake ಎಂದು ಕರೆಯುತ್ತಾರೆ.

ಸೂಪುಗಳು: ವಿವಿಧ ತರಕಾರಿಗಳು ಮತ್ತು ಮೆಕ್ಕೆಜೋಳ (Corn Flour)ದ ಹಿಟ್ಟಿನಿಂದ ಮಾಡಿದ ಸೂಪುಗಳನ್ನು ಸೇವಿಸಬೇಕು. ಕರ್ಪೂರ ಮುಂತಾದ ಸುಗಂಧಿತ ದ್ರವ್ಯಗಳಿಂದ ಕೂಡಿದ ಶೀತಲ ನೀರನ್ನು ಸೇವಿಸಬೇಕು.

ವಿಹಾರ
ಪ್ರಾತಃಕಾಲ ಪಾದಗಳಿಗೆ ತೆಂಗಿನ ಎಣ್ಣೆಯನ್ನು ಹಚ್ಚಿ ಅಭ್ಯಂಗ ಮಾಡಬೇಕು. ಬೆಚ್ಚಗಿನ ನೀರಿನಲ್ಲಿಯೇ ಸ್ನಾನ ಮಾಡಬೇಕು. ಸ್ನಾನದ ಬಳಿಕ ಶ್ರೀಗಂಧ, ಉಶಿರಾ, ಗೋಪಿಚಂದನಗಳನ್ನು ಲೇಪಿಸಬೇಕು. ಸಂಜೆ ಸುಂದರವಾದ ಉದ್ಯಾನವನದಲ್ಲಿ ವಿಹರಿಸಬೇಕು. ಅತಿಯಾದ ವ್ಯಾಯಾಮ ಮಾಡಬಾರದು. ಬಿಸಿಲಿನಲ್ಲಿ ತಿರುಗಾಡಬಾರದು. ಹಗಲಿನ ಸಮಯದಲ್ಲಿ ಮಲಗಿಕೊಳ್ಳಬಾರದು. ರಾತ್ರಿ ವೇಳೆ ಚಂದ್ರನನ್ನು ಆಹ್ಲಾದಿಸಬೇಕು.

ಈ ರೀತಿಯಾದ ಜೀವನಶೈಲಿಯನ್ನು ಬೇಸಗೆ ಕಾಲದಲ್ಲಿ ನಾವು ಅನುಸರಿಸುವುದರಿಂದ ಬೇಸಗೆಯ ತಾಪದಿಂದ ರಕ್ಷಿಸಿಕೊಂಡು ಆರೋಗ್ಯವಾಗಿರಲು ಸಾಧ್ಯವಾಗುತ್ತದೆ.

– ಡಾ| ಪ್ರೀತಿ ಪಾಟೀಲ್‌
ಮಣಿಪಾಲ

ಟಾಪ್ ನ್ಯೂಸ್

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

19-rcb

RCB: ಈ  ಸಲ ಕಪ್‌ ನಮ್ಮದು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.