
ನೌಕಾ ದಿನ ಆಚರಣೆಗೆ ವಿಶಾಖಪಟ್ಟಣ ಸಜ್ಜು; ಇದೇ ಮೊದಲ ಬಾರಿ ದಿಲ್ಲಿಯ ಹೊರಗೆ ಕಾರ್ಯಕ್ರಮ
Team Udayavani, Dec 4, 2022, 7:45 AM IST

ಪ್ರತಿ ವರ್ಷ ಡಿ. 4ರಂದು “ನೌಕಾ ದಿನ’ದ ಅಂಗವಾಗಿ ರಾಷ್ಟ್ರರಾಜಧಾನಿ ದಿಲ್ಲಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿ ಸಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ನೌಕಾಪಡೆಯು ರಾಜಧಾನಿಯ ಹೊರಗೆ ಅಂದರೆ, ಆಂಧ್ರ ಪ್ರದೇಶದ ವಿಶಾಖಪಟ್ಟಣ ದಲ್ಲಿ ರವಿವಾರ ನೌಕಾದಿನ ಆಚರಿಸುತ್ತಿದೆ.
ವಿಶಾಖಪಟ್ಟಣದಲ್ಲಿ ಏಕೆ?
ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಹೊತ್ತಲ್ಲಿ ನೌಕಾ ಪಡೆಯು ನೌಕಾದಿನದಂದು ತನ್ನ “ಕಾರ್ಯಾಚರಣೆಯ ಸಾಮರ್ಥ್ಯ’ವನ್ನು ಪ್ರದರ್ಶಿಸಲು ನಿರ್ಧರಿಸಿದೆ. ಹೀಗಾಗಿ, ವಿಶಾಖಪಟ್ಟಣದ ಆರ್.ಕೆ. ಬೀಚ್ನಲ್ಲಿ ಸಾಮರ್ಥ್ಯ ಪ್ರದರ್ಶನ ಆಯೋಜಿಸಿದೆ. ಡಿ. 2ರಂದು ಇದರ ಪೂರ್ವಾಭ್ಯಾಸವೂ ನಡೆದಿದೆ.
ವಿಶೇಷವೇನು?
ಬೀಚ್ರಸ್ತೆಯಲ್ಲಿನ “ವಿಕ್ಟರಿ ಎಟ್ ಸೀ’ ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಆರಂಭ.
ನೌಕಾಪಡೆಯ ಹಡಗುಗಳು, ಜಲಾಂತರ್ಗಾಮಿಗಳು, ವಿಮಾನಗಳು ಮತ್ತು ಎಲ್ಲ ನೌಕಾ ಕಮಾಂಡ್ಗಳ ವಿಶೇಷ ಪಡೆಗಳಿಂದ ಸಾಮರ್ಥ್ಯ ಪ್ರದರ್ಶನ.
ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಖ್ಯ ಅತಿಥಿಯಾಗಿ ಭಾಗಿ.
ನೌಕಾ ದಿನದ ಹಿನ್ನೆಲೆ
1971ರ ಭಾರತ-ಪಾಕ್ ಯುದ್ಧದ ಸಂದರ್ಭದಲ್ಲಿ ನಡೆದ “ಆಪರೇಷನ್ ಟ್ರೈಡೆಂಟ್’ನಲ್ಲಿ ಭಾರತದ ನೌಕಾಪಡೆಯ ಶೌರ್ಯವನ್ನು ಸ್ಮರಿಸುವ ಸಲು ವಾಗಿ ಪ್ರತಿ ವರ್ಷ ಡಿ.4ರಂದು ನೌಕಾ ದಿನವನ್ನಾಗಿ ಆಚರಿ ಸಲಾಗುತ್ತಿದೆ. ಯುದ್ಧದ ವೇಳೆ ನೌಕಾಪಡೆಯು ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ ದಾಳಿ ನಡೆಸಿ ಹಲವಾರು ನೌಕೆಗಳಿಗೆ ಹಾನಿ ಉಂಟುಮಾಡಿತ್ತು. ಈ ಕಾರ್ಯಾಚರಣೆಯಲ್ಲಿ 300 ಯೋಧರು ಹುತಾತ್ಮರಾಗಿ, 700 ಮಂದಿ ಗಾಯಗೊಂಡಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
ಹೊಸ ಸೇರ್ಪಡೆ

ಉಳ್ಳಾಲ: ನೇಣು ಬಿಗಿದ ಸ್ಥಿತಿಯಲ್ಲಿ ವಿಶೇಷಚೇತನ ಯುವತಿಯ ಶವ ಪತ್ತೆ

ಬಜೆಟ್ ನಲ್ಲಿ ಅಭಿವೃದ್ಧಿ ಹಾಗೂ ಕಲ್ಯಾಣ ಯೋಜನೆಗಳಿಗೆ ಸಮಾನ ಅವಕಾಶ: ಸುನಿಲ್ ಕುಮಾರ್

ಸಿ.ಡಿ ವಿಚಾರದಲ್ಲಿ ಡಿಕೆಶಿ ಕಾಂಗ್ರೆಸ್ ನಾಯಕರ ಬಾಯಿ ಮುಚ್ಚಿಸಿದ್ದಾರೆ: ಈಶ್ವರಪ್ಪ

ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ 5300 ಕೋಟಿ ಘೋಷಣೆ ಸ್ವಾಗತಾರ್ಹ: ಸಿಎಂ ಬೊಮ್ಮಾಯಿ

Union Budget 2023: ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಘೋಷಣೆ