ಮನಮೋಹಕ ಪ್ರವಾಸಿ ತಾಣ: ಚಿಕ್ಕದಾದರೂ ಚೊಕ್ಕದಾದ ದೇಶ ರೀಗಾ ಲಾಟ್ಟಿಯಾ !


Team Udayavani, Sep 27, 2020, 5:35 PM IST

riga-1

ಮಣಿಪಾಲ: ರೀಗಾ ಇದು ಲಾಟ್ಟಿಯಾ ಎಂಬ ಯುರೋಪಿನ ಪುಟ್ಟ ದೇಶದ ರಾಜಧಾನಿ. ಅಲ್ಲಿನ ಆಡಳಿತ ಭಾಷೆ ಲಾಟ್ವಿಯನ್ ಇದು ಸಂಸ್ಕೃತ ಭಾಷೆಗೆ ಅತೀ ಸಮೀಪವಾದ ಭಾಷೆಗಳಲ್ಲಿ ಒಂದಾಗಿದೆ. ಈ ದೇಶ ಕಳೆದೆರಡು ದಶಕಗಳ ಹಿಂದೆ ರಷ್ಯಾದಿಂದ ಬೇರ್ಪಟ್ಟು ತನ್ನ ಸ್ವಂತಿಕೆಯನ್ನು ಗುರುತಿಸಿಕೊಂಡು ಯುರೋಪಿಯನ್ ಒಕ್ಕೂಟವನ್ನು ಸೇರಿಕೊಂಡಿದೆ. ನಾನು ಈ ದೇಶಕ್ಕೆ ಮಣಿಪಾಲ್ ವಿಶ್ವವಿದ್ಯಾನಿಲಯದಿಂದ ಎಕ್ಸ್ಚೇಂಜ್ ಸ್ಟೂಡೆಂಟ್ ಆಗಿ ಹೋಗಿದ್ದೆ. ಆ ದೇಶದಲ್ಲಿ ಪ್ರವಾಸ ಕೈಗೊಂಡಾಗ ನನಗೆ ದೊರೆತ ಅನುಭವ ಅನೇಕ. ನಮ್ಮ ಉಡುಪಿ ಜಿಲ್ಲೆಗಿಂತಲೂ ಚಿಕ್ಕದಾದ ಆ ದೇಶದ ಜನಸಂಖ್ಯೆ ಅಂದಾಜು 18 ಲಕ್ಷ. ಅಲ್ಲಿಯ ಜನರಿಗೆ ಅವರ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಅಪಾರ ಪ್ರೀತಿ.

ಮೊದಲನೇ ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲಿ ಅಪಾರ ಸಂಕಷ್ಟಕ್ಕೆ ಸಿಲುಕಿ ಜರ್ಮನಿಯಿಂದ, ರಷ್ಯಾದಿಂದ ಹಲವಾರು ಆಕ್ರಮಣಗಳಿಗೆ ತುತ್ತಾದರೂ ಇಲ್ಲಿಯ ಜನ ತಮ್ಮ ಸಂಸ್ಕೃತಿಯನ್ನು, ಭಾಷೆಯ ಮೇಲಿನ ಅಭಿಮಾನವನ್ನು ಮರೆಯಲಿಲ್ಲ. ರೀಗಾ “ಡೌಗಾವ” ಎಂಬ ನದಿಯ ತಟದಲ್ಲಿರುವ ಒಂದು ಸುಂದರ ನಗರಿ. ಇದು ಬಾಲ್ಟಿಕ್ ರಾಷ್ಟ್ರಗಳಲ್ಲಿಯೇ ಅತಿ ದೊಡ್ಡ ನಗರ. ರೀಗಾದ ಆರ್ಟ್ ನೊವೇಯೋ ಸೆಂಟರ್ ಯುನೆಸ್ಕೋದ ಹೆರಿಟೇಜ್ ಸೈಟ್ ಆಗಿದೆ.

ರೀಗಾ ಓಲ್ಡ್ ಸಿಟಿಯನ್ನು ಜರ್ಮನ್ ಬಿಷಪ್ ಒಬ್ಬರು ನಿರ್ಮಿಸಿದರು. ರೀಗಾವನ್ನು ಕಾಲ್ನಡಿಗೆಯಲ್ಲಿ ಒಂದೇ ದಿನದಲ್ಲಿ ನೋಡಬಹುದು. ರೀಗಾ ತನ್ನ ಸುಂದರವಾದ ಮರದ ಕಟ್ಟಡಗಳಿಗೆ, ಶಿಲ್ಪಕಲೆಗೆ ಮತ್ತು ಮಧ್ಯಕಾಲೀನ ನಗರಿ ಎಂದು ಹೆಸರುವಾಸಿಯಾಗಿದೆ. ಚಿಕ್ಕದಾದರೂ ಚೊಕ್ಕದಾದ ದೇಶ, ಇರುವ ಪುಟ್ಟ ಪುಟ್ಟ ಪ್ರವಾಸಿತಾಣಗಳನ್ನು ಮನಮೋಹನಗೊಳಿಸುವಂತೆ ಮಾಡಿದ್ದಾರೆ. “ಸಿಗುಲ್ಡ ” ಎಂಬ ಜಾಗದಲ್ಲಿ ರೋಪ್ ಕಾರ್ ಮೂಲಕ ಪ್ರಯಾಣ ಮತ್ತು ಬಂಜೀ ಜಂಪಿಂಗ್ ಮಾಡುವುದು ಒಂದು ರೋಚಕ ಅನುಭವ.

ಅಲ್ಲಿಯ ಜನ ಹೆಚ್ಚು ಮಾತನಾಡುವುದಿಲ್ಲ! ಕಾಡಿನಲ್ಲಿ ಸಿಗುವ ಅಣಬೆಗಳನ್ನು ಆರಿಸಿ ಖಾದ್ಯ ತಯಾರಿಸುವುದು ಅವರ ಸಂಸ್ಕೃತಿಯ ಒಂದು ಭಾಗವಾಗಿದೆ. ಹೌಸ್ ಆಫ್ ಬ್ಲಾಕ್ ಹೆಡ್ಸ್, ಫ್ರೀಡಂ ಮೋನೊಮೆಂಟ್, ಸೇಂಟ್ ಪೀಟರ್ಸ್ ಚರ್ಚ್ ಮುಂತಾದವು ಅಲ್ಲಿಯ ಪ್ರವಾಸಿ ತಾಣಗಳಾಗಿವೆ.

ಅಲ್ಲಿಗೆ ಶೈ೦ಗೇನ್ ವೀಸಾ ಪಡೆದು ಪ್ರಯಾಣಿಸಬಹುದು. ಚಳಿಗಾಲದಲ್ಲಿ ಅಂದಾಜು -20 °C ಉಷ್ಣಾಂಶವಿದ್ದು ಹಿಮದಿಂದ ಇಡೀ ದೇಶವೇ ಆವರಿಸಿರುತ್ತದೆ, ಬೇಸಿಗೆಯಲ್ಲಿ ಅಂದಾಜು 22 °C ಉಷ್ಣಾಂಶ ಇರುತ್ತದೆ. ದೇಶದಲ್ಲೆಡೆ ಪ್ರಯಾಣಿಸಲು ಬಸ್, ಟ್ರೈನ್ ಮತ್ತು ಟ್ರ್ಯಾಮ್ ಗಳ ವ್ಯವಸ್ಥೆ ಇದೆ, ಸೈಕಲ್ ಏರಿ ಕೂಡ ಪ್ರಯಾಣಿಸಬಹುದು.

 

-ಅಭೀಪ್ ವಿ ಸುಧಾಕರ್

ತೀರ್ಥಹಳ್ಳಿ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.