ರಾವಬಹಾದ್ದೂರರ ಜೀವನಸ್ಪರ್ಶಿ ಕೃತಿ “ಗ್ರಾಮಾಯಣ’
Team Udayavani, Nov 26, 2020, 5:30 AM IST
ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.
1957ರಲ್ಲಿ ಪ್ರಕಟವಾದ ರಾವಬಹಾದ್ದೂರ (ರಾಮಚಂದ್ರ ಭೀಮರಾವ್ ಕುಲಕರ್ಣಿ)ರ ಚೊಚ್ಚಲ ಕೃತಿ “ಗ್ರಾಮಾಯಣ’ ನಿರೀಕ್ಷೆಗೂ ಮೀರಿ ಮನ್ನಣೆ ಪಡೆದ ಕಾದಂಬರಿಯಾಗಿದೆ. ಒಂದು ಊರಿನ ಬದುಕನ್ನು ಕೇಂದ್ರವಾಗಿರಿಸಿ ಓದುಗರ ಮನಸ್ಸಿಗೆ ನಾಟುವಂತೆ ನಿರೂಪಿಸಿ ರುವುದು ಕೃತಿಯ ವೈಶಿಷ್ಟ್ಯ. ಈ ಕಾದಂಬರಿಗೆ ನಾಯಕ ಯಾ ನಾಯಕಿ ಇಲ್ಲ. ಹಲವು ಜಾತಿ ಗಳು, ಅವುಗಳ ಆಚಾರ- ವಿಚಾರ, ಸಾಮುದಾಯಿಕ ಮನೋಭಾವ, ಸಂಘರ್ಷ ಮೊದಲಾದವುಗಳ ಅಭಿವ್ಯ ಕ್ತಿಯೇ ಇದರ ಮೂಲ.
ಕೃಷ್ಣಾ ನದಿ ದಂಡೆಯ ಮೇಲೆ ಇರುವ ಊರು ವಾದಳ್ಳಿ. ಈ ಹಳ್ಳಿಯ ಸ್ಥಿತಿಗತಿ, ಅವನತಿ ಯೇ ಕಾದಂಬರಿಯ ಜೀವ. ದ್ವೇಷ, ಮೋಹ, ಅಭಿಮಾನ, ಸ್ವಾರ್ಥ ಸಾಧನೆ, ಕಪಟ, ಕಾರಸ್ಥಾನಗಳ ಬಲೆ ಯಲ್ಲಿ ಸಿಕ್ಕು ಒದ್ದಾಡುವ ಒಂದು ಜೀವಂತ ಸಮಾಜ ಈ ಕತೆಯ ನಾಯಕ. ಎರಡನೇ ಹಂತದಲ್ಲಿ ಮಹತ್ವದ ಪಾತ್ರವಾದ ಶಂಕರಪ್ಪ ಗೌಡರ ತೀವ್ರ ಅಭಿಮಾನ ಮತ್ತು ಉದಾತ್ತತೆ, ಬದುಕಿನ ಅವಿಶ್ರಾಂತ ಗಡಿಬಿಡಿಯಲ್ಲೂ ನಿಶ್ಚಲ ತೆಯನ್ನು ಕಾಯ್ದುಕೊಂಡ ಬಾಳಾಚಾರ್ಯ, ಉರುಳು ಹಾಕಿಕೊಂಡು ಜೀವನದ ಪರಮ ರಹಸ್ಯವನ್ನೇ ಹಿಚುಕಿಕೊಂಡ ಪುತಳಾಬಾಯಿ ಪಾತ್ರ ಸ್ಪುರಿಸುವ ಭಾವ ಅನನ್ಯವಾದುದು.
ಬಾಳಾಚಾರ್ಯರ ಪ್ರತಿಯೊಂದು ಕೆಲಸದ ಹಿಂದಿರುವ ವಿಚಾರ ಮಂಥನ, ತನ್ನ ಒಂದು ಪಾಪ ಅನರ್ಥ ಪರಂಪರೆಯನ್ನೇ ಸೃಷ್ಟಿಸಿದಾಗ ಅದನ್ನು ನೋಡಲಾರದೇ ಉರುಳು ಹಾಕಿ ಕೊಂಡು ಪ್ರಾಣಬಿಟ್ಟ ಪುತಳಾಬಾಯಿಯ ಪಾಪಪ್ರಜ್ಞೆೆ, ತಮಗೆ ತಿಳಿದೋ ತಿಳಿಯದೆಯೋ ಅಸಮಂಜಸಗಳ ಬಿರುಗಾಳಿಯನ್ನು ಎಬ್ಬಿಸುವ ಶೇಷಪ್ಪ ಹಾಗೂ ಪಡದಯ್ಯನಂಥವರ ಪಾತ್ರ ಗಳು ಕಥೆಯ ನಡೆಗೆ ವೇಗ ನೀಡಿ ಓದನ್ನು ಪರಿಣಾಮಕಾರಿಯಾಗಿಸುತ್ತದೆ.
ಒಂದು ಘಟನೆಯ ಗರ್ಭದಲ್ಲೇ ಇನ್ನೊಂದು ಘಟನೆಯನ್ನು ನೇಯ್ದು ನಿರೂಪಿಸುವ ಲೇಖ ಕರ ತಂತ್ರ ಕಾದಂಬರಿಯ ಗಮನ ಸೆಳೆಯುವ ಅಂಶ. ಒಂದೇ ಸಮಯದಲ್ಲಿ ಹಲವಾರು ಘಟನೆಗಳು ನಡೆಯುವುದು ಮತ್ತು ಅವು ಭಿನ್ನವಾಗಿ ಓದುಗರಿಗೆ ದಕ್ಕುವ ಬಗೆ ಅದ್ಭುತ. ಜೀವನದ ಮರೆಯಲ್ಲಿ ನಿಂತು ಆಟವಾಡುವ ಅದೃಷ್ಟವನ್ನು ಸರಳ ಮತ್ತು ವಸ್ತುನಿಷ್ಠವಾಗಿ ವಿವರಿಸಿರುವುದು ಇದರ ಶ್ರೇಷ್ಠ ಸಂಗತಿ.
ಜತೆಗೆ ಸ್ವಾಭಾವಿಕವಾಗಿ ಬರಗಾಲ, ಪ್ಲೇಗ್ ಹಾವಳಿಗಳು ಸಮುದಾಯದಲ್ಲಿ ಭೀತಿ ಹುಟ್ಟಿಸಿ ಕಾಡುವ ಬಗೆಯ ಚಿತ್ರಣವೂ ಈ ಕೃತಿಯಲ್ಲಿದೆ. ಆ ಕಾಲದ ಸಮಾಜದಲ್ಲಿ ಪ್ರಸ್ತುತ ವಾಗಿದ್ದ ಸಾಂಕ್ರಾಮಿ ಕಗಳ ಭೀತಿ, ಜತೆಗೆ ಅವುಗಳೊಂದಿಗೆ ಬೆಸೆದಿರುವ ಮೂಢನಂಬಿ ಕೆಗಳು, ಒಂದು ಊರಿನಲ್ಲಿ ಇರಬಹುದಾದ ಇತರ ಸಮಸ್ಯೆಗಳನ್ನು ಕಣ್ಣಿಗೆ ಕಟ್ಟು ವಂತೆ ತೆರೆದಿಟ್ಟಿದ್ದಾರೆ. ಇದು ಇಂದಿನ ಕೊರೊನಾ ಯುಗಕ್ಕೂ ಪ್ರಸ್ತುತ. ಬಡ್ಡಿ ವ್ಯವಹಾರ, ಅದರಲ್ಲಿನ ವಸೂ ಲಿಯ ದಾರ್ಷ್ಟ್ಯ, ಅಕ್ರಮ ಸಂಬಂಧಗಳ ಮೆಲು ನೋಟಗಳು ಕೃತಿಯಲ್ಲಿವೆ.
ಕೃತಿಯ ಉದ್ದಕ್ಕೂ ಢಾಳಾಗಿ ಕಾಣುವುದು ಮಾನವೀಯ ಅನುಕಂಪದ ಸೆಲೆ. ಇದು ಲೇಖಕರಿಗೆ ಸಹಜವಾದ ಮತ್ತು ಮಾನವ ಜನಾಂಗಕ್ಕೆ ಅಪೇಕ್ಷಣೀಯ ಗುಣ. ರಾವಬ ಹದ್ದೂರರು ಸ್ವಾತಂತ್ರ್ಯ ಹೋರಾಟಗಾರರು. ಗಾಂಧಿ ಅನುಯಾಯಿಯಾಗಿ ವರ್ಷಕ್ಕೂ ಹೆಚ್ಚುಕಾಲ “ಖಾದಿ ಗ್ರಾಮೋದ್ಯೋಗ ವ್ಯವ ಹಾರ’ ನೋಡಿಕೊಂಡಿದ್ದರು. ಆ ಕಾಲದ ಸಮಾಜದ ಸ್ವಾನುಭವ ‘ಗ್ರಾಮಾಯಣ’ವಾಗಿ ಪಡಿಮೂಡಿರಬಹುದು. ನಿತ್ಯ ಜೀವನದಲ್ಲಿ ದಕ್ಕುವ ಸಣ್ಣ ಸಣ್ಣ ಕೊರತೆಗಳೂ, ಅಸೂಯೆ, ದ್ವೇಷ ಇತ್ಯಾದಿ ಅನರ್ಥಕಾರಿ ವಿಚಾರಗಳೂ ಹೇಗೆ ವ್ಯವಸ್ಥಿತವಾಗಿ ಒಂದು ದುರಂತಕ್ಕೆ ಮುನ್ನುಡಿಯಾಗಬಹುದು ಎಂದು ವಿವರಿ ಸುತ್ತಾ ಈ ಕಾದಂಬರಿ ಜೀವನಸ್ಪರ್ಶಿ ಕೃತಿ ಯಾಗಿ ನೆಲೆಯಾಗಿದೆ. ಅತಿರಂಜನೀಯ ಉತ್ಪ್ರೇಕ್ಷೆಗಳ ಹಾದಿ ತುಳಿಯದೆ ಈ ಕೃತಿ ಜೀವ ಸ್ವಾಭಾವಿಕ ವಿಚಾರಗಳಿಗೆ ಮಣೆ ಹಾಕಿದೆ.
ಐಶ್ವರ್ಯಾ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ
MUST WATCH
ಹೊಸ ಸೇರ್ಪಡೆ
Kasaragod ವಿವಿಪ್ಯಾಟ್ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ