ಮತ್ತೆ ಹಫೀಜ್‌ ಬಂಧನ!

ಇದು 9ನೇ ಬಾರಿ

Team Udayavani, Jul 19, 2019, 5:00 AM IST

t-44

ಮಣಿಪಾಲ: ಭಯೋತ್ಪಾದನೆಯ ಮಾಸ್ಟರ್‌ ಮೈಂಡ್‌, 26/11 ಮುಂಬಯಿ ದಾಳಿಯ ರೂವಾರಿ ಹಫೀಜ್‌ ಸಯೀದ್‌ನನ್ನು ಪಾಕಿಸ್ಥಾನ ಸರಕಾರ ಬುಧವಾರ ಹಠಾತ್ತನೆ ಬಂಧಿಸಿದೆ. ಈತ ಅಮೆರಿಕ ಮತ್ತು ಭಾರತಕ್ಕೆ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ. ಭಾರತ ಅತನ ಹಸ್ತಾಂತರಕ್ಕೆ ಆಗ್ರಹಿಸುತ್ತಲೇ ಬಂದಿತ್ತು. ಹಾಗಂತ ಪಾಕಿಸ್ಥಾನ ಭಾರತದ ಕೋರಿಗೆ ಮನ್ನಣೆ ನೀಡುವ ಸಲುವಾಗಿ ಈ ಬಂಧನ ನಡೆದಿಲ್ಲ. ಪಾಕ್‌ ಈಗಾಗಲೇ 8 ಬಾರಿ ಈ ಉಗ್ರನನ್ನು ಬಂಧಿಸಿ, ಬಿಡುಗಡೆ ಮಾಡಿತ್ತು. ಹಫೀಜ್‌ಗೆ ಜೈಲು ಎಂದರೆ ಕೇವಲ ನಾಲ್ಕು ಗೋಡೆಯ ಕೊಠಡಿ.

2001
ಮುಂಬಯಿ ದಾಳಿಯ 7 ವರ್ಷ ಮೊದಲು ಭಾರತದ ಸಂಸತ್ತಿನ ಮೇಲೆ ಹಫೀಜ್‌ ದಾಳಿ ಮಾಡಿದ್ದ. ಅವನ ಬಂಧನಕ್ಕೆ ಭಾರತ ಪಾಕ್‌ ಅನ್ನು ಆಗ್ರಹಿಸುತ್ತಲೇ ಬಂದಿತ್ತು. ಅಂತೂ 2001ರ ಡಿಸೆಂಬರ್‌ 21ರಂದು ಪಾಕ್‌ ಸರಕಾರ ಬಂಧಿಸಿತ್ತು. ಆದರೆ 31 ಮಾರ್ಚ್‌ 2002ರಲ್ಲಿ ಅಲ್ಲಿನ ಹೈಕೋರ್ಟ್‌ ಆದೇಶದ ಮೇರೆಗೆ ಬಿಡುಗಡೆಗೊಳಿಸಲಾಗಿತ್ತು. ಮತ್ತೆ ಅದೇ ವರ್ಷ ಮೇ 15ರಂದು ಬಂಧಿಸಿ, ಅಕ್ಟೋಬರ್‌ 31ರಂದು ಜೈಲಿನ ಹೊರಗಿದ್ದ.

2006
200 ಜನರ ಸಾವಿಗೆ 11 ಜುಲೈ 2006ರ ಮುಂಬಯಿಯ ರೈಲುಗಳಲ್ಲಿ ಸರಣಿ ನ್ಪೋಟ ಕಾರಣ ವಾಗಿತ್ತು. ಇದರಲ್ಲಿ ಹಫೀಜ್‌ ಪಾತ್ರ ನಿರ್ಣಾಯಕವಾಗಿತ್ತು. ಈ ಭೀಕರ ಕೃತ್ಯದಲ್ಲಿ ನೇರ ಭಾಗಿಯಾದ ಹಫೀಜ್‌ ಸಯೀದ್‌ನ ಬಂಧನಕ್ಕಾಗಿ ಭಾರತ ಅಂದಿನ ಪಾಕ್‌ ಪ್ರಧಾನಿ ಪರ್ವೇಜ್‌ ಮುಶ್ರಫ್ ಬಳಿ ವಿನಂತಿಸಲಾಗಿತ್ತು. ಆದರೆ ಆರಂಭದಲ್ಲಿ ಅದು ಪ್ರಯೋಜನವಾಗಿರಲಿಲ್ಲ. ಅಂತೂ 9 ಅಗಸ್ಟ್‌ 2006ರಲ್ಲಿ ಜೈಲು ಪಾಲಾಗಿದ್ದ. ಆದರೆ ಮತ್ತೆ ಹೈಕೋರ್ಟ್‌ ಆದೇಶದನ್ವಯ ವಾರದ ಬಳಿಕ ಹೊರ ಬಂದಿದ್ದ. ವಿಚಿತ್ರ ಎಂದರೆ ಅದೇ ದಿನ ಪುನಃ ಬಂಧನಕ್ಕೆ ಒಳಗಾಗಿದ್ದ ಹಫೀಜ್‌ ಅಕ್ಟೋಬರ್‌ 17ರಂದು ಹೊರಬಂದಿದ್ದ.

2008
170 ಜನರ ಮೃತ್ಯುವಿಗೆ ಕಾರಣವಾಗಿದ್ದ 26/11 ರ ಮುಂಬಯಿ ದಾಳಿಯಲ್ಲಿ ಹಫೀಜ್‌ನ ನೇರ ಪಾತ್ರ ಇತ್ತು. ಡಿಸೆಂಬರ್‌ 10ರಂದು ವಿಶ್ವಸಂಸ್ಥೆ ಆತನಿಗೆ ನಿರ್ಬಂಧ ವಿಧಿಸಿತ್ತು. ಮರುದಿನ ಪಾಕ್‌ ಸರಕಾರ ಉಗ್ರನನ್ನು ಬಂಧಿಸಿತ್ತು. ಆದರೆ ಭಾರತ ಎಷ್ಟೇ ಸಾಕ್ಷ್ಯಒದಗಿಸಿದ್ದರೂ 2009ರ ಜೂನ್‌ 2ರಂದು ಬಿಡುಗಡೆಗೊಂಡಿದ್ದ.

2009
ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಹಫೀಜ್‌ನನ್ನು ಹಸ್ತಾಂತರಿಸುವಂತೆ, ಭಾರತದ ಹಲವು ಬಾರಿ ಕೋರಿಕೊಂಡಿತ್ತು. ಆದರೆ ಪಾಕ್‌ ಕಡೆಯಿಂದ ಯಾವುದೇ ಸ್ಪಂದನೆ ವ್ಯಕ್ತವಾಗಿ ರಲಿಲ್ಲ. ರೆಡ್‌ ಕಾರ್ನರ್‌ ನೋಟಿಸ್‌ ಕಳುಹಿಸಿದ ಬಳಿಕ ಬಂಧನ ವಾಗಿತ್ತು. ಆದರೆ ಲಾಹೋರ್‌ ಹೈಕೋರ್ಟ್‌ ಉಗ್ರನ ವಿರುದ್ಧ‌ ಸಾಕ್ಷ್ಯ ಕೊರತೆ ಇದೆ ಎಂದು ಹೇಳಿ ಬಿಡುಗಡೆಗೆ ಆಜ್ಞಾಪಿಸಿತ್ತು.

2017
ಸ್ವತಃ ಪಾಕಿಸ್ಥಾನವೇ ಹಫೀಜ್‌ ವಿರುದ್ಧ ಕಾನೂನು ಸಮರದ ನಾಟಕ ವಾಡಿತ್ತು. ಇವನಿಂದ ದೇಶದೊಳಗೆ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗುತ್ತದೆ ಎಂದು ಕೋರ್ಟ್‌ ಮೊರೆ ಹೋಗಿತ್ತು. ಇದರನ್ವಯ 24 ನವೆಂಬರ್‌ನಲ್ಲಿ ಬಂಧನ ಕ್ಕೊಳಗಾಗಿದ್ದ ಹಫೀಜ್‌ ಬಳಿಕ ಬಿಡುಗಡೆಗೊಂಡಿದ್ದ. ಇದೀಗ ಮತ್ತೆ ಪಾಕ್‌ ಉಗ್ರನನ್ನು ಜೈಲಿಗಟ್ಟಿದೆ.

ಈ ಬಂಧನಕ್ಕೆ ಏನು ಕಾರಣ?
ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅಮೆರಿಕ ಭೇಟಿ ಸಂದರ್ಭ ಟ್ರಂಪ್‌ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಹಫೀಜ್‌ ವಿಷಯ ಚರ್ಚೆಗೆ ಬಂದಿದ್ದು, ಈ ಸಲುವಾಗಿ ಈ ಬಂಧನ ನಡೆದಿದೆ ಎಂಬ ವಿಶ್ಲೇಷಣೆ ನಡೆಯುತ್ತಿದೆ.

ಉದಯವಾಣಿ ಸ್ಪೆಷಲ್‌ ಡೆಸ್ಕ್

ಟಾಪ್ ನ್ಯೂಸ್

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

4-manohar-prasad

ನುಡಿನಮನ- ಪತ್ರಿಕಾರಂಗದ ಮನೋಹರ ಪ್ರಸಾದ್‌ ಕರಾವಳಿಯ ರಾಯಭಾರಿ

1-dasdsad

Yakshagana; ಮಾತಿನ ಜರಡಿ: ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Shivratri 2024; ದಕ್ಷಿಣ ಕಾಶಿ, ಸಂಗಮ ಕ್ಷೇತ್ರ ಎನಿಸಿಕೊಂಡ ಶ್ರೀ ಸಹಸ್ತ್ರಲಿಂಗೇಶ್ವರನ ಆಲಯ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.