ಬೆರಳುಗಳಲ್ಲಿ ಪೆನ್ನು ಹಿಡಿದು ಮನಸ್ಸನ್ನು ಬರೆಯಿರಿ


Team Udayavani, Jun 11, 2021, 5:20 AM IST

ಬೆರಳುಗಳಲ್ಲಿ ಪೆನ್ನು ಹಿಡಿದು ಮನಸ್ಸನ್ನು ಬರೆಯಿರಿ

ಕೈಬೆರಳುಗಳಲ್ಲಿ ಪೆನ್ನು, ಪೆನ್ಸಿಲ್‌ ಹಿಡಿದು ಕಾಗದದ ಹಾಳೆಯ ಮೇಲೆ ಬರೆಯುವುದು ಮನಸ್ಸಿನ ತೂಬು ತೆರೆದು ಹಗುರವಾಗಲು ಇನ್ನೊಂದು ಉತ್ತಮ ಮಾರ್ಗ.

ನಿಜ, ಇವತ್ತು ಫೋನ್‌ನಲ್ಲಿ ಮಾತನಾಡಬಹುದು, ಇಮೈಲ್‌ ಮಾಡಬಹುದು, ಎಸ್ಸೆಮ್ಮೆಸ್‌ ಕಳುಹಿಸಬಹುದು, ವ್ಯಾಟ್ಸ್‌ಆ್ಯಪ್‌ನಲ್ಲಿ ಗೀಚಬಹುದು. ಆದರೆ ಹಳೆಯ ವಿಧಾನವಾದ ಕೈಬರಹದಲ್ಲಿ ಬರೆಯುವುದು ಯೋಚನೆಗಳನ್ನು ಹೆಚ್ಚು ವ್ಯವಸ್ಥಿತವಾಗಿ ಕಟ್ಟಲು, ಒಳ್ಳೆಯದನ್ನು ಆಲೋಚಿಸಲು, ಯೋಚಿಸುವ ವಿಧಾನವನ್ನು ಬಲಪಡಿಸಲು ನೆರವಾಗುತ್ತದೆ. ಅಲ್ಲದೆ ಇದನ್ನೊಂದು ಹವ್ಯಾಸವಾಗಿ ರೂಢಿಸಿಕೊಂಡರೆ ಇದು ಮನಸ್ಸಿನ ಭಾವನೆಗಳನ್ನು ಚೌಕಟ್ಟು ಬದ್ಧವಾಗಿ ಬರೆಯುವ ವಿಧಾನವನ್ನು ಕಲಿಸುತ್ತದೆ. ಅದರಿಂದ ಕ್ರಮೇಣ ನಮ್ಮ ಆಲೋಚನಾ ಗತಿಯೂ ಬೇಕಾಬಿಟ್ಟಿಯಾಗಿ ಇರದೆ ಒಂದು ವ್ಯವಸ್ಥಿತ ಲಹರಿಯನ್ನು ಅನುಸರಿಸಲಾರಂಭಿಸುತ್ತದೆ.

ನಿಮಗಿದು ಓಬೀರಾಯನ ಕಾಲದ್ದಾಗಿ ಕಾಣಬಹುದು. ಆದರೆ ಗೆಳೆಯನಿಗೋ, ಗೆಳತಿಗೋ, ಸಂಬಂಧಿಕರಿಗೋ ಒಂದು ಪತ್ರವನ್ನು ಬರೆಯಿರಿ. ಇದರಲ್ಲಿ ನಿಮಗೆ ಅನಿಸಿದ್ದು, ನಿಮ್ಮ ಭವಿಷ್ಯದ ಯೋಚನೆಗಳು ಇತ್ಯಾದಿಗಳನ್ನು ಬರೆಯಿರಿ. ಇದರಿಂದ ಮನಸ್ಸು ಹಗುರವೂ ಆಗುತ್ತದೆ.

ದಿನವೂ ರಾತ್ರಿ ಡೈರಿ ಬರೆಯಬಹುದು. ಆಯಾ ದಿನದ ಖರ್ಚು ವೆಚ್ಚ ಲೆಕ್ಕಾಚಾರ ಇಲ್ಲಿ ಉದ್ದೇಶವಲ್ಲ. ಆಯಾ ದಿನ ಏನೇನು ಘಟಿಸಿತು, ಏನೆಲ್ಲ ಅನಿಸಿತು – ಇತ್ಯಾದಿ ಎಲ್ಲವನ್ನೂ ನಿರೂಪಣೆ ಮಾಡಿ. ಇದು ಪ್ರತೀ ದಿನ ರಾತ್ರಿ ಮಲಗುವ ಮುಂಚಿನ ಪರಿಪಾಠವಾಗಲಿ. ಇದರಿಂದ ಎರಡು ಲಾಭ – ಒಂದು, ಈಗ ಮನಸ್ಸು ಮುಕ್ತವಾಗುತ್ತದೆ. ಇನ್ನೊಂದು ಹಲವು ವರ್ಷಗಳು ಕಳೆದ ಬಳಿಕ ನಾವು ನಡೆದು ಬಂದ ದಾರಿಯನ್ನು ಅವಲೋಕಿಸಲು ಸಾಧ್ಯವಾಗುತ್ತದೆ.

ಕೈಬರಹದ ಪತ್ರ, ಡೈರಿ ಬರೆಯುವುದಕ್ಕೆ ತಗಲುವ ಸಮಯ, ಶ್ರಮ, ಆಲೋಚಿಸಲು ನಾವು ಹೂಡುವ ಪ್ರಯತ್ನ – ಇವೆಲ್ಲವೂ ಒಂದು ಎಸ್ಸೆಮ್ಮೆಸ್‌, ವ್ಯಾಟ್ಸ್‌ಆ್ಯಪ್‌ ಮೆಸೇಜ್‌, ಫೇಸ್‌ಬುಕ್‌ ಬರಹಕ್ಕಿಂತ ಗಮನಾರ್ಹವಾದದ್ದು, ಸಕಾರಾತ್ಮಕ ಶಕ್ತಿಯನ್ನು ಕೊಡುವಂಥದ್ದು.

ನಮ್ಮ ಪತ್ರಕ್ಕೆ ಉತ್ತರವಾಗಿ ಆ ಕಡೆಯಿಂದ ಬರುವ ಪತ್ರ ತುಂಬಾ ಉಲ್ಲಾಸವನ್ನೂ ಸಾಂತ್ವನವನ್ನೂ ಒದಗಿಸಬಲ್ಲುದು.

ಅಡುಗೆ ಮತ್ತಿತರ ದೈನಂದಿನ ಚಟುವಟಿಕೆಗಳಲ್ಲಿ ಎಲ್ಲರೂ ಪಾಲ್ಗೊಳ್ಳುವುದರಿಂದ ಪರಸ್ಪರ ಪ್ರೀತಿ, ವಿಶ್ವಾಸ, ಸಹಕಾರ, ಆತ್ಮೀಯತೆ ಹೆಚ್ಚುತ್ತದೆ. ಬುದ್ಧಿಶಕ್ತಿ ಹೆಚ್ಚಿಸುವ ಚೆನ್ನೆಮಣೆ, ಚೆಸ್‌ನಂತಹ ಆಟ ಆಡಬಹುದು. ಹಿಂದೆ ಸಂವಹನಕ್ಕೆ ಸೇತುವೆಯಾಗಿದ್ದ ಪತ್ರ ಬರೆಯುವ ರೂಢಿಯನ್ನು ಮತ್ತೆ ಆರಂಭಿಸಬಹುದು. ಆತ್ಮೀಯ ಸ್ನೇಹಿತರು, ದೂರದಲ್ಲಿರುವ ಸಂಬಂಧಿಕರಿಗೆ ಪತ್ರ ಬರೆಯಬಹುದು. ಇದು ನಿಮ್ಮಲ್ಲಿ ಈ ಸಮಯದಲ್ಲಿ ಇನ್ನಷ್ಟು ಚೈತನ್ಯವನ್ನು ಉಂಟುಮಾಡಬಲ್ಲುದು.ಅಂಜಲಿ ಬಿನೋಯ್‌, ಮನಃಶಾಸ್ತ್ರಜ್ಞರು, ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ, ಉಡುಪಿ

ಟಾಪ್ ನ್ಯೂಸ್

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-uv-fusion

Women: ಜಗದೆಲ್ಲ ನೋವನುಂಡರೂ ಹಿತ ಬಯಸುವವಳು ಮಾತೇ

3-uv-fusion

Holi: ಬಣ್ಣಗಳ ಹಬ್ಬ ಹೋಳಿ ಹಬ್ಬ, ಉಲ್ಲಾಸ ತರುವ ಬಣ್ಣಗಳ ಹಬ್ಬ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.