ಐಪಿಎಲ್‌ ಹರಾಜು ಮೊತ್ತ ಆಟಗಾರರಿಗೆ ಹೇಗೆ ಸಿಗುತ್ತದೆ?


Team Udayavani, Feb 16, 2022, 7:45 AM IST

ಐಪಿಎಲ್‌ ಹರಾಜು ಮೊತ್ತ ಆಟಗಾರರಿಗೆ ಹೇಗೆ ಸಿಗುತ್ತದೆ?

ಮೊನ್ನೆಯಷ್ಟೇ ಐಪಿಎಲ್‌ ಹರಾಜು ಮುಗಿದಿದೆ. ಇಶಾನ್‌ ಕಿಶನ್‌ ಈ ಬಾರಿ ಅತೀ ಹೆಚ್ಚು ಅಂದರೆ, 15.25 ಕೋಟಿ ರೂ.ಗಳಿಗೆ ಮಾರಾಟವಾಗಿದ್ದಾರೆ. ಇವರ ಜತೆ 10 ಕೋಟಿ ರೂ.ಗಳಿಗಿಂತಲೂ ಮಾರಾಟವಾದ ಬಹಳಷ್ಟು ಮಂದಿ ಇದ್ದಾರೆ. ಪ್ರತೀ ತಂಡಗಳು ಹರಾಜಿನಲ್ಲಿ ಖರೀದಿಸಿದ ಆಟಗಾರರಿಗೆ ಯಾವ ರೀತಿ ಹಣ ಕೊಡುತ್ತಾರೆ? ಎಂಬ ಮಾಹಿತಿ ಇಲ್ಲಿದೆ.

1.ಆಟಗಾರರಿಗೆ ವೇತನ ಇರುತ್ತದೆಯೇ?
ಐಪಿಎಲ್‌ ಹರಾಜಿನಲ್ಲಿ ಖರೀದಿಸಿದ ಹಣವೇ ಆಟಗಾರನ ವೇತನ. ಇದರಲ್ಲಿ ತೆರಿಗೆ ಕಡಿತವಾಗಿ ಉಳಿದ ಹಣವನ್ನು ನೀಡಲಾಗುತ್ತದೆ.

2.ಇದು ವಾರ್ಷಿಕ ವೇತನವೇ?
ಹೌದು, ಇಶಾನ್‌ ಕಿಶನ್‌ ಅವರನ್ನು 15.25 ಕೋಟಿ ರೂ.ಗೆ ಖರೀದಿ ಮಾಡಲಾಗಿದ್ದು, ಇದು ಅವರ ವಾರ್ಷಿಕ ವೇತನವಾಗಿರುತ್ತದೆ. ಮೂರು ವರ್ಷಕ್ಕೆ ಒಪ್ಪಂದ ಮಾಡಿಕೊಂಡರೆ 45.75 ಕೋಟಿ ರೂ. ಅನ್ನು ವೇತನವಾಗಿ ನೀಡಲಾಗುತ್ತದೆ.

3.ವೇತನ ಸಿಗುವುದು ಡಾಲರ್‌ನಲ್ಲೋ ಅಥವಾ ರೂಪಾಯಿಯಲ್ಲೋ?
2008ರ ಐಪಿಎಲ್‌ ಹರಾಜು ವೇಳೆ ಡಾಲರ್‌ ಲೆಕ್ಕದಲ್ಲಿ ವೇತನ ನೀಡಲಾಗುತ್ತಿತ್ತು. ಆಗ ಡಾಲರ್‌ ಎದುರು ಭಾರತೀಯ ರೂಪಾಯಿ ಮೌಲ್ಯ 40 ರೂ.ಗಳಿತ್ತು. ಈಗ ರೂಪಾಯಿ ಮೌಲ್ಯ 75 ರೂ.ಗಳ ಸುಮಾರಿಗೆ ಹೋಗಿರುವುದರಿಂದ ರೂಪಾಯಿಯಲ್ಲೇ ವೇತನ ನೀಡಲಾಗುತ್ತದೆ.

4.ಆಟಗಾರನಿಗೆ ಪೂರ್ಣ ಹಣ ನೀಡಲಾಗುತ್ತದೆಯೇ?
ಒಂದು ವೇಳೆ ಒಬ್ಬ ಆಟಗಾರ ಐಪಿಎಲ್‌ ಪಂದ್ಯಾವಳಿಯುದ್ಧಕ್ಕೂ ಲಭ್ಯವಿದ್ದರೆ ಹಾಗೂ ಅವರು ಆಡದಿರಲಿ ಅಥವಾ ಇಲ್ಲದಿರಲಿ ಅವರಿಗೆ ಪೂರ್ಣ ಮೊತ್ತ ನೀಡಲೇಬೇಕು.

5.ಆಟಗಾರನಿಗೆ ಗಾಯವಾದರೆ ಮಧ್ಯದಲ್ಲೇ ವಾಪಸ್‌ ಹೋದರೆ ಪೂರ್ಣ ಹಣ ಕೊಡಬೇಕಾ?
ಪಂದ್ಯಾವಳಿ ಸಮಯದಲ್ಲಿ ಆಟಗಾರನೊಬ್ಬ ಗಾಯದಿಂದ ಹೊರಗುಳಿದರೆ ಈತನಿಗೆ ಪೂರ್ಣ ಹಣ ಕೊಡಬೇಕಾಗಿಲ್ಲ. ಆದರೆ ಈತನ ಆಸ್ಪತ್ರೆ ಖರ್ಚಿಗೆ ಹಣ ನೀಡಲಾಗುತ್ತದೆ. ಒಂದು ವೇಳೆ ಇಂತಿಷ್ಟೇ ಪಂದ್ಯಗಳಿಗೆ ಆಡಿದರೆ ಎಷ್ಟು ಪಂದ್ಯಗಳಿಗೆ ಆಡುತ್ತಾರೋ ಅದನ್ನು ಲೆಕ್ಕ ಹಾಕಿ ನೀಡಲಾಗುತ್ತದೆ.

6.ಒಪ್ಪಂದ ಮುರಿದುಕೊಂಡರೆ…?
ಒಂದು ವೇಳೆ ಆಟಗಾರ ಅವಧಿಗೆ ಮುನ್ನವೇ ಒಪ್ಪಂದ ಮುರಿದುಕೊಂಡರೆ ಫ್ರಾಂಚೈಸಿ ಒಪ್ಪಿಕೊಂಡರೆ ಮಾತ್ರ ಪೂರ್ಣ ಹಣ ಕೊಡಬಹುದು. ಇದು ಆಯಾ ಫ್ರಾಂಚೈಸಿಗಳಿಗೆ ಬಿಟ್ಟ ವಿಚಾರ.

7.ಮೊದಲೇ ಪೂರ್ಣ ಹಣ ಕೊಡಲಾಗುತ್ತದೆಯೇ?
ಇಲ್ಲ, ಎಲ್ಲ ಫ್ರಾಂಚೈಸಿಗಳು ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಪೂರ್ಣ ಹಣ ನೀಡುವುದಿಲ್ಲ. ಕೆಲವು ಫ್ರಾಂಚೈಸಿಗಳು ಮೊದಲು ಶೇ.50 ಹಣ ನೀಡಿ ಬಳಿಕ ಜಾಹೀರಾತಿನಿಂದ ಬರುವ ಹಣದಿಂದ ಉಳಿದ ಹಣ ನೀಡುತ್ತವೆ. ಕೆಲವು ಶ್ರೀಮಂತ ಫ್ರಾಂಚೈಸಿಗಳು ಮಾತ್ರ ಆರಂಭದಲ್ಲೇ ಪೂರ್ಣ ಹಣ ನೀಡುತ್ತವೆ.

ಟಾಪ್ ನ್ಯೂಸ್

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.