ನಾನು ಮೆಚ್ಚಿದ ಪತ್ರಿಕೆ
ಓದುಗರ ಭಾವನಾತ್ಮಕ ಸಂಬಂಧ ತಿಳಿಸುವ ಪತ್ರಗಳ ಸರಣಿ
Team Udayavani, Jan 24, 2020, 5:09 AM IST
ನಾನು ಸಣ್ಣವಳಿದ್ದಾಗಿನಿಂದಲೂ ನಮ್ಮ ಮನೆಯಲ್ಲಿ ಕನ್ನಡ ವಾರ್ತಾ ಪತ್ರಿಕೆಯನ್ನು ಅಪ್ಪ ತರುತ್ತಿದ್ದರು. ಅದರಲ್ಲಿ ಹೆಚ್ಚಾಗಿ ಮನೆಗೆ ಉದಯವಾಣಿ ಬರುತ್ತಿತ್ತು. ಮೊದಲನೆಯ ಪುಟದಿಂದ ಕೊನೆಯ ಪುಟದ ವರೆಗೆ ಕ್ರಮಬದ್ಧವಾಗಿ ಜೋಡಿಸಲಾದ ಸುದ್ದಿಗಳು ನನಗಿಷ್ಟ.
ಎಡಿಶನ್ ರೂಪದಲ್ಲಿ ಬರುತ್ತಿದ್ದ ಸ್ಥಳೀಯ ವಾರ್ತೆಗಳು, ವಾರ ಕ್ಕೊಂದು ಬಾರಿ ಮಕ್ಕಳಿಗಾಗಿ ಪ್ರಕಟವಾಗುತ್ತಿದ್ದ ಪುಟಾಣಿ ಪುರವಣಿ ಯು ಚಿಣ್ಣರಾದ ನಮಗೆ ಓದಲು ಖುಷಿಯಾಗುತ್ತಿತ್ತು. ಪ್ರತಿದಿನ ಉದಯವಾಣಿಯನ್ನು ಅಪ್ಪ ವರಾಂಡದಲ್ಲಿ ಕೂತು ಓದುತ್ತಿದ್ದರು. ಅವರ ಬಳಿಕ ಓದುವ ಸರದಿ ನಮ್ಮದಾಗಿತ್ತು. ಪ್ರೌಢ ಶಾಲೆಯಲ್ಲಿದ್ದಾಗ ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದ ನಮ್ಮ ಶಾಲೆಯ ತಂಡದಲ್ಲಿ ನಾನೂ ಇದ್ದೆ. ಅದರ ಸುದ್ದಿ ಉದಯವಾಣಿಯಲ್ಲಿ ಪ್ರಕಟವಾಗಿದ್ದನ್ನು ನೋಡಿ ಖುಷಿಪಟ್ಟಿದ್ದೆ.
ಕನ್ನಡ ಪತ್ರಿಕೆಗಳ ಪುರವಣಿಗೆಗಳಿಗೂ ಬರೆಯಬೇಕೆಂದೆನಿಸಿದ್ದು ಮಂಗಳವಾರ ಜೋಶ್ನಿಂದ. ಅವಳಿಗಾಗಿಯೇ ಕಾದಿರುವ ಅವಳು ಪುರವಣಿ, ಮಹಿಳೆಯರ ಆಪ್ತ ಗೆಳತಿ ಮಹಿಳಾ ಸಂಪದ ಹಾಗೂ ರಜಾ ದಿನದ ಗೆಳೆಯ ಸಾಪ್ತಾಹಿಕ ಸಂಪದ ಪುರವಣಿಗಳಿಂದ ನನಗೆ ಬರಹದ ಆಸಕ್ತಿಯೂ ಬೆಳೆಯಿತು. ನನ್ನ ಮೊದಲ ಬರಹ ಪ್ರಕಟಗೊಂಡಿದ್ದು ಅವಳು ಪುರವಣಿಯಲ್ಲಿ. ಅದಕ್ಕಾಗಿ ನಾನು ಉದಯವಾಣಿಗೆ ಆಭಾ ರಿಯಾಗಿದ್ದೇನೆ. ಉದಯವಾಣಿ ತನ್ನ ಪುರವಣಿಗಳ ಗುಣಮಟ್ಟವನ್ನು ಉತ್ತಮವಾಗಿಯೇ ಕಾಯ್ದುಕೊಂಡು ಬಂದಿದೆ. ಕಳುಹಿಸುವ ಬರಹ ಗಳನ್ನು ಚೆನ್ನಾಗಿಯೇ ಪರಿಶೀಲಿಸಿ, ತಮ್ಮ ಪುರವಣಿಗೆಗಳಿಗೆ ಸೂಕ್ತವಾ ಗಿಲ್ಲದುದ್ದನ್ನು ಪ್ರಕಟಿಸದೇ ಇರುವುದು ತಾಜಾ ನಿದರ್ಶನ.
ಉದಯವಾಣಿ ತನ್ನ ಪುರವಣಿಗೆಗಳಲ್ಲಿ ಪ್ರಾರಂಭಿಸುವ ಹೊಸ ಅಂಕಣಗಳು, ಬರೆಯುವ ಉತ್ಸಾಹಿಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುತ್ತಿದೆ. ಇದರಿಂದ ತಮ್ಮಲ್ಲಿ ಹುದುಗಿದ್ದ, ಮರೆತು ಹೋದ ಅವೆಷ್ಟೋ ಮಾತುಗಳು ಹೊರಬರುತ್ತಿವೆ. ಇನ್ನು ಪತ್ರಿಕೆಯ ವಿನ್ಯಾಸ, ಲೇಖನಗಳಿಗೆ ತಕ್ಕುದಾದ ಪುಟಗಳು ಓದುಗರನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾಗಿದೆ.
ಚಾಚೂ ತಪ್ಪದೆ ಉದಯವಾಣಿಯನ್ನು ಪ್ರತಿದಿನ ಓದುತ್ತೇನೆ. ವಾಣಿಯನ್ನು ಹೊತ್ತು ಬರುವ ಉದಯವಾಣಿ ಎಲ್ಲೆಡೆ ಯೂ ಉದಯವಾಗಲಿ, ಹೆಚ್ಚಿನ ಸಂಖ್ಯೆಯಲ್ಲಿ ಓದುಗರನ್ನು ತಲುಪಲಿ. ಉದಯವಾಣಿಯ ಬಳಗಕ್ಕೆ ನಮಸ್ಕಾರಗಳು.
ಸುಪ್ರೀತಾ ವೆಂಕಟ್, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ
MUST WATCH
ಹೊಸ ಸೇರ್ಪಡೆ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ
O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…
Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ