ಮಣ್ಣು ಅಳಿದರೆ ಜೀವ ಸಂಕುಲಕ್ಕೆ ಸಂಚಕಾರ


Team Udayavani, Dec 5, 2020, 6:25 AM IST

Soil-2

ಮಣ್ಣು ಬರೀ ಮಣ್ಣಲ್ಲ. ಭೂಮಿಯ ಮೇಲೆ ವಾಸಿಸುವ ಸಕಲ ಜೀವರಾಶಿಗಳ ಜೀವನಾಧಾರವಾಗಿದೆ. ಸರಳವಾಗಿ ಹೇಳುವುದಾದರೆ ಯಾವ ಋಣವನ್ನಾದರೂ ತೀರಿಸಬಹುದು ಆದರೆ ಮಣ್ಣಿನ ಋಣವನ್ನು ತೀರಿಸುವುದು ಅಸಾಧ್ಯ. ಮಣ್ಣು ಅಳಿದರೆ ಮನುಕುಲ ಮಾತ್ರವಲ್ಲದೆ ಜೀವಸಂಕುಲವೇ ಅಳಿದಂತೆ ಎಂಬ ಮಾತು ಇದೆ. ಪ್ರತೀ ಮನುಷ್ಯನ ಆಹಾರ ಅಗತ್ಯವನ್ನು ಮಣ್ಣು ನೀಗಿಸುತ್ತಾ ಬಂದಿದೆ. ಮಣ್ಣು ಒಮ್ಮೆ ನಾಶವಾದರೆ ಮರಳಿ ಪಡೆಯಲಾಗದ ಅಮೂಲ್ಯ ಸಂಪತ್ತು. ಸಸ್ಯ ಸೇರಿದಂತೆ ಸಕಲ ಜೀವಿಗಳಿಗೆ ಮಣ್ಣು ಮಾತೃ ಸ್ವರೂಪಿ.

ಎಲ್ಲವೂ ಮಣ್ಣನಿಂದ
ಮಣ್ಣನಿಂದ ಮಣ್ಣಿಗೆ ಎಂಬ ಮಾತಿದೆ. ಮಾನವ ಸೇರಿದಂತೆ ಸಕಲ ಜೀವರಾಶಿಗಳಿಗೂ ಮಣ್ಣಿಗೂ ಬಿಡಿಸಲಾಗದ ನಂಟು. ಇಡೀ ಜೀವ ಸಂಕುಲಕ್ಕೂ ಮಣ್ಣಿಗೂ ತಾಯಿ-ಮಕ್ಕಳ ಸಂಬಂಧ. ತಿನ್ನುವ ವಸ್ತು, ಉಡುವ ಬಟ್ಟೆ, ವಾಸಿಸುವ ಮನೆ ಎಲ್ಲವೂ ಮಣ್ಣುಜನ್ಯವೇ ಆಗಿದೆ. ಆದರೆ ಮಣ್ಣು ಇಂದು ವಿವಿಧ ಕಾರಣಗಳಿಂದ ಕಲುಷಿತಗೊಳ್ಳುತ್ತಿದೆ. ಮಣ್ಣಿನ ಸವಕಳಿ ಹೆಚ್ಚುತ್ತಿದ್ದು, ಪೋಷಕಾಂಶ ಮಟ್ಟ ಕಡಿಮೆಯಾಗುತ್ತಿದೆ. ಇದನ್ನು ಅರಿತುಕೊಳ್ಳುವ ಸಲುವಾಗಿ “ವಿಶ್ವ ಮಣ್ಣು ದಿನ’ ಆಚರಿಸಲಾಗುತ್ತಿದೆ. ಮಣ್ಣಿನ ಪ್ರಮಾಣ, ಗುಣಮಟ್ಟಗಳಲ್ಲಿ ವ್ಯತ್ಯಯವುಂಟಾದರೆ ಅದು ನಮ್ಮ ಆಹಾರ, ನೀರು, ಗಾಳಿ..ಹೀಗೆ ಒಟ್ಟಿನಲ್ಲಿ ಇಡೀ ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮವುಂಟು ಮಾಡುತ್ತದೆ. ಆದ್ದರಿಂದ ಮಣ್ಣಿನ ರಕ್ಷಣೆಯೇ ನಮ್ಮೆಲ್ಲರ ಧ್ಯೇಯವಾಗಬೇಕು.

ಮಣ್ಣಿನ ಪ್ರಯೋಜನ
ಮಣ್ಣು ಭೂಮಿಯಲ್ಲಿನ ಸಕಲ ಜೀವ ಗಳಿಗೆ ಆಶ್ರಯ ನೀಡುತ್ತದೆ. ಆಹಾರ, ಮೇವು, ವಸತಿ, ಇಂಧನ ಇತ್ಯಾದಿಗಳನ್ನು ಒದಗಿಸುತ್ತಿದೆ. ಮಳೆ ನೀರನ್ನು ಸಂಗ್ರಹಿಸಿ ಶುದ್ಧ ಮಾಡುತ್ತದೆ. ಸಾವಯವ ವಸ್ತುವನ್ನು ಪೋಷಕಾಂಶಗಳಾಗಿ ಬದಲಿಸಿ ಸಸ್ಯಗಳಿಗೆ ಧಾರೆಯೆರೆಯುತ್ತದೆ. ಪ್ರಕೃತಿ ವಿಕೋಪಗೊಂಡಾಗ ಹವಾಮಾನದ ಏರುಪೇರನ್ನು ತಡೆಯುತ್ತದೆ.

ಫ‌ಲವತ್ತತೆ ಎಂದರೇನು?
ಮಣ್ಣಿನ ಫ‌ಲವತ್ತತೆ ಎಂದರೆ ಪೋಷಕಾಂಶಗಳು ಮಾತ್ರವಲ್ಲದೇ ಅದರಲ್ಲಿನ ಜೀವಿಗಳು, ನೀರು ಹಾಗೂ ಗಾಳಿಯ ಸಂಬಂಧಗಳನ್ನು ಒಳಗೊಂಡಿದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕಾದ ಪ್ರಮುಖ ಅಂಶ. ಈ ಮೂರು ಅಂಶಗಳು ಅನ್ಯೋನ್ಯ ವಾಗಿದ್ದರೆ ಮಾತ್ರ ಭೂಮಿಯು ಫ‌ಲ ಭರಿತವಾಗಿರುತ್ತದೆ.

ಸೂಕ್ಷ್ಮಜೀವಿಗಳು ಮತ್ತು ಮಣ್ಣು
ಸೂಕ್ಷ್ಮಾಣು ಜೀವಿಗಳು-ಇದು ಮಣ್ಣಿನ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಿದೆ. ಆಕ್ಟಿನೊಮೈಸಿಟಸ್‌, ಶಿಲೀಂದ್ರ, ಬ್ಯಾಕ್ಟೀರಿಯಾ, ಪಾಚಿ, ಪ್ರೊಟೋಜೋವ ಮೊದಲಾದವುಗಳು ಮಣ್ಣಿನಲ್ಲಿರುವ ಅತ್ಯಂತ ಪ್ರಮುಖ ಸೂಕ್ಷ್ಮಜೀವಿಗಳು. ಇವುಗಳ ಜತೆ ಜೀರುಂಡೆ, ಇರುವೆ, ಗೆದ್ದಲು ಇತ್ಯಾದಿ ಕೀಟಗಳು, ಜಂತುಹುಳು, ಎರೆಹುಳುಗಳು, ಸಹಸ್ರಪದಿಗಳು ಮೊದಲಾದ ಕಣ್ಣಿಗೆ ಗೋಚರಿಸುವ ಪುಟ್ಟ ಪ್ರಾಣಿಗಳು ಮಣ್ಣಿನಲ್ಲಿ ವಾಸವಾಗಿರುತ್ತವೆ. ಸೂಕ್ಷ್ಮಜೀವಿಗಳು ಮತ್ತು ಕೀಟಗಳು ಮಣ್ಣಿನ ಉತ್ಪಾದಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಸ್ಯಗಳ ಬೆಳವಣಿಗೆಯನ್ನು ಪ್ರಚೋದಿಸುವ ಹಾರ್ಮೋನ್‌ ಮತ್ತು ಕಿಣ್ವಗಳು ಈ ಸೂಕ್ಷ್ಮಾಣುಗಳಲ್ಲಿದ್ದು, ಮಣ್ಣಿನ ಗುಣಧರ್ಮಗಳನ್ನು ಸುಧಾರಿಸಿ ಫ‌ಲವತ್ತತೆಯನ್ನು ಕಾಪಾಡುತ್ತವೆ.

ರಾಸಾಯನಿಕ ಬೇಡ, ಸಾವಯವ ಬಳಸಿ
ಮಣ್ಣು ಇಂದು ತನ್ನ ಫ‌ಲವತ್ತತೆಯನ್ನು ಕಳೆದುಕೊಳ್ಳಲು ಮುಖ್ಯ ಕಾರಣವೆಂದರೆ ರಾಸಾಯನಿಕಗಳ ಬಳಕೆ. ಭೂಮಿಯಲ್ಲಿ ಸಾವಯವ ಪದಾರ್ಥಗಳು ಹೇರಳವಾಗಿದ್ದರೆ ಮಾತ್ರ ಮಣ್ಣಿನ ಫ‌ಲವತ್ತತೆ ಉಳಿಯುತ್ತದೆ. ಪ್ರಾಣಿಗಳ ಮಲಮೂತ್ರ, ತರಗೆಲೆ, ಹಸುರೆಲೆಗಳು, ತ್ಯಾಜ್ಯವಸ್ತು, ಮೀನಿನ ಹುಡಿ, ಹಿಂಡಿ, ಕಾಂಪೋಸ್ಟ್‌, ಎರೆಗೊಬ್ಬರ, ಜೈವಿಕ ಗೊಬ್ಬರ ಮೊದಲಾದ ಪ್ರಾಣಿಜನ್ಯ ವಸ್ತುಗಳು ಸಾವಯವ ಗೊಬ್ಬರಗಳಾಗಿದ್ದು ಇವುಗಳನ್ನು ಹೆಚ್ಚಾಗಿ ಬಳಸಿದಲ್ಲಿ ಮಣ್ಣಿನ ಸಾರವನ್ನು ಉಳಿಸಿಕೊಳ್ಳಲು ಸಾಧ್ಯ. ಪ್ರಾಣಿ ಮತ್ತು ಸಸ್ಯ ಮೂಲದ ಸಾವಯವ ವಸ್ತುಗಳು ಕೊಳೆತು ಗೊಬ್ಬರವಾಗಿ ಮಾರ್ಪಾಡಾಗುತ್ತದೆ. ಇವುಗಳು ಮಣ್ಣಿನ ಸ್ವರೂಪವನ್ನು ಸ್ಥಿರವಾಗಿರಿಸಿ, ನೀರನ್ನು ಹಿಡಿದಿಟ್ಟುಕೊಳ್ಳಲು ನೆರವಾಗುತ್ತದೆ.

ಮೊದಲ ದಿನಾಚರಣೆ
2002ರಲ್ಲಿ ಇಂಟರ್‌ನ್ಯಾಶನಲ್‌ ಯೂನಿಯನ್‌ ಆಫ್ ಸಾಯಿಲ್‌ ಸೈನ್‌ ಸಂಸ್ಥೆ ಈ ದಿನಾಚರಣೆಯನ್ನು ಪ್ರಾರಂಭಿಸಿತು. 2014ರಲ್ಲಿ ವಿಶ್ವಸಂಸ್ಥೆ ಅಧಿಕೃತವಾಗಿ ಡಿಸೆಂಬರ್‌ 5 ಅನ್ನು ವಿಶ್ವ ಮಣ್ಣಿನ ದಿನ ಎಂದು ಘೋಷಿಸಿತು. ಈ ವರ್ಷ “ಮಣ್ಣನ್ನು ಜೀವಂತವಾಗಿರಿಸಿಕೊಳ್ಳಿ, ಮಣ್ಣಿನ ಜೀವವೈವಿಧ್ಯವನ್ನು ರಕ್ಷಿಸಿ’ ಎಂಬ ಧ್ಯೇಯವನ್ನಿಟ್ಟುಕೊಂಡು ಆಚರಿಸಲಾಗುತ್ತಿದೆ.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.