ನಾನು ಸರಕಾರಿ ಶಾಲೆಯ ವಿದ್ಯಾರ್ಥಿ


Team Udayavani, Apr 10, 2018, 12:30 AM IST

2.jpg

ನಾನು ಒಂದರಿಂದ ಏಳನೆಯ ತರಗತಿಯವರೆಗೆ ಸರಕಾರಿ ಶಾಲೆಯಲ್ಲಿ ಕಲಿತೆ. ಎಂಟನೆಯ ತರಗತಿಯನ್ನು ಅನುದಾನಿತ ಶಾಲೆಯಲ್ಲಿ ಕಲಿತೆ. ಈಗ ಒಂಬತ್ತನೆಗೆ ಸರಕಾರಿ ಶಾಲೆಗೆ ಸೇರಿದ್ದೇನೆ. ಒಂದರಿಂದ ಆರನೆಯವರೆಗೆ ಕಲಿತ ಕೊಡಂಗಲ್ಲು ಶಾಲೆಯಲ್ಲಿ ಪಾಠ, ಆಟ, ನೃತ್ಯ ಇತ್ತು. ವಾರ್ಷಿಕೋತ್ಸವಕ್ಕೆ ಸಿದ್ಧತೆ ಮಾಡಿ ಸುತ್ತಿದ್ದರು. ಮಧ್ಯಾಹ್ನದ ಬಿಸಿ ಊಟವನ್ನು ಎಲ್ಲರೂ ಒಟ್ಟಿಗೆ ಉಣ್ಣುವುದು ಚಂದ. ವಾರಕ್ಕೆ ಮೂರು ದಿನ ಬಿಸಿಯಾದ ರುಚಿಕರ ಹಾಲು ಸಿಗುತ್ತಿತ್ತು. ಐದನೆಯಲ್ಲಿದ್ದಾಗ ವಾಟರ್‌ ಪ್ಯೂರಿಫೈಯ್ಯರ್‌ ಬಂತು. ತಂಪು ನೀರು ಸಿಗುತ್ತಿತ್ತು. ಅದನ್ನು ಪಡೆಯಲು ಸಾಲಾಗಿ ನಿಂತು ಬಾಟಲಿಯಲ್ಲಿ ತುಂಬಿಕೊಳ್ಳು ವುದು ಮರೆಯಲಾಗದ ಅನುಭವ.

ಏಳನೆಯ ತರಗತಿಯನ್ನು ಪೆರಿಂಜೆ ಸರಕಾರಿ ಶಾಲೆಯಲ್ಲಿ ಕಲಿತೆ. ಅಲ್ಲಿ ಗ್ರಾಮ ಪಂಚಾಯತಿಯವರು ಬಂದು ಇಬ್ಬರು ಮಕ್ಕಳಿಗೆ ಒಂದು ಗಿಡದಂತೆ ಕೊಡುತ್ತಿದ್ದರು. ಅದನ್ನು ನೆಟ್ಟು ಬೇಲಿ ಹಾಕಲಾಗುತ್ತಿತ್ತು. ಗಿಡವನ್ನು ನೆಟ್ಟ ವಿದ್ಯಾರ್ಥಿಗಳ ಹೆಸರನ್ನು ಅಲ್ಲಿ ಬರೆಯಲಾಗುತ್ತಿತ್ತು. ಅದನ್ನು ಪೋಷಿಸುವ ಜವಾಬ್ದಾರಿ ಆ ವಿದ್ಯಾರ್ಥಿಗಳದು. ಆ ಕೆಲಸವನ್ನು “ನಮ್ಮ ಗಿಡ, ನಮ್ಮ ಗಿಡ’ ಎಂದು ಖುಷಿಯಿಂದ ಮಾಡುತ್ತಿದ್ದೆವು. ಆ ಶಾಲೆ ಬಿಟ್ಟು ಬರುವಾಗ ಗಿಡದ ನೆನಪಿಗಾಗಿ ತೆಗೆದುಕೊಂಡು ಬಂದ ಅದರ ಎಲೆ ಈಗಲೂ ನನ್ನ ಬಳಿ ಇದೆ. ಇದರಿಂದ ನಾವು ಪರಿಸರ ಸ್ನೇಹಿಗಳಾಗಲು ಸಹಾಯವಾಯಿತು.

ಸರಕಾರದಿಂದ ಬಣ್ಣ ಬಣ್ಣದ ಸಮವಸ್ತ್ರ, ನಮ್ಮ ಕಾಲಿನ ಸೈಜಿನ ಶೂ ಕೊಡುತ್ತಾರೆ. ನನಗೆ ಶಾಲೆಯಲ್ಲಿ ಎರಡು ಬಾರಿ ಹುಷಾರಿಲ್ಲದಿದ್ದಾಗ ಶಿಕ್ಷಕರು ಅವರ ಬೈಕಿನಲ್ಲಿ ಮನೆಗೆ ಬಿಟ್ಟಿದ್ದರು. ಮಕ್ಕಳಿಗೆ ಹುಷಾರಿಲ್ಲದಾಗ ಮಾತ್ರೆ, ಮದ್ದು ಕೊಡುತ್ತಾರೆ. ಗ್ರಾಮ ಪಂಚಾಯತಿನವರು ಆಗಾಗ ಬಂದು ನಮ್ಮ ಬೇಕು ಬೇಡಗಳನ್ನು ವಿಚಾರಿಸುತ್ತಿದ್ದರು. ಒಂದು ವರ್ಷದಲ್ಲಿ ಬೆಳ್ತಂಗ ಡಿಯ ಶಾಸಕರು ಎರಡು ಸಲ ಬಂದು ನಮ್ಮನ್ನು ಮಾತ ನಾಡಿಸಿಕೊಂಡು ಹೋಗಿದ್ದರು. ಚೆನ್ನಾಗಿ ಕಲಿಸುತ್ತಿದ್ದರು. ಕಲಿ ಯಲು ಕಷ್ಟ ಆಗುವ ಮಕ್ಕಳಿಗೆ ಮತ್ತೆ ಮತ್ತೆ ಹೇಳಿಯಾದರೂ ಕಲಿಸುತ್ತಿದ್ದರು.

ಕೊಡಂಗಲ್ಲು ಶಾಲೆಯಲ್ಲಿದ್ದಾಗ ಸಹಪಾಠಿಗಳ ಹಿನ್ನೆಲೆಯೆಲ್ಲ ತಿಳಿಯುತ್ತಿರಲಿಲ್ಲ. ಏಳನೆ ತರಗತಿಗೆ ಬಂದಾಗ ಬೇರೆ ಬೇರೆ ಜಾತಿ, ಧರ್ಮದವರುಗಳ ಆಚರಣೆಗಳೆಲ್ಲ ಅರ್ಥ ಆಗಲಾರಂಭಿಸಿತು. ಸಹಪಾಠಿಗಳು ಮನೆಯ ವಿಷಯವನ್ನೆಲ್ಲ ಮಾತಾಡುತ್ತಿದ್ದರು. ಕೆಲವರ ಬಡತನ, ಕಷ್ಟಗಳು ಗೊತ್ತಾದವು. ಕೆಲವು ಸಲ ಕಷ್ಟ ಇರುವವರಿಗೆ ನನ್ನ ಪೆನ್ನು ಕೊಟ್ಟುಬಿಡುತ್ತಿದ್ದೆ. ಮನೆಯಲ್ಲಿ ನನಗೆ ಬೈತಾ ಇರಲಿಲ್ಲ. ನನ್ನ ಅಪ್ಪ-ಅಮ್ಮ-ಅಜ್ಜಿ ನನ್ನನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರಲ್ಲ ಎನಿಸುತ್ತಿತ್ತು. ಸರಕಾರಿ ಶಾಲೆಯಲ್ಲಿ ಓದುವ ಪ್ರಯೋಜನವೆಂದರೆ ಎಲ್ಲರೊಂದಿಗೆ ಹೊಂದಿಕೊಂಡು ಬದುಕುವುದು ಹೇಗೆ ಎಂದು ಗೊತ್ತಾದದ್ದು. ಇದರಿಂದ ನನ್ನ ವ್ಯಕ್ತಿತ್ವದಲ್ಲಿ ಹಲವು ಒಳ್ಳೆಯ ರೀತಿಯ ಬದಲಾವಣೆಗಳಾಯಿತು.

ಎಂಟನೆಯ ತರಗತಿಗೆ ಮೂಡಬಿದ್ರೆಯ ಜೈನ ಅನುದಾನಿತ ಪ್ರೌಢಶಾಲೆಗೆ ಸೇರಿದೆ. ಸೈಕಲ್‌ ಸಿಕ್ಕಿತು.ದೂರದಿಂದ ಬರು
ವವರಿಗೆ ಅನುಕೂಲವಾಗುತ್ತಿತ್ತು. ತುಂಬಾ ಚೆನ್ನಾಗಿ ಕಲಿಸುತ್ತಿ ದ್ದರು. ಆದರೆ ದೊಡ್ಡ ಶಾಲೆ. ಸಾಗರದ ಹಾಗೆ, ತುಂಬಾ ಮಕ್ಕಳು. ನನಗೆ ಸರಕಾರಿ ಶಾಲೆಯೇ ಒಳ್ಳೆಯದೆನಿಸಿತು. ಆದ್ದರಿಂದ ಒಂಬತ್ತನೆಯ ಕ್ಲಾಸಿಗೆ ಪ್ರಾಂತ್ಯ ಪ್ರೌಢಶಾಲೆಗೆ ಸೇರಿದೆ. ಇಲ್ಲಿಯೂ ಸರಕಾರದಿಂದ ಹಸಿರು ಬಣ್ಣದ ಸಮವಸ್ತ್ರ ಸಿಕ್ಕಿತು. ಚಪ್ಪಲಿ ಕೂಡ ಸಿಕ್ಕಿತು. ಈ ವರ್ಷ ಕರ್ನಾಟಕ ದರ್ಶನಕ್ಕೆ ಕರೆದು ಕೊಂಡು ಹೋಗಿದ್ದರು. ಪ್ರವಾಸಕ್ಕೆ ಬೇರೆ ಬೇರೆ ಶಾಲೆಯ ಮಕ್ಕಳು, ಶಿಕ್ಷಕರು ಬಂದಿದ್ದರು. ಹಲವರೊಂದಿಗೆ ಬೆರೆಯಲು ಆಯಿತು. ಶನಿವಾರದ ದಿನ ನಮಗೆ ಶಿಕ್ಷಕರಿಂದ ಸ್ವತ್ಛತೆಯ ಬಗ್ಗೆ ವಿಶೇಷ ಮಾಹಿತಿ ಸಿಗುತ್ತದೆ. ಬೀದಿ ನಾಟಕಗಳನ್ನು ಮಾಡಿ ಜನರಲ್ಲಿ ನಾವು ಅರಿವು ಮೂಡಿಸಿದ್ದೇವೆ. ಅರಣ್ಯದ ಬಗ್ಗೆ ಅರಣ್ಯಾಧಿಕಾರಿ ಬಂದು ವಿಶೇಷ ಉಪನ್ಯಾಸ ಕೊಟ್ಟಿದ್ದಾರೆ. ಬೆಂಕಿ ಆರಿಸುವ ಬಗ್ಗೆ ಅಗ್ನಿಶಾಮಕ ದಳದವರು ಬಂದು ವಿಶೇಷ ಉಪನ್ಯಾಸ ನೀಡಿದ್ದಾರೆ. ಶಾಲೆಯಲ್ಲಿ ಕಂಪ್ಯೂಟರ್‌ ಕಲಿಕೆ, ಹೊಲಿಗೆ ತರಬೇತಿಗಳಿವೆ.

ನಾನು ಸರಕಾರಿ ಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿ. ಇಂಗ್ಲಿಷನ್ನು ಚೆನ್ನಾಗಿಯೇ ಕಲಿಸುತ್ತಾರೆ. ನಾನು ಸರಕಾರಿ 
ಕನ್ನಡ ಶಾಲೆಯಲ್ಲಿ ಕಲಿಯುತ್ತಿರುವುದರಿಂದ ಏನೋ ನಷ್ಟ ವಾಗಿದೆ ಯೆಂದು ನನಗನಿಸಿಲ್ಲ. ಅತಿಯಾಗಿ ಹೋಂವರ್ಕ್‌ ಕೊಡುವು ದಿಲ್ಲ. ತಡೆಯಲಾಗದ ಒತ್ತಡವನ್ನೂ ಹಾಕುವುದಿಲ್ಲ. ಮುಂದಿನ ವರ್ಷ ನಾನು ಹತ್ತನೆಯ ತರಗತಿ ಎಂದು ಓದಲು ಒತ್ತಡ ಹಾಕಬಾರದು. ನಾನು ಚೆನ್ನಾಗಿ ಓದಬೇಕೆಂದು ನನಗೆ ಗೊತ್ತಿದೆ, ನಾನೇ ಓದಿಕೊಳ್ಳುತ್ತೇನೆಂದು ಮನೆಯಲ್ಲಿ ಹೇಳಿದ್ದೇನೆ. ನಾನು ಓದಿದ  ಶಾಲೆಗಳಲ್ಲಿ ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ.

ಕಷ್ಟ ಎಂದು ಬೇಜಾರಲ್ಲಿರುವ ಫ್ರೆಂಡ್ಸ್ಗಳಿದ್ದಾರೆ. ಇತ್ತೀಚೆಗೆ ಒಬ್ಬ ಶಾಲೆ ಬಿಡುತ್ತೇನೆ, ಮನೆಯಲ್ಲಿ ಕಷ್ಟ ಎಂದ. ಅವನನ್ನು ಹೇಗಾದರೂ ಹತ್ತನೆ ಮುಗಿಸು ಎಂದು ಹೇಳಿ ಒಪ್ಪಿಸಿದ್ದೇನೆ. ಆದ್ದರಿಂದ ನಮಗೆ ಸ್ವಾತಂತ್ರ್ಯವಿದೆ. ಕಲಿಕೆಗೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ, ಕ್ರೀಡೆಗೆ ಯಾವುದಕ್ಕೆ ಬೇಕಾದರೂ ಸೇರಬಹುದು. ಸೇರದೆ ಇರಲು ಸ್ವಾತಂತ್ರ್ಯವೂ ಇದೆ. ಸರಕಾರಿ ಶಾಲೆಯಲ್ಲಿ ನನಗೆ ಸಿಕ್ಕಿದ ಜ್ಞಾನದಿಂದ, ಅನು ಭವಗಳಿಂದ ನಾನು ಚೆನ್ನಾಗಿ ಬದುಕಬಲ್ಲೆ ಎಂಬ ಆತ್ಮವಿಶ್ವಾಸವಿದೆ. ಆದ್ದರಿಂದ ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ- ನಾನು ಸರಕಾರಿ ಶಾಲೆಯ ವಿದ್ಯಾರ್ಥಿ.

ಅಧ್ಯಯನಾ ಸಿ.ಎ, ಕೊಡಂಗಲ್ಲು, ಮೂಡುಬಿದ್ರೆ 

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.