ಏನಿದು ಇಂಟರ್ನೆಟ್ ಶಟ್ಡೌನ್?
Team Udayavani, Jul 4, 2022, 9:25 AM IST
ದೇಶದಲ್ಲಿ ಯಾವುದೇ ಭಾಗದಲ್ಲಿ ಗಲಭೆಗಳಾದರೂ, ಮೊದಲಿಗೆ ಅಲ್ಲಿಗೆ ಬರುವುದು ಪೊಲೀಸರು. ಬಳಿಕ ಆಗುವುದು ಇಂಟರ್ನೆಟ್ ಶಟ್ಡೌನ್. ಪೊಲೀಸ ರೇನೋ ಬರುವುದು ಸರಿ, ಆದರೆ ಅಂತರ್ಜಾಲದ ಮೇಲೆ ನಿರ್ಬಂಧ ಏಕೆ ಎಂಬುದು ಬಹಳಷ್ಟು ಜನರ ಪ್ರಶ್ನೆ. ಹಾಗಾ ದರೆ, ಇಂಟರ್ನೆಟ್ ಶಟ್ಡೌನ್ ಅಂದರೇನು? ಇಲ್ಲಿದೆ ಮಾಹಿತಿ.
ಏನಿದು ಅಂತರ್ಜಾಲ ನಿರ್ಬಂಧ?
ಗಲಭೆ ಪೀಡಿತ ಸ್ಥಳದಲ್ಲಿ ಮೊಬೈಲ್ (3ಜಿ, 4ಜಿ/ಎಲ್ಟಿಇ), ಫಿಕ್ಸ್ಡ್ ಲೈನ್ ಇಂಟರ್ನೆಟ್ (ವೈರ್ಡ್, ವೈರ್ಲೆಸ್) ಸೌಲಭ್ಯಗಳನ್ನು ಸಂಪೂರ್ಣ ವಾಗಿ ಕಡಿತಗೊಳಿಸುವುದು.
ಏಕೆ ಮಾಡಲಾಗುತ್ತದೆ?
ಸಾಮಾನ್ಯವಾಗಿ ಗಲಭೆ ಪೀಡಿತ ಪ್ರದೇಶಗಳಲ್ಲಿ ವದಂತಿಗಳು ಹಬ್ಬುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲಿ, ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಿಸುವಂಥ ವದಂತಿಗಳಿಂದಾಗಿ ಗಲಭೆ ಇನ್ನಷ್ಟು ಹೆಚ್ಚಳವಾಗುವ ಭೀತಿಯಿರುತ್ತದೆ. ಹೀಗಾಗಿಯೇ ಸರಕಾರಗಳು ಅಂತರ್ಜಾಲವನ್ನು ನಿರ್ಬಂಧಿಸುತ್ತವೆ.
ಎಲ್ಲಿ ಹೆಚ್ಚು ಕಡಿತ?
2012ರಿಂದ ಇದುವರೆಗೆ ದೇಶದಲ್ಲಿ 665 ಬಾರಿ ಇಂಟರ್ನೆಟ್ ಶಟ್ಡೌನ್ ಮಾಡಲಾಗಿದೆ. ಈ ವರ್ಷವೇ 59 ಬಾರಿ ಶಟ್ಡೌನ್ ಆಗಿದೆ. ಅದರಲ್ಲೂ ಅತಿ ಹೆಚ್ಚು ಇಂಟರ್ನೆಟ್ ಬ್ಯಾನ್ ಆಗಿರುವುದು ಜಮ್ಮು ಮತ್ತು ಕಾಶ್ಮೀರದಲ್ಲಿ. 2012ರಿಂದ ಇಲ್ಲಿವರೆಗೆ 411 ಬಾರಿ ಶಟ್ಡೌನ್ ಆಗಿದೆ. ವಿಚಿತ್ರವೆಂದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ತೆಗೆದು ಹಾಕಿದ ಮೇಲೆ ಸತತವಾಗಿ 552 ದಿನಗಳವರೆಗೆ ಇಂಟರ್ನೆಟ್ ಶಟ್ಡೌನ್ ಮಾಡಲಾಗಿದೆ. ಇದನ್ನು ಬಿಟ್ಟರೆ, ರಾಜಸ್ಥಾನದಲ್ಲಿ 88 ಬಾರಿ ನಿರ್ಬಂಧಿಸಲಾಗಿದೆ.
ರಾಜಸ್ಥಾನದಲ್ಲಿ ಏಕೆ?
ಇತ್ತೀಚಿನ ದಿನಗಳಲ್ಲಿ ಹೆಚ್ಚು ಗಲಭೆಗಳಿಗೆ ಸಾಕ್ಷಿಯಾಗುತ್ತಿರುವುದು ರಾಜಸ್ಥಾನ. ಇತ್ತೀಚೆ ಗಷ್ಟೇ ಕನ್ಹಯ್ಯಲಾಲ್ ಅವರನ್ನು ಇಬ್ಬರು ದುಷ್ಕರ್ಮಿಗಳು ಹತ್ಯೆ ಮಾಡಿದಾಗಲೂ, ಉದಯಪುರದಲ್ಲಿ ಅಂತರ್ಜಾಲವನ್ನು ನಿರ್ಬಂಧಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?
Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ