ತೃಪ್ತ ಸಹ ಜೀವನವು ಮರೀಚಿಕೆಯೇ?


Team Udayavani, May 4, 2018, 12:30 AM IST

s-47.jpg

ಸಾಮಾಜಿಕ ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಅಗತ್ಯ. ಸಮಾಜದಲ್ಲಿ ಒಬ್ಬಂಟಿಗರಾಗಿ ಬದುಕಲು ಸಾಧ್ಯವಿಲ್ಲ. ವಿವಿಧ ಕ್ಷೇತ್ರಗಳಲ್ಲಿ, ವಿವಿಧ ರೀತಿಯ ಜನ ಸಮುದಾಯದೊಂದಿಗೆ, ತಾಳ್ಮೆಯಿಂದ ಸಹ ಜೀವನ ನಡೆಸಬೇಕಾಗುತ್ತದೆ. ಸ್ಥಾನಮಾನ, ಪಾಶ್ಚಾತ್ಯ ಅನುಕರಣೆ, ಆಧುನಿಕ ಅವಿಷ್ಕಾರ, ಸ್ಪರ್ಧಾತ್ಮಕ ಮನೋಭಾವಗಳಿಂದಾಗಿ ಭೌತಿಕವಾಗಿ ಮನುಷ್ಯ ಎತ್ತರಕ್ಕೇರಿದ್ದರೂ ಮಾನಸಿಕವಾಗಿ, ನೈತಿಕವಾಗಿ, ಭಾವನಾತ್ಮಕವಾಗಿ ಕುಸಿದು, ಪ್ರಾಮಾಣಿಕ ಬದುಕಿನಿಂದ ಹಾಗೂ ಸಂಬಂಧಗಳಿಂದ ದೂರ ಸರಿಯುತ್ತಿದ್ದಾನೆ.

ಹಿಂದೆ ಅವಿಭಕ್ತ ಕುಟುಂಬಗಳಲ್ಲಿ ಸಮಸ್ಯೆಗಳಿದ್ದರೂ, ಉತ್ತಮ ಮಾನವೀಯ ಸಂಬಂಧಗಳಿಂದಾಗಿ ಸಂತೃಪ್ತಿಯ ಜೀವನ ನಡೆಸುತ್ತಿದ್ದರು. ಅತಿಯಾದ ಆಸೆ, ಐಷಾರಾಮದ ಬದುಕಿನಿಂದ ದೂರವಿದ್ದು, ಸುವ್ಯವಸ್ಥೆ ಎಂಬುದು ಅತ್ಯಗತ್ಯವಾದವುಗಳಿಗೆ ಮಾತ್ರ ಸೀಮಿತವಾಗಿತ್ತು. 

ಇಂದು ಮನುಷ್ಯನಲ್ಲಿ ಹಲವಾರು ಬದಲಾವಣೆಗಳಾಗಿವೆ. ಪ್ರೀತಿ, ವಿಶ್ವಾಸ, ಸಂಬಂಧ ಎಂದು ಪರಸ್ಪರ ಮನೆಗಳಿಗೆ ಹೋಗುವ ಸಂಪ್ರದಾಯ ದೂರವಾಗಿದೆ. ಪರಸ್ಪರ ಭೇಟಿಯಾದರೂ ನಾಟಕೀಯ ವರ್ತನೆ, ಸ್ವಯಂ ಪ್ರದರ್ಶನ, ಶಿಫಾರಸ್ಸುಗಳನ್ನು ಹೇಳಿಕೊಳ್ಳುವ ಧಾವಂತ, ಆಹ್ವಾನದ ಮೇಲೆ ಮನೆಗಳಿಗೆ ಹೋದರೂ ಮಾತಿನ ಮಧ್ಯೆ ದೂರವಾಣಿಯಲ್ಲಿ ಮುಗಿಯದ ಮಾತುಕತೆ, ದೂರದರ್ಶನದ ವೀಕ್ಷಣೆ, ಚರ್ಚೆ, ಮಕ್ಕಳನ್ನು ಗದರುವುದು ಒಟ್ಟಿನಲ್ಲಿ ಉಸಿರು ಕಟ್ಟುವ ವಾತಾವರಣ, ಸ್ನೇಹಿತರನ್ನು ನೆಂಟರನ್ನು ತಾವಾಗಿಯೇ ಕರೆದಿದ್ದೇವೆ ಎಂಬುದನ್ನು ಮರೆತಿರುತ್ತಾರೆ.

ಇನ್ನು ದೂರವಾಣಿ, ಮೊಬೈಲ್‌ ಮೂಲಕ ಸಂಪರ್ಕಿಸಿದರೂ, ಮನಸಿದ್ದರೆ ಮಾತ್ರ ವ್ಯವಹರಿಸುತ್ತಾರೆ. ಮದುವೆ, ಉಪನಯನ, ಸಭೆ ಸಮಾರಂಭಗಳಲ್ಲಿ ಶ್ರೀಮಂತ – ಬಡವ ಎಂಬ ಸಂಕುಚಿತ ಭಾವನೆಗಳೇ ಪ್ರಧಾನವಾಗಿರುತ್ತದೆ. ಇಂದು ಕಾರ್ಯಕ್ರಮ ವೀಕ್ಷಿಸಲು ಬರುವವರು ವಿರಳ, ಫ‌ಲಹಾರ, ಭೋಜನವೇ ಪ್ರಧಾನ.

ನಮಗಿಂತ ಕೆಳಮಟ್ಟದಲ್ಲಿರುವವರನ್ನು ನೋಡಿ ತೃಪ್ತಿಯಿಂದ ಇರಬಹುದು. ಆದರೆ ನಮಗಿಂತ ಮೇಲ್ಮಟ್ಟದವರನ್ನು ನೋಡಿ ಸಂತೋಷ ಪಡಬೇಕೆ ವಿನಹಃ ಅವರಂತೆ ನಾವಾಗಬೇಕೆಂಬ ಅತಿ ಅಭಿಲಾಷೆಯು ರಕ್ತ ಸಂಬಂಧ, ಸ್ನೇಹ ಸಂಬಂಧ, ನೆರೆಹೊರೆಯ ಸಂಬಂಧಗಳಿಂದ ವಂಚಿತ ರನ್ನಾಗಿ ಮಾಡಿದೆ. ಈ ಪ್ರಕ್ರಿಯೆ ದಿನನಿತ್ಯದ ಅಗತ್ಯಕ್ಕಷ್ಟೇ ಸೀಮಿತವಾದಲ್ಲಿ ಪರಿಸ್ಥಿತಿ ಗಂಭೀರವಾಗಿರುವುದಿಲ್ಲ. ಆದರೆ ಇಂದಿನ ಹಲವಾರು ಹೊಸ ಆವಿಷ್ಕಾರಗಳು, ಮನಸೆಳೆಯುವಂತಹ ಜಾಹೀರಾತುಗಳು, ಅಗತ್ಯ ಇರದಿದ್ದರೂ ಉತ್ತಮ ಸ್ಥಿತಿಯಲ್ಲಿರುವ ವಸ್ತುಗಳ ಬದಲಾವಣೆ. ಒಂದಕ್ಕೊಂದು ಉಚಿತವೆಂಬ ಪ್ರಚಾರ ಇವುಗಳಿಂದಾಗಿ ಎಷ್ಟಿದ್ದರೂ ಮತ್ತಷ್ಟು ಬೇಕು ಎನ್ನುತ್ತದೆ ಮನುಷ್ಯನ ಅತೃಪ್ತ ಕಾಮನೆ.

ಇದು ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಿ ಅವುಗಳನ್ನು ಪಡೆಯುವಲ್ಲಿ ಮನೆ ಮಂದಿಗೆಲ್ಲ ಮಾನಸಿಕ ಉದ್ವೇಗ ಉಂಟಾಗುತ್ತದೆ. ಒಳಿತು – ಕೆಡುಕು, ಅಗತ್ಯ – ಅನಗತ್ಯ, ಅವಶ್ಯ – ಐಷಾರಾಮ ಹೀಗೆ ವಿಂಗಡಿಸಿ, ಮನಸ್ಸನ್ನು ಹತೋಟಿಯಲ್ಲಿಟ್ಟರೆ ಬದುಕು ಸುಂದರವಾಗುತ್ತದೆ. ಇದು ವಿದ್ಯಾವಂತ ಗೃಹಿಣಿಯರ ಕರ್ತವ್ಯ ಹಾಗೂ ಜವಾಬ್ದಾರಿ, ಆಡಂಬರ -ಐಷಾರಾಮ ಎಂದೂ ಶಾಶ್ವತವಲ್ಲ. ಇಂತಹ ಬದುಕಿಗೆ ಮಾರುಹೋದವರು, ಹೆಚ್ಚಿನ ಸಂಪಾದನೆಗಾಗಿ, ಇಚ್ಛೆಪಟ್ಟು ತಮ್ಮ ಕೆಲಸವನ್ನು ಆಯ್ಕೆ ಮಾಡಿಕೊಂಡರೂ ಸಂತೋಷವೊಂದನ್ನು ಬಿಟ್ಟು ಎಲ್ಲವನ್ನು ಅನುಭವಿಸುತ್ತಾರೆ. ಪರಸ್ಪರ ಪ್ರೀತಿಯಿಂದ ವಂಚಿತರಾಗಿದ್ದಾರೆ. ನೆಮ್ಮದಿ ಇಲ್ಲದೇ ಅಲೆಯುತ್ತಿದ್ದಾರೆ. ಮಕ್ಕಳಿಗೆ ನಾವು ಬೇಡವಾಗಿದ್ದೇವೆ ಎಂಬ ಭಾವನೆಯು ಹಿರಿಯರನ್ನು ವೃದ್ಧಾಶ್ರಮದತ್ತ ಕೊಂಡೊಯ್ದಿದೆ. ಮಕ್ಕಳಲ್ಲಿ ಮಾನಸಿಕ ಕಾಯಿಲೆ ಹೆಚ್ಚುತ್ತಿರುವುದು ಕಂಡು ಬರುತ್ತದೆ.

ಬಾಲ್ಯ-ಯೌವನ, ವೃದ್ಧಾಪ್ಯ, ಈ ಮೂರು ಹಂತಗಳ ನಡುವೆ ತಲೆಮಾರುಗಳ ಅಂತರದಿಂದಾಗಿ ಈ ಮನೋಕ್ಲೇಶ ಉಂಟಾಗುತ್ತಿದೆ. ಬಾಲ್ಯದಲ್ಲಿ ಅಕ್ಕರೆಯ ತಾಯಿಯಾಗಿಯೂ, ಯೌವನದಲ್ಲಿ ಸ್ನೇಹಿತೆ ಯಾಗಿಯೂ, ವೃದ್ಧಾಪ್ಯದಲ್ಲಿ ಸಾಂತ್ವನ ನೀಡುವ ಮಾತೆಯಾಗಿಯೂ ಗೃಹಿಣಿಯು ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ಬಾಹ್ಯ ಆಕರ್ಷಣೆಗಳಿಗೆ ಮಾರು ಹೋಗದೇ, ಸರಳ, ಆರೋಗ್ಯಮಯ ಜೀವನವನ್ನು ನಮ್ಮದಾಗಿಸಿಕೊಳ್ಳುವ ಮೂಲಕ ಇಂದು ನಾವು ಕಳೆದುಕೊಂಡಿರುವ ಅತ್ಯಮೂಲ್ಯ ಐಶ್ವರ್ಯವಾದ ಮಾನವೀಯ ಸಂಬಂಧಗಳನ್ನು ಪುನಃ ಬೆಸೆದಲ್ಲಿ ಜೀವನದಲ್ಲಿ ಸಂತೃಪ್ತಿಯನ್ನೂ ಸಹಬಾಳ್ವೆಯಲ್ಲಿ ಒಲವನ್ನು ಕಾಣಬಹುದು.

ಸಾವಿತ್ರಿ ರಾಮರಾವ್‌

ಟಾಪ್ ನ್ಯೂಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.