ಏಕಾಗ್ರತೆ ಇಲ್ಲದೆ ಯಶಸ್ಸು ಸಾಧ್ಯವೆ?
Team Udayavani, Mar 5, 2023, 6:05 AM IST
ಏಕಾಗ್ರತೆರಾಹಿತ್ಯ ಮನೋಸ್ಥಿತಿಯ ಬಗ್ಗೆ ವ್ಯಾಪಕವಾದ ಕಳವಳ ಅಥವಾ ಕಳಕಳಿ ವ್ಯಕ್ತವಾಗುತ್ತಿದೆ. ವಯಸ್ಸಿನ ಬೇಧವಿಲ್ಲದೆ ಈ ಸಂಗತಿಯು ಸಮಸ್ಯೆಯ ಕೂಪವನ್ನೇ ತಳೆಯುತ್ತಿದೆ. ಹಾಗೆ ನೋಡಿದರೆ ಭಾರತೀಯ ಪರಂಪರೆ, ಇತಿಹಾಸ, ಪುರಾಣ, ಸಾಹಿತ್ಯ, ಸಂಸ್ಕೃತಿ, ಕಲಾ ಸಹಿತ ಎಲ್ಲಾ ಕ್ಷೇತ್ರಗಳಲ್ಲಿ ಸಾರ್ವಕಾಲಿಕ ಮೌಲ್ಯದ ಸಾಧನೆಯಾಗಿರುವುದು ಈ ರೀತಿಯ ಏಕಾಗ್ರತೆಯನ್ನು ಹೊಂದಿದ ವ್ಯಕ್ತಿಗಳಿಂದ.
ಏಕಾಗ್ರತೆ. Concentration ಎಂದರೇನು? ಒಂದು ರೀತಿಯಲ್ಲಿ ವ್ಯಾಖ್ಯಾನಕ್ಕೆ ಮೀರಿದ ಪ್ರಶ್ನೆ ಇದು ಎಂಬ ತಾರ್ಕಿಕ ಉತ್ತರ ದೊರೆಯ ಬಹುದು. ಆದರೆ, ಪರಂಪರೆ ಅಂತಃಸತ್ವವನ್ನು ಒಂದಿಷ್ಟು ಬಗೆದು ನೋಡಿದರೆ ನಿಜಾರ್ಥವು ಖಂಡಿತವಾಗಿಯೂ ದೊರೆಯುವುದು. ಒಂದು ಪ್ರಾತಿನಿಧಿಕ ವಾದ ಉದಾಹರಣೆಯನ್ನು ನೀಡುವುದಾದರೆ-ಯೋಗ. ದೈಹಿಕ ಮತ್ತು ಮಾನಸಿಕವಾದ ಏಕಾಗ್ರತೆಯನ್ನು ಏಕಕಾಲದಲ್ಲಿ ರೂಪಿಸುವ ಬಗೆ ಇದು. ಆದ್ದರಿಂದ, ಭಾರತದ ಈ ಕೊಡುಗೆ ಈಗ ವಿಶ್ವಮಾನ್ಯತೆಯನ್ನು ಪಡೆಯಲು ಸಾಧ್ಯವಾಗಿದೆ.
ಭಾರತದ ಋಷಿ ಮುನಿಗಳ ಪರಂಪರೆ ಈ ನಿಟ್ಟಿನಲ್ಲಿ ಉಲ್ಲೇಖನೀಯ. ಆಗಿನ ಸಂದರ್ಭದಲ್ಲಿ ಅದು ಸಾಧ್ಯವಾಗಿತ್ತು. ಹೇಗೆಂದರೆ, ಏಕಾಂತದಿಂದ ಏಕಾಗ್ರತೆಯನ್ನು ಸಾಧಿಸಬಹು ದೆಂದು ಅವರು ಅರಿತಿದ್ದರು. ಅದಕ್ಕಾಗಿ, ಪರ್ವತ- ದಟ್ಟ ಅರಣ್ಯ- ನದಿ ತೀರಗಳನ್ನು ಅವರು ಆಶ್ರಯಿಸಿದರು. ಉಸಿ ರಾಡಲು ಗಾಳಿ, ಕುಡಿಯಲು ನೀರು, ಕಂಡ ಮೂಲಾಹಾರಗಳು ಅವರದ್ದಾಗಿತ್ತು. ಏಕಾಗ್ರತೆಯಿಂದ ಅವರು ಸಾಧಿಸಿದ್ದನ್ನು ಮನುಕುಲಕ್ಕೆ ಹಂಚಿದರು.
ಆದರೆ, ಅಂತಹ ಹಿನ್ನೆಲೆ ಈಗೆಲ್ಲಿದೆ ? ಒಂದು ರೀತಿಯಲ್ಲಿ ಪ್ರತೀ ಕ್ಷಣವೂ ಏಕಾಂತಕ್ಕೆ ಅಥವಾ ಏಕಾಗ್ರತೆಗೆ ಭಂಗ ಉಂಟಾ ಗುವ ಜೀವನ ಶೈಲಿಯು ಅಯಾಚಿತವಾಗಿ ಅಥವಾ ಅನಿ ವಾರ್ಯವಾಗಿ ನಮಗೆ ಬಂದೊದಗಿದೆ. ಸಾಧನೆಯ ಹಾದಿ ಯಲ್ಲಿ ಏಕಾಗ್ರತೆಯನ್ನು ಕ್ಷಣಕ್ಷಣಕ್ಕೂ ಕಳೆದುಕೊಳ್ಳುವಂತಾಗಿದೆ.ಹಾಗೆಂದು, ಸಮಕಾಲೀನವಾದ ಜಗತ್ತಿನಲ್ಲಿ ಏಕಾಗ್ರತೆಯೇ ಇಲ್ಲ; ಹೊಸತನಗಳನ್ನು ಒದಗಿಸುವ ಸಾಧನಗಳೇ ಆಗಿಲ್ಲ ಎಂದು ಅರ್ಥವಲ್ಲ. ಈ ಚಿಂತನೆಗಳಿಗೆ ಸಾರ್ವತ್ರಿಕ ರೂಪ ದೊರೆಯಬೇಕು ಎಂಬ ಆಶಯ.
ಏಕಾಗ್ರತೆಗೆ ಮತ್ತು ಗುರಿಸಾಧನೆಗೆ ಸಂಬಂಧಿತ ಮಹಾ ಭಾರತದ ಕತೆಯೊಂದನ್ನು ಇಲ್ಲಿ ಉಲ್ಲೇಖೀಸುವುದು ಸೂಕ್ತವಾಗ ಬಹುದು. ಮರದ ತುದಿ ರೆಂಬೆಯಲ್ಲಿದ್ದ ಪಕ್ಷಿಯ ಕಣ್ಣನ್ನು ಬಾಣಕ್ಕೆ ಗುರಿಯಾಗಿ ಗುರುಗಳು ನೀಡಿದ್ದಾರೆ. ಉಳಿದವರಿಗೆಲ್ಲ ಮರ, ಎಲೆ, ರೆಂಬೆ, ಹಕ್ಕಿ ಕಾಣಿಸಿದರೆ ಅರ್ಜುನನಿಗೆ ಹಕ್ಕಿಯ ಕಣ್ಣು ಮಾತ್ರ ಗೋಚರಿಸಿದೆ. ಹೀಗಾಗಿ, ಅನೇಕ ಸಾಧ್ಯತೆಗಳನ್ನು ಮತ್ತು ಹೊಂದಬೇಕಾದ ಏಕೈಕ ಗುರಿಯ ಬಗ್ಗೆ ವಿವರಿಸುವ ಕಥಾನಕವಿದು.
ಸಮಕಾಲೀನ ಸಂದರ್ಭದಲ್ಲಿ ಅನೇಕ ಸಾಧ್ಯತೆಗಳು ಏಕಕಾಲಕ್ಕೆ ಲಭ್ಯ ಆಗಿರುವುದೇ ಆಧುನಿಕ ರೀತಿಯ ಅಸಹಜ ಒತ್ತಡಗಳಿಗೆ ಕಾರಣವಾಗಿದೆ.
ಈ ಬಗ್ಗೆ ಕೇವಲ 25-30 ವರ್ಷ ಹಿಂತಿರುಗಿ ನೋಡಿದರೆ ಸಾಕು. ಆ ಕಾಲಕ್ಕೆ ಒಂದು ಕಾದಂಬರಿಯ, ದೈನಿಕ ಸಹಿತ ಎಲ್ಲಾ ನಿಯತಕಾಲಿಕ ಗಳ, ಸಾಹಿತ್ಯ ಕೃತಿಗಳ ಓದುವಿಕೆ ಒಂದೇ ಹಂತದಲ್ಲಿ ಪೂರ್ಣ ವಾಗುತ್ತಿತ್ತು. ಅಂದರೆ, ಒಂದು ಕಾದಂಬರಿಯನ್ನು ಓದಲು ಕೈಗೆತ್ತಿ ಕೊಂಡರೆ, ಅದರ ಮೊದಲ ಪುಟದಿಂದ ಕೊನೆಯ ಪುಟದ ತನಕದ ಓದು ಸತತವಾಗಿರುತ್ತಿತ್ತು. ಇದೇ ಮಾತು ಭಜನೆ, ಸಂಕೀರ್ತನೆ, ಸಂಗೀತಗೋಷ್ಠಿ, ಯಕ್ಷಗಾನ, ಹರಿಕತೆ ಮುಂತಾದ ಎಲ್ಲಾ ಲಲಿತ ಕಲೆಗಳ ವೀಕ್ಷಣೆ- ಕೇಳುವಿಕೆಗೂ ಅನ್ವಯ.
ರೇಡಿಯೋಗದಲ್ಲಿನ ನಿರ್ದಿಷ್ಟ ಕಾರ್ಯ ಕ್ರಮಗಳನ್ನು ಆಲಿಸು ವುದು; ಟಿವಿಯ ಆರಂಭಿಕ ವರ್ಷಗಳಲ್ಲಿ ಧಾರಾವಾಹಿಗಳ ವೀಕ್ಷಣೆ ಕೂಡಾ. ಎಲ್ಲವೂ ಏಕಾಗ್ರತೆಯ ಚೌಕಟ್ಟಿನಲ್ಲಿರುತ್ತಿತ್ತು. ಈ ಮೂಲಕ ಏನು ಸಾಧನೆಯಾಯಿತು ಎಂಬ ಪ್ರಶ್ನೆ ಉದ್ಭವಿಸಿದರೆ, ಅದಕ್ಕೆ ಉತ್ತರ: ಮನಸ್ಸನ್ನು ಅರಳಿಸುವ ರಸಗ್ರಹಣ.
ಆದರೆ, ಈಗ ನೂರಾರು ಅಡಚಣೆಗಳು. ಕಾದಂಬರಿ ಅಥವಾ ಸಾಹಿತ್ಯ ಕೃತಿಯನ್ನು ಓದಲು ಆರಂಭಿಸಿದ ಅಥವಾ ಮಧುರ ವಾದ ಸಂಗೀತ ಆಸ್ವಾದಿಸಲು ಆರಂಭವಾದ ರಿಂಗಣಗೊಳ್ಳುವ ಸೆಲ್ಫೋನ್, ವಾಟ್ಸಾಪ್- ಇನ್ಸ್ಟಾಗ್ರಾಂ ಸಂದೇಶಗಳು, ಸ್ನೇಹಿತರ ಕರೆಗಳು ಇತ್ಯಾದಿ! ಹೀಗೆ, ಕಾದಂಬರಿಯ ಮೊದಲ ಪುಟವನ್ನೇ ಹತ್ತಾರು ಬಾರಿ ಓದಿದವರಿರಬಹುದು; ಇದು ಆಕ್ಷೇಪಣೆಯಲ್ಲ; ನಾವು ಕಳೆದುಕೊಳ್ಳುವ ಸಹೃದಯಿ ಅನುಸಂಧಾನದ ಬಗೆಗಿನ ಆತಂಕ ಅಷ್ಟೆ! ಇತ್ತೀಚೆಗೆ ವಿವಿಧೆಡೆ ಆರಂಭವಾಗಿರುವ ಏಕಾಗ್ರತಾ ಜಾಗೃತಿಯ ಶಿಬಿರಗಳು ಈ ಮಾತನ್ನು ಪುಷ್ಟೀಕರಿಸುತ್ತದೆ.
ಅಂದಹಾಗೆ: ಇದು ಓದಿದ ನೆನಪು ಬಾದಾಮಿಯನ್ನು ರಾತ್ರಿ ನೀರಲ್ಲಿ ನೆನೆಸಿ, ಮರು ಮುಂಜಾನೆ ತಿಂದರೆ, ನೆನಪಿನ ಶಕ್ತಿ ವೃದ್ಧಿಸುತ್ತದೆ. ಆತ ಬಾದಾಮಿಯನ್ನು ತಂದ. ಆದರೆ, ರಾತ್ರಿ ನೀರಲ್ಲಿ ನೆನೆಯ ಹಾಕಲು ಮರೆತ !
-ಮನೋಹರ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ