ಇಸ್ರೋ ಮಹತ್ವಾಕಾಂಕ್ಷೆಯ ಯೋಜನೆ ಒಂದೆರಡಲ್ಲ !

ಬಾಹ್ಯಾಕಾಶ ಸಂಶೋಧನೆಗಳ ಜಾರಿಗೆ ಇಸ್ರೋ ಅವಿರತ ಶ್ರಮ

Team Udayavani, Sep 15, 2019, 5:28 AM IST

as-23

ಮಣಿಪಾಲ: ಚಂದ್ರಯಾನ-2ರ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತನ್ನ ಗುರಿಯನ್ನು ಬಾಹ್ಯಾಕಾಶದಲ್ಲಿ ಇನ್ನಷ್ಟು ಚಾಚಹೊರಟಿದೆ. 2025ರ ವೇಳೆಗೆ ಅದು ವಿಶ್ವದಲ್ಲೇ ಅತಿ ಪ್ರಮುಖ ಬಾಹ್ಯಾಕಾಶ ಸಂಶೋಧನ ಸಂಸ್ಥೆಯಾಗಿ ಗುರುತಿಸಲಿದ್ದು, ಇದಕ್ಕೆ ಪೂರಕವಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಇಸ್ರೋದ ಆ ಮಹತ್ವಾಕಾಂಕ್ಷಿ ಯೋಜನೆಗಳೇನು? ಅದರ ಪ್ರಯೋಜನವೇನು? ಇಲ್ಲಿದೆ ಒಂದು ಚಿತ್ರಣ.

ಆದಿತ್ಯ ಎಲ್‌ 1 2019-20
ಸೂರ್ಯನ ಸಂಶೋಧನೆಯ ಯೋಜನೆ. ಆದಿತ್ಯ ಎಂದು ಇದರ ಹೆಸರು ಸುಮಾರು 400 ಕೆ.ಜಿ. ತೂಕವಿರುವ ಕ್ಲಾಸ್‌ ಸ್ಪೇಸ್‌ ಟೆಲಿಸ್ಕೋಪ್‌ ಅನ್ನು ಭೂಮಿಯಿಂದ 10.5 ಲಕ್ಷ ಕಿ.ಮೀ. ಮೀಟರ್‌ ದೂರದಲ್ಲಿ ಸ್ಥಾಪಿಸಲಾಗುತ್ತದೆ. ಇದು ಸೂರ್ಯನ ಸುತ್ತಲಿನ 3 ಪದರಗಳಾದ ಫೋಟೋಸ್ಪೀಯರ್‌, ಕ್ರೋಮೋಸ್ಪಿಯರ್‌ ಮತ್ತು ಕರೋನ (ಸೂರ್ಯನ ಪ್ರಭಾವಲಯ)ವನ್ನು ಅಧ್ಯಯನ ಮಾಡಲಿದೆ. ಸೂರ್ಯನ ಸುತ್ತಲಿನ ಉಷ್ಣ ಮತ್ತು ಭೂಮಿಯಲ್ಲಿನ ತೇವಾಂಶದ ಹೋಲಿಕೆ ಮಾಡಲಿದೆ. ಮುಂದಿನ ವರ್ಷ ಆದಿತ್ಯ ಎಲ್‌ 1 ಉಡಾವಣೆ ಸಾಧ್ಯತೆ ಇದೆ.

2022 ಗಗನಯಾನ
ಚೊಚ್ಚಲ ಮಾನವ ಸಹಿತ ಗಗನಯಾನ ಯೋಜನೆ. ಮೂವರು ಗಗನಯಾತ್ರಿಗಳು ಯಾನ ಮಾಡಲಿದ್ದಾರೆ. 4 ದಶಕಗಳ ಬಳಿಕ, ಬಾಹ್ಯಾಕಾಶದಲ್ಲಿ ಅಧ್ಯಯನ ಮಾಡಲು ಭಾರತದ ವಿಜ್ಞಾನಿಗಳು ರಷ್ಯಾದಲ್ಲಿ ತರಬೇತಿ ಪಡೆಯಲಿದ್ದಾರೆ. 1984ರಲ್ಲಿ ರಷ್ಯಾದ ಯೋಜನೆಯಲ್ಲಿ ರಾಕೇಶ್‌ ಶರ್ಮ ತೆರಳಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಯೋಜನೆಗಾಗಿ ಜಿಎಸ್‌ಎಸ್‌ಎಲ್‌ವಿ 3 ರಾಕೆಟ್‌ ಮತ್ತು ಗಗನನೌಕೆ ಸಿದ್ಧವಾಗಲಿದ್ದು 2022ರ ಸುಮಾರಿಗೆ ನಭಕ್ಕೆ ಚಿಮ್ಮಲಿದೆ. ಇದು 10 ಸಾವಿರ ಕೋಟಿ ರೂ. ಮೌಲ್ಯದ ಯೋಜನೆ.

ಮಂಗಳಯಾನ 2 2023
ಪ್ರಥಮ ಪ್ರಯತ್ನದಲ್ಲೇ ಯಶಸ್ಸು ಪಡೆದ ಮಂಗಳಯಾನ-1ರ ಮುಂದುವರಿದ ಭಾಗವಾಗಿ ಮಂಗಳಯಾನ-2 ಅನ್ನು ಇಸ್ರೋ ಸಿದ್ಧಪಡಿಸುತ್ತಿದೆ. ಇದು ಮಂಗಳ ಗ್ರಹದಲ್ಲಿನ ಪ್ರತಿ ಅಂಶವನ್ನೂ ಅಧ್ಯಯನಮಾಡಲಿದ್ದು, ಅದರ ಪರಿಭ್ರಮಣೆ ಅವಧಿಯ ಕುರಿತಾಗಿ ಮಾಹಿತಿ ಸಂಗ್ರಹಿಸಲಿದೆ. ಈ ಯೋಜನೆ 2023-24ರಲ್ಲಿ ಆರಂಭವಾಗಲಿದೆ.

2023 ಶುಕ್ರಯಾನ
ಶುಕ್ರ ಗ್ರಹದ ಅಧ್ಯಯನಕ್ಕೆ ಉಪಗ್ರಹ ಕಳಿಸಲಾಗುತ್ತದೆ. ಇದು ಸುಮಾರು 400 ಕಿ.ಮೀ. ದೂರದಿಂದ ಮಾಹಿತಿಯನ್ನು ಸಂಗ್ರಹಿಸಲಿದೆ.
ಭೂಮಿ ಮತ್ತು ಶುಕ್ರ ಗ್ರಹದ ಗಾತ್ರ ಒಂದೇ ರೀತಿ ಇದ್ದು ಇದನ್ನು ಅವಳಿ ಸಹೋದರಿಯರು ಎನ್ನಲಾಗುತ್ತಿದೆ. ಸೂರ್ಯನಿಗೆ ಅತೀ ಹತ್ತಿರದಲ್ಲಿರುವ ಈ ಗ್ರಹ ಹೆಚ್ಚು ವಿಕಿರಣಶೀಲವಾಗಿದೆ. ಇದು ಹೆಚ್ಚು ಉಷ್ಣಾಂಶದಿಂದ ಕೂಡಿದ್ದು, ಈ ಬಗ್ಗೆ ಇಸ್ರೋ ಅಧ್ಯಯನ ನಡೆಸಲಿದೆ.

2023 ಚಂದ್ರಯಾನ-3
ಇಸ್ರೋ, ಚಂದ್ರಯಾನ 2ರಿಂದ ಲಭ್ಯವಾಗುವ ಮಾಹಿತಿಗಳ ಆಧಾರದಲ್ಲಿ ಚಂದ್ರಯಾನ 3ರನ್ನು ಅಭಿವೃದ್ಧಿ ಪಡಿಸುವ ಇರಾದೆ ಹೊಂದಿದೆ. ಜಪಾನ್‌ ಸಹಭಾಗಿತ್ವದಲ್ಲಿ ಯೋಜನೆ ರೂಪುತಳೆಯಲಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನೀರು ಮತ್ತು ಖನಿಜಗಳ ಕುರಿತು ಆಳ ಅಧ್ಯಯನಕ್ಕೆ ಇದು ನೆರವಿಗೆ ಬರಲಿದೆ. ಜಪಾನ್‌ ಈ ಯೋಜನೆಗೆ ರಾಕೆಟ್‌ ಮತ್ತು ರೋವರ್‌ ಅನ್ನು ನೀಡಲಿದ್ದು, ಭಾರತ ಲ್ಯಾಂಡರ್‌ ಒದಗಿಸಲಿದೆ.

2025 ಆಸ್ಟ್ರೋಸ್ಯಾಟ
ಇಸ್ರೋ ದ್ವಿತೀಯ ಆಸ್ಟ್ರೋ ಸ್ಯಾಟ್‌ 2 ಅನ್ನು 2025ರಲ್ಲಿ ಉಡಾವಣೆ ಮಾಡಲಿದೆ. 2015 ಸೆ.28ರಂದು ಮೊದಲ ಆಸ್ಟ್ರೋಸ್ಯಾಟ್‌ ಉಡಾವಣೆ ಮಾಡಿತ್ತು. ಬಹುತರಂಗಾಂತರ ಶೋಧನ ಉಪಗ್ರಹ ಇದಾಗಿದ್ದು, ಬಾಹ್ಯಾಕಾಶದಲ್ಲಿ ಬರುವ ವಿವಿಧ ಕಿರಣಗಳು, ತರಂಗಗಳು, ಗ್ರಹಗಳ ಮೇಲೆ ಅಧ್ಯಯನ ನಡೆಸಲಿದೆ. ಉಪಗ್ರಹ ಸುಮಾರು 15ರಿಂದ 20ಟನ್‌ ತೂಕವಿರಲಿದೆ.

ಬಾಹ್ಯಾಕಾಶ ನಿಲ್ದಾಣ 2025
ಇಸ್ರೋ ಬಾಹ್ಯಾಕಾಶದಲ್ಲಿ ತನ್ನದೇ ಆದ ಒಂದು ನಿಲ್ದಾಣ ನಿರ್ಮಿಸುವ ಮಹದಾಸೆ ಹೊಂದಿದೆ. ನಾಸಾ ಇಂತಹ ನಿಲ್ದಾಣ (ಐಎಸ್‌ಎಸ್‌) ಹೊಂದಿದ್ದು, ಚೀನ ಕೂಡ ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ. ಬಾಹ್ಯಾಕಾಶದ ಚಟುವಟಿಕೆಗಳ ವೀಕ್ಷಣೆ, ವಸ್ತುಗಳು, ಜೀವಿಗಳು ಬಾಹ್ಯಾಕಾಶದಲ್ಲಿ ಹೇಗೆ ವರ್ತಿಸುತ್ತವೆ ಎಂಬುದರ ಬಗ್ಗೆ ಅಧ್ಯಯನಕ್ಕೆ ಗಗನಯಾನಿಗಳು ಉಳಿದುಕೊಳ್ಳಲು ಅನುಕೂಲವಾಗುವಂತೆ ಈ ನಿಲ್ದಾಣ ಇರುತ್ತದೆ. ಇದಕ್ಕೆ ಗಗನಯಾನಿ ವಿಜ್ಞಾನಿಗಳು ತೆರಳುತ್ತಾರೆ.

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.