ವಿದೇಶದಲ್ಲಿ ಜಾಬ್! ಮರುಳಾಗದಿರಿ
Team Udayavani, Oct 14, 2022, 6:20 AM IST
“ಈ ಕಂಪೆನಿಗೆ ನಿಮ್ಮ ಪ್ರೊಫೈಲ್ ಆಯ್ಕೆಯಾಗಿದೆ. ಕೆಳಗಿನ ಲಿಂಕ್ ಕ್ಲಿಕ್ ಮಾಡಿ ದೃಢೀಕರಣ ಮಾಡಿಕೊಳ್ಳಿ’, “ಮುಂಗಡ ಹಣ ಪಾವತಿಸಿಕೊಂಡು ಕೆಲಸ ಖಾತ್ರಿ ಮಾಡಿಕೊಳ್ಳಿ’- ಹೀಗೆ ಕೆಲವು ಸಂದೇಶಗಳು ಬರುವುದನ್ನು ನೀವು ಗಮನಿಸಿರಬ ಹುದು. ಇಂತಹ ನಕಲಿ ಸಂದೇಶಗಳಿಗೆ ಮರುಳಾದರೆ ಸಮಸ್ಯೆಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ ಎಂದು ಕೇಂದ್ರ ಸರಕಾರ ಎಚ್ಚರಿಸಿದೆ. ಈ ರೀತಿಯ ಸಮಸ್ಯೆಯಿಂದ ದೂರ ಇರುವುದಕ್ಕೂ ಮಾರ್ಗದರ್ಶನವನ್ನು ಅದು ನೀಡಿದೆ.
ವಿದೇಶಿ ಕೆಲಸದ ಆಮಿಷ:
ಕೆಲಸ ಹುಡುಕುವುದಕ್ಕೆಂದೇ ಹತ್ತು ಹಲವು ಆ್ಯಪ್ಗ್ಳಿವೆ. ಆದರೆ ಕೆಲವು ನಕಲಿ ಕಂಪೆನಿಗಳು ನಿಮಗೆ ಕರೆ ಮಾಡಿ, ನಿಮಗೆ ವಿದೇಶ ದಲ್ಲಿ ಕೆಲಸ ಲಭ್ಯವಿದೆ ಎಂದು ಆಮಿಷ ಒಡ್ಡುತ್ತಾರೆ. ಮನೆ ಯಲ್ಲೇ ಕುಳಿತು ಪ್ರತಿಷ್ಠಿತ ಕಂಪೆನಿಗೆ ಪಾರ್ಟ್ ಟೈಂ ಕೆಲಸ ಮಾಡಿ ಎನ್ನುತ್ತಾರೆ. ಅದಕ್ಕೆಂದು ಒಂದಿಷ್ಟು ಮುಂಗಡ ಹಣ ಕೊಟ್ಟು ಬುಕಿಂಗ್ ಮಾಡಿಕೊಳ್ಳಿ ಎಂದು ಹೇಳುತ್ತಾರೆ. ಆ ರೀತಿಯ ಸಂದೇಶವನ್ನು ದೃಢೀಕರಣ ಮಾಡದೆಯೇ ನಂಬದಿರಿ.
ದೂರು ದಾಖಲಿಸಿ :
ಒಂದು ವೇಳೆ ನಿಮಗೆ ಈ ರೀತಿಯ ಸಂದೇಶದಿಂದಾಗಿ ಮೋಸ ಅಥವಾ ವಂಚನೆ ಆಗಿದ್ದಲ್ಲಿ ನೀವು cybercrime.gov.in ವೆಬ್ಸೈಟ್ನಲ್ಲಿ ದೂರು ದಾಖಲಿಸಬಹುದು.
ಸಿಲುಕಿದ್ದಾರೆ ಭಾರತೀಯರು :
ಇತ್ತೀಚೆಗೆ ಇದೇ ರೀತಿಯ ಆಮಿಷಕ್ಕೆ ಒಳಗಾಗಿದ್ದ ಹಲವು ಭಾರತೀಯರನ್ನು ಮ್ಯಾನ್ಮಾರ್ ರಾಷ್ಟ್ರಕ್ಕೆ ಅಕ್ರಮವಾಗಿ ಕರೆದೊಯ್ಯಲಾಗಿದೆ. ಅದರಲ್ಲಿ 45 ಮಂದಿಯನ್ನು ಭಾರತ ಸರಕಾರ ರಕ್ಷಿಸಿದೆ. ಇನ್ನೂ ಹಲವರು ಮ್ಯಾನ್ಮಾರ್ಅಧಿಕಾರಿಗಳ ವಶದಲ್ಲಿದ್ದಾರೆ.
3 ಅಗತ್ಯ ಕ್ರಮ :
ನಿಮಗೂ ಇಂತಹ ಆಮಿಷದ ಸಂದೇಶ ಅಥವಾ ಮೇಲ್ ಬಂದಿದ್ದರೆ, ಅದರಲ್ಲಿರುವ ಲಿಂಕ್ಗಳನ್ನು ದೃಢೀಕರಣ ಮಾಡದ ಹೊರತು ತೆರೆಯದಿರಿ.
ಖಾಸಗಿ ಮಾಹಿತಿಗಳನ್ನು ಕೊಡಬೇಡಿ, ಹಣ ಸಂದಾಯ ಮಾಡುವಂತಹ ಅಥವಾ ಬ್ಯಾಂಕ್ ಮಾಹಿತಿ ನೀಡಬೇಡಿ.
ನಿಮಗೆ ಯಾವ ನಂಬರ್ನಿಂದ ಕರೆ ಅಥವಾ ಸಂದೇಶ ಬಂದಿದೆಯೋ ಅದನ್ನು ರಿಪೋರ್ಟ್ ಮಾಡಿ, ಬ್ಲಾಕ್ ಮಾಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ
ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…
Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”
World Water Day: ಜುಳು ಜುಳು ಸದ್ದೇಕೆ ಉರಿ ಮೌನ
ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫಕೀರ
MUST WATCH
ಹೊಸ ಸೇರ್ಪಡೆ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್