ಆಧಾರ್ ಸುರಕ್ಷಿತವಾಗಿಟ್ಟುಕೊಳ್ಳಿ…ಕಳೆದು ಹೋದರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ…
Team Udayavani, Nov 24, 2022, 9:30 AM IST
ಆಧಾರ್ ಕಳೆದಿದೆಯೇ ತಡಮಾಡಬೇಡಿ. ತತ್ಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ.ಇಲ್ಲದಿದ್ದರೆ ದುರ್ಬಳಕೆ ಯಾದೀತು. ಇದಕ್ಕೆ ಸಾಕ್ಷಿ, ಇತ್ತೀಚೆಗೆ ಕರ್ನಾಟಕದಲ್ಲಿ ಕಂಡು ಬಂದಿರುವ ಕುಕ್ಕರ್ ಬಾಂಬ್ ಪ್ರಕರಣ. ಹಾಗಾದರೆ ಆಧಾರ್ ಅನ್ನು ಕಾಪಿಟ್ಟು ಕೊಳ್ಳುವುದು ಹೇಗೆ? ಕಳೆದು ಹೋದರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ…
ಆಧಾರ್ ಕಳೆದು ಹೋಗಿದೆ. ಏನು ಮಾಡಬೇಕು?
ಆಧಾರ್ ಕಾರ್ಡ್ ಕಳೆದುಹೋಗಿದ್ದರೆ, ಮೊದಲು ಮಾಡಬೇಕಾದ ಕೆಲಸ ನಕಲಿ ಆಧಾರ್ ಕಾರ್ಡ್ಗೆ ಅರ್ಜಿ ಸಲ್ಲಿಕೆ ಮಾಡುವುದು. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿಧಾನ ಮಾಡಲೇಬಾರದು. ಯುಐಡಿಎಐ ವೆಬ್ಸೈಟ್ಗೆ ಹೋಗಿ ನಕಲಿ ಆಧಾರ್ ಕಾರ್ಡ್ಗೆ ಅರ್ಜಿ ಸಲ್ಲಿಸಿ. ಇಲ್ಲದಿದ್ದರೆ ನಿಮ್ಮ ಮನೆಯ ಹತ್ತಿರದ ನೋಂದಣಿ ಕೇಂದ್ರ, ಆಧಾರ್ ಸಹಾಯವಾಣಿಗೆ ಅರ್ಜಿ ಸಲ್ಲಿಕೆ ಮಾಡಿ.
ಆಧಾರ್ ಕಾರ್ಡ್ನ ರಕ್ಷಣೆ ಹೇಗೆ?
ಆಧಾರ್ ನಂಬರ್ ಅಥವಾ ಅದರಲ್ಲಿನ ಮಾಹಿತಿಗಳನ್ನು ಕಾಪಿಟ್ಟುಕೊಳ್ಳುವ ಸಲುವಾಗಿ ಆಧಾರ್ ಕಾರ್ಡ್ ಅನ್ನು ಲಾಕ್ ಮಾಡುವುದು ಉತ್ತಮ. ಇದಕ್ಕಾಗಿ ಎಂಆಧಾರ್ ಎಂಬ ಆ್ಯಪ್ ಇದೆ. ಡೌನ್ಲೋಡ್ ಮಾಡಿಕೊಂಡು ಲಾಕ್ ಮಾಡಬಹುದು.
ಆಧಾರ್ ಒಟಿಪಿ ಶೇರ್ ಮಾಡಬೇಡಿ
ಆಧಾರ್ ಧೃಢೀಕರಣಕ್ಕಾಗಿ ಒಟಿಪಿ ತುಂಬಾ ಮುಖ್ಯ. ಹೀಗಾಗಿ ಯಾವುದೇ ಕಾರಣಕ್ಕೂ ಯಾರೇ ಕೇಳಿದರೂ ಆಧಾರ್ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ಯಾರಿಗೂ ಫೋಟೋ ಕಾಪಿ ಕೊಡಬೇಡಿ
ವಿಳಾಸ ದೃಢೀಕರಣಕ್ಕಾಗಿ ನೀವು ಆಧಾರ್ ಫೋಟೋ ಕಾಪಿ ಕೊಡುತ್ತಿದ್ದೀರಾ? ಇನ್ನು ಮುಂದೆ ಕೊಡಬೇಡಿ. ಈ ಫೋಟೋಕಾಪಿಗಳನ್ನು ದುರ್ಬಳಕೆ ಮಾಡಿಕೊಳ್ಳಬಹುದು. ಹೀಗಾಗಿ ಹಂಚಿಕೊಳ್ಳಬೇಡಿ. ಇದಕ್ಕೆ ಬದಲಾಗಿ ವಿಐಡಿ ಅಥವಾ ಮಾಸ್ಕ್ ಆಧಾರ್ ಬಳಸಿ.
ದೂರು ಕೊಡಿ
ಆಧಾರ್ ಕಾರ್ಡ್ ಕಳೆದು ಹೋದ ತತ್ಕ್ಷಣವೇ ಈ ಬಗ್ಗೆ ಹತ್ತಿರದ ಪೊಲೀಸ್ ಠಾಣೆಗೆ ದೂರು ಕೊಡಿ. ಇದರಿಂದ ದುರ್ಬಳಕೆ ತಪ್ಪಿಸಬಹುದು.
ವಿಐಡಿ ಬಳಸಿ
ಆಧಾರ್ ಸಂಖ್ಯೆ ಕೇಳಿದರೆ, ನಿಜವಾದ ಆಧಾರ್ ಸಂಖ್ಯೆ ನೀಡದೇ, ವಚ್ಯುìವಲ್ ಐಡಿ ಸಿಗುತ್ತದೆ. ಇದನ್ನು ಕೊಡಿ. ಇದು ಆಧಾರ್ ವೆಬ್ಸೈಟ್ನಲ್ಲಿ ಸಿಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ
MUST WATCH
ಹೊಸ ಸೇರ್ಪಡೆ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ