ನೀರಿನ ಸರಿಯಾದ ಬಳಕೆ ಬಗ್ಗೆ ತಿಳಿವಳಿಕೆ ಅಗತ್ಯ; ಜಲತಜ್ಞ ರಾಜೇಂದ್ರಸಿಂಗ್
Team Udayavani, Nov 7, 2023, 6:09 PM IST
ಗದಗ: ನಮ್ಮ ದೇಶ ಇಂದು ಬಹಳ ಸಂಕಷ್ಟದಲ್ಲಿದೆ. ಒಂದು ಕಡೆ ಬರಗಾಲ, ಒಂದು ಕಡೆ ಪ್ರವಾಹ ಪರಿಸ್ಥಿತಿ ಎದುರಾಗುತ್ತಿದೆ. ನೀರಿನ ಬಗ್ಗೆ ನಮಗೆ ಸರಿಯಾದ ತಿಳಿವಳಿಕೆ ಇಲ್ಲದೇ ಇರುವುದೇ ಪ್ರಮುಖ ಕಾರಣವಾಗಿದೆ ಎಂದು ಜಲತಜ್ಞ, ಮ್ಯಾಗ್ಸೆಸ್ಸೆ ಪುರಸ್ಕೃತ
ರಾಜೇಂದ್ರಸಿಂಗ್ ಹೇಳಿದರು.
ನಗರದ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯಲ್ಲಿ ಜಲಸಂರಕ್ಷಣೆ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀರನ್ನು ನಾವು ಜಾಗೃತಿಯಿಂದ ಬಳಸದೇ ಇರುವುದರಿಂದ ಇಂದು ನಮಗೆ ನೀರಿನ ಕೊರತೆ ಉಂಟಾಗಿದೆ ಎಂದು ಹೇಳಿದರು.
1947ರಂದು ನಮಗೆ ಸ್ವಾತಂತ್ರ್ಯ ದೊರೆತಾಗ ನಮ್ಮ ದೇಶದಲ್ಲಿ ಕೇವಲ ಶೇ. 4ರಷ್ಟು ಭೂಮಿ ಮಾತ್ರ ಬರಪೀಡಿತವಾಗಿತ್ತು. ಶೇ. 1ರಷ್ಟು ಭೂಮಿ ಪ್ರವಾಹ ಪೀಡಿತವಾಗಿತ್ತು. ಆದರೆ ಇಂದು ನಮ್ಮ ದೇಶದ ಶೇ. 40ರಷ್ಟು ಭೂಮಿ ಪ್ರವಾಹ ಪೀಡಿತ, ಶೇ. 72ರಷ್ಟು ಪ್ರದೇಶ ಬರಪೀಡಿತವಾಗಿದೆ ಎಂದರು.
ಗದಗ ಜಿಲ್ಲೆಯು ಉತ್ತಮ ಪ್ರದೇಶವಾಗಿದ್ದು, 2ರಿಂದ 3 ಬಾರಿ ಸಾಕಷ್ಟು ಮಳೆ ಬರುತ್ತದೆ. ಆದರೆ, ನೀರನ್ನು ಸರಿಯಾಗಿ ಬಳಕೆ ಮಾಡದೇ, ಸಂರಕ್ಷಣೆ ಮಾಡದೇ ಇರುವುದರಿಂದ ರಾಜಸ್ಥಾನಗಿಂತ 3 ಪಟ್ಟು ಮಳೆ ಆಗುತ್ತಿದ್ದರೂ, 600 ಮಿಲಿಮೀಟರ್ಗಿಂತ ಹೆಚ್ಚು ಮಳೆಯಾದರೂ ನಿಮ್ಮಲ್ಲಿ ನೀರಿನ ಕೊರತೆ ತುಂಬಾ ಇದೆ. ಆದರೆ, ರಾಜಸ್ಥಾನದಲ್ಲಿ ಇಂತಹ ಪರಿಸ್ಥಿತಿ ಇಲ್ಲ
ಎಂದು ಹೇಳಿದರು.
ಗದಗ ಜಿಲ್ಲೆ ಮತ್ತು ರಾಜಸ್ಥಾನ ರಾಜ್ಯವನ್ನು ಹೋಲಿಸಿ ನೋಡಿದಾಗ ನಾನು 1984ನೇ ಇಸ್ವಿಯಲ್ಲಿ ನಮ್ಮಲ್ಲಿ ನೀರು ಇರದೇ ಇರುವ ಕಾರಣ ಬೇರೆ ಬೇರೆ ಪ್ರದೇಶಕ್ಕೆ ಜನ ವಲಸೆ ಹೋಗುತ್ತಿದ್ದರು. ಎಲ್ಲಿ ನೀರಿನ ಕೊರತೆ ಇದೆಯೋ ಅಲ್ಲಿ ಆಹಾರವಿಲ್ಲ. ಭವಿಷ್ಯವಿಲ್ಲ.
ನೀರು ಎಲ್ಲದಕ್ಕೂ ಆಧಾರ. ಇವತ್ತು ನಮ್ಮ ಕರ್ನಾಟಕ ಸರಕಾರ ಕರ್ನಾಟಕದಲ್ಲಿರುವ 236 ಬ್ಲಾಕ್ಗಳಲ್ಲಿ 216 ಬ್ಲಾಕ್ಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಇದು ನಮ್ಮ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದರು.
ನಮ್ಮ ವಿಜ್ಞಾನ-ತಂತ್ರಜ್ಞಾನ ಇಂದು ನಮಗೆ ಉಪಯೋಗವಾಗುತ್ತಿಲ್ಲ. ಅಭಿವೃದ್ಧಿಗೆ ಸಹಾಯ ಮಾಡುತ್ತಿಲ್ಲ. ಏಕೆಂದರೆ, ಈ ವಿಜ್ಞಾನ-ತಂತ್ರಜ್ಞಾನವನ್ನು ಬಳಸಿ ನಾವು ಭೂಮಿಯ ಅಂತರಾಳದಲ್ಲಿ ಹೋಗುತ್ತ ಎಲ್ಲ ನೀರನ್ನು ಅಂತರಾಳದಿಂದ ಮೇಲೆ ತಂದು ಅಂತರ್ಜಲ ಮಟ್ಟ ಹಾಳಾಗಿ ಹೋಗಿದೆ. ಈಗ ನಮ್ಮ ಭೂಮಿ ಬರಡಾಗಿದೆ. ಭೂಮಿಯ ಒಳಗೆ ನೀರಿಲ್ಲ ಏಕೆಂದರೆ, ನಾವು ಭೂಮಿ, ಜಲ, ಆಗಸ, ವಾಯು, ಅಗ್ನಿ ಇವುಗಳನ್ನು ಪ್ರೀತಿಸುವುದನ್ನು ಬಿಟ್ಟಿದ್ದೇವೆ. ಈ ಪಂಚಮಹಾ ಭೂತಗಳು ದೇವರುಗಳಾಗಿವೆ. ಭ ಎಂಬ ಅಕ್ಷರದಿಂದ ಭಗವಂತ, ಭೂ ದಿಂದ ಭೂಮಿ, ಗ ದಿಂದ ಗಗನ, ವ ದಿಂದ ವಾಯು, ನ ದಿಂದ ನದಿ, ಅ ದಿಂದ ಅಗ್ನಿ, ಈ ಪಂಚಮಹಾ ಭೂತಗಳೇ ನಿಸರ್ಗ, ಇದುವೇ ನಿಜವಾದ ದೇವರು. ಇವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಇಂದು ನೀರಿನ ಅವಶ್ಯಕತೆ ನಮ್ಮ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ನೀರಿನ ಬಗ್ಗೆ ಜನರಲ್ಲಿ ತಿಳಿವಳಿಕೆ ಕಡಿಮೆ ಇದೆ. ಇದ್ದ ತಿಳಿವಳಿಕೆಯನ್ನಯನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ ಎಂದರು.
ವಿದ್ಯಾದಾನ ಸಮಿತಿ ನಿವೃತ್ತ ಪ್ರಾಚಾರ್ಯ ಜೆ.ಕೆ. ಜಮಾದರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಎ.ಎನ್. ನಾಗರಹಳ್ಳಿ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಹೂಗಾರ, ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್.ವೈ. ಚಿಕ್ಕಟ್ಟಿ ಇದ್ದರು. ವಿನಯ್ ಚಿಕ್ಕಟ್ಟಿ ಸ್ವಾಗತಿಸಿದರು. ಹೇಮಲತಾ ಕರಡಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ