ನವಿರಾದ ವ್ಯಂಗ್ಯಗಳ ಸಂಕಲನ “ಇನ್ನೂ ಒಂದಿಷ್ಟು”


Team Udayavani, Jun 27, 2021, 5:12 PM IST

Kugo ‘Innu Ondishtu’ Book review By Dr. Parvathi G Aithal

ಪ್ರಸಿದ್ಧ ಹಾಸ್ಯ ಸಾಹಿತಿ ಕು.ಗೋ. ಅವರು ಕನ್ನಡ ನಾಡಿನಲ್ಲಿರುವ ಸಾಹಿತ್ಯಾಸಕ್ತರಿಗೆ ಪುಸ್ತಕಗಳನ್ನು ಹಂಚುವ ಅವರ ಕಾಯಕದಿಂದಾಗಿ ಪುಸ್ತಕ ಪರಿವ್ರಾಜಕರೆಂದೇ ಜನಪ್ರಿಯರಾದವರು. ತಮ್ಮ ದೈನಂದಿನ  ಜೀವನಾನುಭವಗಳಿಗೆ ಹಾಸ್ಯವನ್ನು ಲೇಪಿಸಿ ಲೇಖನಗಳನ್ನಾಗಿಸುವ ಅವರ ಅದ್ಭುತ ಪ್ರತಿಭೆಯು ಅವರ ಈ ಹಿಂದಿನ ಕೃತಿಗಳಲ್ಲಿಯಂತೆ ಇತ್ತೀಚೆಗೆ ಎರಡನೆಯ ಮುದ್ರಣ ಕಂಡ ಅವರ ‘ಇನ್ನೂ ಒಂದಿಷ್ಟು’ಎಂಬ ಹಾಸ್ಯ ಲೇಖನಗಳ ಸಂಕಲನದಲ್ಲೂ ಅನಾವರಣಗೊಂಡಿದೆ.

ಇದನ್ನೂ ಓದಿ : ಸಕ್ಸಸ್ ಸ್ಟೋರಿ : ಡಾಕ್ಟರ್ ಆಫ್ ಫಿಲಾಸಫಿ ಪಡೆದ ದೇಶದ ಮೊದಲ ತೃತೀಯ ಲಿಂಗಿ ಮಾನವಿ.!

ಈ ಸಂಕಲನದಲ್ಲಿ ಹಾಸ್ಯದ ವಿವಿಧ ಮುಖಗಳನ್ನು ತೋರಿಸುವ 49 ಲೇಖನಗಳಿವೆ‌. ಇಲ್ಲಿರುವುದು ಏಕರೂಪದ ಹಾಸ್ಯವಲ್ಲ. ಕೆಲವು ಲೇಖನಗಳಲ್ಲಿ  ನವಿರಾದ ವ್ಯಂಗ್ಯವಿದ್ದರೆ (ಉದಾ:  ಪ್ರಯಾಣಿಕರಿಗೆ ಚಿಲ್ಲರೆ ಹಣ ಕೊಡುವ ವಿಚಾರದಲ್ಲಿ ಕಂಡಕ್ಟರುಗಳ ಜಾಣ ಮರೆವು, ದುರಭ್ಯಾಸಗಳನ್ನು ಬಿಡುವಲ್ಲಿ ಸಹಾಯಕವಾಗುವ ‘ಮರೆವು’ ಎಂಬ ವರದಾನ, ತಮಗಿಂತ ಹೆಚ್ಚಿನ ಬುದ್ಧಿವಂತರೇ ಇಲ್ಲವೆಂದು ಅಹಂಕಾರದಿಂದ ಬೀಗುತ್ತಿದ್ದ. ಗುರುಗುಂಟಿರಾಯರು ಲೇಖಕರ ಹಾಸ್ಯಪುಸ್ತಕ ಚಿಕಿತ್ಸೆಯ ಮೂಲಕ ಮನುಷ್ಯನಾದದ್ದು,   ಚಿನ್ನದಂಗಡಿಯ ದೊಡ್ಡ ಮನುಷ್ಯರನ್ನೂ ಲೇಖಕರು ಪುಸ್ತಕ ಪ್ರೀತಿಗೆ ಮಣಿಸಿದ್ದು, ಪ್ರಶಸ್ತಿ ವಾಪಸಿ ನಾಟಕ ), ಇನ್ನು ಕೆಲವು ಲೇಖನಗಳಲ್ಲಿ ತಮ್ಮನ್ನೇ ಹಾಸ್ಯಕ್ಕೆ ಗುರಿ ಮಾಡಿ ಓದುಗರನ್ನು ಲಘುವಾಗಿ ನಗಿಸುವ ಸಂದರ್ಭಗಳಿವೆ (ಮೇಲೆ ಹೋಗಿದ್ದಾರೆ ಎನ್ನುವ ಲೇಖನ, ತನಗೆ ಸಿಕ್ಕುವ ಸಂಬಳದ ಬಗ್ಗೆ ಸುಳ್ಳು ಹೇಳಿ ಸಿಕ್ಕಿ ಹಾಕಿಕೊಳ್ಳುವುದು, ಗುಜರಿಯವನ ಸುಳ್ಳನ್ನು ನಂಬಿ  ಲೇಖಕರು ಬೇಸ್ತು ಬೀಳುವುದು, ಹೋಟೆಲ್ ಸಪ್ಪೈಯರನ ಜತೆಗೆ ಸಂಭಾಷಣೆ, ಪತ್ರಿಕೆಯಲ್ಲಿ ಭವಿಷ್ಯ, ಅಷ್ಟಾವಧಾನದಲ್ಲಿ ಕೇಳುವ ಅಧಿಕ ಪ್ರಸಂಗದ ಪ್ರಶ್ನೆಗಳು ಇತ್ಯಾದಿ). ಇನ್ನು ಕೆಲವು ಲೇಖನಗಳಲ್ಲಿ ಹಾಸ್ಯದೊಂದಿಗೆ ವಿಷಾದವೂ ಸೇರಿಕೊಂಡಿದೆ ( ಮಹಿಳಾ ಸಾಹಿತಿಯ ಮನೆಗೆ ಹೋದಾಗ ಆಕೆಯ ಬಿಡುವೇ ಇಲ್ಲದ ವ್ಯಸ್ತತೆಯನ್ನು ನೋಡಿ ಇಂಥವರು ಬರೆಯಲು ಎಷ್ಟು ಕಷ್ಟ ಪಡುತ್ತಾರೋ ಎಂದು ಲೇಖಕರು ಸಹಾನುಭೂತಿ ವ್ಯಕ್ತ ಪಡಿಸುವುದು, ಬೀದಿ ಬದಿ ಮಾರಾಟಗಾರರ ಸಂಕಷ್ಟಗಳ ಚಿತ್ರಣ,(ಕಿಣಿ ಕಿಣಿ ಸದ್ದು) ಇತ್ಯಾದಿ.

ಪರಿಸರ ಜಾಗೃತಿ(ನೀರುಳಿಸಿರಿ!), ಊಟದ ಶಿಸ್ತು,(ಊಟ), ಮನುಷ್ಯ ಸಂಬಂಧಗಳಲ್ಲಿನಂಬುಗೆಯ ಪ್ರಾಮುಖ್ಯವನ್ನು ವಿವರಿಸುತ್ತ ಅಮ್ಮನ ಗುಣದ ನೆನಪು(ಮನುಷ್ಯರನ್ನು ನಂಬಬಹುದು), ನುಡಿಸಿರಿಯ ವೈಭವದ ನೆಪದಲ್ಲಿ ಆಳ್ವರ ಕಲಾಪ್ರಿಯತೆಯ ಚಿತ್ರಣ(ನುಡಿಸಿರಿಗೆ ಹೋಗಿದ್ದೀರಾ ?) ಇತ್ಯಾದಿ  ಹೃದಯಸ್ಪರ್ಶಿ ಲೇಖನಗಳೂ ಇಲ್ಲಿವೆ.

ವ್ಯಂಗ್ಯವಾಗಲಿ ವಿಷಾದವಾಗಲಿ, ಅಥವಾ ಹಾಸ್ಯದ ಧ್ವನಿ ಯಾವುದೇ ಇರಲಿ ಇಲ್ಲಿನ ಎಲ್ಲಾ ಲೇಖನಗಳಲ್ಲಿ ಕು.ಗೋ.ಅವರ ತಿಳಿಹಾಸ್ಯವು ಓದುಗರನ್ನು ಹೆಜ್ಜೆ ಹೆಜ್ಜೆಗೂ ಖುಷಿಯಿಂದ ನಗುವಂತೆ ಮಾಡುತ್ತದೆ. ಲೇಖಕರ ಭಾಷಾ ಶೈಲಿ ತುಂಬಾ ಸುಂದರವಾಗಿದೆ.

ಕೃತಿಯ ಆರಂಭದಲ್ಲಿ ಹಾಸ್ಯ ಸಾಹಿತ್ಯದ ಇಂದಿನ ಸ್ಥಿತಿಗತಿಗಳ ಬಗೆಗಿನ ಲೇಖನವು ವಿದ್ವತ್ಪೂರ್ಣವಾಗಿದ್ದು ಓದುಗರನ್ನು ಚಿಂತನೆಗೆ ಹಚ್ಚುತ್ತದೆ.

-ಪಾರ್ವತಿ ಜಿ.ಐತಾಳ್

ಹಿರಿಯ ಸಾಹಿತಿಗಳು, ಅನುವಾದಕರು

————————————————

 

ಕೃತಿಯ ಹೆಸರು: ಇನ್ನೂ ಒಂದಿಷ್ಟು

ಲೇಖಕರು : ಕು.ಗೋ.

ಪ್ರ : ತೇಜು ಪಬ್ಲಿಕೇಷನ್ಸ್

(ಕು.ಗೋ.)

ಇದನ್ನೂ ಓದಿ : ಆಧಾರ್ ಹಾಗೂ ಪಾನ್ ಕಾರ್ಡ್ ಗಳ ಜೋಡಣೆ ಗಡುವು ವಿಸ್ತರಿಸಿದ ಕೇಂದ್ರ..!

ಟಾಪ್ ನ್ಯೂಸ್

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.