ದಡ್ಡನೆಂದು ಹಿಂದಡಿ ಇಡುವುದು ದೊಡ್ಡ ತಪ್ಪು


Team Udayavani, Sep 3, 2021, 6:10 AM IST

ದಡ್ಡನೆಂದು ಹಿಂದಡಿ ಇಡುವುದು ದೊಡ್ಡ ತಪ್ಪು

ಇಲ್ಲಿ ಯಾರೂ ದಡ್ಡರಲ್ಲ, ಹಾಗೆಯೇ ಹಣ, ಆಸ್ತಿ ಹೊಂದಿದ ಮಾತ್ರಕ್ಕೆ ದೊಡ್ಡ ವರು ಆಗುವುದಿಲ್ಲ. ಪ್ರಸ್ತುತ ದುಡ್ಡಿದ್ದ ವರೇ ದೊಡ್ಡವರೆಂದು ಬಡಾಯಿ ಕೊಚ್ಚಿಕೊಳ್ಳುವವರ ಕಾಲ ಇದಾಗಿದೆ. ಅದು ಬೇರೆ ವಿಚಾರ. ಜಗತ್ತಿನಲ್ಲಿ ಯಾರಿಂ ದಲೂ ಕದಿಯಲಾಗದ ಮತ್ತು ಎಲ್ಲರೂ ಬೆಲೆ ಕೊಡುವ ಅತ್ಯಮೂಲ್ಯ ಆಸ್ತಿ ಎಂದರೆ ಅದು ಜ್ಞಾನ. ಯಾರು ಜ್ಞಾನ ಗಳಿಸಿರುತ್ತಾರೋ ಜಗತ್ತಿನಲ್ಲಿ ಅವರೇ ದೊಡ್ಡವರು. ಜ್ಞಾನದ ಮುಂದೆ ಉಳಿದೆಲ್ಲವೂ ನಗಣ್ಯ.

ಈ ಮಾನವ ದೇಹ, ದೇವರ ಅದ್ಭುತ ಕೊಡುಗೆ. ದೈವ ನಿರ್ಮಿಸಿದ ದೇಹಕೆ ಏನಾದರೂ ವ್ಯಾಧಿ ತಗಲಿದರೆ ಸರಿ ಪಡಿಸಲೆಂದೇ ಸಾವಿರಾರು ವರ್ಷಗಳಿಂದ ಸಂಶೋಧನೆ, ಆವಿಷ್ಕಾರಗಳು ನಡೆದಿವೆ.

ಇಲ್ಲಿಯವರೆಗೆ ಯಾವುದೇ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಗಿಲ್ಲ. ತಾತ್ಕಾ ಲಿಕ ಪರಿಹಾರಗಳಿಗೆ ಬರವಿಲ್ಲ. ಇನ್ನೂ ಮಾನವ ಪರಿಹಾರ ಕಂಡುಕೊಳ್ಳುವು ದರಲ್ಲಿಯೇ ನಿರತನಾಗಿದ್ದಾನೆ. ಸೃಷ್ಟಿಕರ್ತ ಪ್ರತಿಯೊಬ್ಬರಿಗೂ ಕೂಡ  ಇಂದ್ರಿಯ ಗಳನ್ನು ಸಮಾನವಾಗಿ, ಸುಸಂಬದ್ಧವಾಗಿ, ಸುವ್ಯವಸ್ಥಿತವಾಗಿ ನೀಡಿದ್ದಾನೆ. ದಡ್ಡನೆನಿಸಿ ಕೊಳ್ಳುವವನಿಗೆ ಅರ್ಧಂಬರ್ಧ ಮೆದುಳು ಕೊಟ್ಟು, ಬುದ್ಧಿವಂತನಿಗೆ ಸಂಪೂರ್ಣ ಮೆದುಳು ಏನಾದರೂ ನೀಡಿದ್ದಾನೆಯೇ?  ಇಲ್ಲವಲ್ಲ; ದಡ್ಡನಿಗೂ, ದೊಡ್ಡವನಿಗೂ ಇರುವುದೊಂದೇ ತಲೆ. ಆದರೆ ಅದನ್ನು ನಾವು ಹೇಗೆ ಉಪಯೋಗ ಮಾಡಿಕೊಳ್ಳುತ್ತೇವೆ ಎಂಬುದನ್ನು ಅವ ಲಂಬಿಸಿದೆ. ಸರ್ವರೂ ಸರ್ವಸ್ವವನ್ನೂ ಸಾಧಿಸಲು ಸಮರ್ಥರಿದ್ದಾರೆ. ಅವರು ಇಂದ್ರಿಯಗಳನ್ನು ನಿಗ್ರಹಿಸಿಕೊಂಡು ಕಾರ್ಯ ಪ್ರವೃತ್ತರಾಗದಿರುವುದೇ ಹಿಂದು ಳಿಯಲು ಕಾರಣ. ಧೈರ್ಯದಿಂದ ಶ್ರದ್ಧೆ ಬೆಳೆಸಿಕೊಂಡು ಒಂದು ವೇಳೆ ಕಾರ್ಯ ನಿರತರಾದರೆಂದರೆ ಇಡೀ ಜಗತ್ತೇ ಅವರ ವಿರುದ್ಧ  ತಿರುಗಿ ಬಿದ್ದರೂ ಏನೂ ಮಾಡಲಾಗುವುದಿಲ್ಲ. ಅಂತಹ ಅಖಂಡ ಶಕ್ತಿ ನಮ್ಮಲ್ಲಡಗಿದೆ.

ಬೀದಿ ಬದಿಯಲ್ಲಿ ಭಿಕ್ಷೆ ಬೇಡುವವ ನಿಂದ ಹಿಡಿದು ರಾಷ್ಟ್ರದ ಮೊದಲ ಪ್ರಜೆ ರಾಷ್ಟ್ರಪತಿಯವರೆಗೆ ಒಂದಲ್ಲ ಒಂದು ಕಲೆ, ಜಾಣತನವಿರುತ್ತದೆ. ಅಧಿಕಾರದ ಆಧಾರದ ಮೇಲೆ ತಾರತಮ್ಯ ಮಾಡಿ, ಅವಮಾನ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಬಾರದು. ಉನ್ನತ ಅಧಿಕಾರಿಗಳಿಗೆ ಉತ್ತಮ ಯೋಚನೆ ಇರುತ್ತವೆ, ಅಧೀನ ಸಿಬಂದಿಗೆ ಅವುಗಳ ಯಾವುದೇ ಪರಿವೆಯೇ ಇರುವುದಿಲ್ಲ ವೆಂದಲ್ಲ. ಮನಸ್ಸಿನ ಹಂದರದಲ್ಲಿ ಯಾವ ವಿಚಾರಗಳಿಗೆ ಬೆಳೆಯಲು ಅವಕಾಶ ನೀಡುತ್ತೇವೆಯೋ ಅಂಥ ಮನೋಭಾವನೆಗಳು ರೂಪುಗೊಂಡು ಕಾರ್ಯ ರೂಪಕ್ಕೆ ಇಳಿಸುವವರೆಗೂ ಗುಪ್ತವಾಗಿರು ತ್ತವೆ. ಯಾವಾಗ ಆಚರಣೆಗೆ ತರಲು ಮುಂದಾಗುತ್ತೇವೆಯೋ ಆಗ ನಮ್ಮ ಸಾಮಥ್ಯ ಇತರರಿಗೆ ತಿಳಿಯುತ್ತದೆ.

“ವಿಚಾರಗಳು ಇಡೀ ಜಗತ್ತನ್ನೇ ಆಳು ತ್ತವೆ’. ಆಳುವ ವಿಚಾರಗಳಿದ್ದರೆ ಸರಿ; ಹಾಳು ಮಾಡುವ ವಿಚಾರಗಳಿದ್ದರೆ, ಎಂಥ ಉನ್ನತ ಅಧಿಕಾರಿಗಳು ಇದ್ದರೂ ವಿಶ್ವಕ್ಕೆ ಮಾರಕ ವಾಗುವುದರಲ್ಲಿ ಎರಡು ಮಾತಿಲ್ಲ.  ಎಲ್ಲ ಇದ್ದು ಏನು ಇರದಂತೆಯೇ ಇರುವ ನಮಗೆ ನಾವು ದಡ್ಡನೆಂದು ಯಾವಾಗ ಅಂದುಕೊಳ್ಳುತ್ತೇವೆಯೋ ಆಗ ಜಗತ್ತಿನಲ್ಲಿ ಇದಕ್ಕಿಂತ ಪಾಪ ಬೇರೊಂದಿಲ್ಲ. ಅವಿರತ ಶ್ರಮವಹಿಸಿ, ಅಸೀಮವಾದುದನ್ನು ಸಾಧಿಸಲು ತೊಡೆ ತಟ್ಟಿ ನಿಲ್ಲಬೇಕು. ಇಲ್ಲ, ಸಾಧ್ಯವಿಲ್ಲ, ಓದಲು ನನ್ನಿಂದಾಗದು; ಮೈ ಮುರಿದು ದುಡಿಯಲು ಸಾಧ್ಯವಾಗದೆಂದು ಹಗಲಿ ರುಳು ಹಲುಬುತ್ತ ಕುಳಿತುಕೊಂಡರೆ ಎಲ್ಲರ ದೃಷ್ಟಿಯಲ್ಲಿ ಯಾವ ಕೆಲಸಕ್ಕೂ ಸಲ್ಲದವರಾಗುತ್ತೇವೆ. ಪ್ರಮುಖವಾಗಿ ನಮ್ಮ ಆಪ್ತರೆನಿಸಿಕೊಂಡವರೆ ನಮ್ಮನ್ನು ತಿರಸ್ಕರಿಸಿ ಬಿಡುತ್ತಾರೆ. ಒಂದು ಬಾರಿ ಆಲಸ್ಯತನ, ಸೋಮಾರಿತನಕ್ಕೆ ಒಳಗಾಗಿ ಬಿಟ್ಟೆವು ಎಂದರೆ ಅನ್ಯ ಮಾರ್ಗದ ಹಾದಿಯಲ್ಲಿ  ಸಾಗಿಬಿಡುತ್ತೇವೆ. ಹೊಟ್ಟೆಪಾಡಿಗಾಗಿ ಸಮಾಜಘಾತಕ ಚಟುವಟಿಕೆಯಲ್ಲಿ ತೊಡಗಿಕೊಂಡು ನಮ್ಮ ಜೀವನಕ್ಕೆ ನಾವೇ ಸಂಚಕಾರ ತಂದುಕೊಳ್ಳುತ್ತೇವೆ. ಮನಸ್ಸು ನಮ್ಮ ಗುಲಾಮರಾಗಬೇಕೇ ಹೊರತು ನಾವು ಅದರ ಗುಲಾಮರಾಗಬಾರದು.

ಎಲ್ಲ ಸೌಕರ್ಯವಿದ್ದರೂ ನಾವು ಕೈಯಲ್ಲಿ ಆಗದೆಂದು ಕೈ ಕಟ್ಟಿಕೊಂಡು ಕುಳಿತುಕೊಳ್ಳುತ್ತೇವೆಯಲ್ಲ ಯಾಕೆ? ಇರುವ ಸೌಲಭ್ಯಗಳನ್ನೇ ಸದುಪಯೋಗ ಪಡಿಸಿಕೊಂಡು ಏನಾದರೂ ಕಾರ್ಯ ಮಾಡಲು ಮುಂದಾಗೋಣ. ಸಾವಿರ ಜನ ಸಾವಿರ ಮಾತನಾಡಿದರೂ ಕಿವಿಗೊಡದಿರೋಣ. ನಮ್ಮೊಳಗಿನ ಆತ್ಮದ ಮಾತಿಗೆ ದನಿಗೂಡಿಸಿ, ಆತ್ಮವಿಶ್ವಾಸ ಇಮ್ಮಡಿ ಗೊಳಿಸಿ ಕೊಂಡು ಕಾರ್ಯ ನಿರ್ವಹಿಸೋಣ.

- ಬಿ. ಪ್ರಕಾಶ್‌, ವಜ್ಜಲ್

ಟಾಪ್ ನ್ಯೂಸ್

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aasasas

ಸೌರ ಯುಗಾದಿ; ಜೀವನೋತ್ಸಾಹ, ನವಚೈತನ್ಯ ತುಂಬುವ ಹಬ್ಬ ವಿಷು

PAK: ವಾಣಿಜ್ಯ ಕಟ್ಟಡ ನಿರ್ಮಾಣಕ್ಕಾಗಿ ಐತಿಹಾಸಿಕ ಹಿಂದೂ ದೇವಸ್ಥಾನ ಧ್ವಂಸಗೊಳಿಸಿದ ಪಾಕ್!

PAK: ವಾಣಿಜ್ಯ ಕಟ್ಟಡ ನಿರ್ಮಾಣಕ್ಕಾಗಿ ಐತಿಹಾಸಿಕ ಹಿಂದೂ ದೇವಸ್ಥಾನ ಧ್ವಂಸಗೊಳಿಸಿದ ಪಾಕ್!

Union Territory: 6 ಕೇಂದ್ರಾಡಳಿತ ಪ್ರದೇಶದಲ್ಲಿ 6 ಸೀಟು ಯಾರಿಗೆ?

Union Territory: 6 ಕೇಂದ್ರಾಡಳಿತ ಪ್ರದೇಶದಲ್ಲಿ 6 ಸೀಟು ಯಾರಿಗೆ?

Lok Sabha Election: ಜೆಡಿಎಸ್‌ ಭದ್ರಕೋಟೆ ಹಾಸನದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ

Lok Sabha Election: ಜೆಡಿಎಸ್‌ ಭದ್ರಕೋಟೆ ಹಾಸನದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ

1-qwewqew

ಮರಳಿ ಬಂದಿದೆ ಯುಗಾದಿ: ಹೊಸ ಸಂವತ್ಸರದ ಹುರುಪು, ನವ ಬೆಳಕಿನ ಆಶಯ

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Loksabha

Udupi Chikmagalur Lok Sabha Election: ಮಹಿಳಾ ಮತದಾರರೇ ಅಧಿಕ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.