ಸೋಲು ಅಂತಿಮವಲ್ಲ; ಯಶಸ್ಸು ಶಾಶ್ವತವಲ್ಲ


Team Udayavani, Jul 5, 2022, 10:10 AM IST

ಸೋಲು ಅಂತಿಮವಲ್ಲ; ಯಶಸ್ಸು ಶಾಶ್ವತವಲ್ಲ

ಬದುಕು ಬಯಕೆಗಳ ಬಂಡಿ. ಈ ಬಯಕೆಗಳ ಬಂಡಿಯನ್ನು ಏರಿ ಸಾಗು ತ್ತಿರುವವರು ನಾವು. ಇಲ್ಲಿ ಏಳು- ಬೀಳು, ಸೋಲು-ಗೆಲುವು ಸರ್ವೇಸಾಮಾನ್ಯ. ಬದುಕಿನ ಪ್ರತೀ ಹಂತದಲ್ಲೂ ಗೆಲುವು ನಮ್ಮದಾಗಬೇಕು, ಸೋಲು ಜೀವನದ ಅಂತ್ಯ ಎಂದು ನಿರ್ಧರಿಸುವುದು ಎಷ್ಟರ ಮಟ್ಟಿಗೆ ಸರಿ?

ಸೋಲು ಹೇಗೆ ಅಂತಿಮವಲ್ಲವೋ ಹಾಗೆಯೇ ಗೆಲುವು ಶಾಶ್ವತವೂ ಅಲ್ಲ. “ಸೋಲೇ ಗೆಲುವಿನ ಸೋಪಾನ’. ಸೋಲು ಮತ್ತು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಬದುಕಿನಲ್ಲಿ ಸೋತಾಗ ಮಾತ್ರ ನಾವು ಎಲ್ಲಿ ಎಡವಿದ್ದೇವೆ ಎನ್ನುವುದನ್ನು ತಿಳಿ ಯಲು ಸಾಧ್ಯ. ಹಾಗೆಯೇ ಯಶಸ್ಸಿನ ಶಿಖರವೇರಿದಾಗ ಅದರ ಹಿಂದಿನ ಪರಿ ಶ್ರಮದ ನೈಜ ಬೆಲೆಯನ್ನು ಅರಿಯಲು ಸಾಧ್ಯ. ಅಷ್ಟು ಮಾತ್ರವಲ್ಲದೆ ಶಿಖರ ಏರಿದ ಬಳಿಕ ಇಳಿಯಲೇಬೇಕು ಎಂಬುದು ಕೂಡ ಅಷ್ಟೇ ವಾಸ್ತವ.
.

“ಜ್ವರ ಬರುವುದು ರೋಗದ ಲಕ್ಷಣವೇ ಹೊರತು ಜ್ವರ ಬಂತೆಂದಾಕ್ಷಣ ಸಾವು ಖಚಿತ ಎಂದಲ್ಲ. ಹಾಗೆಯೇ ಸೋಲು ಅಂತಿಮ ಖಂಡಿತ ಅಲ್ಲ, ಅದು ಗೆಲುವಿನ ಪ್ರಾರಂಭ. ಆಶಾವಾದಿಗಳು ಯಾವಾಗಲೂ ಸೋಲನ್ನು ಸವಾಲಾಗಿ ಸ್ವೀಕರಿಸುತ್ತಾರೆ.

ನೆಲ್ಸನ್‌ ಮಂಡೇಲಾರಂತಹ ಆಶಾ ವಾದಿಗಳು ನಮಗೆ ಸ್ಫೂರ್ತಿಯ ಸೆಲೆ. 27 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ ಅವರು ಹೆದರಲಿಲ್ಲ. ಬದಲಿಗೆ 1992ರಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದರು.

ಸೋಲೇ ಅಂತಿಮ ಎನ್ನುವುದಾದರೆ ಸೋಲೇ ಗೆಲುವಿನ ಸೋಪಾನ ಎನ್ನುವ ವಾಕ್ಯ ತನ್ನ ಅರ್ಥವನ್ನು ಕಳೆದು ಕೊಳ್ಳುತ್ತದೆ. ಏಕೆಂದರೆ ಸೋಲನ್ನು ಗೆಲು ವನ್ನಾಗಿ ಬದಲಾಯಿಸಲು ಪ್ರಯತ್ನ ಅನಿವಾರ್ಯ. “success comes before work only in dictionary not in life’ -ಎನ್ನುವುದನ್ನು ನಾವು ತಿಳಿದುಕೊಂಡಿರಬೇಕು.

ಸೋತು ಗೆದ್ದ ವ್ಯಕ್ತಿಗಳೆಲ್ಲರೂ ಪ್ರತಿಯೊಂದು ಸೋಲಿನಲ್ಲಿಯೂ ಹೊಸ ಹೊಸ ಅವಕಾಶಗಳನ್ನು ಕಂಡುಕೊಂಡ ವರು. “ಆಗುವುದೆಲ್ಲ ಒಳ್ಳೆಯದಕ್ಕೆ’ ಎನ್ನುವುದನ್ನು ಸದಾ ಸ್ಮರಿಸುತ್ತಿರಬೇಕು. ಎ.ಪಿ.ಜೆ. ಅಬ್ದುಲ್‌ ಕಲಾಂ ಪೈಲಟ್‌ ಪರೀಕ್ಷೆಯಲ್ಲಿ ಅನುತ್ತೀರ್ಣರಾಗದೇ ಇದ್ದಿದ್ದರೆ ನಮ್ಮ ದೇಶಕ್ಕೆ ಪ್ರಸಿದ್ಧ ವಿಜ್ಞಾನಿಯೊಬ್ಬರು ದೊರಕುತ್ತಿರಲಿಲ್ಲ. ಹೆಸರಾಂತ ಕವಿ ಡಿ.ವಿ. ಗುಂಡಪ್ಪನವರು ಎಸೆಸೆಲ್ಸಿ ಪರೀಕ್ಷೆಯಲ್ಲಿ ಪಾಸಾಗಲಿಲ್ಲ. ಆದರೂ ಅವರು ಸೋಲೊಪ್ಪಿಕೊಳ್ಳದೆ “ಮಂಕುತಿಮ್ಮನ ಕಗ್ಗ’ ಎನ್ನುವ ಕೃತಿ ಯನ್ನು ಕನ್ನಡ ಸಾಹಿತ್ಯಕ್ಕೆ ನೀಡಿದರು. ಪ್ರಸಿದ್ಧ ಸಿತಾರ್‌ ವಾದಕ ರವಿಶಂಕರ್‌ ನಾಟ್ಯ ಕ್ಷೇತ್ರದಲ್ಲಿ ಸೋಲನ್ನು ಅನುಭವಿಸಿ ಸಿತಾರ್‌ ಕಲಿತರು. ಈಗ “ಸಿತಾರ್‌ ಎಂದರೆ ರವಿಶಂಕರ್‌, ರವಿಶಂಕರ್‌ ಎಂದರೆ ಸಿತಾರ್‌’ ಎನ್ನುವಷ್ಟರಮಟ್ಟಿಗೆ ಅವರು ಬೆಳೆದು ನಿಂತಿ¨ªಾರೆ. ಅಪ್ಪನಿಂದ ಅನಿಷ್ಟ ಎಂದು ಕರೆಸಿಕೊಂಡರೂ 2009ರಲ್ಲಿ ಮಿಸ್‌ ಇಂಡಿಯಾ ಆಗಿ ಆಯ್ಕೆಯಾದ ಪೂಜಾ ಚೋಪ್ರಾ, ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡರು ನಾಟ್ಯರಾಣಿ ಎಂದು ಗುರುತಿಸಿಕೊಂಡಿರುವ ಸುಧಾ ಚಂದ್ರನ್‌ ಇವರಂತೆಯೇ ಬದುಕಿನಲ್ಲಿ ಯಶಸ್ವಿ ವ್ಯಕ್ತಿಗಳಾದಂತಹ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸೋಲನ್ನು ಅನುಭವಿಸಿದವರೇ.

लहरों से डरकर नौका पार नहीं होती,
कोशिश करने वालों की कभी हार नहीं होती

ಎನ್ನುವ ಸಾಲುಗಳು ಪ್ರಯತ್ನದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ.

ಕಾಲು ಒದ್ದೆ ಮಾಡದೆ ಸಮುದ್ರವನ್ನು ದಾಟಬಹುದು ಆದರೆ ಕಣ್ಣು ಒದ್ದೆ ಮಾಡದೆ ಜೀವನವೆಂಬ ಸಮುದ್ರವನ್ನು ದಾಟಲು ಸಾಧ್ಯವಿಲ್ಲ. ಜೀವನದಲ್ಲಿ ಕಷ್ಟಗಳಿರುವುದು ಸರ್ವೇಸಾಮಾನ್ಯ ಪ್ರತಿಯೊಬ್ಬ ಯಶಸ್ವೀ ವ್ಯಕ್ತಿಯೂ ಕೂಡ ಸಮಾಜ ಅವರ ಮೇಲೆ ಎಸೆದ ಕಲ್ಲುಗಳಿಂದಲೇ ಬದುಕಿನ ತಳಪಾಯ ವನ್ನು ಕಟ್ಟಿಕೊಂಡವರು. ಅದರ ಮೇಲೆ ಭವ್ಯವಾದ ಕಟ್ಟಡ ನಿರ್ಮಿಸಿಕೊಂಡವರು. ತಮಗೆ ಎದುರಾದ ಎಲ್ಲ ಋಣಾತ್ಮಕ ಸನ್ನಿವೇಶಗಳನ್ನು ಧನಾತ್ಮಕವಾಗಿ ಬದ ಲಾಯಿಸಿಕೊಂಡವರು. ಆದ್ದರಿಂದ ಸೋಲಿಗೆ ಹೆದರದೆ ಬದುಕಿನ ಭವ್ಯವಾದ ಕಟ್ಟಡವನ್ನು ಸೋಲು-ಗೆಲುವು ಎನ್ನುವ ಇಟ್ಟಿಗೆಗಳಿಂದ ಸುಂದರವಾಗಿ ಕಟ್ಟಿ ಯಶಸ್ವಿ ವ್ಯಕ್ತಿಗಳು ನಾವಾಗೋಣ.

- ವಾಣಿಶ್ರೀ, ಕಾರ್ಕಳ

ಟಾಪ್ ನ್ಯೂಸ್

m b patil

Vijayapura; ಭ್ರೂಣ ಹತ್ಯೆ ಅಕ್ಷಮ್ಯ ಅಪರಾಧ: ಸಚಿವ ಎಂ.ಬಿ.ಪಾಟೀಲ

Surat ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ: ನಾಪತ್ತೆಯಾಗಿದ್ದ 7 ಕಾರ್ಮಿಕರ ಶವ ಪತ್ತೆ

Surat: ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ: ಸುಟ್ಟು ಕರಕಲಾದ 7 ಕಾರ್ಮಿಕರ ಶವ ಪತ್ತೆ

Raichuru; ಕೋಮು ಸಂಘರ್ಷಕ್ಕೆ ಎಡೆ ಮಾಡಿದ ಮಸೀದಿ ಕಮಾನು

Raichuru; ಕೋಮು ಸಂಘರ್ಷಕ್ಕೆ ಎಡೆ ಮಾಡಿದ ಮಸೀದಿ ಕಮಾನು

hdk

ಡಿಕೆಶಿಗೆ ಹೈಕೋರ್ಟ್ ರಿಲೀಫ್ ಕೊಟ್ಟಿಲ್ಲ, ಇವರೇ ತೆಗೆದುಕೊಂಡಿದ್ದಾರೆ: ಕುಮಾರಸ್ವಾಮಿ

ಮದುವೆ ಮುನ್ನ ವರನಿಗೆ ಡೆಂಗ್ಯೂ: ಆಸ್ಪತ್ರೆಯನ್ನೇ ಮಂಟಪವಾಗಿಸಿ ವಿವಾಹ ಮಾಡಿಸಿದ ಕುಟುಂಬಸ್ಥರು

ಮದುವೆ ಮುನ್ನ ವರನಿಗೆ ಡೆಂಗ್ಯೂ: ಆಸ್ಪತ್ರೆಯನ್ನೇ ಮಂಟಪವಾಗಿಸಿ ವಿವಾಹ ಮಾಡಿಸಿದ ಕುಟುಂಬಸ್ಥರು

New Krishna Bhavan:ಗುಡ್‌ ಬೈ ಹೇಳಿದೆ.. ಮಲ್ಲೇಶ್ವರಂನ 70 ವರ್ಷ ಹಳೆಯ ನ್ಯೂ ಕೃಷ್ಣ ಭವನ್‌

New Krishna Bhavan:ಗುಡ್‌ ಬೈ ಹೇಳಿದೆ.. ಮಲ್ಲೇಶ್ವರಂನ 70 ವರ್ಷ ಹಳೆಯ ನ್ಯೂ ಕೃಷ್ಣ ಭವನ್‌

Mysore; ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಬಗ್ಗೆ ಒಂದೂ ಸಭೆ ನಡೆಸದ ಉಸ್ತುವಾರಿ ಸಚಿವರು

Mysore; ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಬಗ್ಗೆ ಒಂದೂ ಸಭೆ ನಡೆಸದ ಉಸ್ತುವಾರಿ ಸಚಿವರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

New Krishna Bhavan:ಗುಡ್‌ ಬೈ ಹೇಳಿದೆ.. ಮಲ್ಲೇಶ್ವರಂನ 70 ವರ್ಷ ಹಳೆಯ ನ್ಯೂ ಕೃಷ್ಣ ಭವನ್‌

New Krishna Bhavan:ಗುಡ್‌ ಬೈ ಹೇಳಿದೆ.. ಮಲ್ಲೇಶ್ವರಂನ 70 ವರ್ಷ ಹಳೆಯ ನ್ಯೂ ಕೃಷ್ಣ ಭವನ್‌

SIM CARD

SIM Card: ನಾಳೆಯಿಂದ ನೂತನ ನಿರ್ಬಂಧ 

kanakana kindi

ಇಂದು ಕನಕದಾಸ ಜಯಂತಿ: ಕನಕನ ಕಿಂಡಿ- ಭಕ್ತಿಜ್ಞಾನದ ಹೊಳಪು

lakshman prabhu

Dr. Lakshmana Prabhu: ವಿಜ್ಞಾನ-ತತ್ತ್ವಜ್ಞಾನಗಳ ಸಂಗಮ ಡಾ|ಲಕ್ಷ್ಮಣ ಪ್ರಭು

G 20

ಭಾರತದ G-20 ಅಧ್ಯಕ್ಷತೆ ಮತ್ತು ಹೊಸ ಬಹುಪಕ್ಷೀಯತೆ ಉದಯ

MUST WATCH

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

udayavani youtube

ಗುರುಕಿರಣ್ ರಿಗೆ ಬೆಂಗಳೂರು ಕಂಬಳದ ಮೇಲಿನ ಆಸಕ್ತಿಯ ಹಿಂದಿದೆ ಅದೊಂದು ಕಾರಣ

ಹೊಸ ಸೇರ್ಪಡೆ

m b patil

Vijayapura; ಭ್ರೂಣ ಹತ್ಯೆ ಅಕ್ಷಮ್ಯ ಅಪರಾಧ: ಸಚಿವ ಎಂ.ಬಿ.ಪಾಟೀಲ

State government: ಮೊಟ್ಟೆಗೆ ಸರ್ಕಾರ ನೀಡುವ ಹಣ ಸಾಲುತ್ತಿಲ್ಲ

State government: ಮೊಟ್ಟೆಗೆ ಸರ್ಕಾರ ನೀಡುವ ಹಣ ಸಾಲುತ್ತಿಲ್ಲ

Surat ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ: ನಾಪತ್ತೆಯಾಗಿದ್ದ 7 ಕಾರ್ಮಿಕರ ಶವ ಪತ್ತೆ

Surat: ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ: ಸುಟ್ಟು ಕರಕಲಾದ 7 ಕಾರ್ಮಿಕರ ಶವ ಪತ್ತೆ

Raichuru; ಕೋಮು ಸಂಘರ್ಷಕ್ಕೆ ಎಡೆ ಮಾಡಿದ ಮಸೀದಿ ಕಮಾನು

Raichuru; ಕೋಮು ಸಂಘರ್ಷಕ್ಕೆ ಎಡೆ ಮಾಡಿದ ಮಸೀದಿ ಕಮಾನು

hdk

ಡಿಕೆಶಿಗೆ ಹೈಕೋರ್ಟ್ ರಿಲೀಫ್ ಕೊಟ್ಟಿಲ್ಲ, ಇವರೇ ತೆಗೆದುಕೊಂಡಿದ್ದಾರೆ: ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.