ದಲಿತ ಬಂಧುವನ್ನು ಕಳೆದುಕೊಂಡೆವು…


Team Udayavani, Dec 30, 2019, 4:00 AM IST

dalita

ಅದು ಸುಮಾರು 70ರ ದಶಕದ ಆಸುಪಾಸು ನಡೆದ ಘಟನೆ. ಉಡುಪಿಯಲ್ಲಿ ಏರ್ಪಡಿಸಿದ್ದ ಸಂವಾದವೊಂದರಲ್ಲಿ ಭಾಗವಹಿಸಲು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆಗಮಿಸುತ್ತಾರೆ. ಆಗ, ಅತಿಥಿಗಳು ಸೇರಿದಂತೆ ಎಲ್ಲರೂ ಎದ್ದುನಿಂತು ಅವರಿಗೆ ಗೌರವ ಸೂಚಿಸುತ್ತಾರೆ. ಆದರೆ, ಅದೇ ವೇದಿಕೆಯಲ್ಲಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ಮಾತ್ರ ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತಿರುತ್ತಾನೆ. ಅಷ್ಟೇ ಅಲ್ಲ, ಆ ವಿದ್ಯಾರ್ಥಿ ಸ್ವಾಮೀಜಿ ಮನಸ್ಸಿಗೆ ನಾಟುವಂತೆ ಕಟುವಾಗಿ ಟೀಕೆ ಮಾಡುತ್ತಾನೆ.

ಕಾರ್ಯಕ್ರಮ ಮುಗಿದ ನಂತರ ವಿದ್ಯಾರ್ಥಿಯ ಬೆನ್ನು ಸವರಿ ಮುಗುಳ್ನಕ್ಕು ಸ್ವಾಮೀಜಿ ನಿರ್ಗಮಿಸುತ್ತಾರೆ. ಮುಂದೆ ಅದೇ ವಿದ್ಯಾರ್ಥಿ ಅವರ ಪ್ರೀತಿಯ ಶಿಷ್ಯನಾಗುತ್ತಾನೆ. ಆ ವಿದ್ಯಾರ್ಥಿ ಬಂಡಾಯ ಕವಿ ಪ್ರೊ. ಸಿದ್ದಲಿಂಗಯ್ಯ ಇದನ್ನು ಸ್ವತಃ ಪ್ರೊ.ಸಿದ್ದಲಿಂಗಯ್ಯ ತಮ್ಮ “ಊರು-ಕೇರಿ’ಯಲ್ಲಿ ದಾಖಲಿಸಿದ್ದಾರೆ. “ಅಸ್ಪೃಶ್ಯರ ಬಗ್ಗೆ ಪೇಜಾವರ ಶ್ರೀಗಳ ಕಾಳಜಿ ಅನುಮಾನಿಸಿದ್ದು ತಪ್ಪು’ ಎಂದೂ ಹೇಳಿಕೊಂಡಿದ್ದಾರೆ. ಶ್ರೀಗಳ ಅಗಲಿಕೆ ಹಿನ್ನೆಲೆಯಲ್ಲಿ ಅವರ ಪ್ರೀತಿಯ ಶಿಷ್ಯ ಪ್ರೊ. ಸಿದ್ದಲಿಂಗಯ್ಯ, “ಉದಯವಾಣಿ’ ಜತೆ ಶ್ರೀಗಳೊಂದಿಗಿನ ಒಡನಾಟವನ್ನು ಮೆಲುಕು ಹಾಕಿದ್ದು ಹೀಗೆ…

ದಶಕಗಳ ಹಿಂದೆ ಉಡುಪಿಯಲ್ಲಿ ವಿಶ್ವ ಹಿಂದೂ ಪರಿಷತ್ತು ಹಮ್ಮಿಕೊಂಡಿದ್ದ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಪೇಜಾವರ ಶ್ರೀಗಳು ದಲಿತ ಸಮುದಾಯದ ಐಎಎಸ್‌ ಅಧಿಕಾರಿಯಾಗಿದ್ದ ಆರ್‌. ಭರಣಯ್ಯ ಅವರನ್ನು ನೇಮಕ ಮಾಡುತ್ತಾರೆ. ಆ ಸಮ್ಮೇಳನದಲ್ಲಿ ದೇಶದ ವಿವಿಧ ಮಠಾಧೀಶರೂ ಭಾಗವಹಿಸಿರುತ್ತಾರೆ. ಅಲ್ಲಿ ಅಸ್ಪೃಶ್ಯತೆ ವಿರೋಧಿ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಈ ಮೂಲಕ ಅಸ್ಪೃಶ್ಯತೆ ನಿವಾರಣೆ ಅಗತ್ಯತೆ ಬಗ್ಗೆ ಎಲ್ಲ ಮಠಾಧಿಪತಿಗಳಿಗೂ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದರು. ಈ ಘಟನೆಗೆ ಸಾಕ್ಷಿಯಾಗಿದ್ದ ಭರಣಯ್ಯ ಭಾವುಕರಾಗುತ್ತಾರೆ.

ಇವು ಪೇಜಾವರ ಶ್ರೀಗಳ “ಪ್ರಜಾಪ್ರಭುತ್ವದ ವ್ಯಕ್ತಿತ್ವ’ಕ್ಕೆ ಉದಾಹರಣೆಗಳು. ಪ್ರಜಾಪ್ರಭುತ್ವದ ಮೂಲ ಗುಣಗಳಾದ ಸಂವಾದ, ವಾಗ್ವಾದ, ಚರ್ಚೆಗಳ ಮೂಲಕ ಸತ್ಯವನ್ನು ತಲುಪಬೇಕು ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು. ಈ ಗುಣದಿಂದಾಗಿಯೇ ಮಾಧ್ವ ಬ್ರಾಹ್ಮಣ ಸಮುದಾಯದ ಹೊರತಾಗಿಯೂ ಬೇರೆ ಬೇರೆ ಸಮುದಾಯದಲ್ಲಿ ಅಷ್ಟೊಂದು ಶಿಷ್ಯವೃಂದವನ್ನು ಹೊಂದಲು ಅವರಿಗೆ ಸಾಧ್ಯವಾಯಿತು. ಅಲ್ಲದೆ ಕನ್ನಡಿಗರಲ್ಲಿ ರಾಷ್ಟ್ರಮಟ್ಟದಲ್ಲಿ ಈ ಪ್ರಮಾಣದ ಜನಮನ್ನಣೆ ಗಳಿಸಲಿಕ್ಕೂ ಸಾಧ್ಯವಾಯಿತು.

ಮಡೆ ಸ್ನಾನ, ದಲಿತ ಕೇರಿಗಳಿಗೆ ಭೇಟಿಯಂತಹ ಹಲವಾರು ಪಂಥಾಹ್ವಾನಗಳು ಬಂದಾಗ ಅದನ್ನು ಸ್ವೀಕರಿಸಿ, ನಿಲುವುಗಳನ್ನು ಪ್ರತಿಪಾದಿಸಿದ್ದುಂಟು. ಸಂವಾದದಲ್ಲಿ ತಮ್ಮ ಗ್ರಹಿಕೆ ತಪ್ಪು ಎಂದು ಕಂಡುಬಂದಾಗ, ಅದನ್ನು ಮುಕ್ತವಾಗಿ ಒಪ್ಪಿಕೊಂಡಿದ್ದೂ ಉಂಟು. ಅಷ್ಟೇ ಯಾಕೆ, ತಮ್ಮ ಸಮುದಾಯದ ಆಚರಣೆಗಳ ಬಗ್ಗೆ ಯಾವುದಾದರೂ ಪತ್ರಿಕೆಗಳಲ್ಲಿ ಟೀಕೆ-ಟಿಪ್ಪಣಿಗಳು ವ್ಯಕ್ತವಾದಾಗ, ಆ ಬಗ್ಗೆ ಲಿಖೀತ ರೂಪದಲ್ಲಿ ಸ್ಪಷ್ಟನೆ ನೀಡುವುದರ ಜತೆಗೆ ಹಾಗೆ ಬರೆದವರಿಗೆ ಖುದ್ದು ಬಂದು ನೋಡುವಂತೆ ಆಹ್ವಾನವನ್ನೂ ನೀಡುತ್ತಿದ್ದರು. ಈ ಗುಣಗಳಿಂದಾಗಿ ಅವರದ್ದು ಅಷ್ಟಮಠದ ಪರಂಪರೆಯಲ್ಲಿ ಇದೊಂದು ಅಪರೂಪದ ವ್ಯಕ್ತಿತ್ವ.

ಬದಲಾವಣೆಯ ಸ್ಫೂರ್ತಿ ಕೇಂದ್ರ: ಅವರೊಬ್ಬ ಸಾಮಾಜಿಕ ಬದಲಾವಣೆಯ ಸ್ಫೂರ್ತಿಯ ಕೇಂದ್ರವಾಗಿದ್ದರು. ಅವರು ದಯೆ, ಪ್ರೀತಿ, ಕರುಣೆ, ಕಾಳಜಿಗಳ ಸಂಗಮ. ಅವರ ಅಗಲಿಕೆಯಿಂದ “ದಲಿತ ಬಂಧು’ವನ್ನು ಕಳೆದುಕೊಂಡಂತಾಗಿದೆ. ಪೇಜಾವರ ಶ್ರೀಗಳ ಧೋರಣೆಗಳನ್ನು ಮುಂದುವರಿಸಿಕೊಂಡು ಹೋಗುವವರು ಯಾರು ಎಂಬ ಪ್ರಶ್ನೆ ಕಾಡುತ್ತಿದೆ. ಅಸ್ಪೃಶ್ಯತೆ ವಿರುದ್ಧ ದನಿ ಎತ್ತಿದ ಸ್ವಾಮೀಜಿಗಳಲ್ಲಿ ಪೇಜಾವರ ಶ್ರೀಗಳು ಮೊದಲಿಗರು ಹಾಗೂ ಪ್ರಮುಖರು. 1974ರಲ್ಲಿ ಅವರ ಮನಸ್ಸಿಗೆ ನೋವುಂಟಾಗುವಂತೆ ಟೀಕಿಸಿದ್ದೆ.

ಆದರೆ, 2006-07ರಲ್ಲಿ ಆದಿಚುಂಚನಗಿರಿ ಸಮಾರಂಭವೊಂದರಲ್ಲಿ ಡಾ.ಬಾಲಗಂಗಾಧರನಾಥ ಸ್ವಾಮೀಜಿ ನನ್ನನ್ನು ಪೇಜಾವರ ಶ್ರೀಗಳಿಗೆ ಪರಿಚಯಿಸಿದಾಗ, “ಇವರು ನಮ್ಮ ಸಿದ್ದಲಿಂಗಯ್ಯ. ನನಗೆ 1974ರಿಂದಲೂ ಅವರು ಗೊತ್ತು’ ಎಂದಿದ್ದರು. ಆಗ ನಾನು ಘಟನೆ ಬಗ್ಗೆ ಊರು-ಕೇರಿಯಲ್ಲಿ ದಾಖಲಿಸಿರುವುದನ್ನು ಸ್ವಾಮೀಜಿ ಗಮನಕ್ಕೆ ತಂದಿದ್ದೆ. ಇದಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು, “ನಾನು ಆಗಲೇ ಊರು-ಕೇರಿ ತರಿಸಿಕೊಂಡು ಓದಿದ್ದೇನೆ’ ಎಂದು ಹೇಳಿದರು.

ಇದು ಅವರ ತೀಕ್ಷ್ಣಮತಿಗೆ ಹಿಡಿದ ಕನ್ನಡಿ. ಅಸ್ಪೃಶ್ಯತೆ ವಿರುದ್ಧ ಕೆಲವು ಲಿಂಗಾಯತ ಮಠಗಳು ಕ್ರಾಂತಿಕಾರಿ ಧೋರಣೆ ಹೊಂದಿದ್ದರೂ, ಉಳಿದ ಸ್ವಾಮೀಜಿಗಳು ಚಕಾರ ಎತ್ತದಿದ್ದಾಗ, ಪೇಜಾವರರು ನಿರ್ಭೀತಿಯಿಂದ ಮುಕ್ತವಾಗಿ ಮಾತನಾಡಿದ್ದರು. ನಿಡುಮಾಮಿಡಿ ಸ್ವಾಮೀಜಿಗಳು ಪೇಜಾವರ ಸ್ವಾಮೀಜಿಗೆ ಕೆಲವು ಕಠಿಣ ಪ್ರಶ್ನೆಗಳನ್ನೂ ಕೇಳಿದ್ದು ನಿಜ. ಆದರೆ, ಪೇಜಾವರ ಶ್ರೀಗಳು ತಮ್ಮ ಇತಿಮಿತಿಗಳಲ್ಲಿ ಮಾಡಿದ ಸಾಧನೆ ಕಡಿಮೆ ಇಲ್ಲ. ಸಾಮಾಜಿಕ ಸುಧಾರಣೆಗೆ ಮಾಡಿರುವ ಕೆಲಸ ಕಡಿಮೆ ಅಲ್ಲ. ನಮ್ಮ ಕೆಲವು ಪ್ರಗತಿಪರ ಗೆಳೆಯರು ತಿಳಿಯದೆ ಮಾತನಾಡಿದ್ದೇ ಹೆಚ್ಚೆನಿಸುತ್ತದೆ

ನಿರೂಪಣೆ: ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

World Water Day: ಜುಳು ಜುಳು ಸದ್ದೇಕೆ ಉರಿ ಮೌನ

World Water Day: ಜುಳು ಜುಳು ಸದ್ದೇಕೆ ಉರಿ ಮೌನ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.