13 ಸಾವಿರ ಅಡಿ ಎತ್ತರದ ಮಣಿಮಹೇಶ್ ಕೈಲಾಸ ಸರೋವರ ಯಾತ್ರೆ ಬಗ್ಗೆ ಗೊತ್ತಾ? ಎಲ್ಲಿದೆ ಇದು…

ಆಗಸ್ಟ್ 15ರಿಂದ ಪವಿತ್ರ ಯಾತ್ರೆ ಆರಂಭ

ನಾಗೇಂದ್ರ ತ್ರಾಸಿ, Aug 12, 2019, 8:11 PM IST

char-dham

ನವದೆಹಲಿ: ಚಾರ್ ಧಾಮ್ ಯಾತ್ರೆ, ಅಮರನಾಥ ಯಾತ್ರೆ, ಕೈಲಾಸ ಪರ್ವತ ಯಾತ್ರೆ ಬಗ್ಗೆ ಕೇಳಿದ್ದೀರಿ…ಆದರೆ ಹಿಮಾಚಲ ಪ್ರದೇಶದಲ್ಲಿರುವ ಮಣಿಮಹೇಶ್ ಕೈಲಾಸ ಪರ್ವತ ಯಾತ್ರೆ ಬಗ್ಗೆ ಗೊತ್ತಾ. ಆಗಸ್ಟ್ 15ರಿಂದ ಈ ಯಾತ್ರೆ ಆರಂಭಗೊಂಡು ಸೆಪ್ಟೆಂಬರ್ 6ಕ್ಕೆ ಮುಕ್ತಾಯಗೊಳ್ಳಲಿದೆ.

ಎಲ್ಲಿದೆ ಈ ಮಣಿಮಹೇಶ್ ಕೈಲಾಸ ಪರ್ವತ, ಏನಿದರ ವಿಶೇಷತೆ?

ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿರುವ ಮಣಿ ಮಹೇಸ್ ಕೈಲಾಸದಲ್ಲಿರುವ ಮಣಿಮಹೇಶ್ ಸರೋವರ ಒಂದು ಪ್ರಸಿದ್ಧ ಯಾತ್ರಾ ಸ್ಥಳ. ಮಣಿಮಹೇಶ್ ಸರೋವರ ಬರೋಬ್ಬರಿ 13, 700 ಅಡಿ ಎತ್ತರದಲ್ಲಿದೆ.

ಪ್ರತಿವರ್ಷ ಅಧಿಕೃತವಾಗಿ ಆಗಸ್ಟ್ ತಿಂಗಳಿನಲ್ಲಿ ಮಣಿಮಹೇಶ್ ಕೈಲಾಸ ಸರೋವರ ಯಾತ್ರೆ ಆರಂಭವಾಗುತ್ತದೆ.  ಇಲ್ಲಿರುವುದು ಕೂಡಾ ಶಿವನೇ..ಹೀಗಾಗಿ ಪ್ರತಿವರ್ಷ ಹಿಮಾಚಲ ಪ್ರದೇಶದ ಚಂಪಾದಲ್ಲಿರುವ ಮಣಿಮಹೇಶ್ ಸರೋವರ ಜಾತ್ರೆಗೆ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಾರೆ.

ಮಣಿಮಹೇಶ್ ಪರ್ವತ ಹತ್ತಲು ಹಿಮಾಚಲ ಪ್ರದೇಶ ಸರಕಾರದ ಅನುಮತಿಯೂ ಬೇಕು. ಮಣಿಮಹೇಶ್ ಸರೋವರ ಸಮೀಪವೇ ಶಿವನ ದೇಗುಲವಿದೆ.

54ಕಿಲೋ ಮೀಟರ್ ಟ್ರಕ್ಕಿಂಗ್:

ಹಿಮಾಚಲ ಪ್ರದೇಶದ(ಚಂಬಾ ಕಣಿವೆ) ಪೀರ್ ಪಂಜಾಲ್ ನಲ್ಲಿರುವ ಮಣಿಮಹೇಶ್ ಕೈಲಾಸ ಸರೋವರಕ್ಕೆ ಪ್ರತಿವರ್ಷ ಭಕ್ತಾಧಿಗಳು ತೆರಳುವಂತೆಯೇ, ಟ್ರಕ್ಕಿಂಗ್ ಕೂಡಾ ಮಾಡುತ್ತಾರೆ. 11 ದಿನಗಳ ಈ ಪ್ರವಾಸದಲ್ಲಿ 3 ದಿನ ಟ್ರಾವೆಲ್, 8ದಿನ ಟ್ರಕ್ಕಿಂಗ್ ಮೂಲಕ ಮಣಿಮಹೇಶ್ ಕೈಲಾಸ ಪರ್ವತ ಹತ್ತುತ್ತಾರೆ. ಮಣಿಮಹೇಶ್ ಕೈಲಾಸ ಪರ್ವತದ ತುದಿಯಲ್ಲಿ ಶಿವ ಇದ್ದಾನೆಂಬುದು ಹಿಂದೂ ಭಕ್ತರ ನಂಬಿಕೆಯಾಗಿದೆ. ಪವಿತ್ರ ಜನ್ಮಾಷ್ಠಮಿಯಂದು ಆರಂಭವಾಗುವ ಯಾತ್ರೆ ರಾಧಾ ಅಷ್ಟಮಿಯಂದು ಮುಕ್ತಾಯಗೊಳ್ಳಲಿದೆ.

ಹೇಗೆ ತಲುಪುವುದು?

ಸಮೀಪದ ರೈಲ್ವೆ ನಿಲ್ದಾಣ ಪಠಾಣ್ ಕೋಟ್(ಪಂಜಾಬ್)

ವಿಮಾನ ನಿಲ್ದಾಣ: ಗಗ್ಗಾಲ್ ನ ಕಾಂಗ್ರಾ ವಿಮಾನ ನಿಲ್ದಾಣ(ಚಂಬಾದಿಂದ 170 ಕಿಲೋ ಮೀಟರ್ ದೂರದಲ್ಲಿದೆ.)

ರಸ್ತೆ ಮೂಲಕ: ಹಿಮಾಚಲ ಪ್ರದೇಶದ ಚಂಬಾದಿಂದ ಮಣಿಮಹೇಶ್ 78 ಕಿಲೋ ಮೀಟರ್. ಚಂಡೀಗಢ್, ದೆಹಲಿಯಿಂದ ಬಸ್, ಟ್ಯಾಕ್ಸಿ ಹಾಗೂ ಡಿಲಕ್ಸ್ ಬಸ್ಸುಗಳ ನಿರಂತರ ಸಂಚಾರವಿದೆ. ದೆಹಲಿಯಿಂದ ಚಂಬಾ 602 ಕಿಲೋ ಮೀಟರ್ ದೂರದಲ್ಲಿದ್ದು, ಚಂಡೀಗಢದಿಂದ 392 ಕಿಲೋ ಮೀಟರ್ ದೂರದಲ್ಲಿದೆ.

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.