ಮನೆಯಂಗಳದಲ್ಲಿ ಹಲವು ತರಕಾರಿ
ಆರಂಭದಲ್ಲಿಯೇ ಮಣ್ಣಿನ, ನಾಟಿಗೆ ಬಳಸುವ ಗಿಡ, ಬೀಜದ ಗುಣಮಟ್ಟ ಖಾತರಿಪಡಿಸಿಕೊಳ್ಳಬೇಕು.
Team Udayavani, Jul 16, 2021, 8:35 AM IST
ಮಳೆಯಿಂದ ಹದವಾದ ಮಣ್ಣಿನಲ್ಲಿ ಕೊಂಚ ಶ್ರಮಪಟ್ಟರೆ ಕೈ ತುಂಬಾ ಫಸಲಿಗೆ ಕೊರತೆಬಾರದು. ನೀರಿಗೇನೂ ಸಮಸ್ಯೆ ಇಲ್ಲ. ರೋಗ ನಿಯಂತ್ರಣ, ಗುಣಮಟ್ಟದ ಬೀಜ, ಗಿಡ ನಾಟಿ ಕಡೆ ಗಮನ ಹರಿಸಿದರೆ ನಿರೀಕ್ಷಿತ ಫಲ ದೊರೆಯಬಹುದು. ಸೋರೆಕಾಯಿ, ಅಲಸಂಡೆ, ಮುಳ್ಳುಸೌತೆ, ತೊಂಡೆಕಾಯಿ, ಹರಿವೆ, ಹಾಗಲಕಾಯಿ, ಬದನೆ ಹೀಗೆ ಹಲವಾರು ಬಗೆಯ ತರಕಾರಿ ಬೆಳೆಯಲು ಅವಕಾಶವಿದೆ. ಅವೆಲ್ಲವೂ ಕೆಲ ತಿಂಗಳ ಕಾಲ ಮನೆ ಖರ್ಚು ಉಳಿತಾಯ ಮಾಡಬಹುದು. ಜತೆಗೆ ರಾಸಾಯನಿಕ ಮುಕ್ತ ತರಕಾರಿ ರುಚಿಯನ್ನು ಸವಿಯುವ ಭಾಗ್ಯ ನಮ್ಮದಾಗಬಹುದು.
ನಾಟಿ ಆರಂಭದಲ್ಲಿ ಮಣ್ಣಿನ ಗುಣಮಟ್ಟ ಗಮನಿಸಬೇಕು. ಅದಕ್ಕೆ ತಕ್ಕುದಾದ ಬೀಜ/ಗಿಡ ನಾಟಿ ಮಾಡಬೇಕು. ಮಣ್ಣು ಪೌಷ್ಟಿಕ ಅಂಶ ಹೊಂದಿರದೇ ಇದ್ದಲ್ಲಿ, ಅಲ್ಲಿ ಗಿಡ ಬಳಿತುಕೊಳ್ಳಲಾರದು. ಫಸಲು ಸಿಗದು. ಹಾಗಾಗಿ ಆರಂಭದಲ್ಲಿಯೇ ಮಣ್ಣಿನ, ನಾಟಿಗೆ ಬಳಸುವ ಗಿಡ, ಬೀಜದ ಗುಣಮಟ್ಟ ಖಾತರಿಪಡಿಸಿಕೊಳ್ಳಬೇಕು.
ಹಟ್ಟಿ ಗೊಬ್ಬರ ಸೂಕ್ತ
ನಾಟಿ ಮಾಡಿದ ಮೇಲೆ ಅದಕ್ಕೆ ತಕ್ಕಂತೆ ಗೊಬ್ಬರ, ನೀರು ಒದಗಿಸಬೇಕು. ತರಗೆಲೆ ಗೊಬ್ಬರ ಅಥವಾ ಹಟ್ಟಿ ಗೊಬ್ಬರ ಹೆಚ್ಚು ಸೂಕ್ತ. ಇದರಿಂದ ಮಣ್ಣಿನ ಗುಣಮಟ್ಟವೂ ಉಳಿದುಕೊಳ್ಳುತ್ತದೆ. ಗಿಡವೂ ಬೆಳೆಯುತ್ತದೆ. ಸಾವಯವ ತರಕಾರಿ ರುಚಿಯು ದೊರೆಯುತ್ತದೆ. ಈ ರೀತಿ ಹಟ್ಟಿ ಗೊಬ್ಬರ ಮೂರು ವಿಧದಲ್ಲಿಯೂ ಲಾಭವಿದೆ. ನೀರಿನ ಅತಿ ಉಪಯೋಗವು ಹಾಳು. ಹಾಗಾಗಿ ಜಡಿ ಮಳೆ ಕಡಿಮೆ ಆದ ಮೇಲೆ ನಾಟಿ ಪ್ರಕ್ರಿಯೆ ಆರಂಭಿಸಬೇಕು. ಮಳೆಗಾಲದ ನಡು ಹೊತ್ತಲ್ಲಿ, ಚಳಿಗಾಲದ ತನಕ ಫಸಲು ಕೊಯ್ದು ದಿನ ಬಳಕೆಗೆ ಬಳಸಬಹುದು. ಅದು ನಾವು ಬೆಳೆಯುವ ಬೆಳೆಗಳ ಮೇಲೆ ಆಧಾರಿತವಾಗಿದೆ.
ಹಲವು ಅವಕಾಶ
ಅಡಿಕೆ ಒಣಗಲು ಹಾಕಿದ ಅಂಗಳದಲ್ಲಿ ಕೃಷಿ ಮಾಡುವುದು ಹೇಗಪ್ಪಾ ಎಂಬ ಚಿಂತೆ ಮಾಡುವ ಆವಶ್ಯಕತೆ ಇಲ್ಲ. ಗೋಣಿ ಚೀಲ, ಇತರೆ ಪರಿಕರ ಬಳಸಿ, ಹದವಾದ ಮಣ್ಣು, ಗೊಬ್ಬರ ತುಂಬಿ ಬಗೆ-ಬಗೆಯ ತರಕಾರಿ ಕೃಷಿ ಬೆಳೆಯಬಹುದು. ಅಂತಹ ಕೃಷಿಯಲ್ಲಿ ಭರಪೂರ ಫಸಲು, ಆದಾಯ ಪಡೆದವರು ಇದ್ದಾರೆ.
ಅದಕ್ಕೇನೂ ಹೆಚ್ಚು ಖರ್ಚು ತಗಲದು. ಮಣ್ಣು ತುಂಬಿಸುವ, ಜೋಡಿಸುವ ಒಂದಷ್ಟು ಪೂರಕ ಕೆಲಸಗಳಿಗೆ ಶ್ರಮ ವಹಿಸಿದರೆ ಸಾಕು. ಮನೆ ಜಾಗ ಮಾತ್ರ ಇದ್ದು ತರಕಾರಿ ಮಾಡುವುದು ಹೇಗೆ ಅನ್ನುವವರಿಗೂ ಕೆಲ ಅವಕಾಶಗಳು ಇವೆ. ಆರ್ಸಿಸಿ ಮನೆಯಾದರೆ, ಅದರ ಮೇಲಿನ ಖಾಲಿ ಜಾಗದಲ್ಲಿ ಗೋಣಿ ಚೀಲ ಆಧಾರಿತ ಕೃಷಿಗೆ ಮನಸ್ಸು ಮಾಡಬಹುದು. ನಗರದಲ್ಲಿ ಅಂತಹ ಪ್ರಯೋಗ ಅನಿವಾರ್ಯವೂ ಹೌದು.ಈಗಾಗಲೇ ಹಲವರಿಗೆ ಪ್ರಯೋಗದಲ್ಲಿ ಯಶಸ್ಸು ಸಿಕ್ಕಿದೆ.
ಇಂತಹ ಹಲವು ಪ್ರಯತ್ನಗಳು ಮಳೆಗಾಲದಲ್ಲಿ ದಿನ ನಿತ್ಯದ ಖರ್ಚು ಕಡಿಮೆ ಮಾಡಲು, ಅದರೊಂದಿಗೆ ಒಂದಷ್ಟು ಆದಾಯ ಗಳಿಸಲು ಇರುವ ಅವಕಾಶ ಕೂಡ ಆಗಿದೆ. ಬೇಸಗೆ ಕಾಲದಲ್ಲಿ ಸುಡು ಮಣ್ಣು ತಯಾರಿಸಿದ ಸ್ಥಳದಲ್ಲಿಯೂ ತರಕಾರಿ ನಾಟಿ ಉತ್ತಮ. ಮಣ್ಣು ಫಲವತ್ತಾಗಿ, ಹೆಚ್ಚಿನ ಇಳುವರಿ ಸಿಗಬಹುದು. ಕೆಲವರು ಮಳೆಗಾಲದ ಕೃಷಿಗೆಂದೇ ಅಂತಹ ಗೊಬ್ಬರ ತಯಾರಿ ಮಾಡುತ್ತಾರೆ. ಜತೆಗೆ ರೋಗ ಬಾರದಂತೆ ನಿಗಾ ವಹಿಸಬೇಕು. ಸೂಕ್ತ ಔಷಧ ಸಿಂಪಡಿಸಬೇಕು.
ಆರೈಕೆಗೆ ಬೇಕು ಆದ್ಯತೆ
ಮನೆ ಅಂಗಳದ ತರಕಾರಿಗೆ ಎಕರೆಗಟ್ಟಲೆ ಜಾಗ ಬೇಕಿಲ್ಲ. ಗದ್ದೆಯೇ ಆಗಬೇಕು ಎಂದಿಲ್ಲ. ಕಣ್ಣಾಡಿಸುವಷ್ಟು ಖಾಲಿ ಜಾಗ ಇದ್ದರೆ ಸಾಕು. ವೈಜ್ಞಾನಿಕ ಪದ್ಧತಿ, ನಾಟಿ ವಿಧಾನ ನಿಯಮ ಅನುಸರಿಸಿಯೇ ತರಕಾರಿ ಮಾಡಬೇಕಿಲ್ಲ. ಒಂದಿಷ್ಟು ಜಾಗ ಕಂಡಲ್ಲಿ, ಬೀಜ ಬಿತ್ತಿದರೆ ಅದು
ಸೊಂಪಾಗಿ ಮೊಳಕೆಯೊಡೆಯುತ್ತದೆ. ಅಲ್ಲಿಂದ ಅನಂತರ ಆರೈಕೆ ಕಡೆ ಗಮನ ಹರಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ
ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…
Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್