ದಾನ ಇರಲಿ, ಆದರೆ ಬೇಡ ಪ್ರಚಾರದ ಖಯಾಲಿ 


Team Udayavani, Oct 28, 2018, 12:30 AM IST

1.jpg

ಕೆಲವು ಸಲ ಸಹಾಯ ಪಡೆದ ಅಪ್ಪ ಅಮ್ಮಂದಿರ ಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾದಾಗ ಅವರ ಮಕ್ಕಳು ಸಮಾಜದ ಕೊಂಕು ಮಾತುಗಳಿಗೆ ತುತ್ತಾಗುವುದುಂಟು. ಎಷ್ಟೋ ಸಲ ಅಸಹಾಯಕನೊಬ್ಬನಿಗೆ ಕೆಲವು ಸಾವಿರಗಳನ್ನು ಕೊಟ್ಟು ದೊಡ್ಡ ದಾನಿ ತಾನೆಂದು ಬಿಂಬಿಸಿಕೊಳ್ಳುವ ಭರದಲ್ಲಿ ಅದನ್ನು ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಿಸಿಕೊಳ್ಳುವ ಹುಚ್ಚುತನ ಹಲವರಲ್ಲಿದೆ. ಅಂತಹ ಸಹಾಯವನ್ನು ದಾನವೆನ್ನಲು ಸಾಧ್ಯವಿಲ್ಲ.

ಪರಸ್ಪರ ಸಹಕಾರ, ಸೌಹಾರ್ದತೆ, ಸಹಾಯ,ಅವಲಂಬನೆ, ತ್ಯಾಗ, ಪ್ರೀತಿ, ಸ್ನೇಹ ಎಲ್ಲವೂ ಒಂದು ಆರೋಗ್ಯ ಪೂರ್ಣ ಸಮಾಜದ ಲಕ್ಷಣಗಳು. ದಾನ ನೀಡುವುದು ಕೂಡಾ ಇದರಲ್ಲಿ ಪ್ರಮುಖವಾದುದು. ಸಾಮಾನ್ಯವಾಗಿ ಇರುವವರು ಇಲ್ಲದವರಿಗೆ ನೀಡುವಂತಹ ಯಾವುದೇ ರೀತಿಯ ವಸ್ತುಗಳಿರಲಿ ಹಣಕಾಸಿನ ಸಹಾಯವಿರಲಿ ಅದು ದಾನ ಎಂದು ಕರೆಯಲ್ಪಡುತ್ತದೆ. 

ಎಲ್ಲಾ ಧರ್ಮಗಳು ದಾನದ ಮಹತ್ವವನ್ನು ಸಾರಿ ಹೇಳುತ್ತವೆ. ಮಹಾಭಾರತದಲ್ಲಿನ ಕರ್ಣನ ಪಾತ್ರ ದಾನಕ್ಕೆ ಒಂದು ಅಪ್ರತಿಮ ಸಂಕೇತವಾಗಿ ಉಳಿಯುವಂಥದ್ದು.  ಮಹಾಭಾರತ ಯುದ್ಧದ ಬಳಿಕ ಜಯದ ಸಂಭ್ರಮದಲ್ಲಿದ್ದ ಪಾಂಡವರಿಗೆ ಕೃಷ್ಣನು ಪಾಂಡವರ ಜಯದ ಹಿಂದಿನ ಮುಖ್ಯ ಕಾರಣ ಕರ್ಣನ ದಾನವೇ ಆಗಿತ್ತು ಎಂದು ದಾನದ ಮಹತ್ವವನ್ನು ವಿವರಿಸುತ್ತಾನೆ. ಪ್ರತ್ಯುಪಕಾರವನ್ನು ಬಯಸದೆ ದೇಶ ಕಾಲ ಪಾತ್ರಗಳನ್ನರಿತು ಮಾಡುವ ಸಾತ್ವಿಕ ದಾನ ದಾನಗಳಲ್ಲಿ ಶ್ರೇಷ್ಠವಾದದ್ದು ಎಂದು ಕೃಷ್ಣ ಹೇಳುತ್ತಾನೆ. ಅನ್ನದಾನ ಮಾಡಿದರೆ ದಾರಿದ್ರé ನೀಗುತ್ತದೆ, ಅಕ್ಕಿ ದಾನ ಮಾಡಿದರೆ ಪಾಪ ಪರಿಹಾರವಾಗುತ್ತದೆ, ತುಪ್ಪ ದಾನ ಮಾಡಿದರೆ ರೋಗ ನಿವಾರಣೆಯಾಗುತ್ತದೆ ಎನ್ನುವಂತಹ ನಂಬಿಕೆಗಳೂ ಕೂಡ ಇವೆ. 

ದಾನ ಮಾಡಲು ಶ್ರೀಮಂತರೇ ಆಗಿರಬೇಕೆಂದಿಲ್ಲ. ಹಂಚಿ ತಿನ್ನುವುದೇ ದಾನ. ದಾನವು ತ್ಯಾಗದ ಒಂದು ರೂಪ. ದಾನ ಮಾಡುವುದು ದೈವೀಗುಣ. ಒಂದಿನಿತೂ ದಾನ ಮಾಡದೆ ಸಂಪತ್ತನ್ನು ಸಂಗ್ರಹಿಸಿ ಇಡುವುದು ಅಸುರೀ ಗುಣ ಎನಿಸುತ್ತದೆ. ದಾನವೆಂದರೆ ಬೇಕಾಬಿಟ್ಟಿ ಮಾಡುವಂಥದ್ದಲ್ಲ. ಅಥವಾ ನಮ್ಮಲ್ಲಿ ಇರುವಂತಹ ಅನುಪಯುಕ್ತ ವಸ್ತುಗಳನ್ನು ಹೇಗೂ ಬಿಸಾಡಬೇಕಲ್ಲ ಅವರಾದರೂ ಬಳಸಲಿ ಎಂದು ನೀಡುವಂಥದ್ದು ದಾನ ಎನಿಸುವುದಿಲ್ಲ. ಅಯೋಗ್ಯರಿಗೆ, ಅಪಾತ್ರರಿಗೆ ದಾನ ಮಾಡದೆ ಸತ್ಪಾತ್ರರಿಗೆ ದಾನ ಮಾಡಬೇಕು. ಇಲ್ಲವಾದಲ್ಲಿ ದಾನ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತದೆ. 

ದಾನ ಮಾಡುವಾಗಲೂ “ಇದಂ ನ ಮಮ’ ಅಂದರೆ ಇದು ತನಗೆ ಸೇರಿದ್ದಲ್ಲ ಎನ್ನುವಂತಹ ಭಾವನೆಯಿಂದಲೇ ದಾನ ಮಾಡಬೇಕು ಎನ್ನುತ್ತಾರೆ. ಮಾಡಬೇಕೋ ಬೇಡವೋ ಎನ್ನುವ ಅನುಮಾನದಿಂದ ದಾನ ಮಾಡದೆ ಸಂಪೂರ್ಣ ಮನಸ್ಸಿನಿಂದ ದಾನ ಮಾಡಬೇಕು. ದಾನ ಮಾಡಿದ್ದಕ್ಕೆ ಹೆಮ್ಮೆ ಪಡಬೇಕಿಲ್ಲ. ನೀಡುವುದನ್ನು ಗೌರವದಿಂದ ನೀಡಬೇಕು ಜೊತೆಯಲ್ಲಿ ದಾನ ಮಾಡುವಾಗ ಯಾವುದೇ ರೀತಿಯ ಪ್ರತಿಫ‌ಲವನ್ನು ಅಪೇಕ್ಷಿಸಬಾರದು. ಪ್ರಚಾರವನ್ನು ಕೂಡ ಬಯಸಬಾರದು.

 ಈ ದಿನಗಳಲ್ಲಿ ಕಷ್ಟದಲ್ಲಿದ್ದವರಿಗೆ ಉಪಕಾರ ಮಾಡಿದ ಬಗೆಗೆ ದಾನ ನೀಡಿದ ಬಗೆಗೆ ಮಾಹಿತಿಯ ಜೊತೆಗೆ ದಾನ ಅಥವಾ ಸಹಾಯಧನ ನೀಡುತ್ತಿರುವ ತಮ್ಮ ಫೋಟೋಗಳನ್ನು ಪತ್ರಿಕೆಗಳಲ್ಲಿ ಹಾಕಿಕೊಳ್ಳುವುದು ಮಾಮೂಲಿ ಎನ್ನುವಂತಾಗಿಬಿಟ್ಟಿದೆ. ಕೆಲವೊಂದು ಸಂದರ್ಭದಲ್ಲಿ ಅದು ತಪ್ಪೇನಲ್ಲ. ಕೆಲವೊಮ್ಮೆ ಕಾನೂನಿನ ಪರಿಧಿಯಲ್ಲೂ ಅದು ಅವಶ್ಯಕವಾಗಿರಬಹುದು. ಆದರೆ ತೀರಾ ವೈಯಕ್ತಿಕವಾಗಿ ಬಡತನದಲ್ಲಿರುವವರಿಗೆ ಅನಾರೋಗ್ಯ ಪೀಡಿತರಿಗೆ, ಅಂಗವಿಕಲರಿಗೆ ಸಹಾಯವನ್ನು ನೀಡುವಾಗ ಅವರ ಜೊತೆಗೆ ನಿಂತು ಫೋಟೋಗಳನ್ನು ತೆಗೆಸಿಕೊಂಡು ಅದನ್ನು ಪತ್ರಿಕೆಗಳಲ್ಲಿ ಅಥವಾ ಇನ್ನಿತರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿಕೊಳ್ಳುವುದು ಕೆಲವರಿಗೆ ಒಂದು ರೀತಿಯ ಖಯಾಲಿ ಎನ್ನುವಂತಾಗಿಬಿಟ್ಟಿದೆ. ಇಂತಹ ನಿಲುವುಗಳು ಖಂಡಿತಾ ಸರಿಯಲ್ಲ. 

 ಇಂತಹ ಫೋಟೋಗಳು ಪ್ರಕಟವಾದಾಗ ಒಂದರ್ಥದಲ್ಲಿ ಅವು ಅವರ ಹೀನ ಸ್ಥಿತಿಯನ್ನು ಅವಮಾನಿಸುವಂತಿರುತ್ತವೆ. ಅಂತಹ ಚಿತ್ರಗಳು ಕೆಲವೊಮ್ಮೆ ಸಹಾಯ ಪಡೆದವರ ಕೀಳರಿಮೆಗೂ ಕಾರಣವಾಗಬಲ್ಲವು. ನಿಮ್ಮ ಫೋಟೋ ಬಂದಿದೆಯಲ್ಲಾ ಮರಾಯೆ ಅಂತ ಸುತ್ತಲಿನವರು ತಿಳಿಸಿದಾಗ ಬಹಳಷ್ಟು ಸಲ ಅದು ಒಂದು ರೀತಿಯ ಮುಜುಗರವನ್ನುಂಟು ಮಾಡಿ ಸಹಾಯ ಪಡೆದವರು ತಲೆತಗ್ಗಿಸುವಂತೆ ಮಾಡುತ್ತದೆ. ಕೆಲವು ಸಲ ಸಹಾಯ ಪಡೆದ ಅಪ್ಪ ಅಮ್ಮಂದಿರ ಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾದಾಗ ಅವರ ಮಕ್ಕಳು ಸಮಾಜದ ಕೊಂಕು ಮಾತುಗಳಿಗೆ ತುತ್ತಾಗುವುದುಂಟು. ಎಷ್ಟೋ ಸಲ ಅಸಹಾಯಕನೊಬ್ಬನಿಗೆ ಕೆಲವು ಸಾವಿರಗಳನ್ನು ಕೊಟ್ಟು ದೊಡ್ಡ ದಾನಿ ತಾನೆಂದು ಬಿಂಬಿಸಿಕೊಳ್ಳುವ ಭರದಲ್ಲಿ ಅದನ್ನು ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಿಸಿಕೊಳ್ಳುವ ಹುಚ್ಚುತನ ಹಲವರಲ್ಲಿದೆ. ಅಂತಹ ಸಹಾಯವನ್ನು ದಾನವೆನ್ನಲು ಸಾಧ್ಯವಿಲ್ಲ. 

ಇತ್ತೀಚೆಗೆ ನಾಲ್ಕು ಜನ ಕೇವಲ ಎರಡು ಬಾಳೆಹಣ್ಣನ್ನು ಮಂಚದ ಮೇಲೆ ಕುಳಿತಿರುವ ರೋಗಿಯೊಬ್ಬನಿಗೆ ನೀಡುತ್ತಿರುವ ಚಿತ್ರ ಜಾಲತಾಣಗಳಲ್ಲಿ ಬಹಳ ವೈರಲ್‌ ಆಗಿತ್ತು. ಇಂತಹ ಸಣ್ಣ ಪುಟ್ಟ ದಾನ ಮಾಡಿದ್ದನ್ನೆಲ್ಲಾ ಪೇಪರ್‌ಗಳಲ್ಲಿ ಹಾಕಲು ಹೊರಟರೆ ದಿನಪತ್ರಿಕೆಗಳ ಬದಲಿಗೆ ದಿನಪುಸ್ತಕಗಳನ್ನೇ ಮುದ್ರಿಸಬೇಕಾದೀತು. 

ಒಟ್ಟಿನಲ್ಲಿ ಒಂದು ವಿಚಾರವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಬೇರೆಯವರಿಗೆ ಮಾಡುವ ಸಹಾಯ ಅವರನ್ನು ಬೇರಾವುದೇ ರೀತಿಯಲ್ಲಿ ಘಾಸಿಗೊಳಿಸುವಂತಿ ರಬಾರದು. ಅವರ ವ್ಯಕ್ತಿತ್ವವನ್ನು ಗೌರವವನ್ನು ಕುಂದಿಸ ಬಾರದು. ದಾನ ಮಾಡಿದ್ದನ್ನು ನಾಲ್ಕು ಜನರಿಗೆ ತಿಳಿಸುವು ದಕ್ಕಿಂತ ನಾವು ಹೊಂದುವ ಆತ್ಮತೃಪ್ತಿ ದೊಡ್ಡದು. ಅಂತಹ ಮನೋಭಾವ ನಮ್ಮಲ್ಲಿ ಒಡಮೂಡಬೇಕು. ಪರೋಪ ಕಾರಾರ್ಥಂ ಇದಂ ಶರೀರಂ ಎನ್ನುವ ಮಾತಿಗನುಗುಣವಾಗಿ ಬದುಕಿರುವಷ್ಟು ದಿನ ನಮ್ಮಿಂದ ಸಾಧ್ಯವಾದಷ್ಟು ಸಹಾಯವನ್ನು ಯಾವುದೇ ಪ್ರತಿಫ‌ಲಾಪೇಕ್ಷೆಯಿಲ್ಲದೆ ಅರ್ಹರಿಗೆ ಮಾಡಿ ಆ ಮೂಲಕ ಅವರ ಮನೆ ಮನಗಳಲ್ಲಿ ಕೊಂಚವಾದರೂ ಬೆಳಕನ್ನು ಮೂಡಿಸಿದರೆ ಅದು ಜಗತ್ತಿನ ಶ್ರೇಷ್ಠ ದಾನ ಎನ್ನಿಸಿಕೊಳ್ಳುತ್ತದೆ.

ನರೇಂದ್ರ ಎಸ್‌. ಗಂಗೊಳ್ಳಿ 

ಟಾಪ್ ನ್ಯೂಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.