ವರುಷಕೊಂದು ಹೊಸ ಜನ್ಮ, ಹರುಷಕೊಂದು ಹೊಸ ನೆಲೆ..

ಕನ್ನಡದ ಕವಿಗಳು ಕಂಡ ವಸಂತೋತ್ಸವ

Team Udayavani, Apr 3, 2022, 12:33 PM IST

6

ವಸಂತ ಬಂದ, ಋತುಗಳ ರಾಜ ತಾ ಬಂದ ಚಿಗುರನು ತಂದ, ಪೆಣ್ಗಳ ಕುಣಿಸುತ ನಿಂದ ಚಳಿಯನು ಕೊಂದ, ಹಕ್ಕಿಗಳುಲಿಗಳ ಚಂದ, ಕೂವು ಜಗ್‌ ಜಗ್‌ ಪುವ್ವೀ ಟೂವಿಟ್ಟುವೂ | ಮಾವಿನ ಸೊಂಪು, ಮಲ್ಲಿಗೆ ಬಯಲೆಲ್ಲ ಕಂಪು, ಗಾಳಿಯ ತಂಪು, ಜನಗಲ ಜಾತ್ರೆಯ ಕಂಪು ಕಿವಿಗಳಿಗಿಂಪು, ಹಕ್ಕಿಗಳುಲುಹಿನ ಪೆಂಪು, ಕೂವು ಜಗ್‌ ಜಗ್‌ ಪುವ್ವೀ ಟೂವಿಟ್ಟುವೂ |

ಶಾಲಾ ಪಠ್ಯದ ಭಾಗವಾಗಿದ್ದ ಈ ಪದ್ಯ ಬಾಲ್ಯದ ದಿನಗಳನ್ನು ನೆನಪಿಸುತ್ತದೆ. ಗೆಳೆಯರು, ಅಕ್ಕ- ತಂಗಿ, ಅಣ್ಣ- ತಮ್ಮಂದಿರೊಂದಿಗೆ ಚೈತ್ರದ ತಿಳಿಗಾಳಿಯಲ್ಲಿ ಮಾವಿನ ಚಿಗುರಿನ ಸುವಾಸನೆಯನ್ನು ಸವಿಯುತ್ತ ಆಟದ ಮೈದಾನ, ಮನೆಯ ಅಂಗಳ, ಹಿತ್ತಲು, ತೋಟಗಳಲ್ಲಿ ಈ ಹಾಡು ಹಾಡಿಕೊಂಡು ಆಡಿದ ಆ ದಿನಗಳು ನೆನಪಿನಂಗಳದಲ್ಲಿ ಮತ್ತೆ ಚಿಗುರೊಡೆಯುತ್ತವೆ. ಚೈತ್ರ ತರುವ ಸಂಭ್ರಮವೇ ಹಾಗಿದೆ. ಕಣ್ಣ ಹಾಯಿಸಿದಲ್ಲೆಲ್ಲ ಹೊಸತನ ಕಂಡುಬರುತ್ತದೆ. ಆಂಗ್ಲ ಕವಿ ಥಾಮಸ್‌ ನಾಶ್‌ ಬರೆದಿರುವ “ಸ್ಪ್ರಿಂಗ್‌’ ಎಂಬ ಕವನವನ್ನು ಬಿ.ಎಂ. ಶ್ರೀಕಂಠಯ್ಯ ಅವರು ಕನ್ನಡಕ್ಕೆ ಅನುವಾದಿಸಿದ್ದು ಹೀಗೆ. ಕೊನೆಯಲ್ಲಿ ಬಂದ ವಸಂತ – ನಮ್ಮ ರಾಜ ವಸಂತ! ಎನ್ನುತ್ತಾರೆ. ಪ್ರತಿವರ್ಷ ವಸಂತದಲ್ಲಿ ಮೊದಲಿಗೆ ನೆನಪಿನಲ್ಲಿ ಸುಳಿಯುವ ಪದ್ಯವಿದು.

ನ್ಯೂಜೆರ್ಸಿಯಲ್ಲಿ ನವೆಂಬರ್‌ನಿಂದ ಮಾರ್ಚ್‌ ತಿಂಗಳವರೆಗೆ ಸುದೀರ್ಘ‌ ಚಳಿಗಾಲ. ಪ್ರತಿಯೊಂದು ತಿಂಗಳಲ್ಲೂ ಬೇರೆ-ಬೇರೆ ತೆರನಾದ ಅನುಭವಗಳನ್ನು ನೀಡುತ್ತದೆ. ಮುಂಬರುವ ಚಳಿಗಾಲಕ್ಕೆ ಸೆಪ್ಟೆಂಬರ್‌- ಅಕ್ಟೋಬರ್‌ ತಿಂಗಳುಗಳಲ್ಲಿ ತಮ್ಮನ್ನು ಸಜ್ಜುಗೊಳ್ಳುವ ಮರ-ಗಿಡಗಳಂತೆ, ಚಳಿಗಾಲದ ವಿವಿಧ ಹಂತಗಳನ್ನು ಎದುರಿಸಲು ನಮ್ಮ ತಯಾರಿಯೂ ನಡೆದಿರುತ್ತದೆ. ಆದರೆ ಚಳಿಯ ವಾತಾವರಣ ಏರಿಳಿತಗಳನ್ನು, ವೈಪರೀತ್ಯಗಳನ್ನು ಎದುರಿಸುತ್ತ ಹೋಗುವಾಗ ಮೈಮನಗಳಲ್ಲಿ ಅದೇನೋ ಜಡತನ, ನಿರಾಸೆ ಮೂಡಿದಂತಾಗಿ ನಮಗೆ ನಾವೇ ಈ ಚಳಿಗಾಲ ಯಾವಾಗ ಮುಗಿಯುವುದೋ, ವಸಂತನ ಆಗಮನ ಯಾವಾಗ ಆಗುವುದೋ ಎಂದು ಪ್ರಶ್ನಿಸಿಕೊಳ್ಳುವಂತಾಗುತ್ತದೆ. ಪ್ರಕೃತಿಯಲ್ಲಿನ ಎಲ್ಲ ಜೀವರಾಶಿಗಳೂ ತಮ್ಮದಾಗಿಸಿಕೊಳ್ಳುವ ಚಳಿಗಾಲದ ಅನುಭವವನ್ನು ಮತ್ತು ಆ ಎಲ್ಲ ಜೀವರಾಶಿಗಳಲ್ಲಿ ವಸಂತಾಗಮನದಿಂದ ಕಂಡುಬರುವ ಬದಲಾವಣೆಯನ್ನು ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪ ಅವರು ತಮ್ಮ “ವಸಂತ ಮೂಡುವುದೆಂದಿಗೆ?’ ಎಂಬ ಕವನದಲ್ಲಿ ಅರ್ಥಪೂರ್ಣವಾಗಿ ಪ್ರಶ್ನಿಸುತ್ತಾರೆ.

ಬತ್ತಿದೆದೆಗೆ ಹೊಸ ಆಸೆಯ ಹೊತ್ತಿಸಿ, ಕೊಂಬೆ ಕೊಂಬೆಯಲಿ ನಂಬಿಕೆಯುಕ್ಕಿಸಿ ಜಡತನದಲಿ ಚೈತನ್ಯವ ಚಿಗುರಿಸಿ ವಸಂತಮೂಡುವುದೆಂದಿಗೆ? ದಿಕ್ಕು ತಪ್ಪಿಸುವ ಕತ್ತಲೆಗಳಲಿ ನಂದಿದಾಸೆಗಳ ಕೋಟಿ ಕಣ್ಗಳಲಿ, ಬೆಳಗಿನ, ನಲವಿನ, ಗೆಲುವಿನ ಭಾವದ ವಸಂತ ಮೂಡುವುದೆಂದಿಗೆ?

ಜಿ.ಎಸ್‌.ಎಸ್‌. ಅವರು “ವಸಂತ ಋತು’ವಿನ ಬಗ್ಗೆ ಹಲವಾರು ಕವನಗಳನ್ನು ಬರೆದಿದ್ದಾರೆ. “ಚೈತ್ರದ ಚುಟುಕು’ ಕವನದ ಸಾಲುಗಳಂತೂ ಬಹಳ ಸುಂದರ.

ಖಳದುಶ್ಯಾಸನ ಹೇಮಂತ ಮರ- ಮರಗಳ ಹಸುರುಡೆಯ ಸೆಳೆದು ಹಾಕಿ ನಗ್ನಗೊಳಿಸಿ ಅವಮಾನ ಮಾಡಿದ, ಇಗೋ ಬಂದ ಋತು ವಸಂತ ಕೊಳಲೂದುತ ಎಲ್ಲೋ ನಿಂತು ಮರ ಮರಗಳ ಮೈಯ ತುಂಬ ಹೊಸ ಚಿಗುರನು ಉಡಿಸಿದ.. ಕವಿ “ವಸಂತ ಋತು’ವಿನ ಬಗ್ಗೆ ಪ್ರತಿಯೊಂದು ಕವನದಲ್ಲಿ ವೈವಿಧ್ಯಮಯವಾಗಿ ವರ್ಣಿಸಿದ್ದಾರೆ.

ಋತು ವಸಂತ ಬಂದನಿದೋ ಉಲ್ಲಾಸವ ತಂದನಿದೋ, ಮಬ್ಬು ಕವಿದ ಮೌನಗಳಲಿ ಹೊಸದನಿಗಳ ಹೊಮ್ಮಿಸಿ ಉದುರಿದೆಲೆಯ ಕೊಂಬೆಗಳಲಿ, ಬಣ್ಣದ ಹೊಳೆ ಹರಿಯಿಸಿ, ಬತ್ತಿದೆದೆಗೆ ಭರವಸೆಗಳ ಹೊಸಬಾವುಟವೇರಿಸಿ, ಹಳೆಗಾಡಿಗೆ ಹೊಸಕುದುರೆಯ ಹೊಸಗಾಲಿಯ ಜೋಡಿಸಿ..

ಹೀಗೆ ನವೋಲ್ಲಾಸ ತರುವ ವಸಂತ ಋತುವಿನ ಬಗ್ಗೆ ಬರೆಯುವ ಕವಿ, ಚೈತ್ರ ಅನ್ನುವುದು ಕೇವಲ ಋತುವಲ್ಲ, ಅದು ಸೃಜನಶೀಲತೆಯ ಸಂಕೇತ. ಬದುಕಿಗೆ ಅಗತ್ಯವಾದ ಚಲನಶೀಲತೆಯನ್ನು ಪ್ರಕೃತಿ ಕಾಯ್ದುಕೊಂಡು ಬರುತ್ತಿದೆ. ಇದುವೇ ನಿಜವಾದ ಸೃಜನಶೀಲತೆಯ ಲಕ್ಷಣ ಎನ್ನುತ್ತಾರೆ.

ಚೈತ್ರ ಮಾಸದ ಮೊದಲ ದಿನದಂದು ಆಚರಿಸಲ್ಪಡುವ “ಯುಗಾದಿ’ ಹಬ್ಬವೂ ಹೊಸ ಆರಂಭವೆನ್ನುವ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಪ್ರೊ| ಎಂ.ವಿ. ಸೀತಾರಮಯ್ಯ ಅವರು ತಮ್ಮ “ಚೈತ್ರಾರಂಭದ ಈ ದಿನ’ ಎನ್ನುವ ಕವನದಲ್ಲಿ..

ನೋವೋ ನಲಿವೋ ಸೋಲೋ ಗೆಲುವೋ ಎರಡಕು ಸಮಬೆಲೆ ಎನುವ ದಿನ; ಬೇವು ಬೆಲ್ಲ ಬೆಳದಿಂಗಳು ಬಿಸಿಲು ಎರಡು ಸಮ ಸೇವಿಸುವ ದಿನ.. ಜೀವನದ ನೋವು-ನಲಿವುಗಳನ್ನು ಸಮನಾಗಿ ತೂಗಿ ನೋಡಿ, ಎರಡಕ್ಕೂ ಸಮನಾದ ಬೆಲೆ ಕೊಡಬೇಕೆಂಬ ಮಾತನ್ನು ಸರಳವಾಗಿ, ಸುಂದರವಾಗಿ ಇಲ್ಲಿ ಹೇಳುತ್ತಾರೆ ಕವಿ. ಡಾ| ಎನ್‌.ಎಸ್‌. ಲಕ್ಷ್ಮೀ ನಾರಾಯಣ ಭಟ್ಟರು ತಮ್ಮ ಕವನದಲ್ಲಿ “ಹೊಸ ವರ್ಷ ಬಂದಂತೆ ಯಾರು ಬಂದಾರು?’ ಕವನದಲ್ಲಿ ಗಿಡ ಮರಕೆ ಹೊಸ ವಸ್ತ್ರ ಯಾರು ತಂದಾರು? ಹಾಡೆಂದು ಕೋಗಿಲೆಯ ಕೂಗಿ ಕರೆದಾರು? ಮಾವಿನಾ ಚಿಗುರನ್ನು ತಿನಲು ಕೊಟ್ಟಾರು? ಎಂದು ಪ್ರಶ್ನಿಸುತ್ತಾ ಕವನವನ್ನು ಮುಂದುವರೆಸುತ್ತಾರೆ.

ಹೊಸ ವರ್ಷ ಬಂದಂತೆ ಯಾರು ಬಂದಾರು ಏನೋ ನಿರೀಕ್ಷೆ ಸೃಷ್ಟಿಯಲೆಲ್ಲ ಹೂಗಳ ಪರೀಕ್ಷೆ ದುಂಬಿಗಳಿಗೆಲ್ಲ ಬಂದನೊ ವಸಂತ ಬಂದಿಗಳೆ ಎಲ್ಲ! ಹೊಸ ಬಯಕೆ, ಹೊಸ ಆಲೆ ರುಚಿರುಚಿಯ ಬೆಲ್ಲ… ಮನುಷ್ಯನೆಂದರೆ ಹಿಡಿ-ಹಿಡಿ ನೆನಪುಗಳು ಎನ್ನುವಂತೆ ನೆನಪುಗಳಿಂದಲೇ ರೂಪುಗೊಳ್ಳುವ ಜೀವನ ಕಾಣುವ ಕನಸುಗಳನ್ನು, ಅವುಗಳ ಮಹತ್ವವನ್ನು ಅರ್ಥಪೂರ್ಣವಾಗಿ ಕವನದ ಸಾಲುಗಳನ್ನಾಗಿಸಿದ್ದಾರೆ.

ನೆನಪುಗಳ ಜೋಲಿಯಲಿ ತೂಗುವುದು ಮನಸು ಕಟ್ಟುವುದು ಮಾಲೆಯಲಿ ಹೊಸ ಹೊಸ ಕನಸು ನನಸಾಗದಿದ್ದರೂ ಕನಸಿಗಿದೆ ಘನತೆ ತೈಲ ಯಾವುದೆ ಇರಲಿ ಉರಿಯುವುದು ಹಣತೆ ಕವಿ ಸುಮತೀಂದ್ರ ನಾಡಿಗ್‌ ಅವರು ತಮ್ಮ “ಯುಗಾದಿ’ ಕವನದಲ್ಲಿ ಹೇಗೊ ಏನೊ ಕಳೆಯಿತು ಹಿಂದಿನೊಂದು ಯುಗ! ಹಳೆಯದೆಲ್ಲ ಸುಟ್ಟುರಿಯಲಿ ಬೆಂಕಿಹಚ್ಚಿ ಧಗಧಗ ಎಂದು ಪ್ರಾರಂಭಿಸಿ ಅನಂತರದ ಸಾಲುಗಳಲ್ಲಿ ಹಬ್ಬದ ತಯಾರಿಯ ಕುರಿತು ಬರೆಯುತ್ತಾರೆ. ಡಾ| ಸಿದ್ಧಲಿಂಗಯ್ಯ ಅವರು ಯುಗಾದಿಯ ಶೀರ್ಷಿಕೆಯಡಿಯಲ್ಲಿ ಐದು ಕವನಗಳನ್ನು ಬರೆದಿದ್ದಾರೆ. ಎಲ್ಲ ಕವನಗಳ ವಿಷಯ ಯುಗಾದಿಯಾದರೂ, ಪ್ರತಿ ಕವನಗಳಲ್ಲಿನ ಭಾವ ಬೇರೆ, ಬೇರೆಯಾಗಿದೆ. ಯುಗಾದಿ-1 ಕವನದ ಸಾಲುಗಳು ಹೀಗಿವೆ.

ಬೇವು ಬೆಲ್ಲದ ಅದೇ ಹಳೆಯ ಪಾಠ ಸ್ವಂತದ್ದೋ ಸಾಲದ್ದೋ ಒಬ್ಬಟ್ಟಿನೂಟ ಬದುಕೇ ಇಲ್ಲದ ಅನಾದಿಯ ಲೆಕ್ಕಕ್ಕೆ ನೀನೊಂದು ಶಬ್ದ ಮಾತ್ರ.

ಹಗಲಿರುಳು ಉರುಳಿ ಹೋಗಿ ವರ್ಷ, ವರ್ಷವೂ ಬರುವ ಯುಗಾದಿ ಬರೀ ಶಬ್ದವೇ? ಆಲೋಚಿಸುವಂತೆ ಮಾಡುತ್ತದೆ ಕವನದ ಈ ಸಾಲು. ಯುಗಾದಿ-2 ಕವನದಲ್ಲಿ ಯುಗಾದಿ ಎನ್ನುವುದು ಹಲವರಿಗೆ ಬರೀ ಶಬ್ದ ಮಾತ್ರ ಎನ್ನುವ ಕವಿಯ ಮಾತನ್ನು ಮನಸ್ಸು ಒಪ್ಪಿಕೊಳ್ಳುವಂತೆ ಮಾಡುತ್ತದೆ.

ಉಳ್ಳವರಿಗೆ ಹಬ್ಬವಾಯ್ತು ಕವಿಕುಲಕ್ಕೆ ಕಬ್ಬವಾಯ್ತು ಇಲ್ಲದವರಿಗೇನಾಯಿತು ಹೇಳೆ ಯುಗಾದಿ.. ಕವಿ ಚೆನ್ನವೀರ ಕಣವಿ ತಮ್ಮ “ಯುಗಾದಿ’ ಕವನದಲ್ಲಿ ಯುಗಾದಿಯನ್ನು “ಹಿರಿಯ’ನೆಂದು ಕರೆದು ಅವನೊಂದಿಗೆ ಮಾತುಕತೆ ನಡೆಸುವ ರೀತಿಯಂತೂ ವಿಶಿಷ್ಟವಾಗಿದೆ.

ಕರೆಯದಿದ್ದರೂ ನಾವು, ನೀನು ಬಂದೇ ಬರುವಿ ಅಲ್ಲವೆ? ಬಾ ಮತ್ತೆ, ಬಾ ಯುಗಾದಿ; ಎಂಥ ಬಿಸಿಲೊಳು ಬಂದೆ! ಬೇಕೆ ಬಾಯಾರಿಕೆಗೆ ಬೇವು ಬೆಲ್ಲ? ಹೀಗೆ ಯುಗಾದಿ ಎಂಬ “ಹಿರಿಯ’ನನ್ನು ಮಾತಿಗೆಳೆಯುತ್ತಾರೆ ಕವಿ. ಕವನವನ್ನು ಮುಂದುವರೆಸುತ್ತ ತಮ್ಮ ಮಾತುಕತೆಯನ್ನೂ ಮುಂದುವರಿಸುತ್ತ ಹೋಗುವ ಕವಿ, ಜಗದ ನಿಜಸ್ಥಿತಿಯ ಬಗ್ಗೆ ಆ ಹಿರಿಯನಲ್ಲಿ ಹೇಳಿಕೊಳ್ಳುತ್ತಾರೆ. ನಶ್ವರ ಬದುಕಿನ ಚಿಂತನೆಯನ್ನು ಆತನಲ್ಲಿ ಮಾತನಾಡುತ್ತಾರೆ.

ವರುಷಗಟ್ಟಲೆ ಎತ್ತಲೋ ಕಣ್ಮರೆಯಾಗಿ ಹೋಗುವ ನಿನಗೆ ಹೇಗೆ ಗೊತ್ತು- ಇಲ್ಲಿ, ಒಳಗೊಳಗೆ ನಡೆಯುತ್ತಿರುವ ಮಸಲತ್ತು, ನಿಮಿಷ ನಿಮಿಷಕ್ಕೆ ಹೊಸ ಹೊಸ ವೇಷಧರಿಸಿ ಓಡುವ ಜಗತ್ತು. ಹಾಗೆ ನೋಡಿದರೆ, ನಮಗಿಲ್ಲಿ ಏನಿದೆ ಹೇಳು ವಿಶೇಷ ಸವಲತ್ತು? ಇಂದೊ ನಾಳೆಯೊ ವಲಸೆ ಹೋಗುವರು ನಮ್ಮ ಜನ ಚಂದ್ರ ತಾರಾಲೋಕ ಹುಡುಕಿಕೊಂಡು ಬಹುಶಃ ಕವಿಗಳನ್ನೂ ಜತೆಗೆ ಕರೆದುಕೊಂಡು.

ಈ ಕವನದ ಸಾಲುಗಳಲ್ಲಿ ಯುಗಾದಿಯನ್ನು ಕವಿ ನೋಡುವ ನೋಟ ಅದೆಷ್ಟು ವಿಭಿನ್ನ ಎನಿಸುತ್ತದೆ. ಯುಗಾದಿಯ ಬಗ್ಗೆ ಹತ್ತಾರು ಕವನಗಳನ್ನು ಓದಿ, ನೂರಾರು ಭಾವಗಳನ್ನು ತಿಳಿದುಕೊಳ್ಳುವಂತಾದಾಗ, ನಾವೆಲ್ಲ ಬಾಲ್ಯದಿಂದ ಹಾಡಿಕೊಂಡು ಬಂದಿರುವ ವರಕವಿ ದ.ರಾ. ಬೇಂದ್ರೆ ಅವರ “ಯುಗಾದಿ’ ಕವನದ ಸಾಲುಗಳು ಕವಿ ಕೇಳುವ ಪ್ರಶ್ನೆಯನ್ನು ನಮ್ಮ ಮನಸ್ಸಿನಲ್ಲೂ ಮೂಡಿಸುತ್ತವೆ.

ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖೀಲ ಜೀವಜಾತಕೆ! ಒಂದೆ ಒಂದು ಜನ್ಮದಲ್ಲಿ ಒಂದೇ ಬಾಲ್ಯ ಒಂದೇ ಹರೆಯ ನಮಗದಷ್ಟೆ ಏತಕೆ? .. ಈ ಕವನಗಳನ್ನು ಮೆಲುಕು ಹಾಕುವಂತೆ ಮಾಡುತ್ತದೆ.

-ಅಹೀಶ್‌ ಭಾರದ್ವಾಜ, ನ್ಯೂಜೆರ್ಸಿ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.