ಪುರಿ ಬಳಿ ಕೋನಾರ್ಕ್‌ ದೇಗುಲದ ಪ್ರತಿಸೃಷ್ಟಿ 


Team Udayavani, Aug 24, 2021, 6:20 AM IST

Untitled-2

ಒಡಿಶಾದ 23 ವರ್ಷದ ಯುವಕ ಸ್ಮಿತೇಶ್‌ ಮೊಹಾಪಾತ್ರ ಎಂಬ ಶಿಲ್ಪಿ, ಶಿಥಿಲಾವಸ್ಥೆಯಲ್ಲಿರುವ 800 ವರ್ಷಗಳಷ್ಟು ಹಳೆಯದಾದ ಕೋನಾರ್ಕ್‌ ಸೂರ್ಯ ದೇಗುಲದ ಪ್ರತಿಸೃಷ್ಟಿಯಲ್ಲಿ ತೊಡಗಿದ್ದಾನೆ. ಇದರ ಹಿಂದಿನ ಪ್ರೇರಣೆ ಯಾರು, ಎಲ್ಲಿ  ಇದರ ನಿರ್ಮಾಣ ನಡೆಯುತ್ತಿದೆ; ಅದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಅಜ್ಜನ ಕನಸಿಗೆ ಮೊಮ್ಮಗನ ಆಸರೆ  :

ಸ್ಮಿತೇಶ್‌ ಅಜ್ಜ ರಘುನಾಥ್‌ ಮೊಹಾಪಾತ್ರ ದೇಶದ ಹೆಸರಾಂತ ಶಿಲ್ಪಿ. ರಾಜ್ಯಸಭಾ ಸದಸ್ಯರೂ ಆಗಿದ್ದ ಅವರ ಶಿಲ್ಪ ಕೌಶಲ್ಯಕ್ಕೆ, ಸಂಸತ್ತಿನ ಸೆಂಟ್ರಲ್‌ ಹಾಲ್‌ನ ಸೂರ್ಯ ದೇವರ ವಿಗ್ರಹ, ರಾಜೀವ್‌ ಗಾಂಧಿ ಸಮಾಧಿಯ “ರಾಜೀವ ಲೋಚನ’ವೇ ಸಾಕ್ಷಿ. 2013ರಲ್ಲಿ ಕೋನಾರ್ಕ್‌ ದೇಗುಲದ ದುಃಸ್ಥಿತಿಯನ್ನು ನೋಡಿ ಮರುಗಿದ್ದ ಅವರು, ಅದರ ಮರು ನಿರ್ಮಾಣ ಮಾಡಬೇಕೆಂದೆಣಿಸಿ, ಪುರಿ ಪುಣ್ಯಕ್ಷೇತ್ರದ ಬಳಿ 100 ಎಕರೆ ಭೂಮಿ ಖರೀದಿಸಿ, ಶಂಕುಸ್ಥಾಪನೆ ನೆರವೇರಿಸಿದ್ದರು. ಇದೇ ವರ್ಷ ಮೇ ತಿಂಗಳಲ್ಲಿ ಕೊರೊನಾಕ್ಕೆ ಬಲಿಯಾದರು. ಅವರ ಆಸೆಯನ್ನು ಮೊಮ್ಮಗ ಈಡೇರಿಸಲು ಮುಂದಾಗಿದ್ದಾನೆ.

ಅಂದಾಜು ವೆಚ್ಚವೆಷ್ಟು?  :

2017ರಲ್ಲಿ ಲೆಕ್ಕ ಹಾಕಿದಂತೆ 300 ಕೋಟಿ ರೂ. ಅವಶ್ಯಕತೆಯಿತ್ತು. ಆದರೆ, ಸರಿದ ಕಾಲದ ಜತೆಗೆ ವೆಚ್ಚ ವೂ ಅಧಿಕವಾಗುವ ಸಾಧ್ಯತೆ ಯಿದೆ. ವಿಶ್ವದ ನಾನಾ ಭಾಗಗಳಿಂದ ಕೆಲವು ದಾನಿಗಳು ಉದಾರ ದಾನ ನೀಡುತ್ತಿ ದ್ದಾರೆಂದು ಸ್ಮಿತೇಶ್‌ ತಿಳಿಸಿದ್ದಾರೆ.

ಎಲ್ಲಿದೆ ದೇಗುಲ?  :

ಒಡಿಶಾದ ಪುರಿ ಕ್ಷೇತ್ರ ಹಾಗೂ ಸಖೀಗೋಪಾಲ್‌ ಊರಿನ ನಡುವೆ ಈ ಹೊಸ ದೇಗುಲ ನಿರ್ಮಾಣವಾಗುತ್ತಿದೆ. ಕೋನಾರ್ಕ್‌ ದೇಗುಲದಿಂದ 30 ಕಿ.ಮೀ. ದೂರವಿರುವ ಇದರ ಹೆಸರು “ಆದಿತ್ಯ ನಾರಾಯಣ ದೇವಸ್ಥಾನ’.

ಅದೇ ಮಾದರಿಯಲ್ಲಿ ನಿರ್ಮಾಣ: ಕೋನಾರ್ಕ್‌ ದೇಗುಲವನ್ನು ನಿರ್ಮಿಸಲಾ ಗಿರುವ ವಾಸ್ತುಶಿಲ್ಪದ ಮಾದರಿ ಯಲ್ಲೇ ಅದರ ಪ್ರತಿಕೃತಿಯನ್ನೂ ನಿರ್ಮಿಸಲಾಗುತ್ತಿದೆ.  ಮೂಲ ದೇಗುಲದಲ್ಲಿ ಬಳಸಲಾಗಿರುವ ಮರಳುಗಲ್ಲು ಹಾಗೂ ಕಪ್ಪು ಗ್ರಾನೈಟ್‌ ಕಲ್ಲನ್ನೇ ಇಲ್ಲೂ ಬಳಸಲಾಗಿದ್ದು ಈಗಾಗಲೇ ದೇಗುಲದ ಪಾರ್ಶ್ವ ಗೋಡೆಗಳು, ಎರಡು ದೈತ್ಯ ಚಕ್ರ ನಿರ್ಮಾಣವಾಗಿವೆ.

800 ವರ್ಷ: ಹಳೆಯದು ಈಗಿರುವ ಕೋನಾರ್ಕ್‌ ದೇಗುಲ

1,200 : ನಿರ್ಮಾಣದಲ್ಲಿ ತೊಡಗಿದ್ದ ಶಿಲ್ಪಿಗಳ ಸಂಖ್ಯೆ

12 ವರ್ಷಗಳು : ದೇಗುಲ ನಿರ್ಮಾಣಕ್ಕೆ ತಗುಲಿದ್ದ ಅವಧಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.