ಊಡ್ಜರೂ ನೂನುಕ್ಕಲ್‌ ಎಂಬ ಕಿರಣ

ಜನರ ಹಕ್ಕುಗಳಿಗಾಗಿ ಹೋರಾಡಿದ ಅಬೊರಿಜಿನಲ್‌ ಮಹಿಳೆ

Team Udayavani, Apr 3, 2022, 11:29 AM IST

4

ಕ್ಯಾತ್‌ ರಾಸ್ಕ ಹುಟ್ಟಿದ್ದು 1920ರಲ್ಲಿ, ಸತ್ತದ್ದು 1993ರಲ್ಲಿ. ಆಕೆಯ ಬದುಕಿನ ಎಪ್ಪತ್ತೆರಡು ವರ್ಷಗಳಲ್ಲಿ ಸುಮಾರು ಅರವತ್ತು ವರ್ಷಗಳನ್ನು ತಮ್ಮ ಜನರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಲೇ ಕಳೆದ ಆಕೆ ನಿರಂತರ ಬರೆಯುತ್ತಲೇ ಹೋದರು. ಪ್ರಶಸ್ತಿಗಳನ್ನು ಪಡೆದರು. ಹೋರಾಟದ ಕ್ರಾಂತಿಯ ಹಾಡುಗಳನ್ನು ಜನಪ್ರಿಯಗೊಳಿಸಿದರು.

ಶಾಲೆಯಲ್ಲಿ ಆಕೆಗೆ ನೀನು ದಾಸ್ಯಕ್ಕೆ ಸೇರಿದವಳು, ಮನೆಕೆಲಸದವಳಾಗಿ ಕೆಲಸ ಮಾಡಲು ಎಷ್ಟು ಬೇಕೋ ಅಷ್ಟು ತಯಾರಾಗು ಸಾಕು ಎನ್ನುವುದನ್ನು ಮನದಟ್ಟು ಮಾಡಿಸಿದ್ದರಂತೆ. ಅದಕ್ಕೆ ವ್ಯತಿರಿಕ್ತವಾಗಿ ಆಕೆಯ ತಾಯಿ ತನ್ನ ಮಕ್ಕಳು ಶಾಲೆಗೆ ಹೋಗಿ ಕಲಿತು ಶಿಕ್ಷಣವಂತರಾಗಬೇಕು ಎಂದು ಶ್ರಮಪಟ್ಟರಂತೆ. ಬಾಲಕಿಯ ತಂದೆಯೂ ಕನಿಷ್ಠ ಓದು-ಬರಹವನ್ನು ಪಡೆದು, ಒಳ್ಳೆಯ ಕೆಲಸಗಾರರಾಗಿದ್ದರೂ ಅವರಿಗೆ ಗುಲಾಮರಿಗೆ ಕೊಡುವ ಒಂದೆರಡು ಕಾಸು ಸಿಗುತ್ತಿತ್ತಂತೆ. ಸರಕಾರ ತಮಗೆ ಬಳುವಳಿಯಾಗಿ ಬಡತನವನ್ನು ಕೊಟ್ಟಿದ್ದರೂ ಸ್ವಾಭಿಮಾನಿ ಕುಟುಂಬ ತಮ್ಮ ಹಸಿವನ್ನು ನಿಯಂತ್ರಿಸಿಕೊಂಡು ಬದುಕಿದರು. ಆ ತಂದೆ ತಾಯಿಯರು ಮಕ್ಕಳಲ್ಲಿ ಕನಸು, ಧೈರ್ಯವನ್ನು ತುಂಬಿದರು. ಆ ಹನಿಹನಿ ತುಂತುರು ಸೇರಿ ಅವರ ಮಗಳು ಕ್ಯಾತ್‌ ತಾನು ಹುಟ್ಟಿದ ಮಿಂಜೆರಿಬ (North Stradbroke ದ್ವೀಪ) ಸಮುದ್ರದ ಮೊರೆತವನ್ನು ಪ್ರತಿಧ್ವನಿಸುವಂತೆ ಆಯಿತು.

ಹದಿನಾರು ವರ್ಷದ ಹುಡುಗಿ ಕ್ಯಾತ್‌ ತಾನು ನರ್ಸಿಂಗ್‌ ಓದಬೇಕೆಂದು ಕೇಳಿಕೊಂಡರೂ ಜನಾಂಗೀಯ ಧೋರಣೆಯಿಂದ ಅದನ್ನು ನಿರಾಕರಿಸಲಾಯಿತು. ಎರಡನೇ ವಿಶ್ವ ಮಹಾಯುದ್ಧದ ಸಮಯದಲ್ಲಿ (1941-44) ಆಸ್ಟ್ರೇಲಿಯನ್‌ ವುಮೆನ್ಸ್‌ ಆರ್ಮಿ ಸರ್ವಿಸ್‌ ಸೇರಿ ಕ್ಯಾತ್‌ ಸ್ವಿಚ್‌ ಆಪರೇಟರ್‌ ಆದರು. ಅದೇ ವೇಳೆಯಲ್ಲೇ ಬ್ರೂಸ್‌ ವಾಕರ್‌ ಅವರನ್ನು ಮದುವೆಯಾದರು. ಇಬ್ಬರು ಮಕ್ಕಳಾದ ಅನಂತರ, 1960ರ ದಶಕದಲ್ಲಿ ರಾಜಕೀಯ ಪ್ರವೇಶಿಸಿ, ತಮ್ಮ ಜನರ ಹಕ್ಕುಗಳಿಗಾಗಿ ಹೋರಾಡುತ್ತಾ ಸಂವಿಧಾನದಲ್ಲಿ ಅವನ್ನೂ ಸೇರಿಸುವ ನಿಟ್ಟಿನಲ್ಲಿ ಗಟ್ಟಿದನಿಯಾದರು. 1967ರಲ್ಲಿ ಅಬೊರಿಜಿನಲ್‌ ಜನರನ್ನು ಕಾನೂನುಬದ್ಧವಾಗಿ ಸಂವಿಧಾನದಲ್ಲಿ ಸೇರಿಸಲಾಯ್ತು.

ಬದಲಾವಣೆಗಳನ್ನು ತರುವತ್ತ ಮಾಡಿದ ಅವರ ಶ್ರಮ ಪ್ರಸಿದ್ಧಿಯಾಗಿತ್ತು. ಅದಕ್ಕೆ ಕಾರಣ ಆಕೆಯ ಕವನಗಳು. 1964ರಲ್ಲಿ ಪ್ರಕಟವಾದ We are going ಕವನಸಂಕಲನ ಅವರ ಜನರ ಸ್ಥಿತಿಗೆ ಕನ್ನಡಿ ಹಿಡಿದು ತೋರಿದ್ದು ಅಲ್ಲದೆ ತಾವು ಇತರೇ ಜನಾಂಗವಲ್ಲ, ಆಸ್ಟ್ರೇಲಿಯನ್‌ ಮಣ್ಣಿನ ಮಕ್ಕಳು ಎಂದು ಜಗತ್ತಿಗೆ ಸಾರಿತು. ಓದುಗರಾದ ಬಿಳಿಯರು ಅವರ ಕವನಗಳನ್ನು ಮೆಚ್ಚಿಕೊಂಡರು. ಕವನಗಳನ್ನು ಬರೆದು ಪ್ರಕಟಿಸಿದ ಮೊಟ್ಟಮೊದಲ ಆಸ್ಟ್ರೇಲಿಯನ್‌ ಅಬೊರಿಜಿನಲ್‌ ಬರಹಗಾರ್ತಿ ಎಂಬ ಹೆಗ್ಗಳಿಕೆ ಅವರದ್ದು.

ಅವರ ಬರವಣಿಗೆಗಳು ದೂರದ ಇಂಗ್ಲೆಂಡ್‌, ಅಮೆರಿಕ ಮತ್ತು ಯೂರೋಪ್‌ ಗಳನ್ನು ತಲುಪಿತು. ಇಂಗ್ಲೆಂಡಿನಲ್ಲಿ ಆಕೆಯನ್ನು ಮೆಚ್ಚುವ ಓದುಗರು ಹೆಚ್ಚಾದರು. ಪ್ರಶಸ್ತಿಗಳು ಹುಡುಕಿಕೊಂಡು ಬಂದವು. 1970ರಲ್ಲಿ ಅವರಿಗೆ Member of the Order of the British Empire (MBE) ಅತ್ಯುನ್ನತ ಗೌರವ ಲಭಿಸಿತು. ಅದೇ ವರ್ಷ ತಮ್ಮ ಹುಟ್ಟಿದ ಊರಿಗೆ ((North Stradbroke) ಬಂದು, ಅಲ್ಲಿ ಭೂಮಿ ಖರೀದಿಸಿ, ಅಲ್ಲಿ ಮೂನ್ಗಾಲ್ಬ ಎಂಬ ಹೆಸರಿನ ಸಾಂಸ್ಕೃತಿಕ ಕೇಂದ್ರವನ್ನು ಆರಂಭಿಸಿದರು. ಸಾವಿರಾರು ಜನರು ಬಂದು ಆಕೆಯ ಬಾಯಿಂದ ಅವರ ಜನರ ಕಥೆಗಳನ್ನು, ಡ್ರೀಮ್‌ಟೈಮ್‌ ಕಥೆಗಳನ್ನು ಕೇಳಿದರು. ಅವರ ಜನರ ಸಂಸ್ಕೃತಿಯ ಆಳ ಅಗಲಗಳನ್ನು ತಿಳಿದರು. ಇನ್ನೂ ಹೆಚ್ಚು ಬರೆಯುತ್ತಲೇ, ಪ್ರಶಸ್ತಿಗಳು ಬರುತ್ತಿದ್ಧಾಗಲೇ ಅವರು ಫ‌ುಲ್‌ ಬ್ರೈಟ್‌ ಫೆಲೋಶಿಪ್‌ ಪಡೆದು ಅಮೆರಿಕ ಪ್ರವಾಸವನ್ನು ಕೈಗೊಂಡು (1978-79) ಆ ದೇಶದ ಉದ್ದಗಲಕ್ಕೂ ಸಂಚರಿಸುತ್ತಾ ತಮ್ಮ ಜನರ ಕಥೆಗಳನ್ನು, ವ್ಯಥೆಯನ್ನೂ, ಹೋರಾಟವನ್ನು, ಸ್ವಾಭಿಮಾನವನ್ನು ಹೇಳಿದರು.

ಮಧ್ಯದಲ್ಲಿ ತಮ್ಮ ಕುಲದ ಚಿತ್ರಕಲೆಯನ್ನು ಅಭ್ಯಸಿಸಿ, ಪ್ರಕಟಿಸಿದರು. ಅನೇಕ ಸಂಸ್ಥೆಗಳಿಗೆ ಜೀವಕೊಟ್ಟು, ಅವರ ದನಿಯನ್ನು ದೊಡ್ಡದಾಗಿಸಿದರು. ಶಾಲೆಗಳನ್ನು ಮುನ್ನಡೆಸಿದರು; ಯೂನಿವರ್ಸಿಟಿಗಳಲ್ಲಿ ಪಾಠ ಹೇಳಿದರು. ಹಲವಾರು ಗೌರವ ಡಾಕ್ಟರೆಟ್‌ಗಳನ್ನು ಪಡೆದರು.

ಎಲ್ಲರಿಗೂ ಆಶ್ಚರ್ಯವಾಗುವಂತೆ 1988ರಲ್ಲಿ ರಾಣಿ ಎರಡನೇ ಎಲಿಜಬೆತ್‌ ನೀಡಿದ್ದ ಗೌರವವನ್ನು ವಾಪಸ್‌ ಮಾಡಿದರು. ಆಗ ಅವರು ಹೇಳಿದ್ದು “ಎರಡು ಶತಮಾನಗಳ ಕಾಲದ ನಮ್ಮ ಜನರ ನೋವನ್ನು, ಸಾವನ್ನು, ಎಲ್ಲದರಿಂದ ವಂಚಿತರಾಗಿ ನಮ್ಮದೇ ನೆಲದಲ್ಲಿ ನಾವು ಪರದೇಶಿಗಳು, ಅನಾಥರೂ ಆದದ್ದನ್ನು ಈ ವರ್ಷ ನೆನಪಿಸುತ್ತದೆ. ಆಸ್ಟ್ರೇಲಿಯನ್‌ ಮತ್ತು ಬ್ರಿಟಿಷ್‌ ಸರಕಾರಗಳು ನಮ್ಮ ಅಬೊರಿಜನಲ್‌ ಜನರ ಎಲ್ಲ ಹಕ್ಕುಗಳನ್ನು ಅವರಿಗೆ ಕೊಟ್ಟು, ನಮ್ಮ ಪೂರ್ವಜರಿಂದ ಪಡೆದ ನೆಲವನ್ನು, ಅದರ ಹಕ್ಕನ್ನೂ ವಾಪಸ್‌ ಕೊಡಬೇಕು. ಅವರು ನಡೆಸಿದ ನರಮೇಧ, ಕೊಲೆಗಳು, ಸುಲಿಗೆ, ನಮ್ಮ ಭಾಷೆಗಳನ್ನು ಸಂಸ್ಕೃತಿಯನ್ನು ನಾಶಮಾಡಿದ್ದು ಎಲ್ಲವನ್ನೂ ಅವರು ಒಪ್ಪಿಕೊಳ್ಳಬೇಕು. ಹಿಂದೆ ನಾನು ಈ ಗೌರವವನ್ನು ಸ್ವೀಕರಿಸಿದಾಗ ಅದರಿಂದ ನಮ್ಮ ಜನರಿಗೆ ಮತ್ತಷ್ಟು ಧೈರ್ಯ, ಗುರುತಿಸುವಿಕೆ, ಪ್ರೋತ್ಸಾಹ ಸಿಗುತ್ತದೆ, ಅದರಿಂದ ಹಲವಾರು ಬಾಗಿಲುಗಳು ತೆರೆಯುತ್ತವೆ ಎಂದು ಭಾವಿಸಿದ್ದೆ. ಪರಿಸ್ಥಿತಿ ನಾನಂದುಕೊಂಡಂತೆ ಸುಧಾರಿಸಲಿಲ್ಲ, ಅವರು ಕ್ಷಮಾಪಣೆ ಕೇಳಿಲ್ಲ, ನಮ್ಮ ನೆಲವನ್ನು ಇನ್ನೂ ಕೊಟ್ಟಿಲ್ಲ. ಎಷ್ಟೋ ಸುಧಾರಣೆಗಳು ಇನ್ನೂ ಆಗಬೇಕಿವೆ’.

ಅದೇ ವರ್ಷ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡು ಊಡ್ಜರೂ ನೂನುಕ್ಕಲ್‌ ಆದರು. ತಮ್ಮ ಕುಲದ (ನೂನುಕ್ಕಲ್) ಹೆಸರನ್ನು ತಮ್ಮ ಕವನಗಳಂತೆಯೇ ಅಜರಾಮರಗೊಳಿಸಿದರು.‌

ಡಾ| ವಿನತೆ ಶರ್ಮಾ, ಬ್ರಿಸ್ಬೇನ್‌

ಟಾಪ್ ನ್ಯೂಸ್

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.