ಪ್ರತಿಭಟನೆ ಮಾಡಿದ್ರೆ ಸಿಗಲ್ವಾ ಪಾಸ್‌ಪೋರ್ಟ್‌?


Team Udayavani, Feb 9, 2021, 6:25 AM IST

ಪ್ರತಿಭಟನೆ ಮಾಡಿದ್ರೆ ಸಿಗಲ್ವಾ ಪಾಸ್‌ಪೋರ್ಟ್‌?

ಪಾಸ್ಪೋರ್ಟ್‌ ನೀಡುವಾಗ ವ್ಯಕ್ತಿಗಳ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳು ಮತ್ತು ಅದರ ಜತೆಗಿನ ಬಾಂಧವ್ಯಗಳನ್ನೂ ನೋಡುತ್ತೇವೆ ಎಂದು ಇತ್ತೀಚೆಗಷ್ಟೇ ಬಿಹಾರ ಮತ್ತು ಉತ್ತರಾಖಂಡ ಪೊಲೀಸರು ಆದೇಶ ಹೊರಡಿಸಿದ್ದಾರೆ. ಇದು ಸಾಕಷ್ಟು ಚರ್ಚೆಗೂ ಕಾರಣವಾಗುತ್ತಿದೆ. ಹಾಗಾದರೆ ಪಾಸ್‌ಪೋರ್ಟ್‌ ನೀಡುವಾಗ ಪೊಲೀಸರು ಯಾವೆಲ್ಲಾ ವಿಷಯ ಪರಿಗಣಿಸುತ್ತಾರೆ? ಈ ಬಗ್ಗೆ ನೋಡೋಣ ಬನ್ನಿ…

ಪೊಲೀಸರು ಚೆಕ್‌ ಮಾಡುವುದೇನು?
1. ವಿಳಾಸದ ಬಗ್ಗೆ ಖುದ್ದು ಭೇಟಿ ನೀಡಿ ಪರಿಶೀಲನೆ
2. ಈ ವಿಳಾಸದಲ್ಲಿ ಉಳಿದುಕೊಂಡಿರುವ ಅವಧಿ
3. ಅಪರಾಧದ ಹಿನ್ನೆಲೆ (ಯಾವುದಾದರೂ ಇದ್ದಲ್ಲಿ)

ಶಿಫಾರಸು ಏನಾಗಿರುತ್ತೆ?
1. ಕೊಡಬಹುದು.
2. ಸರಿಯಾಗಿದೆ, ನಿರ್ಧಾರ ನಿಮ್ಮದು.
3. ಕೊಡಲು ಸೂಕ್ತವಲ್ಲ.

ಪೊಲೀಸರ ಪರಿಶೀಲನೆ ಅಂದರೇನು?
ಅರ್ಜಿದಾರನೊಬ್ಬ ತನಗೆ ಪಾಸ್‌ಪೋರ್ಟ್‌ ಬೇಕು ಎಂದು ಅರ್ಜಿ ಸಲ್ಲಿಸಿದ ಬಳಿಕ, ಪ್ರಾದೇಶಿಕ ಪಾಸ್‌ಪೋರ್ಟ್‌ ಸಂಸ್ಥೆಯು ದಾಖಲೆಗಳ ಪರಿಶೀಲನೆ ಮಾಡಿ, ವಿಳಾಸ ಮತ್ತು ಅಪರಾಧ ಹಿನ್ನೆಲೆ ಬಗ್ಗೆ ಮಾಹಿತಿ ಸಂಗ್ರಹಿಸಲು ಪೊಲೀಸರ ಸಹಾಯ ಪಡೆದುಕೊಳ್ಳುತ್ತದೆ. ಇವರು ಅರ್ಜಿದಾರರ ವಿಳಾಸಕ್ಕೆ ಹೋಗಿ, ಅವರ ವಿಳಾಸ ದೃಢೀಕರಿಸುವುದರ ಜತೆ ಎಷ್ಟು ದಿನಗಳಿಂದ ಅಲ್ಲಿ ವಾಸವಿದ್ದಾರೆ ಎಂಬುದನ್ನೂ ನೋಡಬೇಕು. ಜತೆಗೆ ಏನಾದರೂ ಅಪರಾಧ ಹಿನ್ನೆಲೆ ಇದ್ದರೂ, ಪೊಲೀಸರಿಗೆ ಮಾಹಿತಿ ನೀಡಬೇಕು.

ಯಾವ ರೀತಿಯ ಅಪರಾಧ ಹಿನ್ನೆಲೆಗಳ ದಾಖಲೀಕರಣ?
ಎಫ್ಐಆರ್‌ ಆಗಿರುವ ಕ್ರಿಮಿನಲ್‌ ಕೇಸುಗಳ ಮಾತ್ರ ದಾಖಲೀಕರಿಸಬಹುದು. ಸಿಗ್ನಲ್‌ ಜಂಪ್‌ ಮಾಡಿ ಟ್ರಾಫಿಕ್‌ ಕೇಸ್‌ ಹಾಕಿಸಿಕೊಂಡಿದ್ದು ಇದರ ವ್ಯಾಪ್ತಿಗೆ ಬರುವುದಿಲ್ಲ.

ಪೊಲೀಸರು ಕೊಡಲು ಸೂಕ್ತವಲ್ಲ ಎಂಬ ಶಿಫಾರಸು ನೀಡಿದರೆ ಏನಾಗುತ್ತೆ?
ಪಾಸ್‌ಪೋರ್ಟ್‌ ಕೊಡಬಹುದೇ ಅಥವಾ ಬೇಡವೇ ಎಂಬ ಬಗ್ಗೆ ಪೊಲೀಸರು ನಿರ್ಧಾರ ಮಾಡಲಾಗದು. ಆದರೆ ಶಿಫಾರಸು ಮಾಡಬಹುದು. ಇದನ್ನು ಪಾಸ್‌ಪೋರ್ಟ್‌ ಕಚೇರಿ ಕೇಳಲೇಬೇಕು ಅಂತೇನಿಲ್ಲ. ಪ್ರತಿಭಟನೆಗಳಲ್ಲಿ ಭಾಗಿಯಾಗಿ ಕೇಸ್‌ ಹಾಕಿಸಿಕೊಂಡ ವ್ಯಕ್ತಿ ವಿರುದ್ಧ ಕೇಸ್‌ ಇದ್ದು, ಪಾಸ್‌ಪೋರ್ಟ್‌ ನೀಡದಿದ್ದರೆ, ಆತ ಕೋರ್ಟ್‌ಗೆ ಹೋಗಿ ಹೋರಾಡಿ ಪಾಸ್‌ಪೋರ್ಟ್‌ ಪಡೆಯಬಹುದು.

ಯಾವ ಸಂದರ್ಭಗಳಲ್ಲಿ ನಿರಾಕರಿಸಲಾಗುತ್ತದೆ?
ಎರಡು ಕಾರಣಗಳಿಗಾಗಿ ಪಾಸ್‌ಪೋರ್ಟ್‌ ನಿರಾಕರಿಸಲಾಗುತ್ತದೆ. ಒಂದು, ಅರ್ಜಿದಾರ ವ್ಯಕ್ತಿ ಭಾರತೀಯನಲ್ಲದೇ ಇರುವುದು. ವಿದೇಶದಲ್ಲಿ ಭಾರತದ ವಿರುದ್ಧ ಕೆಟ್ಟ ಅಭಿಪ್ರಾಯ ಮೂಡಿಸುತ್ತಿದ್ದರೆ, ದೇಶ ದೇಶಗಳ ನಡುವೆ ಸಂಬಂಧ ಹಾಳಾಗುವಂಥ ವಾತಾವರಣ ಸೃಷ್ಟಿಸಿದ್ದರೆ, ಭಾರತದ ಆಂತರಿಕ ಭದ್ರತೆಗೆ ಹಾನಿ ತರುವಂಥ ವ್ಯಕ್ತಿಗೆ ನೀಡಲಾಗುವುದಿಲ್ಲ.

ಎರಡನೆಯದು ಅರ್ಜಿ ಹಾಕಿದ ದಿನದಿಂದ 5 ವರ್ಷಗಳ ಹಿಂದೆ ಯಾವುದೇ ಪ್ರಕರಣದ ಸಂಬಂಧ ಅಪರಾಧಿ ಎಂದು ಕೋರ್ಟ್‌ನಿಂದ ಘೋಷಣೆಯಾಗಿದ್ದಲ್ಲಿ. ಅಂದರೆ 2 ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆಯಾಗಿರಬೇಕು.

ಟಾಪ್ ನ್ಯೂಸ್

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

6-uv-fusion

UV Fusion: ಯುಗಾದಿ ಸಂಭ್ರಮೋತ್ಸವ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

5-uv-fusion

Yugadi: ವರುಷದ ಆದಿ ಯುಗಾದಿ

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.