ಪ್ಲಾಸ್ಟಿಕ್‌ಗೆ ಕಡಿವಾಣ : ಜು.1ರಿಂದ ಏಕ ಬಳಕೆಯ ಪ್ಲಾಸ್ಟಿಕ್‌ಗೆ ದೇಶಾದ್ಯಂತ ನಿಷೇಧ


Team Udayavani, Jun 30, 2022, 6:55 AM IST

thumb 4 polithin

ಜುಲೈ 1ರಿಂದ ದೇಶಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್‌ ನಿಷೇಧ ದೇಶಾದ್ಯಂತ ಜಾರಿಗೆ ಬರಲಿದೆ. ನಾವು ದಿನನಿತ್ಯ ಬಳಸುವಂಥ ಅನೇಕ ವಸ್ತುಗಳ ಮೇಲೆ ಈ ನಿಷೇಧ ಅನ್ವಯವಾಗಲಿದೆ. ಶಾಂಪೂ ಬಾಟಲಿಯಿಂದ ಹಿಡಿದು ಇಯರ್‌ಬಡ್‌ವರೆಗೆ, ಸಿಗರೇಟ್‌ ಪ್ಯಾಕ್‌ನಿಂದ ಹಿಡಿದು ಗಿಫ್ಟ್ ರ್ಯಾಪರ್‌ವರೆಗೆ ಎಲ್ಲದಕ್ಕೂ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ. ಈ ನಿಯಮದ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

ಏನಿದು ಏಕಬಳಕೆಯ ಪ್ಲಾಸ್ಟಿಕ್‌?
ಹೆಸರೇ ಹೇಳುವಂತೆ, ಒಂದೇ ಬಾರಿಗೆ ಬಳಸಿ ಬಿಸಾಡುವಂಥ ಪ್ಲಾಸ್ಟಿಕ್‌ ವಸ್ತುಗಳನ್ನು ಏಕಬಳಕೆಯ ಪ್ಲಾಸ್ಟಿಕ್‌ ಎನ್ನುತ್ತಾರೆ. ಶಾಂಪೂ, ಮಾರ್ಜಕ, ಕಾಸೆ¾ಟಿಕ್ಸ್‌, ಪಾಲಿಥೀನ್‌ ಚೀಲ, ಫೇಸ್‌ ಮಾಸ್ಕ್, ಕಾಫಿ ಕಪ್‌ ಸೇರಿದಂತೆ ದೇಶದಲ್ಲಿ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಪ್ಲಾಸ್ಟಿಕ್‌ಗಳಿವು.

ನಿಷೇಧ ಏಕೆ?
ಪ್ಲಾಸ್ಟಿಕ್‌ ತ್ಯಾಜ್ಯಗಳು ಪರಿಸರಕ್ಕೆ ಅತಿದೊಡ್ಡ ಅಪಾಯ ಉಂಟುಮಾಡುತ್ತದೆ. ಅದು ವಿಘಟನೆಗೊಳ್ಳದೇ ದೀರ್ಘ‌ಕಾಲ ಪರಿಸರದಲ್ಲಿ ಉಳಿದು, ಮೈಕ್ರೋಪ್ಲಾಸ್ಟಿಕ್‌ ಆಗಿ ಪರಿವರ್ತನೆಗೊಳ್ಳುತ್ತದೆ. ನಂತರ ಅದು ನಮ್ಮ ಆಹಾರದ ಮೂಲಗಳನ್ನು ಪ್ರವೇಶಿಸಿ, ಮಾನವನ ದೇಹಕ್ಕೂ ಎಂಟ್ರಿ ಪಡೆಯುತ್ತದೆ.

ಅನುಷ್ಠಾನ ಹೇಗೆ?
– ಕೇಂದ್ರದ ಮಾಲಿನ್ಯ ನಿಯಂತ್ರಣ ಮಂಡಳಿಯ ಮೇಲ್ವಿಚಾರಣೆಯಲ್ಲಿ ನಿಷೇಧ ಅನುಷ್ಠಾನಗೊಳ್ಳಲಿದೆ.
– ಈಗಾಗಲೇ ರಾಷ್ಟ್ರ, ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಈ ಕುರಿತು ನಿರ್ದೇಶನ ನೀಡಲಾಗಿದೆ.
– ನಿಷೇಧಿತ ವಸ್ತುಗಳ ಅಂತಾರಾಜ್ಯ ಸಾಗಣೆ ತಡೆಗೆ ಗಡಿಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸುವಂತೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ
– ನಿಷೇಧಿತ ವಸ್ತುಗಳಿಗೆ ಅಗತ್ಯವಿರುವ ಕಚ್ಚಾ ವಸ್ತು ರವಾನಿಸದಂತೆ ಎಲ್ಲ ಪೆಟ್ರೋಕೆಮಿಕಲ್‌ ಕೈಗಾರಿಕೆಗಳಿಗೆ ಸೂಚಿಸಲಾಗಿದೆ.
– ಪ್ಲಾಸ್ಟಿಕ್‌ ಸಮಸ್ಯೆ ನಿವಾರಣೆ ಕುರಿತು ನಾಗರಿಕರಿಗೆ ಜಾಗೃತಿ ಮೂಡಿಸಲು ಸಿಪಿಸಿಬಿ ಕುಂದುಕೊರತೆ ನಿವಾರಣಾ ಆ್ಯಪ್‌ ಅನಾವರಣ ಮಾಡಲಾಗಿದೆ
– ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ನಿಯಂತ್ರಣಾ ಕೊಠಡಿ ರಚನೆಗೆ ಕ್ರಮ ಕೈಗೊಳ್ಳಲಾಗಿದೆ
– ಹೊಸ ವಾಣಿಜ್ಯ ಪರವಾನಗಿ ವಿತರಣೆ ವೇಳೆ ಏಕಬಳಕೆ ಪ್ಲಾಸ್ಟಿಕ್‌ ಅನ್ನು ಬಳಸುವುದಿಲ್ಲ ಎಂಬ ಷರತ್ತು ವಿಧಿಸಲಾಗುತ್ತಿದೆ.
– ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌ ಬಳಕೆ ಕಂಡುಬಂದರೆ ಅಂಥ ಅಂಗಡಿಗಳ ಲೈಸೆನ್ಸ್‌ ರದ್ದು ಮಾಡಲಾಗುತ್ತದೆ
– ನಿಯಮ ಉಲ್ಲಂಘಿಸಿದವರಿಗೆ 5 ವರ್ಷಗಳ ಜೈಲು ಶಿಕ್ಷೆ ಅಥವಾ 1 ಲಕ್ಷ ರೂ.ವರೆಗೆ ದಂಡ ಅಥವೂ ಎರಡನ್ನೂ ವಿಧಿಸಲಾಗುತ್ತದೆ.
– ನಿಯಮ ಉಲ್ಲಂಘನೆಯ ಬಗ್ಗೆ ನಿಗಾ ವಹಿಸಲು ವಿಶೇಷ ಜಾರಿ ತಂಡಗಳನ್ನೂ ರಚಿಸಲಾಗಿದೆ

ಯಾವ ದೇಶಗಳಲ್ಲಿ ನಿಷೇಧ?
ಬಾಂಗ್ಲಾದೇಶ, ನ್ಯೂಜಿಲೆಂಡ್‌, ಚೀನಾ, ಅಮೆರಿಕ, ಐರೋಪ್ಯ ಒಕ್ಕೂಟ, ವನೌತು, ಸೆಷೆಲ್ಸ್‌ ಸೇರಿ ನೂರಾರು ದೇಶಗಳಲ್ಲಿ ನಿಷೇಧ ಜಾರಿಯಲ್ಲಿದೆ.

ಪ್ರತಿ ವರ್ಷ ಜಗತ್ತಿನಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್‌ ತ್ಯಾಜ್ಯ- 300 ದಶಲಕ್ಷ ಟನ್‌
ಈ ಪೈಕಿ ಸಮುದ್ರಕ್ಕೆ ಸೇರುವ ತ್ಯಾಜ್ಯದ ಪ್ರಮಾಣ- 14 ದಶಲಕ್ಷ ಟನ್‌
ಪ್ರತಿ ದಿನ ಭಾರತದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ- 1.5 ಲಕ್ಷ ಮೆಟ್ರಿಕ್‌ ಟನ್‌
ಪ್ರತಿ ದಿನ ಉತ್ಪತ್ತಿಯಾಗುವ ಪ್ಲಾಸ್ಟಿಕ್‌ ತ್ಯಾಜ್ಯ- 9,589 ಮೆಟ್ರಿಕ್‌ ಟನ್‌
ಭಾರತದಲ್ಲಿ ಮರುಬಳಕೆಯಾಗುವ ಪ್ಲಾಸ್ಟಿಕ್‌ ತ್ಯಾಜ್ಯ- 2,876 ಮೆ.ಟನ್‌
ಸಂಸ್ಕರಿಸದೇ ಪರಿಸರಕ್ಕೆ ಸೇರುವ ಪ್ಲಾಸ್ಟಿಕ್‌ ತ್ಯಾಜ್ಯ – 6,712 ಮೆ.ಟನ್‌
2050ರ ವೇಳೆಗೆ ಹಸಿರುಮನೆ ಅನಿಲದಲ್ಲಿ ಪ್ಲಾಸ್ಟಿಕ್‌ಗಳ ಪಾಲು- ಶೇ.10

ಯಾವುದಕ್ಕೆ ನಿಷೇಧ?
ಬಲೂನು ಕಡ್ಡಿಗಳು, ಪ್ಲಾಸ್ಟಿಕ್‌ ಕಡ್ಡಿ ಇರುವ ಧ್ವಜ, ಸಿಗರೇಟ್‌ ಪ್ಯಾಕ್‌, ಕಟ್ಲೆರಿ ವಸ್ತುಗಳು(ಪ್ಲಾಸ್ಟಿಕ್‌ ತಟ್ಟೆ, ಕಪ್‌, ಲೋಟ, ಫೋರ್ಕ್‌, ಚಮಚ, ಚಾಕು, ಟ್ರೇ), ಇಯರ್‌ಬಡ್‌, ಸಿಹಿತಿಂಡಿ ಬಾಕ್ಸ್‌ಗಳು, ಕ್ಯಾಂಡಿ ಮತ್ತು ಐಸ್‌ಕ್ರೀಂ ಕಡ್ಡಿಗಳು, ಆಹ್ವಾನ ಪತ್ರಿಕೆಗಳು, ಅಲಂಕಾರಕ್ಕೆ ಬಳಸುವ ಪಾಲಿಸ್ಟಿರೀನ್‌, ಥರ್ಮೋಕೋಲ್‌, ಗಿಫ್ಟ್ ರ್ಯಾಪರ್‌ಗಳು, 100 ಮೈಕ್ರಾನ್‌ಗಳಿಗಿಂತ ಕಡಿಮೆಯಿರುವ ಪಿವಿಸಿ ಪ್ಲಾಸ್ಟಿಕ್‌ ಬ್ಯಾನರ್‌ಗಳು ಇತ್ಯಾದಿಗಳು ಮಾರುಕಟ್ಟೆಗಳಿಂದ ಕಣ್ಮರೆಯಾಗಲಿವೆ.

ಪರ್ಯಾಯಗಳೇನು?
– ಥರ್ಮೋಕೋಲ್‌ ಬದಲಿಗೆ: ಮರುಬಳಕೆಯ ಕಾಗದ, ಹನಿಕೋಂಬ್‌ ಕಾಗದ ಬಳಸಬಹುದು
– ಪ್ಲಾಸ್ಟಿಕ್‌ ಕಡ್ಡಿಗಳ ಬದಲಿಗೆ: ಐಸ್‌ಕ್ರೀಂಗೆ ಮರದ ಕಡ್ಡಿ, ಲಾಲಿಪಪ್‌ಗೆ ಕಾಗದದ ಕಡ್ಡಿ, ನೀರಿನಿಂದ ತೊಳೆಯಬಹುದಾದ ಇಯರ್‌ಬಡ್‌ಗಳು, ಬಲೂನುಗಳಿಗೆ ದಾರ ಬಳಸಬಹುದು
– ಪ್ಲಾಸ್ಟಿಕ್‌ ಕಟ್ಲೆರಿ ಬದಲಿಗೆ: ಕಾಗದ, ಬಿದಿರು, ಅಡಿಕೆ ಎಲೆಯಿಂದ ತಯಾರಿಸಲಾದ ತಟ್ಟೆ, ಪ್ಲೇಟು, ಲೋಟಗಳು ಹಾಗೂ ಮಣ್ಣಿನ ಮಡಿಕೆಗಳು, ಸ್ಟೀಲ್‌ ಪ್ಲೇಟ್‌, ಲೋಹದ ಬಾಟಲಿಗಳನ್ನು ಪರ್ಯಾಯವಾಗಿ ಬಳಕೆ ಮಾಡಬಹುದು
– ಪಿವಿಸಿ ಬ್ಯಾನರ್‌ ಬದಲಿಗೆ: ಮರುಬಳಕೆಯಾಗಬಹುದಾದ ಪಾಲಿಥಿಲೀನ್‌ ವಸ್ತುಗಳಿಂದ ತಯಾರಿಸಿದ ಬ್ಯಾನರ್‌ಗಳು

88,000 ಘಟಕಗಳಿಗೆ ಬೀಗ?
ಸರ್ಕಾರದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಏಕಬಳಕೆಯ ಪ್ಲಾಸ್ಟಿಕ್‌ ಉತ್ಪಾದನೆಯಲ್ಲಿ ತೊಡಗಿಕೊಂಡಿರುವಂಥ ಸುಮಾರು 88 ಸಾವಿರ ಘಟಕಗಳಿವೆ. ಈ ಘಟಕಗಳಲ್ಲಿ ಸುಮಾರು 10 ಲಕ್ಷ ಮಂದಿ ಕೆಲಸ ಮಾಡುತ್ತಿದ್ದು, 25 ಸಾವಿರ ಕೋಟಿ ರೂ. ಮೌಲ್ಯದ ಉತ್ಪನ್ನಗಳು ರಫ್ತಾಗುತ್ತಿವೆ. ಜು.1ರಿಂದ ನಿಷೇಧ ಜಾರಿಯಾದರೆ, ಈ ಎಲ್ಲ ಘಟಕಗಳೂ ದಿವಾಳಿಯಾಗಲಿವೆ, ಇಲ್ಲಿರುವ ಲಕ್ಷಾಂತರ ಮಂದಿ ಕೆಲಸ ಕಳೆದುಕೊಳ್ಳುತ್ತಾರೆ ಎಂದು ಅಖೀಲ ಭಾರತ ಪ್ಲಾಸ್ಟಿಕ್‌ ಉತ್ಪಾದಕರ ಸಂಘ(ಎಐಪಿಎಂಎ) ಆತಂಕ ವ್ಯಕ್ತಪಡಿಸಿದೆ. ಜತೆಗೆ, ಈ ನಿಷೇಧದಿಂದ ಎಫ್ಎಂಸಿಜಿ(ಫಾಸ್ಟ್‌ ಮೂವಿಂಗ್‌ ಕನ್ಸೂéಮರ್‌ ಗೂಡ್ಸ್‌) ವಲಯ, ವೈಮಾನಿಕ ಉದ್ದಿಮೆ ಮತ್ತು ಕ್ಷಿಪ್ರ ಸೇವೆಯ ರೆಸ್ಟಾರೆಂಟ್‌ಗಳಿಗೂ ಹೊಡೆತ ಬೀಳಲಿದೆ. ಹಲವಾರು ಸಣ್ಣ ಉದ್ದಿಮೆಗಳು ಹಾಗೂ ಕೈಗಾರಿಕೆಗಳು ಈ ನಿಷೇಧವನ್ನು ಕನಿಷ್ಠ 6 ತಿಂಗಳಿಂದ 1 ವರ್ಷ ಮುಂದೂಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಲೇ ಇವೆ. ಆದರೆ, ಇದಕ್ಕೆ ನಿರಾಕರಿಸಿರುವ ಕೇಂದ್ರ ಸರ್ಕಾರ, ನಿಷೇಧ ಜಾರಿಯಾಗಿಯೇ ಸಿದ್ಧ ಎಂದಿದೆ.

2020ರಲ್ಲಿ ಜಾಗತಿಕವಾಗಿ ಸಮುದ್ರ ಸ್ವತ್ಛಗೊಳಿಸುವಾಗ ಸಿಕ್ಕಿದ್ದೇನು?
– ಸಿಗರೇಟ್‌ ತುಂಡುಗಳು- 9,64,521
– ಪ್ಲಾಸ್ಟಿಕ್‌ ಪಾನೀಯ ಬಾಟಲಿಗಳು- 6,27,014
– ಆಹಾರದ ರ್ಯಾಪರ್‌ಗಳು- 5,73,534
– ಇತರೆ ತ್ಯಾಜ್ಯ – 5,19,438
– ಬಾಟಲಿಗಳ ಮುಚ್ಚಳಗಳು – 4,09,855
– ಪ್ಲಾಸ್ಟಿಕ್‌ ಚೀಲಗಳು- 2,72,399
– ಸ್ಟಿರರ್‌ಗಳು- 2,24,170
– ಪ್ಲಾಸ್ಟಿಕ್‌ ಕಂಟೈನರ್‌ಗಳು- 2,22,289
– ಪಾನೀಯದ ಕ್ಯಾನ್‌ಗಳು- 1,62,750
– ಗಾಜಿನ ಪಾನೀಯ ಬಾಟಲಿಗಳು- 1,46,255

ಪರಿಸರದಲ್ಲಿರುವ ಪ್ಲಾಸ್ಟಿಕ್‌ ನಮ್ಮ ದೊಡ್ಡ ಶತ್ರು. ಪರಿಸರಕ್ಕೆ ಸೇರುವ ಯಾವ ಪ್ಲಾಸ್ಟಿಕ್‌ಗಳನ್ನು ನಮಗೆ ಸಂಗ್ರಹಿಸಲು, ಆ ಮೂಲಕ ಪುನರ್ಬಳಕೆ ಮಾಡಲು ಆಗುವುದಿಲ್ಲವೋ ಅಂತಹ ಪ್ಲಾಸ್ಟಿಕ್‌ಗಳನ್ನು ನಿಷೇಧಿಸಲಾಗುತ್ತಿದೆ.
– ಕೇಂದ್ರ ಪರಿಸರ ಸಚಿವಾಲಯ

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.