ಉಪದೇಶ ನೀಡುವುದು ಸುಲಭ, ಪಾಲಿಸುವುದು ಕಷ್ಟ


Team Udayavani, Oct 18, 2021, 6:06 AM IST

ಉಪದೇಶ ನೀಡುವುದು ಸುಲಭ, ಪಾಲಿಸುವುದು ಕಷ್ಟ

ಸಾಂದರ್ಭಿಕ ಚಿತ್ರ.

ಮಾತು ಮತ್ತು ಕೃತಿಯ ನಡುವೆ ಅಜಗಜಾಂತರವಿದೆ. ಮಾಡುವುದು ಮಾತನಾಡುವಷ್ಟು ಸುಲಭವಾಗಿದ್ದರೆ ನಮ್ಮ ಸಮಾಜ ಇಂದು ಈ ಸ್ಥಿತಿಗೆ ತಲುಪುತ್ತಿ ರಲಿಲ್ಲ. “ಆಡದೇ ಮಾಡುವವ ರೂಢಿ ಯೊಳಗುತ್ತಮನು, ಆಡಿ ಮಾಡು ವವ ಮಧ್ಯಮನು, ಆಡಿಯೂ ಮಾಡದವ ಅಧಮನು’ ಎನ್ನುವ ಮಾತನ್ನು ನಾವೆಲ್ಲ ಕೇಳಿದ್ದೇವೆ. ಆದರೆ ನಾವು ಯಾವ ಗುಂಪಿಗೆ ಸೇರಿದವರು ಎನ್ನುವುದನ್ನು ನಮ್ಮ ಅಂತರಂಗವೇ ಹೇಳಬೇಕು.

ಮಾತು ಮುತ್ತು, ಮಾತು ಜ್ಯೋರ್ತಿ ಲಿಂಗ, ಆಡುವ ಮೊದಲು ಯೋಚಿಸು, ನುಡಿದಂತೆ ನಡೆಯಬೇಕು, ಇಲ್ಲವಾದರೆ ಸುಮ್ಮನಿರಬೇಕು ಎನ್ನುವ ಅದೆಷ್ಟೋ ವಿಚಾರಗಳು ನಮಗೆ ತಿಳಿದಿದ್ದರೂ ಸಹ ಜವಾಬ್ದಾರಿಯನ್ನು ಬೇರೆಯವರ ಮೇಲೆ ಹೊರಿಸಿ ನಾವು ನಿಶ್ಚಿಂತರಾಗಿ ಮಾತನಾ ಡುವಾಗ, ಮೇಲೆ ಹೇಳಿದ ಯಾವುದೇ ಮಾತಿನ ಕುರಿತು ಯೋಚಿಸುವುದಿಲ್ಲ.

“ಅಧಿಕಾರ ಬೇಕು ಜವಾಬ್ದಾರಿ ಬೇಡ’ ಎನ್ನುವ ಹಂಬಲವೇ ಈಗ ಜಾಸ್ತಿ. ಯಾವುದೇ ಒಂದು ಕೆಲಸ ಕಷ್ಟ -ಸುಖ ಗಳನ್ನು ಎದುರಿಸುತ್ತ ಸತತ ಪ್ರಯತ್ನದ ಮೂಲಕ ಮುನ್ನಡೆಯುತ್ತಿರುವಾಗ ಅದರ ಕುರಿತಾಗಲೀ ಆ ಕೆಲಸದಲ್ಲಿರುವವರು ಎದುರಿಸುತ್ತಿರುವ ಸಮಸ್ಯೆಯ ಕುರಿತು ಸ್ವಲ್ಪವೂ ಆಲೋಚಿಸದ ನಾವು ಆ ಕೆಲಸ ಉತ್ತಮವಾಗಿ ನಡೆದು ಅದನ್ನು ಸಮಾಜ ಗುರುತಿಸುವ ಸ್ಥಿತಿಗೆ ತಲುಪಿದೆ ಎನ್ನವಾಗ ದಿಢೀರನೆ ಎಚ್ಚರಗೊಳ್ಳುತ್ತೇವೆ. ಆ ಕೆಲಸ ಹಾಗೆ ಮಾಡಬೇಕಿತ್ತು, ಹೀಗಿದ್ದರೆ ಚೆನ್ನಾಗಿರುತ್ತಿತ್ತು, ನನ್ನಲ್ಲಿ ಕೇಳಿದ್ದರೆ ನಾನು ಸಹಾಯ ಮಾಡುತ್ತಿದ್ದೆ ಎನ್ನುವ ಮೂದಲಿಕೆಯ ಮಾತುಗಳು ಶುರುವಾ ಗುತ್ತವೆ. ಆದರೆ ಅದೇ ಕೆಲಸ ನಮಗೇ ಒಂದು ಸವಾಲಾಗಿದ್ದರೆ ಅದನ್ನು ಎದುರಿ ಸುವ ಜವಾಬ್ದಾರಿಯುತ ವ್ಯಕ್ತಿಯಾಗಿದ್ದರೆ ಆಗ ನಮಗೆ ತಿಳಿಯುತ್ತಿತ್ತು ಅದರ ಹಿಂದೆ ಇರುವ ಶ್ರಮವೆಷ್ಟು? ಆ ಯಶಸ್ಸಿನ ಹಿಂದಿ ರುವ ಕಷ್ಟ-ನಷ್ಟಗಳೆಷ್ಟು ಎನ್ನುವುದು.

“ಮನುಷ್ಯನಿಗೆ ಅಹಂಕಾರ ಮಿಶ್ರಿತ ಸ್ವಾಭಿಮಾನವಿರಬೇಕು, ಆದರೆ ದುರ ಹಂಕಾರ ಯಾರನ್ನು ಬೆಳೆಯಲು ಬಿಡು ವುದಿಲ್ಲ’ ಎನ್ನುವ ಮಾತಿನಂತೆ ಜವಾ ಬ್ದಾರಿಯಿಂದ ಕಳಚಿಕೊಂಡವರಿಗೆ ಖಂಡಿತಾ ಅಧಿಕಾರ ಸಿಗುವುದಿಲ್ಲ. ಸಿಕ್ಕಿದರೂ ಇದಕ್ಕೆ ಅರ್ಥವಿಲ್ಲ. ವ್ಯಕ್ತಿ ಯಾವ ಕ್ಷೇತ್ರದಲ್ಲಿ ತನ್ನನ್ನು ತಾನು ಹೆಚ್ಚು ತೊಡಗಿಸಿಕೊಂಡು ಪರಿಶ್ರಮಯುಕ್ತ ದುಡಿಮೆ ಮಾಡುತ್ತಾನೋ ಅವನಿಗೆ ಅಧಿಕಾರದ ಹಕ್ಕು, ಮಾತನಾಡುವ ಹಕ್ಕು, ತನ್ನಿಂದ ತಾನೇ ಬರುತ್ತದೆ. ಸಮಾಜವೂ ಅದನ್ನು ಒಪ್ಪುತ್ತದೆ.ಆದರೆ ಅದಕ್ಕೆ ವಿರುದ್ಧವಾದವರನ್ನು ಸಮಾಜ ಖಂಡಿತಾ ಸ್ವೀಕರಿಸಲಾರದು.

ಇದನ್ನೂ ಓದಿ:ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ಈ ವಿಷಯದಲ್ಲಿ ನಾವು ಬೇರೆ-ಬೇರೆ ಮನೋಭಾವದವರನ್ನು ಕಾಣಬಹುದು. ಒಂದಿಷ್ಟು ಜನ ಏನೋ ಒಂದು ಕೆಲಸ ಮಾಡಿಮಾತನಾಡುವವರು. ಕೆಲವರು ಏನೂ ಮಾಡದೆ ಮಾತನಾಡಲು ತಿಳಿದಿದೆ ಎಂದು ಮಾತನಾಡುವವರು. ಇನ್ನು ಕೆಲ ವರು ಜವಾಬ್ದಾರಿ ಬಯಸದೇ ಕೇವಲ ಅಧಿಕಾರಕ್ಕಾಗಿ ಮಾತನಾಡುವವರು, ಇನ್ನು ಜವಾಬ್ದಾರಿ ವಹಿಸಿಕೊಳ್ಳಲು ಸ್ವಲ್ಪಮಟ್ಟಿನ ಆಸಕ್ತಿ ಇದ್ದರೂ ನನಗೆ ವೈಯಕ್ತಿಕವಾಗಿ ಕರೆ ಕೊಡಲಿಲ್ಲ. ನನ್ನ ಸಹಾಯ ಪ್ರತ್ಯೇಕವಾಗಿ ಕೇಳಲಿಲ್ಲ, ನಾನೇಕೆ ಹೋಗಬೇಕು? ಹಾಗೇನಾದರು ಹೋದರೆ ಅದು ನನ್ನ ಸ್ವಾಭಿಮಾನದ ಪ್ರಶ್ನೆ ಎನ್ನುವವರು. ಇವರ ಅಂತರಾಳದ ಆತ್ಮಕ್ಕೆ ನಿಜವಾಗಲೂ ಸಮಸ್ಯೆಗಳಿಗೆ ಸ್ಪಂದಿಸಿ, ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ನಾನು ಆ ಕೆಲಸ ಮಾಡು
ತ್ತೇನೆ ಎನ್ನುವ ಆತ್ಮಸ್ಥೆರ್ಯ ಖಂಡಿತಾ ಇರುವುದಿಲ್ಲ. “ಕೈಯಲ್ಲಿ ಆಗದೇ ಇರುವವರು ಮೈಯೆಲ್ಲ ಪರಚಿಕೊಂಡರು ಎನ್ನು ವಂತೆ’ ತನ್ನ ಕೈಯ ಲ್ಲಾಗದೇ ಇರುವುದನ್ನು ಬೇರೆಯವರು ಮಾಡಿದರೆ ಅಸೂಯೆ ಪಡುವ ಪ್ರವೃತ್ತಿ ಇವರದ್ದು.

ಉಪದೇಶ ನೀಡುವುದು ಸುಲಭ, ಪಾಲಿಸುವುದು ಕಷ್ಟ. ಮಾತನಾಡುವುದು ಸುಲಭ, ಮಾಡುವುದು ಕಷ್ಟ. ಆದ್ದರಿಂದ ಏನನ್ನು ಮಾಡದೇ ಮಾಡಿದ ಕೆಲಸಕ್ಕೆ ಸರಿ-ತಪ್ಪುಗಳನ್ನು ಹೇಳುತ್ತಾ ತಮ್ಮನ್ನೇ ತಾವು ಅಧಮರೆನಿಸಿಕೊಳ್ಳುವುದನ್ನು ಈಗಿಂದೀಗಲೇ ನಿಲ್ಲಿಸೋಣ. ಸರ್ವರಿಗೂ ಉಪಕಾರಿಯಾಗುವ, ಸಮಾಜಕ್ಕೆ ಒಳಿತಾಗುವ ಕೆಲಸಗಳಿದ್ದರೆ ಆಡಿ ಸಮಯ ಹಾಳು ಮಾಡುವುದಕ್ಕಿಂತ ಅದೇನೆಂದು ನೋಡಿ ಬರುವುದು ಉತ್ತಮವಲ್ಲವೇ? ಇತರರ ನೋವು ಮತ್ತು ಸಂತೋಷವನ್ನು ನೋಡಿ, ಕೇಳಿ ಹಂಚಿಕೊಳ್ಳಬಹುದು ಆದರೆ ಅನುಭವಿಸಲಾರೆವು ತಾನೇ? ಸಾಧ್ಯವಾದರೆ ಇತರರಿಗೆ ಸಹಾಯ ಮಾಡುವ ಇಲ್ಲವಾ ದರೆ ತೊಂದರೆ ಕೊಡುವ ಕೆಲಸಕ್ಕೆ ಹೋಗು ವುದು ಖಂಡಿತಾ ಒಳ್ಳೆಯದಲ್ಲ. ಪರರನ್ನು ಹಳಿಯುವ ಬುದ್ಧಿ ನಮ್ಮದಾಗದಿರಲಿ.

-ವಾಣಿಶ್ರೀ ಭಂಡಾರಿ ಅಮ್ಮಂಜೆ, ಉಡುಪಿ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.