ಸೃಜನಾತ್ಮಕ, ಆಸಕ್ತಿದಾಯಕ ಬೋಧನ ವಿಧಾನಗಳಿಗೆ ಆದ್ಯತೆ


Team Udayavani, Oct 19, 2021, 6:50 AM IST

ಸೃಜನಾತ್ಮಕ, ಆಸಕ್ತಿದಾಯಕ ಬೋಧನ ವಿಧಾನಗಳಿಗೆ ಆದ್ಯತೆ

ಸಾಂದರ್ಭಿಕ ಚಿತ್ರ

ಸರಿಸುಮಾರು ಕಳೆದೆರಡು ವರ್ಷಗಳಿಂದ ಮಕ್ಕಳು ಶಾಲೆಗಳಿಂದ ದೂರವಿದ್ದು ಆನ್‌ಲೈನ್‌ ಶಿಕ್ಷಣದ ಮೂಲಕ ಕಲಿಕೆಯನ್ನು ಮುಂದುವರಿಸಿದ್ದರು. ಇದೀಗ ಸುದೀರ್ಘ‌ ವಿರಾಮದ ಬಳಿಕ ಮಕ್ಕಳು ಶಾಲೆಗಳತ್ತ ಮುಖ ಮಾಡಿದ್ದು ಭೌತಿಕ ತರಗತಿಗಳಿಗೆ ಹಾಜರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮಕ್ಕಳ ಮನಸ್ಸನ್ನು ಕಲಿಕೆಯತ್ತ ಕೇಂದ್ರೀಕರಿಸುವ ಗುರುತರವಾದ ಹೊಣೆಗಾರಿಕೆಯ ಜತೆಯಲ್ಲಿ ಇನ್ನೂ ಹತ್ತುಹಲವು ಸವಾಲುಗಳು ಶಿಕ್ಷಕರ ಮುಂದಿವೆ. ಈ ಎಲ್ಲ ಸವಾಲುಗಳನ್ನು ಎದುರಿಸಿ ಮಕ್ಕಳನ್ನು ಭೌತಿಕ ತರಗತಿಗಳಿಗೆ ಮರು ಒಗ್ಗಿಕೊಳ್ಳುವಂತೆ ಮಾಡಲು ಸಮಸ್ತ ಶಿಕ್ಷಕ ಸಮುದಾಯ ಸನ್ನದ್ಧವಾಗಿದೆ.

ಕೋವಿಡ್‌-19 ಸಾಂಕ್ರಾಮಿಕ ರೋಗವು ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಸವಾಲುಗಳನ್ನು ಸೃಷ್ಟಿಸಿದೆ. ಈ ಸವಾಲುಗಳನ್ನು ಶಿಕ್ಷಣ ವ್ಯವಸ್ಥೆ, ನೀತಿ ರೂಪಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಹೆತ್ತವರು ಅರ್ಥ ಮಾಡಿಕೊಂಡು ಅವುಗಳನ್ನು ಪರಿಹರಿಸುವುದು ಅತೀಮುಖ್ಯವಾಗಿದೆ.
“ಉತ್ತಮ ನಾಗರಿಕನಾಗಲು ಅಥವಾ ಯಶಸ್ವಿ ಜೀವನ ಸಾಗಿಸಲು ಗುರು ಇರಬೇಕು ಇಲ್ಲವೇ ಗುರಿಯಿರಬೇಕು’ ಎಂಬ ಮಾತು ಬಹಳ ಅರ್ಥಪೂರ್ಣವಾದುದು. ಆದರೆ ಕೋವಿಡ್‌-19ರ ಸಂದರ್ಭದಲ್ಲಿ ದೂರದಲ್ಲಿರುವ ಗುರುವ ನೆನೆದು ಆರಾಧಿಸಿ ಗುರಿ ಸಾಧಿಸುವ ಏಕಲವ್ಯರ ಸಂಖ್ಯೆ ಕೇವಲ ಬೆರಳೆ ಣಿಕೆಯಷ್ಟಿತ್ತು. “ಗುರುವಿನ ಗುಲಾ ಮನಾಗುವ ತನಕ ದೊರೆಯ ದಯ್ಯ ಮುಕುತಿ’ ಎಂಬ ಕವಿ ವಾಣಿಯಂತೆ ಗುರುವಿನ ಸನಿಹ ವಿದ್ದರೆ ಮಾತ್ರ ಸನ್ಮಾರ್ಗದಲ್ಲಿ ನಡೆಯಲು, ಜೀವನದ ಗುರಿ ಸಾಧಿಸಲು ಸಾಧ್ಯ.

ಕೋವಿಡ್‌-19ರ ವಿಷಮ ಪರಿಸ್ಥಿತಿಯಲ್ಲಿ ಆನ್‌ಲೈನ್‌ ಶಿಕ್ಷಣ, ವಾಟ್ಸ್‌ಆ್ಯಪ್‌ ಶಿಕ್ಷಣ ಇತ್ಯಾದಿಗಳ ಮೂಲಕ ಬೋಧನೆಗಳು ಮುಂದುವರಿದವಾದರೂ ಇಂಥ ವಿಧಾನಗಳಿಂದ ಜ್ಞಾನಾ ರ್ಜನೆ ಪರಿಪೂರ್ಣವಾಗದು. ಈ ನಿಟ್ಟಿನಲ್ಲಿ ಭೌತಿಕ ತರಗತಿಗಳು ಅತ್ಯಂತ ಮಹತ್ವಪೂರ್ಣವಾಗಿದ್ದು ಸರಿಸು
ಮಾರು ಎರಡು ವರ್ಷಗಳ ಬಳಿಕ ಶಾಲೆಗಳು ಪುನರಾ ರಂಭಗೊಂಡಿವೆ. ಈ ಸಂದರ್ಭದಲ್ಲಿ ಶಾಲಾಧಾರಿತ ಕಲಿಕೆಗೆ ಸುರಕ್ಷಿತ ಮತ್ತು ಉತ್ತಮ ಮಾರ್ಗಸೂಚಿಗಳನ್ನು ರೂಪಿಸಿಕೊಳ್ಳುವುದು ಅತ್ಯಗತ್ಯವಾಗಿದೆ.

ಶಾಲೆಗಳಲ್ಲಿ ಭೌತಿಕ ತರಗತಿಗಳು ಆರಂಭಗೊಂಡಿ ರುವ ಈ ಪರಿಸ್ಥಿತಿಯಲ್ಲಿ ಶಿಕ್ಷಕರ ಮುಂದೆ ಹಲವಾರು ಸವಾಲುಗಳ ಸರಮಾಲೆಯೇ ಸೃಷ್ಟಿಯಾಗಿದೆ. ಇವುಗಳಲ್ಲಿ ಪ್ರಮುಖವಾಗಿ
1 ವಿದ್ಯಾರ್ಥಿಗಳಲ್ಲಿ ಉಂಟಾಗಿರುವ ಕಲಿಕಾ ಅಂತರ ಸರಿದೂಗಿಸುವುದು.
2 ವಿದ್ಯಾರ್ಥಿಗಳು, ಶಾಲೆ ಮತ್ತು ಶಿಕ್ಷಕರ ನಡುವಿನ ಭಾವನಾತ್ಮಕ ಸಂಬಂಧಗಳ ಬೆಸುಗೆ ಸಡಿಲಗೊಂಡಿರುವುದು.
3 ಮಕ್ಕಳನ್ನು ಮಾನಸಿಕವಾಗಿ ಭೌತಿಕ ತರಗತಿಗಳಿಗೆ ತಯಾರು ಮಾಡುವುದು.
4 ವಿದ್ಯಾರ್ಥಿಗಳಲ್ಲಿ ಕಲಿಕೆಯ ಅಭ್ಯಾಸವನ್ನು ಪುನಶ್ಚೇತನಗೊಳಿಸುವುದು.
5 ವಿದ್ಯಾರ್ಥಿಗಳ ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯದಲ್ಲಿ ಸಮತೋಲನ ಕಂಡುಕೊಳ್ಳುವುದು.
6 ಮಕ್ಕಳಲ್ಲಿ ಸಾಮಾಜಿಕ ವಿಕಾಸ ಕುಂಠಿತವಾಗದಂತೆ ನೋಡಿಕೊಳ್ಳುವುದು.
7 ಹಿಂದಿನ ಮತ್ತು ಪ್ರಸಕ್ತ ಶೈಕ್ಷಣಿಕ ಸಾಲಿನ 1ನೇ ತರಗತಿಯ ಮಕ್ಕಳ ಭಾಷೆಯ ಬೆಳವಣಿಗೆಗೆ ಒತ್ತು ನೀಡುವುದು ಮತ್ತು ಕಲಿಕಾ ತಳಹದಿಯನ್ನು ಬಲಪಡಿಸುವುದು.
8 ವಿದ್ಯಾರ್ಥಿಗಳು ಈ ಅವಧಿಯಲ್ಲಿ ಸಾಮಾಜಿಕ ಜಾಲತಾಣ ಹಾಗೂ ಇಂಟರ್ನೆಟ್‌(ಅಂತರ್ಜಾಲ) ಬಳಕೆಯಿಂದ ಸಂಪಾದಿಸಿರುವ ಅಗತ್ಯ ಮತ್ತು ಅನಗತ್ಯ ಜ್ಞಾನದ ಒಳಿತು-ಕೆಡಕುಗಳ ಅರಿವು ಮೂಡಿಸುವುದರೊಂದಿಗೆ ಅವರಲ್ಲಾಗಿರುವ ನೈತಿಕ ಮೌಲ್ಯಗಳ ಕೊರತೆಯನ್ನು ಸರಿದೂಗಿಸುವುದು.
9 ಬಾಲ ಕಾರ್ಮಿಕರಾಗಿ ದುಡಿಮೆಗೆ ಒಗ್ಗಿಕೊಂಡಿರುವ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆ ತರುವುದು.
10 ಬಾಲ್ಯವಿವಾಹ, ಮಾನಸಿಕ ಮತ್ತು ದೈಹಿಕ ದೌರ್ಜನ್ಯಕ್ಕೆ ಒಳಗಾಗಿರುವ ಮಕ್ಕಳಿಗೆ ಮಾನಸಿಕ ಸ್ಥೈರ್ಯ ತುಂಬುವುದು.
11 ಫ್ರೀ ಫೈಯರ್‌, ಪಬ್ಜಿà ಮುಂತಾದ ಆನ್‌ಲೈನ್‌ ಆಟಗ ಳಿಗೆ ದಾಸರಾಗಿರುವ ವಿದ್ಯಾರ್ಥಿಗಳನ್ನು ಮರಳಿ ಶಾಲಾ ಚಟುವಟಿಕೆಗಳಿಗೆ ಒಗ್ಗಿಕೊಳ್ಳುವಂತೆ ಮಾಡುವುದು.
12 ವಲಸೆ ಕಾರ್ಮಿಕರ ಮಕ್ಕಳನ್ನು ಹುಡುಕಿ ಶಾಲೆಗೆ ಮರಳಿ ಸೇರುವಂತೆ ಕ್ರಮ ಕೈಗೊಳ್ಳುವುದು.

ಇದನ್ನೂ ಓದಿ:ಅಮೆರಿಕದ ಮೊದಲ ಕಪ್ಪುವರ್ಣೀಯ ವಿದೇಶಾಂಗ ಸಚಿವ ಪೊವೆಲ್‌ ನಿಧನ

ಶಿಕ್ಷಕರು ತಮ್ಮ ಮುಂದಿರುವ ಈ ಸವಾಲುಗಳನ್ನು ಎದುರಿಸಲು ತಮ್ಮದೇ ಆದ ಯೋಚನಾ ಕ್ರಮಗಳ ಮೂಲಕ ವಿದ್ಯಾರ್ಥಿಗಳು ಪುನಃ ಭೌತಿಕ ತರಗತಿಗಳಿಗೆ ಒಗ್ಗಿಕೊಳ್ಳುವಂತೆ ಮಾಡಲು ಹಲವಾರು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ.

1 ಶಿಕ್ಷಕರು ವಿದ್ಯಾರ್ಥಿಗಳ ಆರೋಗ್ಯದ ಸುರಕ್ಷತೆಯ ಕಡೆ ಗಮನ ನೀಡುವುದರೊಂದಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಕೋವಿಡ್‌-19 ರ ನಿಯಮಗಳನ್ನು ಪಾಲಿಸುವುದು.
2 ಈ ಎರಡು ಶೈಕ್ಷಣಿಕ ವರ್ಷಗಳಲ್ಲಿ ಉಂಟಾಗಿರುವ ಕಲಿಕಾ ನಷ್ಟ, ಕಲಿಕಾ ಅಂತರ ಸರಿದೂಗಿಸುವಲ್ಲಿ ಕಳೆದು ಹೋದ ಕಲಿಕೆಯನ್ನು ಪುನಃ ಹಿಂಪಡೆಯುವಲ್ಲಿ ಕಲಿಕಾ ವಿನ್ಯಾಸ ಮತ್ತು ಅನುಷ್ಠಾನ ರೂಪಿಸುವ ನೀಲನಕ್ಷೆಯನ್ನು ತಯಾರಿಸುವುದು.
ಐಐಐ ವಿದ್ಯಾರ್ಥಿಗಳಲ್ಲಿನ ಕಲಿಕಾ ನಷ್ಟವನ್ನು ಗುರುತಿಸಿ ಕಲಿಕಾ ಅಗತ್ಯತೆಯ ಮೌಲ್ಯಮಾಪನ ಮಾಡಿ ಪರಿಹಾರಾತ್ಮಕ ಬೋಧನೆಗೆ ಒತ್ತು ನೀಡುವುದರೊಂದಿಗೆ ಕಲಿಕೆಯ ಸ್ಥಿರತೆ ಮತ್ತು ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದು.
3 ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಸುರಕ್ಷಿತ ವಾತಾವರಣ ನಿರ್ಮಾಣ ಮಾಡುವ ಮೂಲಕ ಶಾಲೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಭಾವನಾತ್ಮಕ ಸಂಬಂಧಗಳನ್ನು ಬಲಪಡಿಸುವುದು.
4 ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಆಪ್ತ ಸಮಾಲೋಚನೆ ಮತ್ತು ಮಾರ್ಗದರ್ಶನ ನೀಡುವ ಸಲುವಾಗಿ ನೋಡಲ್‌ ಶಿಕ್ಷಕರನ್ನು ನೇಮಿಸಿ ಜವಾಬ್ದಾರಿ ನೀಡುವುದು.
5 ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ ಹಾಗೂ ಇಂಟರ್ನೆಟ್‌(ಅಂತರ್ಜಾಲ) ಬಳಕೆಯಿಂದ ಸಂಪಾದಿಸಿರುವ ಅಗತ್ಯ ಮತ್ತು ಅನಗತ್ಯ ಜ್ಞಾನದ ಒಳಿತು-ಕೆಡಕುಗಳ ಅರಿವು ಮೂಡಿಸಲು ತಜ್ಞ ಮಾರ್ಗದರ್ಶಕ (ಸೈಬರ್‌ ಕ್ರೈಂ)ರಿಂದ ಉಪನ್ಯಾಸ ಏರ್ಪಡಿಸುವುದು.
6 ವಲಸೆ ಕಾರ್ಮಿಕರ ಮಕ್ಕಳನ್ನು ಮರಳಿ ಮುಖ್ಯವಾಹಿನಿಗೆ ತರಲು ಟ್ರ್ಯಾಕಿಂಗ್‌ ಮಾಡುವುದು.
7 ಸಾಮಾಜಿಕ ಪಿಡುಗುಗಳಿಗೆ, ದೈಹಿಕ ಮತ್ತು ಮಾನಸಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿಗಳಿಗಾಗಿ ವಿಶೇಷ ಆಪ್ತ ಸಮಾಲೋಚನ ಸಭೆಯನ್ನು ಏರ್ಪಡಿಸುವುದು.
8 ಶಿಕ್ಷಕರ ಮುಂದಿರುವ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಲು ಶಿಕ್ಷಕರಿಗೆ ಪಠ್ಯಕ್ರಮ, ಪಾಠಯೋಜನೆ ಮತ್ತು ಸಮಯದ ಹಂಚಿಕೆಗೆ ಸಂಬಂಧಿಸಿದಂತೆ ಸ್ವಾಯತ್ತತೆಯ ಅಗತ್ಯವಿದೆ.

ಅಂತಿಮವಾಗಿ ಹೇಳುವುದಾದರೆ ಹಲವಾರು ಸಮಸ್ಯೆ, ಸವಾಲುಗಳಿ¨ªಾಗ್ಯೂ ಸೃಜನಾತ್ಮಕ, ಆಸಕ್ತಿ ದಾಯಕ ಬೋಧನ ವಿಧಾನಗಳ ಮೂಲಕ ಮಕ್ಕ ಳಲ್ಲಿ ಕಲಿಕೆಯ ಅಭಿರುಚಿ, ಅಭಿಮಾನ ಹಾಗೂ ಅಭಿ ಪ್ರೇರಣೆ ಮೂಡಿಸುವ ಮೂಲಕ ಅವರಲ್ಲಿ ಕಂಡು ಬರುವ ಆತಂಕಗಳನ್ನು ದೂರಮಾಡಿ ಧನಾತ್ಮಕ ಮನೋಭಾವ ಬೆಳೆಸುವುದರೊಂದಿಗೆ ಮುಗ್ಧ ಮತ್ತು ಯುವ ಮನಸ್ಸುಗಳು ಕಲಿಕೆ ಹಾಗೂ ಭೌತಿಕ ತರಗತಿಗಳಿಗೆ ಒಗ್ಗಿಕೊಳ್ಳುವಂತೆ ಪ್ರೇರೇಪಿಸಲು ಸಮಸ್ತ ಶಿಕ್ಷಕ ಸಮು ದಾಯ ಸನ್ನದ್ಧವಾಗಿದೆ ಎಂದರೆ ಅತಿಶ ಯೋಕ್ತಿಯಾಗದು.

– ದಾಕ್ಷಾಯಿಣಿ ವೀರೇಶ್‌
ಶಿಕ್ಷಕಿ, ಮಂಗಳೂರು

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.