ಖಾದ್ಯ ತೈಲಗಳ ಬೆಲೆ ಇಳಿಕೆ ಸಾಧ್ಯತೆ


Team Udayavani, Jan 18, 2021, 6:33 AM IST

ಖಾದ್ಯ  ತೈಲಗಳ  ಬೆಲೆ ಇಳಿಕೆ ಸಾಧ್ಯತೆ

ಕಳೆದ ಕೆಲವು ತಿಂಗಳುಗ ಳಿಂದ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದ ಖಾದ್ಯ ತೈಲಗಳ ಬೆಲೆಗಳು ಶೀಘ್ರ ದÇÉೇ ಇಳಿಕೆಯಾಗುವ ಸಾಧ್ಯತೆ ಗಳಿವೆ. ಕಳೆದ ಕೆಲವು ತಿಂಗಳು ಗಳಲ್ಲಿ ಬೇಡಿಕೆ ಹೆಚ್ಚಾಗಿ ದ್ದರಿಂದ ಸಹಜವಾಗಿ ತೈಲ ಬೆಲೆ ಏರುಗತಿಯಲ್ಲಿಯೇ ಸಾಗಿತ್ತು. ಸದ್ಯ ತಾಳೆ ಮತ್ತು ಸೋಯಾ ಬೀನ್‌ ಎಣ್ಣೆಯ ಬೆಲೆ ಕುಸಿಯುವ ನಿರೀಕ್ಷೆಯಿದೆ. ಆದರೆ ಚಿಲ್ಲರೆ ವ್ಯಾಪಾರದಲ್ಲಿ ಈ ಬೆಲೆ ಇಳಿಕೆಯ ಪರಿಣಾಮ ಗೋಚರಿಸಲು ಇನ್ನೂ ಒಂದು ತಿಂಗಳು ಬೇಕಾಗಬಹುದು ಎಂಬುದು ತೈಲ ವ್ಯಾಪಾರಿಗಳ ಅಭಿಪ್ರಾಯ.

ದುಬಾರಿಯಾಗಿದ್ದ  ಬೆಲೆ :

ತಾಳೆ ಎಣ್ಣೆ, ನೆಲಗಡಲೆ, ಸಾಸಿವೆ, ಸೋಯಾಬೀನ್‌ ವರೆಗಿನ ಎಲ್ಲ ಖಾದ್ಯ ತೈಲಗಳ ಬೆಲೆಗಳು ಕಳೆದ ಕೆಲವು ತಿಂಗಳುಗಳಲ್ಲಿ ದಾಖಲೆಯ ಮಟ್ಟವನ್ನು ತಲುಪಿವೆ. ಡಿಸೆಂಬರ್‌ ತಿಂಗಳಲ್ಲಿ ಅವುಗಳ ಬೆಲೆಗಳು ಶೇ. 20ರಷ್ಟು ಹೆಚ್ಚಾಗಿದ್ದವು. ಆದರೆ ಈ ವರ್ಷ ಇವೆಲ್ಲವುಗಳ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಗಳಿವೆ.

ತಾಳೆ ಎಣ್ಣೆ ಅಗ್ಗ! :

ಸದ್ಯ ಖಾದ್ಯ ತೈಲಗಳಲ್ಲಿ ತಾಳೆ ಎಣ್ಣೆ ಅಗ್ಗವಾಗಿದೆ. ಇಷ್ಟು ಮಾತ್ರವಲ್ಲದೇ ಇತರ ತೈಲಗಳಿಗಿಂತ ಹೆಚ್ಚಾಗಿ ಇದನ್ನು ಬಳಸಲಾಗುತ್ತದೆ. ಜಾಗತಿಕ ತಾಳೆ ಎಣ್ಣೆ ಉತ್ಪಾದನೆಯಲ್ಲಿ ಶೇ. 85ರಷ್ಟು ಪಾಲು ಇಂಡೋನೇಷ್ಯಾ ಮತ್ತು ಮಲೇಷ್ಯಾದ್ದಾಗಿದೆ. ಕಳೆದ ವರ್ಷ ಮೇ ಅನಂತರ ಪಾಮ್‌ ಆಯಿಲ್‌ ಬೆಲೆ ಏರಿಕೆಯಾಗ ತೊಡಗಿತು. ಸೂರ್ಯಕಾಂತಿ, ಸಾಸಿವೆ, ನೆಲಗಡಲೆ ಸಹಿತ ಎಲ್ಲ ಖಾದ್ಯ ತೈಲಗಳ ಬೆಲೆ ಇದರ ಜತೆಗೆ ಏರಿಕೆಯಾಗಿದ್ದವು.

ಶೇ. 3ರಷ್ಟು ಕಡಿಮೆ? :

ತಾಳೆ ಎಣ್ಣೆ ದರ ಮತ್ತೆ ಯಥಾಸ್ಥಿತಿಗೆ ಬರುವ ಸೂಚನೆ ಇದೆ. ಡಿಸೆಂಬರ್‌ ತಿಂಗಳಿಗೆ ಹೋಲಿಸಿದರೆ 10 ಕಿಲೋ ಗ್ರಾಂಗೆ ಶೇ. 2.84ರಷ್ಟು ಇಳಿದು 950 ರೂ.ನಲ್ಲಿದೆ.

ಹಕ್ಕಿಜ್ವರ ಕಾಟ? :

ಈ ವರ್ಷ ದೇಶದಲ್ಲಿ ದಾಖಲೆ ಪ್ರಮಾಣ ದಲ್ಲಿ ಸೋಯಾಬೀನ್‌ ಉತ್ಪಾದನೆಯಾಗಿದೆ.  ಕೋಳಿ ಸಾಕಣೆ ಉದ್ಯಮದಲ್ಲಿ ಸೋಯಾಬೀನ್‌ ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಹಠಾತ್‌ ಆಗಿ ವಕ್ಕರಿಸಿರುವ ಹಕ್ಕಿ ಜ್ವರದಿಂದಾಗಿ ಈ ವರ್ಷ ಕೋಳಿ ಮಾಂಸದ ಬೇಡಿಕೆ ಕಡಿಮೆಯಾಗಿದೆ. ಇದು ಸೋಯಾಬೀನ್‌ ಬೆಲೆ  ಕಡಿಮೆಯಾಗಲು ಕಾರಣ ವಾಗುತ್ತಿದೆ. ದೇಶದ ಅತೀ ದೊಡ್ಡ ಸೋಯಾಬೀನ್‌ ಮಾರುಕಟ್ಟೆ ಯಾದ ಇಂದೋರ್‌ನಲ್ಲಿ ಕಳೆದ 14 ದಿನಗಳಲ್ಲಿ ಸೋಯಾಬೀನ್‌ ಬೆಲೆ ಶೇ. 15ರಷ್ಟು ಕಡಿಮೆಯಾಗಿದೆ. ಜನವರಿ 1ರಂದು  ಸೋಯಾಬೀನ್‌ ಕ್ವಿಂಟಾಲ್‌ಗೆ 4,700 ರೂ.ಗೆ ಮಾರಾಟವಾಗುತ್ತಿದ್ದರೆ, ಈಗ ಅದು 4,100 ರೂ.ಗೆ ಇಳಿಕೆಯಾಗಿದೆ.

ಶೇ. 8-10ರಷ್ಟು ಕಡಿತ ;

ಜಾಗತಿಕ ಮಾರುಕಟ್ಟೆಯ ಬದಲಾವಣೆಗಳು ಖಾದ್ಯ ತೈಲಗಳ ಬೆಲೆ ಕುಸಿತಕ್ಕೆ ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಕೆಡಿಯಾ ಅಡ್ವೆ„ಸರಿ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಕೆಡಿಯಾ ಹೇಳಿದ್ದಾರೆ. ಕಚ್ಚಾ ಪಾಮ್‌ ಆಯಿಲ್‌ನ ಬೆಲೆ ಮುಂದಿನ ಒಂದು ತಿಂಗಳಲ್ಲಿ ಶೇ. 8-10ರಷ್ಟು ಇಳಿಕೆಯಾಗಬಹುದು. ಅಂಥ ಪರಿಸ್ಥಿತಿಯಲ್ಲಿ ಇತರ ಖಾದ್ಯ ತೈಲಗಳ ಬೆಲೆ ಇನ್ನಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ.

ಬೆಲೆ ಇಳಿಕೆ ಸಾಧ್ಯತೆ ಇರುವ ಖಾದ್ಯ ತೈಲಗಳು ಸಾಸಿವೆ ಎಣ್ಣೆ  :

ಹೊಸ ಸಾಸಿವೆ ಬೆಳೆ ಕಟಾವಿಗೆ ಬರಲಾರಂಭಿಸಿದೆ. ಈ ವರ್ಷ ಉತ್ತಮ ಇಳುವರಿ ಇದೆ. ಸಾಸಿವೆ ಎಣ್ಣೆಯಲ್ಲಿ ಇತರ ಎಣ್ಣೆಯನ್ನು ಮಿಶ್ರಣ ಮಾಡಲು ಕೇಂದ್ರ ಮತ್ತೆ ಅವಕಾಶ ನೀಡಿದೆ. ಇದು ಸಾಸಿವೆ ಎಣ್ಣೆಯ ಬೆಲೆಯನ್ನು ಕಡಿಮೆಗೊಳಿಸಲಿದೆ.

ತಾಳೆ ಎಣ್ಣೆ  ಮಲೇಷ್ಯಾ ಜೈವಿಕ ಇಂಧನಕ್ಕೆ ಶೇ. 20 – ಶೇ. 40ರಷ್ಟು ತಾಳೆ ಎಣ್ಣೆಯನ್ನು ಸೇರಿಸಲು ಯೋಜಿ ಸಿದೆ. ಆದರೆ ಈಗ ಇದನ್ನು 1 ವರ್ಷ ಮುಂದೂಡಲಾಗಿದೆ. ಇನ್ನು ಮಲೇಷ್ಯಾದಲ್ಲಿ ಲಾಕ್‌ಡೌನ್‌ ಜಾರಿ ಯಲ್ಲಿರುವುದರಿಂದ ದೇಶೀಯ ಬೇಡಿ ಕೆಯೂ ಕುಸಿದಿದೆ.

ಸೋಯಾಬೀನ್‌ ತೈಲ: ದೇಶವು ಈ ವರ್ಷ 104.55 ಲಕ್ಷ ಟನ್‌ ಸೋಯಾಬೀನ್‌ ಉತ್ಪಾದಿಸುತ್ತದೆ ಎಂದು ಅಂದಾಜಿಸ ಲಾಗಿದೆ. ಇದು ಹಿಂದಿನ ವರ್ಷಕ್ಕಿಂತ ಶೇ. 15ರಷ್ಟು ಹೆಚ್ಚಾಗಿದೆ.

 

ಟಾಪ್ ನ್ಯೂಸ್

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

Biriyani was being served on paper plates with images of Lord Rama

Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರK. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Jamyang Tsering Namgyal missed bjp ticket in ladakh

Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್‌ ಹಾಲಿ ಸಂಸದ ನಮ್‌ಗ್ಯಾಲ್‌ ಗೆ ಕೊಕ್‌

8-

Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.