ಗಮಕ ವಾಚನದ ಮೂಲ ರಾಮಾಯಣ: ರಾಮ ಪ್ರಸಾದ್‌


Team Udayavani, May 5, 2021, 1:33 PM IST

ramayana

ದಕ್ಷಿಣ ಕ್ಯಾಲಿಫೋರ್ನಿಯಾ

ಸಾಹಿತ್ಯವನ್ನು ಸಂಗೀತದ ಮೂಲಕ ಪ್ರೇಕ್ಷಕರಿಗೆ ಮುಟ್ಟಿಸುವುದಕ್ಕೆ ಗಮಕ ಅಥವಾ ಕಾವ್ಯ ವಾಚನ ಎನ್ನಲಾಗುತ್ತದೆ. ಇದಕ್ಕೆ ಮೂಲ ವಾಲ್ಮೀಕಿ ರಾಮಾಯಣ ಎಂದು ಗಮಕ ವಾಚಕ ರಾಮ ಪ್ರಸಾದ್‌ ಕೆ.ವಿಯ ಹೇಳಿದರು.

ದಕ್ಷಿಣ ಕ್ಯಾಲಿಫೋರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘದ ವತಿಯಿಂದ ನಿಮ್ಮಲ್ಲಿಗೆ ಕನ್ನಡ ಕೂಟ ಕಾರ್ಯಕ್ರಮದಲ್ಲಿ “ಗಮಕ ಕಲೆ- ಕಾವ್ಯ ವಾಚನ ಕರ್ನಾಟಕದ ಒಂದು ವಿಶಿಷ್ಟ ಕಲೆ’ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಯನ್ನು ಗುರುವಾರ ಅವರು ರಾಮನ ಸ್ತುತಿಯೊಂದಿಗೆ ಪ್ರಾರಂಭಿಸಿದರು.

ಏಳು ಕಾಂಡಗಳ ರಾಮಾಯಣವನ್ನು ರಚಿಸಿದ ವಾಲ್ಮೀಕಿಗಳು  ಲವಕುಶರಿಗೆ ಹೇಳಿಕೊಡುತ್ತಾರೆ. ಇದನ್ನು ಸರಿಯಾಗಿ ಕೇಳುವಂತೆ, ಸುಮಧುರ ಕಂಠದಲ್ಲಿ, ಸಂಗೀತದ ಅಂಶಗಳನ್ನು ಹೊಂದಿದ, ಬೇರೆಬೇರೆ ಭಾಗಗಳಿಂದ ಒಂದುಗೂಡಿದ, ವೀಣೆಯ ಪಕ್ಕ ವಾದ್ಯಕ್ಕೆ, ಲಯವನ್ನು ಸೇರಿಸಿ ಇದನ್ನು  ಹಾಡುವಂತೆ ಹೇಳಿಕೊಟ್ಟರು ಎಂದು ಅವರು ತಿಳಿಸಿದರು.

ಅಂದು ಆರಂಭವಾದ ಈ ಕಲೆ ಭಾರತದೆಲ್ಲೆಡೆ ವ್ಯಾಪಿಸಿರಬೇಕು. ಆದರೆ ಇವತ್ತು ಕರ್ನಾಟಕದಲ್ಲಿ ಬಿಟ್ಟು ಬೇರೆಲ್ಲೂ ಇದು ಅಷ್ಟು ಪ್ರಸಿದ್ಧವಾಗಿ ಬಳಕೆಯಲ್ಲಿಲ್ಲ. ಇದು ಸಾವಿರಾರು ವರ್ಷದಿಂದ ಕನ್ನಡ ನಾಡಿನಲ್ಲಿದ್ದು ಇಂದಿಗೂ ಬೆಳೆಯುತ್ತಲೇ ಇದೆ. ಇದಕ್ಕೆ ಸಾಕ್ಷಿ ಶಾಂತಿ ವರ್ಮನ ಶಾಸನದಲ್ಲಿ ಇದರ ಉಲ್ಲೇಖವಿದೆ ಎಂದು ತಿಳಿಸಿದರು.

ಸುಮಾರು 100- 150 ವರ್ಷಗಳ ಹಿಂದೆ ಮೈಸೂರು ಪ್ರಾಂತ್ಯದಲ್ಲಿ ಜೈಮಿನಿ ಭಾರತವನ್ನು ಓದಿ, ಅರ್ಥ ಮಾಡಿಕೊ ಳ್ಳುವುದು ವಿದ್ಯಾವಂತನ ಸೂಚಕವಾಗಿತ್ತು. ಇವತ್ತಿಗೂ ಕೂಡ ಹೊಸ ಕಾವ್ಯಗಳನ್ನು ಬರೆಯುವವರು ಇದ್ದಾರೆ ಎಂದರು.

ಹೊಸ ಕಾವ್ಯಗಳಲ್ಲಿ ಪ್ರೊ| ವಿ. ನರಹರಿ ಅವರು ದಶಾವತಾರ ಕಾವ್ಯದಲ್ಲಿ ಪೀಠಿಕೆಯಾಗಿ ಬರೆದಿರುವ ಗಮಕಿ ಹಾಡನ್ನು ಹಾಡಿದ ರಾಮ ಪ್ರಸಾದ್‌ ಬಳಿಕ ಅದರ ವಿವರಣೆಯನ್ನು ನೀಡಿದರು.

ಸಾಹಿತ್ಯ ರಸವೇ ಪ್ರಧಾನ

ಗಮಕ ಕೇಳುವಾಗ ಅದರ ಪದಗಳ ಅರ್ಥ ತನಾಗೇ ಆಗಬೇಕು. ಅದಕ್ಕೆ ಬೇರೆ ವಿಶ್ಲೇಷಣೆಯ ಅಗತ್ಯವಿರುವುದಿಲ್ಲ. ಇದುವೇ ಗಮಕ ಮತ್ತು ಶಾಸ್ತ್ರೀಯ ಸಂಗೀತಕ್ಕೆ ಇರುವ ವ್ಯತ್ಯಾಸ. ಗಮಕದಲ್ಲಿ ಸಂಗೀತ ಗೌಣ

ವಾಗಿದ್ದು,  ಸಾಹಿತ್ಯದ ರಸವೇ ಪ್ರಾಮುಖ್ಯ ವಾಗಿರುತ್ತದೆ. ಆದರೆ ಸಂಗೀತದಲ್ಲಿ ಸಾಹಿತ್ಯ ಗೌಣವಾಗಿದ್ದು ಸಂಗೀತವೇ ಪ್ರಧಾನ ವಾಗಿರುತ್ತದೆ ಎಂದು ವಿವರಿಸಿದರು.

ದೊಡ್ಡ ದೊಡ್ಡ ಕವಿಗಳು ಬಂದು ಹೋಗಿದ್ದಾರೆ. ಆದರೆ ನಮ್ಮಲ್ಲಿ ಏನು ಉಳಿದಿದೆಯೋ ಅದನ್ನು ಕೇಳಿ ಆನಂದಿಸುವ ಕೆಲಸವನ್ನು ಗಮಕ ಕಲೆ ಮಾಡುತ್ತಿದೆ. ಕಾವ್ಯ ವಾಚನದಲ್ಲಿ ಹೀಗೆ ಹಾಡಬೇಕು ಎಂಬ ನಿಯಮವಿಲ್ಲ. ಪಕ್ಕ ವಾದ್ಯದ ಅಗತ್ಯವೂ ಇರುವುದಿಲ್ಲ. ಇದು ಓದುವ ದಿನದ ಮನೋ ಧರ್ಮವನ್ನು ಅವಲಂಬಿಸಿರುತ್ತದೆ. ಇದನ್ನು ಪ್ರೇಕ್ಷಕ, ವಾಚಕ ಬೇರೆಬೇರೆ ರೀತಿಯಲ್ಲಿ ಅನುಭವಿಸಬಹುದು ಎಂದರು.

ಲಯಬದ್ಧವಾಗಿ ಹರಿಹರನ ರಗಳೆ ಯನ್ನು ವಾಚಿಸಿದ ರಾಮ ಪ್ರಸಾದ್‌ ಅವರು, ಹಾಡಿನ ಕುಣಿತವನ್ನು ಈ ರಗಳೆ ಯಲ್ಲಿ ತೋರಿಸಲಾಗಿದ್ದು, ಇದರಲ್ಲಿ ಭಾವ ವನ್ನು ವ್ಯಕ್ತಪಡಿಸಲು ಒಂದು ಮಾಧ್ಯಮ ವಾಗುತ್ತದೆ. ಕಾವ್ಯಗಳ ವಾಚನ ಮಾಡುವಾಗ ವ್ಯಾಖ್ಯಾನಕಾರರು ಇರುತ್ತಾರೆ. ವಾಚಕರು ಉತ್ತಮವೆನಿಸಿದ  ಕಾವ್ಯಗಳನ್ನು ಮಾತ್ರ ಹಾಡುತ್ತಾರೆ. ಇಲ್ಲಿ ಕಥೆಗಳನ್ನು ಒಂದ ಕ್ಕೊಂದು ಜೋಡಿಸುವ ಕಾರ್ಯವನ್ನು ವಾಖ್ಯಾನ ಕಾರರು ಮಾಡುತ್ತಾರೆ ಎಂದು ತಿಳಿಸಿದರು.

ಕುಮಾರವ್ಯಾಸನ ಜೈಮಿನಿ ಭಾರತದಲ್ಲಿ ಕರ್ಣನ ಜನನದ ಕಾವ್ಯವನ್ನು ವಾಚಿಸಿದ ರಾಮಪ್ರಸಾದ್‌ ಅವರು, ಪದ್ಯವನ್ನು ಓದಿ ಅರ್ಥ ಮಾಡಿಕೊಂಡು ಅದಕ್ಕೆ ತಕ್ಕ ರಾಗವನ್ನು ಬಳಸಬೇಕಾಗುತ್ತದೆ. ಇದು ಗಮಕ ವಾಚನದ ಪ್ರಮುಖ ಲಕ್ಷಣಗಳು ಎಂದ ಅವರು ಇದರೊಂದಿಗೆ ಕರ್ನಾಟಕ ಶ್ರೇಷ್ಠ ಕಾವ್ಯಗಳು, ವ್ಯಾಖ್ಯಾನಕಾರರು, ವಚನಕಾರರ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ಅನಂತ ಪ್ರಸಾದ್‌ ಎಲ್ಲರನ್ನೂ ಸ್ವಾಗತಿಸುವ ಮೂಲಕ ಪ್ರಾರಂಭಿಸಿದರು. ಸಂಘದ ವಿಶ್ವೇಶ್ವರ ದೀಕ್ಷಿತ್‌ ಅವರು ರಾಮಪ್ರಸಾದ್‌ ಕೆ.ವಿ. ಅವರನ್ನು ಪರಿಚಯಿಸಿದರು. ಗುರುಪ್ರಸಾದ್‌ ಅವರು ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.