ಹಳ್ಳಿ – ಪೇಟೆ ವಾಸದ ಮಂಥನ ಡಾ| ಕಾರಂತರ “ಚಿಗುರಿದ ಕನಸು’


Team Udayavani, Nov 21, 2020, 5:30 AM IST

ಹಳ್ಳಿ – ಪೇಟೆ ವಾಸದ ಮಂಥನ ಡಾ| ಕಾರಂತರ “ಚಿಗುರಿದ ಕನಸು’

ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.

ಹುಟ್ಟಿ ಬೆಳೆದ ನೆಲವನ್ನು ಬಿಟ್ಟು ಪೇಟೆಯ ಮೋಹಕ ಬಲೆಯೊಳಗೆ ಸಿಲುಕಿ ತಮ್ಮ ಮೂಲ ನೆಲೆ, ಅಲ್ಲಿನ ಪರಿಸರ, ಬಂಧು ಬಾಂಧವ್ಯದ ಬಗ್ಗೆ ಕಿಂಚಿತ್ತೂ ಚಿಂತಿಸದೆ ಆಧುನಿಕ ಬದುಕಿನ ದಾಸರಾಗಿರುವವರು ಡಾ| ಶಿವರಾಮ ಕಾರಂತರ “ಚಿಗುರಿದ ಕನಸು’ ಕಾದಂಬರಿಯನ್ನು ಓದಿದರೆ ಅದ್ಭುತ ಬದಲಾವಣೆ ಸಾಧ್ಯ.

ಕಾದಂಬರಿಯ ನಾಯಕ ಶಂಕರ ಹುಟ್ಟಿ ಬೆಳೆದದ್ದು ಮುಂಬಯಿಯಲ್ಲಿ. ಆದರೂ ತನ್ನ ಮೂಲ ಸ್ಥಳ ಮುಂಬಯಿ ಅಲ್ಲ ಎಂದು ಅವನ ಮನಸ್ಸು ಹೇಳುತ್ತಿ ರುತ್ತದೆ. ತಂದೆ ಯೊಂದಿಗಿನ ಒಂದು ಸಣ್ಣ ಮಾತುಕತೆ ಸಂದರ್ಭದಲ್ಲಿ, “ನಿಮ್ಮ ತಾತ, ಅಂದರೆ ನನ್ನ ತಂದೆ ಮೂಲತಃ ಇಲ್ಲಿಯವರಲ್ಲ. ಅದ್ಯಾವುದೋ ಬೆಳ್ತಂಗಡಿಯ ಪಕ್ಕದ ಬಂಗಾಡಿ ಎಂಬ ಹಳ್ಳಿಯವರು’ ಎಂದು ಹೇಳಿದ ಬಳಿಕ ಶಂಕರನಲ್ಲಿ ದೊಡ್ಡ ಬದಲಾವಣೆ ಕಂಡು ಬರುತ್ತದೆ.

ಶಂಕರನು ಮುಂಬಯಿಯಲ್ಲಿ ಪ್ರೀತಿಸಿದ್ದ ಹುಡುಗಿಯನ್ನೂ ಅಗಲಿ ಸೀದಾ ಬಂಗಾಡಿ ಯೆಂಬ ಊರನ್ನು ಹುಡುಕುತ್ತಾ ಹೋಗಿ ಅಲ್ಲಿಯೇ ನೆಲೆ ನಿಲ್ಲುತ್ತಾನೆ. ಅಲ್ಲಿ ಎದು ರಾಗುವ ಶಾನುಭೋಗರ ಉಪದ್ರದ ಮಧ್ಯೆಯೂ ಪಾಳು ಬಿದ್ದ ಮನೆಯನ್ನು ಸರಿಪಡಿಸಿ, ಗದ್ದೆ ಉಳುಮೆ ಮಾಡಿ ಬೆಳೆ ಬೆಳೆದು, ಅಬ್ಬಿ ಫಾಲ್ಸ್‌ಗೆ ಮೋಟಾರ್‌ ಇರಿಸಿ ವಿದ್ಯುತ್‌ ಉತ್ಪಾದಿಸುತ್ತಿದ್ದ. ತಾತನ ಸಹೋದರಿಯ (ಅಜ್ಜಿಯ) ಕೊನೆಯ ಕ್ಷಣಗಳಲ್ಲಿ ಅವಳ ಆಸೆಯನ್ನು ಪೂರೈಸಿ ಅವಳನ್ನು ಆರೈಕೆ ಮಾಡುತ್ತಾನೆ. ಬಂಗಾಡಿಯು ಮತ್ತೆ ಹಸುರಿನಿಂದ ಕಂಗೊಳಿಸುವಂತೆ ಮಾಡುತ್ತಾನೆ.

ಶಂಕರನಿಗೆ ಗದ್ದೆಯ ಮಣ್ಣು, ನೀರಾವರಿ, ಮಲೆನಾಡಿನ ಬಿರುಸಾದ ಮಳೆ… ಮುಂತಾ ದವುಗಳ ಬಗ್ಗೆ ಯಾವುದೇ ಮಾಹಿತಿ ಇರದಿದ್ದರೂ ತಾತನ ಜಾಗದಲ್ಲಿ ನೆಲೆನಿಂತು ಅಜ್ಜನನ್ನು ಮರು ಸೃಷ್ಟಿಸುವ ರೋಚಕತೆ ಯನ್ನು ಕಾರಂತರು ವರ್ಣಿಸಿದ್ದಾರೆ.

ಈ ಕೃತಿಯ ಬರವಣಿಗೆ ಶೈಲಿ ಓದುಗನನ್ನು ಹಿಡಿದಿಡುತ್ತದೆ. ಕಾದಂಬರಿಯನ್ನು ಓದುತ್ತಾ ಸಾಗುವಾಗ ಧಾರಾಕಾರ ಮಳೆಯ ಮಧ್ಯೆ ನಿಂತಿದ್ದೇವೆ, ಗದ್ದೆಯನ್ನು ಉಳುತ್ತಿದ್ದೇವೆ, ಘಟ್ಟದ ತುದಿಯಲ್ಲಿ ನಿಂತು ಮಾತನಾಡು ತ್ತಿದ್ದೇವೆ ಇತ್ಯಾದಿ ಭಾವನೆ ಓದುಗನಲ್ಲಿ ಮೂಡುತ್ತದೆ.

ಕಾರಂತರು ಬಳಸಿದ ಭಾಷಾ ಶೈಲಿ, ಕಾದಂಬರಿಯಲ್ಲಿ ಬರುವ ತಿರುವುಗಳು, ಪ್ರೇಮ ವಿರಹದ ಕ್ಷಣ, ತಂದೆ ಮಗನ ಸಂಬಂಧ ಎಲ್ಲವೂ ಅದ್ಭುತ ವಾಗಿವೆ. 2003ರಲ್ಲಿ ಈ ಕಾದಂಬರಿಯು ಶಿವರಾಜ ಕುಮಾರ್‌ ನಟನೆ ಯಲ್ಲಿ ಟಿ.ಎಸ್‌. ನಾಗಾ ಭರಣ ನಿರ್ದೇಶನದಲ್ಲಿ ಸಿನೆಮಾ ಆಗಿ ರಾಜ್ಯ ಮಟ್ಟದ ಪ್ರಶಸ್ತಿ ಗಳನ್ನು ಕೂಡ ಗೆದ್ದಿತ್ತು.

ಕೊರೊನಾ ಸಂದರ್ಭದಲ್ಲಿ ಒಂದು ದೊಡ್ಡ ವರ್ಗ ಕೃಷಿಯತ್ತ ವಾಲಿದ್ದು, ಅಂಥವರು ಈ ಕೃತಿಯನ್ನು ಓದಿದರೆ ಒಳಿತು. ಪೇಟೆಯ ಖುಷಿ ಕ್ಷಣಿಕವಾದುದು ಮತ್ತು ಹಳ್ಳಿಯ ಬಹುಶ್ರೀಮಂತಿಕೆಯು ನಮಗೆ ಎಲ್ಲ ರೀತಿಯಲ್ಲೂ ಸಂತೋಷವನ್ನು ಕೊಡುತ್ತದೆೆ. ಜತೆಗೆ ಕೃಷಿಯ ಮಹತ್ವದ ಬಗ್ಗೆಯೂ, ಪರಿಸರದ ಬಗ್ಗೆಯೂ ಈ ಕೃತಿಯು ನಮಗೆ ಸಾಕಷ್ಟು ಮಾಹಿತಿ ನೀಡುತ್ತದೆ.

ಆಧುನಿಕತೆಯ ಭರಾಟೆಯಲ್ಲಿ ನಮ್ಮ ಪೂರ್ವಜರ ನೆಲೆಯನ್ನು ದೂರ ಮಾಡಿ, ಕೃಷಿಯನ್ನು ಮರೆತರೆ ಏನೇನು ಸಂಕಷ್ಟಗಳು ಎದುರಾಗಲಿವೆ ಎಂಬ ಬಗ್ಗೆಯೂ ಕೃತಿ ನಮ್ಮ ಕಣ್ಣು ತೆರೆಸುತ್ತದೆ. ಕೃತಿಯು ಹಳ್ಳಿ ಮತ್ತು ಪೇಟೆವಾಸದ ನಡುವಿನ ವ್ಯತ್ಯಾಸ, ಪ್ರಕೃತಿಯ ಮಡಿಲಿನ ಖುಷಿಯನ್ನು ಸುಂದರ ಶಬ್ದಗಳಲ್ಲಿ ನಮಗೆ ಕಟ್ಟಿ ಕೊಡುವಲ್ಲಿ ಸಫ‌ಲವಾಗಿದೆ. ಮಳೆಯ ಜತೆ ನಮ್ಮನ್ನು ಓದಿಸುತ್ತಾ ಹೋಗುವ ಈ ಕಾದಂಬರಿ ಚೆನ್ನಾಗಿದೆ.

ಬಸನಗೌಡ ಪಾಟೀಲ್‌, ಯರಗುಪ್ಪಿ

ಟಾಪ್ ನ್ಯೂಸ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8-muddebihala

Muddebihal: ನೇಹಾ ಕೊಲೆ ಖಂಡಿಸಿ ಪ್ರತಿಭಟನೆ: ಮುಸ್ಲಿಂ ಮುಖಂಡರು ಭಾಗಿ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.