ಕ್ರಿಯಾಯೋಗವೆಂಬ ಆಧ್ಯಾತ್ಮಿಕ ರಹದಾರಿ


Team Udayavani, Jun 21, 2019, 9:28 AM IST

saghur

ಮೈಸೂರಿನಲ್ಲಿ ಜನಿಸಿ ಬಾಲ್ಯದಿಂದಲೇ ಯೋಗದತ್ತ ಆಕರ್ಷಿತರಾಗಿ ಮಲ್ಲಾಡಿ ಹಳ್ಳಿಯಲ್ಲಿ ರಾಘವೇಂದ್ರ ಸ್ವಾಮಿಗಳ ಬಳಿ ಯೋಗ ಕಲಿತು ಕೊಯಮತ್ತೂರಿನಲ್ಲಿ ಈಶ ಫೌಂಡೇಶನ್‌ ಸ್ಥಾಪಿಸಿ ಜಾಗತಿಕ ಯೋಗ ಗುರುವಾಗಿ ಬೆಳೆದು ಬೆಳಗುತ್ತಿರುವವರು ಜಗ್ಗಿ ವಾಸುದೇವ್‌. “ಸದ್ಗುರು’ ಎಂದೇ ಹೆಚ್ಚು ಪರಿಚಿತರಾಗಿರುವ ಜಗ್ಗಿಯವರು ಉದಯವಾಣಿ ಯೋಗೋತ್ಸವಕ್ಕಾಗಿ ಬರೆದ ಲೇಖನ ಇದು.

ಸದ್ಗುರು, ಈಶ ಫೌಂಡೇಶನ್‌

ಮೂಲಭೂತವಾಗಿ, ಕ್ರಿಯಾ (ಕ್ರಿಯೆ) ಎಂದರೆ ಆಂತರಿಕ ಕಾರ್ಯ. ನೀವು ಆಂತರಿಕ ಕಾರ್ಯವನ್ನೆಸಗಿದಾಗ, ಅದು ಶರೀರ ಮತ್ತು ಮನಸ್ಸನ್ನು ಒಳಗೊಂಡಿರುವುದಿಲ್ಲ, ಏಕೆಂದರೆ ಶರೀರ ಮನಸ್ಸುಗಳೆರಡೂ ನಿಮಗೆ ಹೊರಗಿನವುಗಳೇ. ನಿಮಗೆ ನಿಮ್ಮ ಜೀವಶಕ್ತಿಗಳೊಂದಿಗೆ ಕಾರ್ಯಗೈಯ ಬಲ್ಲಂತಹ ಒಂದು ಪ್ರಭುತ್ವವಿದ್ದಾಗ, ಅದನ್ನು ಕ್ರಿಯಾ ಎನ್ನುತ್ತೇವೆ. ಬಾಹ್ಯ ಕಾರ್ಯ ಕರ್ಮ; ಆಂತರಿಕ ಕಾರ್ಯ ಕ್ರಿಯಾ. ಸಾಂಪ್ರದಾಯಿಕವಾಗಿ ಅಥವಾ ಸಾಮಾನ್ಯ ಅರ್ಥದಲ್ಲಿ ಕರ್ಮಗಳು ಬಂಧಿಸುವಂಥವು, ಕ್ರಿಯೆಗಳು ಮುಕ್ತಗೊಳಿಸುವಂಥವು.

ನೀವು ನಿಮ್ಮ ಶರೀರದೊಂದಿಗೆ, ಮನಃಸ್ಥಿತಿಯೊಂದಿಗೆ, ಯೋಚನೆ ಗಳೊಂದಿಗೆ ಏನೇ ಮಾಡಿದರೂ ಅವನ್ನು ನಂಬಲಾಗುವುದಿಲ್ಲ. ಇವತ್ತು ನಿಮ್ಮ ಯೋಚನೆಗಳು ಒಂದು ದಿಕ್ಕಿನಲ್ಲಿ ಹರಿಯುತ್ತಿರ ಬಹುದು. ನಾಳೆ ಯಾರೋ ಬಂದು ನಿಮ್ಮನ್ನು ಪ್ರಭಾವಿಸಿದರೆ, ಅವು ಇನ್ನೊಂದು ದಿಕ್ಕಿನಲ್ಲಿ ಹೋಗುತ್ತವೆ. ಹಾಗೆಯೇ ದೇಹ ಕೂಡ. ಇವತ್ತು ದೇಹ ಚೆನ್ನಾಗಿದೆ, ಆದ್ದರಿಂದ ಅದಕ್ಕೆ ಆಸನ ಮಾಡಲು ಇಷ್ಟ. ನಾಳೆ ದೇಹ ಸ್ವಲ್ಪ ಸೆಟೆದುಕೊಂಡಿದ್ದರೆ, ನಿಮಗೆ ಆಸನಗಳ ಮೇಲೆ ಕೋಪ ಬರುತ್ತದೆ. ಭಾವನೆಗಳನ್ನಂತೂ ಸ್ವಲ್ಪವೂ ನೆಚ್ಚಿಕೊಳ್ಳಲಾಗದು. ಆದರೆ ಜೀವಶಕ್ತಿ ಹಾಗಿಲ್ಲ. ಒಮ್ಮೆ ಜೀವಶಕ್ತಿಯ ಮೇಲೆ ಒಂದು ನಿರ್ದಿಷ್ಟ ರೀತಿಯಲ್ಲಿ ಕಾರ್ಯಗೈಯಲು ಆರಂಭಿಸಿ ದಿರೆಂದರೆ, ಅದು ಜೀವನಕ್ಕೆ ಬೇರೆಯೇ ತರದ ಆಳ-ಗಹನತೆ ತರುತ್ತದೆ. ನಿಮ್ಮ ಜೀವನದ ಪ್ರತಿ ಅಂಶಕ್ಕೂ ಒಂದು ಹೊಸ ಆಯಾಮ ಇರುತ್ತದೆ. ಏಕೆಂದರೆ ನಿಮ್ಮ ಜೀವಶಕ್ತಿಗಳು ಸ್ಪರ್ಶಿಸಲ್ಪಟ್ಟು ಸಂಪೂರ್ಣವಾಗಿ ಬೇರೆ ರೀತಿಯಲ್ಲಿ ಸಕ್ರಿಯವಾಗಿವೆ.
ಆಧ್ಯಾತ್ಮದ ದಾರಿಯಲ್ಲಿ ಸಾಗಲು ಕ್ರಿಯಾಯೋಗವು ಬಹಳ ಶಕ್ತಿಯುತವಾದ ವಿಧಾನ. ಆದರೆ ಅದು ನಿಮ್ಮಿಂದ ಬಹಳ ವಿಷಯಗಳನ್ನು ಕೋರುತ್ತದೆ. ಅದು ಶಿಸ್ತು ಮತ್ತು ಎಲ್ಲ ವಿಷಯಗಳಲ್ಲಿ ನಿಖರತೆಯನ್ನು ಬೇಡುತ್ತದೆ. ಈಗ ಹೆಚ್ಚಿನ ವರಿಗೆ ಕ್ರಿಯಾಯೋಗದ ಮಾರ್ಗಕ್ಕೆ ಆವಶ್ಯಕವಾದ ದೇಹವಾಗಲಿ, ಮನಸ್ಸಾಗಲಿ ಅಥವಾ ಭಾವನೆಗಳ ಸ್ಥಿರತೆಯಾಗಲಿ ಇಲ್ಲ. ಏಕೆಂದರೆ ಬಾಲ್ಯದಿಂದಲೇ ಜನರು ಬಹಳ ಸುಖಸೌಕರ್ಯಗಳ ಆರಾಮದಲ್ಲಿದ್ದಾರೆ. ಆರಾಮ ಎಂದರೆ ಭೌತಿಕ ಆರಾಮವಲ್ಲ. ನಿಮ್ಮ ಇಡೀ ಜೀವ ಸದಾ ಆರಾಮವನ್ನು ಬಯಸುತ್ತಿದೆ. ಇದೊಂದು ದೊಡ್ಡ ತಡೆ. ಈ ಆರಾಮದ ಮನಸ್ಸು-ಭಾವನೆಗಳು ಕ್ರಿಯಾಯೋಗದ ಮಾರ್ಗಕ್ಕೆ ಸೂಕ್ತವಲ್ಲ.

ನಿಮಗೆ ಕ್ರಿಯಾ ಒಂದು ಜೀವಂತ ಪ್ರಕ್ರಿಯೆಯಾಗಬೇಕೆಂದಿದ್ದರೆ, ಅದು ನಿಮ್ಮ ಜೀವವ್ಯವಸ್ಥೆಯಲ್ಲಿ ನಿರ್ದಿಷ್ಟ ರೀತಿ ಯಲ್ಲಿ ಅಚ್ಚೊತ್ತಬೇಕಿದ್ದರೆ, ಅದಕ್ಕೊಂದು ರೀತಿಯ ಶಿಸ್ತು ಮತ್ತು ಶ್ರದ್ಧೆಯ ಅಗತ್ಯ ವಿದೆ. ಆರಂಭದಲ್ಲಿ, ಇವರು ಇದೇನು ಮಾಡುತ್ತಿದ್ದಾರೆ ನನ್ನ ಜತೆ ಎಂದು ನಿಮಗೆ ಅಚ್ಚರಿಯಾಗಬಹುದು, ಏಕೆಂದರೆ ಕ್ರಿಯಾ ಗಳ ಆರಂಭಿಕ ಹಂತಗಳು ಹಾಗಿರುತ್ತವೆ. ಅಂಥ ಕಾಯುವಿಕೆಯನ್ನು ತಾಳಿಕೊಳ್ಳುವಷ್ಟು ವಿಶ್ವಾಸವಿರಬೇಕು. ಇಲ್ಲದಿದ್ದರೆ ಕ್ರಿಯಾ ಕಷ್ಟಕರವಾಗುತ್ತದೆ.

ಜ್ಞಾನೋದಯವನ್ನು ಮೀರಿ ನಿಮಗೇನಾದರೂ ಮಾಡಬೇಕೆಂದಿದ್ದರೆ ಮಾತ್ರ ಕ್ರಿಯಾ ಯೋಗ ಮುಖ್ಯ. ನೀವು ಕ್ರಿಯಾಯೋಗದ ಮಾರ್ಗವನ್ನು ತೀವ್ರವಾಗಿ ಅನುಸರಿಸಿದರೆ, ಮಾರ್ಗದರ್ಶನವಿಲ್ಲದೆ ಇದು ಪಕ್ವವಾಗಲು ಕೆಲವು ಜೀವಿತಾವಧಿಗಳೇ ಬೇಕಾಗ ಬಹುದು. ಮಾರ್ಗದರ್ಶನ ಮಾಡುವವರು ಬದುಕಿದ್ದರೆ, ಅದು ಈ ಜನ್ಮ ದ ಸಂಭವಿಸಬಹುದು. ಇಲ್ಲದಿದ್ದರೆ, ಕ್ರಿಯಾ ಯೋಗ  ಸುತ್ತು ಬಳಸಿನ ಮಾರ್ಗ. ಆದರಿಲ್ಲಿ ನೀವು ಜ್ಞಾನೋದಯವನ್ನು ಮಾತ್ರ ಅರಸುತ್ತಿಲ್ಲ, ನೀವು ಜೀವನಿರ್ಮಾಣದ ಕಾರ್ಯ ವೈಖರಿಯನ್ನೂ ಅರಿಯಲು ಆಶಿಸುತ್ತೀರಿ. ಜೀವವು ರಚಿಸಲ್ಪಟ್ಟಿರುವ ಹಿಂದಿನ ವಿಜ್ಞಾನವನ್ನೂ ಅರ್ಥೈಸಿಕೊಳ್ಳಲು ಆಶಿಸುತ್ತೀರಿ. ಅದಕ್ಕಾ ಗಿಯೇ ಅದು ದೀರ್ಘಾವಧಿ ಪ್ರಕ್ರಿಯೆ.

ಟಾಪ್ ನ್ಯೂಸ್

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಸ್ವಾತಂತ್ರ್ಯ ಅಮೃತಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಅಮೃತ ಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.