ಸಣ್ಣಕಥೆಗಳು: ರೂಪ-ವಿರೂಪ


Team Udayavani, Mar 23, 2023, 9:00 AM IST

tdy-17

ಆಕೆ ಸಿನೆಮಾ ತಾರೆ. ಸುಂದರವಾದ ಮುಖ- ಮೈಕಟ್ಟು, ಮೊಗ್ಗು ಬಿರಿದಂಥ ನಗುವಿನ, ಬೊಗಸೆ ಕಂಗಳ ಚೆಲುವೆ. ಅದೆಷ್ಟೋ ಸೂಪರ್‌ ಹಿಟ್‌ ಸಿನೆಮಾಗಳಲ್ಲಿ ಅಭಿನಯಿಸಿ, ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡವಳು. ಆಕೆಯ ಸೌಂದರ್ಯಕ್ಕೆ ಮಾರುಹೋದ ಯುವಕರು ಅವಳನ್ನು “ಕನಸಿನ ರಾಣಿ’ ಎಂದೇ ಕರೆಯುತ್ತಿದ್ದರು. ತನ್ನ ಮನೋಜ್ಞ ಅಭಿನಯಕ್ಕಾಗಿ ಸಾಲು- ಸಾಲಾಗಿ ಪ್ರಶಸ್ತಿಗಳನ್ನು ಪಡೆದಿದ್ದಳು. ದೊಡ್ಡದಾದ ಬಂಗಲೆಯಲ್ಲಿ ವಾಸ. ಮನೆಯಲ್ಲಿನ ಕಣ್ಣು ಕೋರೈಸುವಂಥ ದೀಪಗಳು, ನೆಲಕ್ಕೆ ಹಾಸಿದ ರತ್ನಗಂಬಳಿ, ದೇಶ- ವಿದೇಶಗಳಿಂದ ಸಂಗ್ರಹಿಸಿದ ಬೆಲೆಬಾಳುವ ವಸ್ತುಗಳು ಅವಳ ಶ್ರೀಮಂತಿಕೆಯನ್ನು ಸಾರಿ ಹೇಳುತ್ತಿದ್ದವು. ಕರುಣೆ- ಅನುಕಂಪ, ಸೇವಾ ಮನೋಭಾವವೇ ತನ್ನ ಜೀವಾಳ ಎಂದು ಎಲ್ಲೆಡೆ  ಹೇಳಿಕೊಂಡು ಬರುತ್ತಿದ್ದಳಲ್ಲದೇ, ಸ್ಲಂ ಏರಿಯಾದ ಬಡಮಕ್ಕಳನ್ನು ಎತ್ತಿಕೊಂಡು ನಿಂತು  ವಿಧ-ವಿಧವಾಗಿ ಕ್ಲಿಕ್ಕಿಸಿಕೊಂಡ ಫೋಟೋಗಳು ಬಿಲ್‌ ಬೋರ್ಡಗಳಲ್ಲಿ ರಾರಾಜಿಸುತ್ತಿದ್ದವು.

ಈಕೆ ಮನೆಗೆಲಸದ ಹೆಂಗಸು. ಕಡುಗಪ್ಪು ಮೈಬಣ್ಣದ, ಸಾಧಾರಣ ಮೈಕಟ್ಟು, ಎಣ್ಣೆ ಸುರಿಯುವ ಮುಖ. ಮಾಸಿದ ಸೀರೆಯನ್ನುಟ್ಟು, ಕೈಯಲ್ಲಿ ಚೀಲವೊಂದನ್ನು ಹಿಡಿದುಕೊಂಡು, ಮನೆ-ಮನೆಗೆ ತಿರುಗಿ ಕೆಲಸ ಮಾಡಿಕೊಂಡಿದ್ದವಳು. ಪುಟ್ಟ ವಠಾರವೊಂದರ ಒಂದು ರೂಮ್‌ನಲ್ಲಿ ವಾಸ. ಗುಡಿಸಲೆನ್ನಬಹುದಾದ ಮನೆಯಲ್ಲಿ ಒಂದು ಮಿಣುಕು ದೀಪ, ನೆಲಕ್ಕೆ ಹಾಸಿದ ಹರಕಲು ಚಾಪೆ, ಅವರಿವರಿಂದ ಬೇಡಿ ತಂದ ಹಳೆಯ ಸಾಮಾನುಗಳು ಇವಳ ಬಡತನವನ್ನು ಪರಿಚಯಿಸುತ್ತಿದ್ದವು. ಬದುಕಿನ ಸಂಕಷ್ಟಗಳಿಂದ ರೋಸಿ ಹೋಗಿದ್ದ ಇವಳಲ್ಲಿ ಒರಟುತನ ಮನೆ ಮಾಡಿತ್ತು. ಹಾದಿ-ಬೀದಿಗಳಲ್ಲಿ ಓಡಾಡುವಾಗಲೂ ತನ್ನಷ್ಟಕ್ಕೇ ಬೈದುಕೊಂಡಿರುತ್ತಿದ್ದಳು. ಇವಳನ್ನು ನೋಡಿದರೆ ಅಕ್ಕ-ಪಕ್ಕದ ಮನೆಯ ಮಕ್ಕಳಿಗೆಲ್ಲ ಭಯ ಹುಟ್ಟಿಕೊಳ್ಳುತ್ತಿತ್ತು.

ಆ ದಿನ ಹೈ ಸ್ಪೀಡ್‌ನಿಂದ ಬಂದ ಕಾರೊಂದು ರಸ್ತೆಯ ಪಕ್ಕದಲ್ಲಿ ಆಡಿಕೊಂಡಿದ್ದ ಪುಟ್ಟ- ಪುಟ್ಟ ಮಕ್ಕಳನ್ನು ಲೆಕ್ಕಿಸದೇ ಅವರೆಲ್ಲರನ್ನು ಗುದ್ದಿ, ನಿಲ್ಲಿಸದೇ ಅದೇ ಸ್ಪೀಡಿನಲ್ಲಿ ಮುಂದೆ ಹೋಯಿತು. ಪೆಟ್ಟು ಮಾಡಿಕೊಂಡು ರಕ್ತಸಿಕ್ತವಾಗಿದ್ದ ಮಕ್ಕಳು ರಸ್ತೆಯಲ್ಲಿ ಚೆದುರಿ ಬಿದ್ದರು. ಮನೆಗೆಲಸಕ್ಕೆ ಹೋಗುವುದು ತಡವಾಗಿ ಇನ್ನು ಮಾಲಕರ ಬೈಗುಳ ಕೇಳಬೇಕಲ್ಲ ಎಂದು ಯೋಚಿಸುತ್ತ ಅವಸರದಿಂದ ಹೋಗುತ್ತಿದ್ದ ಈಕೆಯ ಕಣ್ಣ ಮುಂದೆಯೇ ಆದ ಅಪಘಾತ ಕಂಡು ಗಾಬರಿಗೊಂಡರೂ, ಸುತ್ತ-ಮುತ್ತ ನೆರೆದಿದ್ದ ಜನಸಮೂಹವನ್ನು ಬೇಡಿಕೊಂಡು ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಯಶಸ್ವಿಯಾದಳು. ನೋವಿನಿಂದ ಒದ್ದಾಡುತ್ತಿದ್ದ ಮಕ್ಕಳನ್ನು ಎದೆಗೊತ್ತಿಕೊಂಡು ಸಮಾಧಾನಿಸಿದಳು. ಮಕ್ಕಳನ್ನು ಗುದ್ದಿ ಹೋದ ಕಾರಿನಲ್ಲಿ ಕುಳಿತಿದ್ದ ಚೆಲುವೆ, ಕನಸಿನ ರಾಣಿ ತನ್ನ ಗುರುತು ಸಿಗದಂತೆ ಮುಖಮುಚ್ಚಿಕೊಂಡಿದ್ದು ಕಾಣಿಸಿತು. ಅವಳ ಸುಂದರವಾದ ರೂಪ ಮನಸ್ಸಿನ ವಿರೂಪವನ್ನು ಪರಿಚಯಿಸಿತ್ತು!

-ಸರಿತಾ ನವಲಿ,ನ್ಯೂಜೆರ್ಸಿ

 

ಟಾಪ್ ನ್ಯೂಸ್

New Parliament; ನೂತನ ಸಂಸತ್ತಿನಲ್ಲಿದೆ ವಿಶೇಷ ಪೆಂಡ್ಯುಲಮ್‌

New Parliament; ನೂತನ ಸಂಸತ್ತಿನಲ್ಲಿದೆ ವಿಶೇಷ ಪೆಂಡ್ಯುಲಮ್‌

9 ವರ್ಷದಲ್ಲಿ ಕೇಂದ್ರದಿಂದ 38,000 ಕೋ.ರೂ… ಇನ್ನೂ 16 ಸಾವಿರ ಕೋ.ರೂ.ಗೆ ಪ್ರಸ್ತಾವನೆ

9 ವರ್ಷದಲ್ಲಿ ಕೇಂದ್ರದಿಂದ 38,000 ಕೋ.ರೂ… ಇನ್ನೂ 16 ಸಾವಿರ ಕೋ.ರೂ.ಗೆ ಪ್ರಸ್ತಾವನೆ

British ಉದ್ಯಮಿ ಬಳಿ 15 ರೋಲ್ಸ್‌ ರಾಯ್ಸ ಕಾರುಗಳು!

British ಉದ್ಯಮಿ ಬಳಿ 15 ರೋಲ್ಸ್‌ ರಾಯ್ಸ ಕಾರುಗಳು!

Mekedatu Project ಜಾರಿ ಮಾಡಿದರೆ ಹೋರಾಟ: ಪಳನಿಸ್ವಾಮಿ

Mekedatu Project ಜಾರಿ ಮಾಡಿದರೆ ಹೋರಾಟ: ಪಳನಿಸ್ವಾಮಿ

ಸೋಮೇಶ್ವರ ಬೀಚ್‌ನಲ್ಲಿ ತಂಡದಿಂದ ಮೂವರು ವಿದ್ಯಾರ್ಥಿಗಳ ಮೇಲೆ ದಾಳಿ

ಸೋಮೇಶ್ವರ ಬೀಚ್‌ನಲ್ಲಿ ತಂಡದಿಂದ ಮೂವರು ವಿದ್ಯಾರ್ಥಿಗಳ ಮೇಲೆ ದಾಳಿ

ರಷ್ಯಾ ಬಳಿಯಿದೆ 12 ಲಕ್ಷ ಕೋಟಿ ರೂ.!

ರಷ್ಯಾ ಬಳಿಯಿದೆ 12 ಲಕ್ಷ ಕೋಟಿ ರೂ.!

ಕಡಬ: ವಿದ್ಯುತ್‌ ಲೈನ್ ಸರಿಪಡಿಸುವ ವೇಳೆ ಆಘಾತ: ಲೈನ್‌ಮನ್‌ ಸಾವು

ಕಡಬ: ವಿದ್ಯುತ್‌ ಲೈನ್ ಸರಿಪಡಿಸುವ ವೇಳೆ ಆಘಾತ: ಲೈನ್‌ಮನ್‌ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DAIRY FARMING

ಸರಕಾರದ ನೆರವಿನ ನಿರೀಕ್ಷೆಯಲ್ಲಿ ಹೈನುಗಾರರು

AKHAND BHARATH

ಮಸ್ಕಿ ರಾಯಚೂರಿನದ್ದು; ನಾವುಂದದ್ದಲ್ಲ!

ONDC

ONDC ಡಿಜಿಟಲ್‌ ಸರ್ಕಾರಿ ಕಾಮರ್ಸ್‌ ವ್ಯವಸ್ಥೆ: ಏನಿದು ವ್ಯವಸ್ಥೆ? ಯಾರಿಗೆ ತರಲಿದೆ ಲಾಭ?

CIGERATTE

ತಂಬಾಕು ಸೇವನೆಯ ದುಶ್ಚಟದಿಂದ ದೂರ ಉಳಿಯೋಣ

ipl 2023

16ನೇ IPL ನೊಳಗೊಂದು ಸುತ್ತು

MUST WATCH

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

ಹೊಸ ಸೇರ್ಪಡೆ

New Parliament; ನೂತನ ಸಂಸತ್ತಿನಲ್ಲಿದೆ ವಿಶೇಷ ಪೆಂಡ್ಯುಲಮ್‌

New Parliament; ನೂತನ ಸಂಸತ್ತಿನಲ್ಲಿದೆ ವಿಶೇಷ ಪೆಂಡ್ಯುಲಮ್‌

9 ವರ್ಷದಲ್ಲಿ ಕೇಂದ್ರದಿಂದ 38,000 ಕೋ.ರೂ… ಇನ್ನೂ 16 ಸಾವಿರ ಕೋ.ರೂ.ಗೆ ಪ್ರಸ್ತಾವನೆ

9 ವರ್ಷದಲ್ಲಿ ಕೇಂದ್ರದಿಂದ 38,000 ಕೋ.ರೂ… ಇನ್ನೂ 16 ಸಾವಿರ ಕೋ.ರೂ.ಗೆ ಪ್ರಸ್ತಾವನೆ

British ಉದ್ಯಮಿ ಬಳಿ 15 ರೋಲ್ಸ್‌ ರಾಯ್ಸ ಕಾರುಗಳು!

British ಉದ್ಯಮಿ ಬಳಿ 15 ರೋಲ್ಸ್‌ ರಾಯ್ಸ ಕಾರುಗಳು!

Mekedatu Project ಜಾರಿ ಮಾಡಿದರೆ ಹೋರಾಟ: ಪಳನಿಸ್ವಾಮಿ

Mekedatu Project ಜಾರಿ ಮಾಡಿದರೆ ಹೋರಾಟ: ಪಳನಿಸ್ವಾಮಿ

ಸೋಮೇಶ್ವರ ಬೀಚ್‌ನಲ್ಲಿ ತಂಡದಿಂದ ಮೂವರು ವಿದ್ಯಾರ್ಥಿಗಳ ಮೇಲೆ ದಾಳಿ

ಸೋಮೇಶ್ವರ ಬೀಚ್‌ನಲ್ಲಿ ತಂಡದಿಂದ ಮೂವರು ವಿದ್ಯಾರ್ಥಿಗಳ ಮೇಲೆ ದಾಳಿ