ಸಿಂಗಾಪುರ ; ತೇಲುವ ಸೌರ ವಿದ್ಯುತ್‌ ಸ್ಥಾವರ


Team Udayavani, Mar 12, 2021, 6:40 AM IST

ಸಿಂಗಾಪುರ ; ತೇಲುವ ಸೌರ ವಿದ್ಯುತ್‌ ಸ್ಥಾವರ

ಹವಾಮಾನ ಬದಲಾವಣೆ ಜಗತ್ತು ಎದುರಿಸುತ್ತಿ ರುವ ಬಲುದೊಡ್ಡ ಸಮಸ್ಯೆಯಾಗಿದೆ.  ಇದರಿಂದಾಗಿ ನಾನಾ ತೆರನಾದ ಪ್ರಕೃತಿ ವಿಕೋಪಗಳು ಸಂಭವಿ ಸುತ್ತಿವೆ. ಇದನ್ನು ಸಿಂಗಾಪುರ ಗಂಭೀರವಾಗಿ ಪರಿಗಣಿ ಸಿದ್ದು ಹಸುರುಮನೆ ಅನಿಲ ಹೊರಸೂಸುವಿಕೆಯನ್ನು ತಡೆಯಲು ತೇಲುವ ಸೌರ ವಿದ್ಯುತ್‌ ಸ್ಥಾವರಗಳನ್ನು ನಿರ್ಮಿಸಲು ಮುಂದಡಿ ಇಟ್ಟಿದೆ.

ಸಿಂಗಾಪುರ ವಿಶ್ವದ ಅತೀ ಚಿಕ್ಕ ದೇಶಗಳಲ್ಲಿ ಒಂದಾಗಿದ್ದರೂ ಏಷ್ಯಾದ ಅತೀ ದೊಡ್ಡ ಮತ್ತು ಸಮೃದ್ಧ ಆರ್ಥಿಕ ಕೇಂದ್ರವಾಗಿದೆ. ಜಲವಿದ್ಯುತ್‌ , ಪವನ ವಿದ್ಯುತ್‌ ಉತ್ಪಾದನೆಗೆ ಇಲ್ಲಿ ಅವಕಾಶ ಇಲ್ಲ.  ಈ ಹಿನ್ನೆಲೆಯಲ್ಲಿ ಸಿಂಗಾಪುರ ಸೌರಶಕ್ತಿಯತ್ತ ದೃಷ್ಟಿ ನೆಟ್ಟಿದ್ದು, ತನ್ನ ಕರಾವಳಿ ಮತ್ತು ಜಲಾಶಯಗಳಲ್ಲಿ ಸೌರ ವಿದ್ಯುತ್‌ ಸ್ಥಾವರಗಳನ್ನು ಸ್ಥಾಪಿಸಲು ನಿರ್ಧರಿಸಿದೆ.

ಶೂನ್ಯ ಹೊರಸೂಸುವಿಕೆ ಗುರಿ ದೇಶವು 2030ರ ವೇಳೆಗೆ ಹಸುರುಮನೆ ಅನಿಲ ಹೊರಸೂಸುವಿಕೆಯನ್ನು ಅರ್ಧಕ್ಕೆ ಇಳಿಸುವ ಗುರಿ ಇಟ್ಟುಕೊಂಡಿದೆ. 2050ರ ವೇಳೆಗೆ ಇದನ್ನು ಶೂನ್ಯಕ್ಕೆ ಇಳಿಸುವ ಸಂಕಲ್ಪ ತೊಟ್ಟಿದೆ.

ಎಷ್ಟು ಫ‌ಲಕ?:

13,000 ಸೌರ ಫ‌ಲಕಗಳನ್ನು ಸಮುದ್ರದ ಮೇಲ್ಮೆ„ಯಲ್ಲಿ ಅಳವಡಿಸಲಾಗಿದ್ದು, ಇದು 5 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದಿಸಲಿದೆ. ಇದರಿಂದ ಇಡೀ ವರ್ಷ 1,400 ವಸತಿ ಸಮುಚ್ಚಯಗಳಿಗೆ ವಿದ್ಯುತ್‌ ಪೂರೈಸಬಹುದಾಗಿದೆ. ಚೀನದಿಂದ ಸೌರ ಫ‌ಲಕಗಳನ್ನು ಆಮದು ಮಾಡಿಕೊಂಡು ಕಾಂಕ್ರೀಟ್‌ ಬ್ಲಾಕ್‌ಗಳೊಂದಿಗೆ ಜಲಾಶಯದ ನೆಲಕ್ಕೆ ಲಂಗರು ಹಾಕಲಾಗುತ್ತದೆ.

ಪರಿಸರಸ್ನೇಹಿ ಸಿಂಗಾಪುರ:

ದೇಶದಲ್ಲಿ ಸೌರ ಶಕ್ತಿಗಾಗಿ ಕಟ್ಟಡಗಳ ಮೇಲ್ಛಾವಣಿಗಳನ್ನು ಮತ್ತು ಲಭ್ಯವಿರುವ ಭೂಮಿಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲಾಗಿದೆ. ಸರಕಾರವು ರೂಪಿಸಿರುವ ಸಮಗ್ರ ಹಸುರು ಯೋಜನೆ ಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಡುವುದು, ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆ ಮಾಡುವುದು ಮತ್ತು ಎಲೆಕ್ಟ್ರಿಕ್‌ ಕಾರುಗಳ ಬಳಕೆಯನ್ನು ಉತ್ತೇಜಿಸಲು ಹೆಚ್ಚಿನ ಚಾರ್ಜಿಂಗ್‌ ಪಾಯಿಂಟ್‌ಗಳ ನಿರ್ಮಾಣ ಸೇರಿವೆ.

 ಇಂಧನದ ಬದಲು ಸೌರಶಕ್ತಿ ಬಳಕೆ:

ಸೆಂಕಾರ್ಪ್‌ ಮತ್ತು ರಾಷ್ಟ್ರೀಯ ಜಲ ಸಂಸ್ಥೆ ಸಾರ್ವಜನಿಕ ಉಪಯು ಕ್ತತೆಗಳ ಮಂಡಳಿಯು ಅಭಿವೃದ್ಧಿಪಡಿಸಿದ ಈ ಯೋಜ ನೆಯು ಸಿಂಗಾಪುರದ ನೀರಿನ ಸಂಸ್ಕರಣ ಘಟಕಗಳಿಗೆ ವ್ಯಯಿಸುವ ಇಂಧನದ ಬದಲು ಸೌರಶಕ್ತಿಯನ್ನು ಬಳಸಲು ನೆರವಾಗುತ್ತದೆ. ಈ ಘಟಕಗಳು 7,000 ಕಾರು ಗಳಿಗೆ ಬೇಕಾಗುವ ಇಂಧನದ ಆವಶ್ಯಕತೆ ಹೊಂದಿದ್ದವು. ಆದರೆ ಈಗ ಅವುಗಳಿಗೆ ಸೌರ ವಿದ್ಯುತ್‌ ನೀಡಲಾದ ಕಾರಣ 7,000 ಕಾರುಗಳು ಹೊರ ಉಗುಳುವ ಪ್ರಮಾ ಣದ ಇಂಗಾಲಕ್ಕೆ ಕಡಿವಾಣ ಹಾಕಿದಂತಾಗುತ್ತದೆ.

 45 ಫ‌ುಟ್‌ಬಾಲ್‌  ಪಿಚ್‌ಗಳ ಗಾತ್ರ! :

ತೆಂಗೇ ಜಲಾಶಯದಲ್ಲಿಯೂ ಇದಕ್ಕೆ ಪೂರಕ ವಾದ ಯೋಜನೆ ರೂಪಿಸಲಾಗುತ್ತಿದೆ. 1,22,000 ಫ‌ಲಕಗಳ ಸೌರ ಫಾರ್ಮ್ ರಚನೆಯಾಗಲಿದೆ. ಅಂದರೆ ಇದು ಆಗ್ನೇಯ ಏಷ್ಯಾದ 45 ಫ‌ುಟ್‌ಬಾಲ್‌ ಪಿಚ್‌ಗಳ ಗಾತ್ರದಷ್ಟು ಇರಲಿದೆ.

ಟಾಪ್ ನ್ಯೂಸ್

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

4-manohar-prasad

ನುಡಿನಮನ- ಪತ್ರಿಕಾರಂಗದ ಮನೋಹರ ಪ್ರಸಾದ್‌ ಕರಾವಳಿಯ ರಾಯಭಾರಿ

1-dasdsad

Yakshagana; ಮಾತಿನ ಜರಡಿ: ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Shivratri 2024; ದಕ್ಷಿಣ ಕಾಶಿ, ಸಂಗಮ ಕ್ಷೇತ್ರ ಎನಿಸಿಕೊಂಡ ಶ್ರೀ ಸಹಸ್ತ್ರಲಿಂಗೇಶ್ವರನ ಆಲಯ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.