ಭೂಮಿಗೆ ಯಾವತ್ತಿದ್ದರೂ ಬಂಗಾರದ ಬೆಲೆ


Team Udayavani, Jan 17, 2021, 7:10 AM IST

ಭೂಮಿಗೆ ಯಾವತ್ತಿದ್ದರೂ ಬಂಗಾರದ ಬೆಲೆ

ಸ್ವಲ್ಪ ಹಣವಿದೆ. ಅದನ್ನು ಎಲ್ಲಿ ಹೂಡಿಕೆ ಮಾಡಿದರೆ ಒಳ್ಳೆಯದು?- ಹೀಗೊಂದು ಪ್ರಶ್ನೆಯನ್ನು ಹಲವರು ಕೇಳುವುದುಂಟು. ರಾಷ್ಟ್ರೀಕೃತ ಬ್ಯಾಂಕ್‌, ಅಂಚೆ ಕಚೇರಿಗಳಲ್ಲಿನ ಉಳಿ ತಾಯ ಖಾತೆಯಲ್ಲಿ ಹಣ ಇರಿಸಿದರೆ ದುಪ್ಪಟ್ಟಾಗುವುದಿಲ್ಲ, ಆದರೆ ಭದ್ರ ವಾಗಿ ಇರುತ್ತದೆ. ಪ್ರತೀ ವರ್ಷವೂ ಇಂತಿಷ್ಟು ಎಂದು ಬಡ್ಡಿ ಹಣವೂ ಸಿಗುತ್ತದೆ. ಒಂದು ಕಡೆಯಲ್ಲಿ ಇಡುಗಂಟೂ ಉಳಿಯಬೇಕು, ಇನ್ನೊಂದು ಕಡೆಯಲ್ಲಿ ಲಾಭವೂ ಸಿಗಬೇಕು ಅನ್ನುವವರು ಹಣ ಹೂಡಿಕೆಗೆ ಆರಿಸಿಕೊಳ್ಳುವ ಸರಳ ಮತ್ತು ಸುಲಭ ಮಾರ್ಗ ಇದು.

ಆದರೆ ಎಲ್ಲರಿಗೂ ಇದು ಹೂಡಿಕೆಗೆ ಸಮರ್ಪಕ ಮಾರ್ಗ ಎಂದು ಅನಿಸುವುದಿಲ್ಲ. ಅವರಿಗೆ ತಮ್ಮಲ್ಲಿರುವ ಹಣವನ್ನು ಹೇಗಾದರೂ ಮಾಡಿ ದುಪ್ಪಟ್ಟು ಮಾಡಿಕೊಳ್ಳುವ ಆಸೆ. ಅಂಥವರು ಬಡ್ಡಿಗೆ ಸಾಲ ಕೊಡುವ ಬಗ್ಗೆ ಯೋಚಿಸುತ್ತಾರೆ. ಇದು ಯಾವ ರೀತಿಯಿಂದ ಯೋಚಿಸಿದರೂ ಒಳ್ಳೆಯ ಮಾರ್ಗ ಅಲ್ಲ. ಅನಿವಾರ್ಯವಾಗಿ ಸಾಲ ಪಡೆದವರು ಅಕಸ್ಮಾತ್‌ ಸಾಲ ವಾಪಸ್‌ ಮಾಡದೇ ಹೋದರೆ, ಅಸಲು ಮತ್ತು ಬಡ್ಡಿ ಎರಡಕ್ಕೂ ಪಂಗನಾಮ.

ಈಗಿನ ಪರಿಸ್ಥಿತಿ ನೋಡಿದರೆ, ಬ್ಯಾಂಕ್‌ನ ಬಡ್ಡಿ ದರದಲ್ಲಿ ಏರಿಕೆ ಆಗುವುದು ಸಾಧ್ಯವೇ ಇಲ್ಲ. ಏನಿದ್ದರೂ ಮುಂದೆ ಈಗಿರುವ ಬಡ್ಡಿಯ ಪ್ರಮಾಣ ಕೂಡ ಕಡಿಮೆ ಆಗುತ್ತಲೇ ಹೋಗಬಹುದು ಅಷ್ಟೇ. ಇಂಥ ಸಂದರ್ಭದಲ್ಲಿ ನಾವು ಕಷ್ಟ ಪಟ್ಟು ಕೂಡಿಟ್ಟ ಹಣಕ್ಕೆ ತಕ್ಕ ಬೆಲೆ ಸಿಗಬೇಕು, ಆ ಹಣದ ಮೌಲ್ಯ ದಿನಕಳೆದಂತೆ ಹೆಚ್ಚಬೇಕು ಅನ್ನುವವರು ನಗರಗಳಲ್ಲಿ ಸೈಟ್‌ ಖರೀದಿಸುವುದು ಒಳ್ಳೆಯದು.

ಈಗ ಬರಡು ಭೂಮಿಯಂತೆ ಕಾಣಿಸಿಸುತ್ತಿರುವುದು ಕೆಲವೇ ವರ್ಷಗಳಲ್ಲಿ ನಂಬಲು ಕಷ್ಟ ಅನ್ನುವಂತೆ ಅಭಿವೃದ್ಧಿ ಹೊಂದಿದ ಹಲವು ಉದಾಹರಣೆಗಳಿವೆ. ಹಾಗಾಗಿ ಎಷ್ಟು ಬರುತ್ತದೋ ಅಷ್ಟು ಬಡ್ಡಿ ಸಾಕು ಎಂದು ಬ್ಯಾಂಕ್‌ನಲ್ಲಿ ಹಣ ಇಡುವ ಬದಲು, ಫಿಕ್ಸೆಡ್‌ ಇರಿಸಿರುವ ಒಟ್ಟು ಮೊತ್ತದಲ್ಲಿ ಅರ್ಧದಷ್ಟನ್ನು ತೆಗೆದು, ಅದರಲ್ಲಿ ಒಂದು ಚಿಕ್ಕ ಸೈಟ್‌ ಖರೀದಿಸುವುದು ಜಾಣತನ. (ಸೈಟ್‌ ಖರೀದಿಗೆಂದು ಸಾಲ ಮಾಡುವ ಮೂರ್ಖತನ ಬೇಡ) ಹೀಗೆ ಮಾಡುವುದರಿಂದ, ಹೊಸದೊಂದು ಆಸ್ತಿ ಖರೀದಿಸಿದ ತೃಪ್ತಿಯೂ ಸಿಗುತ್ತದೆ.

ಕಷ್ಟಕಾಲಕ್ಕೆ ಬ್ಯಾಂಕ್‌ನಲ್ಲಿ ಸ್ವಲ್ಪ ಹಣ ಉಳಿಸಿದ ಸಮಾಧಾನವೂ ಜತೆಯಾಗುತ್ತದೆ. ಆದರೆ ಒಂದು ವಿಷಯ ನೆನಪಲ್ಲಿ ಇರಲಿ, ಸೈಟ್‌ ಖರೀದಿಸುವಾಗ, ಸಂಬಂಧಪಟ್ಟ ದಾಖಲೆಗಳು ಒರಿಜಿನಲ್‌ ಆಗಿವೆಯೇ? ಎಂದು ಒಂದಲ್ಲ; ಹತ್ತು ಬಾರಿ ಖಚಿತ ಪಡಿಸಿಕೊಳ್ಳ ಬೇಕು. ಎಲ್ಲ ದಾಖಲೆಗಳ ಮೂಲ ಪ್ರತಿಗಳನ್ನೂ ತಪ್ಪದೇ ಪಡೆಯ ಬೇಕು. ಭೂಮಿಗೆ ಯಾವತ್ತಿದ್ದರೂ ಬಂಗಾರದ ಬೆಲೆ ಸಿಕ್ಕೇ ಸಿಗುವುದ ರಿಂದ, ಅದರ ಮೇಲೆ ಹೂಡಿದ ಹಣಕ್ಕೆ ಎಂದೂ ಮೋಸವಾಗದು.

ಐದಾರು ವರ್ಷಗಳ ಕಾಲ ದಿನನಿತ್ಯದ ಖರ್ಚು ನಿಭಾಯಿಸುವಂಥ ಉದ್ಯೋಗವಿದೆ. ಅದರ ಜತೆಗೆ ಹೆಚ್ಚುವರಿಯಾಗಿ 20 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣ ಇದೆ ಅಂದುಕೊಳ್ಳಿ; ಅಂತಹ ಸಂದರ್ಭದಲ್ಲಿ ಈ ಹಣದಲ್ಲಿ ಸೈಟ್‌ ಖರೀದಿ ಮಾಡುವುದು ಹಣ ಹೂಡಿಕೆಯಿಂದ ಲಾಭ ಮಾಡಲು ಇರುವ ಅತ್ಯುತ್ತಮ ವಿಧಾನ. ಏಕೆಂದರೆ ಹೊಟೇಲ…, ಫ್ಯಾಕ್ಟರಿ, ಕೃಷಿಯಂಥ ಯಾವುದೇ ಕ್ಷೇತ್ರದಲ್ಲಿ ಹಣ ಹೂಡಿಕೆಯಿಂದ ನಷ್ಟ ಆಗಬಹುದು. ಆದರೆ ಭೂಮಿ ಖರೀದಿಯಿಂದ ಮಾತ್ರ ಯಾವ ಕಾರಣಕ್ಕೂ ನಷ್ಟ ಆಗಲು ಸಾಧ್ಯವೇ ಇಲ್ಲ. ಹೌದು; ಈ ನೆಲಕ್ಕೆ ಯಾವತ್ತೂ ಚಿನ್ನದ ಬೆಲೆ ಇದ್ದೇ ಇದೆ.

ಟಾಪ್ ನ್ಯೂಸ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.