ಪಾರ್ಕಿಂಗ್, ಗೋಶಾಲೆ ನಿರ್ಮಾಣಕ್ಕೆ ಯೋಜನೆ
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಉಡುಪಿ ಜಿಲ್ಲೆ
Team Udayavani, Feb 23, 2022, 5:50 AM IST
ಏನೇನು ಬದಲಾವಣೆ?
ದೇವಸ್ಥಾನದ ಮುಂಭಾಗ ನವೀಕರಣ, ಆನೆಕಟ್ಟೆ ಮಂಟಪ, ಹಸು ಕಟ್ಟುವ ತಾಣ, ವಿಶಾಲ ಪಾರ್ಕಿಂಗ್, ಹಿಂಭಾಗದಲ್ಲಿಯೂ ಮಹಾದ್ವಾರ, ಹೈಟೆಕ್ ಶೌಚಾಲಯ, ಹಳೆಯ ಸೌಪರ್ಣಿಕ ಅತಿಥಿಗೃಹವನ್ನು ಕೆಡವಿ, 60 ಕೋಣೆಯ ಬೃಹತ್ ವಸತಿ ಗೃಹ ನಿರ್ಮಾಣ. ಜಡ್ಕಲ್ನಲ್ಲಿ ದೇಗುಲ ಗೋಶಾಲೆ, ಹಾಲ್ಕಲ್ನಲ್ಲಿ ಸಂಸ್ಕೃತ ಪಾಠಶಾಲೆ.
ಮಲ್ಟಿ ಲೆವೆಲ್ ಪಾರ್ಕಿಂಗ್ ವ್ಯವಸ್ಥೆ
ದೇವಸ್ಥಾನಕ್ಕೆ ದೇಶದ ನಾನಾ ಕಡೆಗಳಿಂದ ಭಕ್ತರು ಆಗಮಿಸುತ್ತಿದ್ದು, ವಾಹನ ನಿಲುಗಡೆಗೆ ಸಮಸ್ಯೆಯಾಗುತ್ತಿದೆ. ಜಾಗದ ಕೊರತೆಯೂ ಇದ್ದು, ಅದಕ್ಕಾಗಿ ಮಲ್ಟಿ ಲೆವೆಲ್ ಪಾರ್ಕಿಂಗ್ ವ್ಯವಸ್ಥೆ ಮಾಡುವ ಯೋಜನೆಯಿದೆ. ದೇಗುಲದ ವತಿಯಿಂದ ಜನರಿಗೆ ಅನುಕೂಲವಾಗುವಂತೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ 50 ಬೆಡ್ಗಳ ಆಸ್ಪತ್ರೆ, ಜಡ್ಕಲ್ನಲ್ಲಿ 9 ಎಕರೆ ಜಾಗಕ್ಕಾಗಿ ಡಿಸಿಗೆ ಪತ್ರ ಬರೆಯಲಾಗಿದ್ದು, ಗೋಶಾಲೆ ನಿರ್ಮಾಣ, ಹಾಲ್ಕಲ್ನಲ್ಲಿ ದಾನಿಯೊಬ್ಬರ ಜಾಗದಲ್ಲಿ ಸಂಸ್ಕೃತ ಪಾಠಶಾಲೆ ಮಾಡುವ ಯೋಜನೆಯಿದೆ.
ಕೊರೊನಾ ಹಿನ್ನೆಲೆಯಲ್ಲಿ ಆದಾಯ ಕುಸಿತ
ರಾಜ್ಯದಲ್ಲಿಯೇ ಹೆಚ್ಚು ಆದಾಯ ಬರುವ ದೇಗುಲಗಳಲ್ಲಿ ಕೊಲ್ಲೂರು ಸಹ ಒಂದಾಗಿದೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ವಾರ್ಷಿಕ ಆದಾಯದಲ್ಲಿ ಗಣನೀಯ ಕುಸಿತ ಕಂಡಿದೆ. ಹಿಂದೆ ವಾರ್ಷಿಕ 54-53 ಕೋ.ರೂ. ಬರುತ್ತಿತ್ತು. ಆದರೆ ಕಳೆದ ಬಾರಿ ಕೇವಲ 23 ಕೋ.ರೂ. ಸಂಗ್ರಹವಾಗಿದೆ.
ದೇವಸ್ಥಾನದಲ್ಲಿ ಈಗಾಗಲೇ ಸಮಗ್ರ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಸರಕಾರ ದಿಂದ 110 ಕೋ.ರೂ. ದೈವಸಂಕಲ್ಪದಡಿ ನೀಡಿದರೆ ಮಲ್ಟಿಲೆವೆಲ್ ಪಾರ್ಕಿಂಗ್, ಗೋಶಾಲೆ, ಶೌಚಾಲಯ, ದೇಗುಲ ನವೀಕರಣ ಇನ್ನಿತರ ಸಾಕಷ್ಟು ಯೋಜನೆಗಳಿವೆ.
-ಕೆರಾಡಿ ಚಂದ್ರಶೇಖರ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ
MUST WATCH
ಹೊಸ ಸೇರ್ಪಡೆ
Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ