ಭಕ್ತರ ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ
ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ, ಮಾಲೂರು, ಕೋಲಾರ ಜಿಲ್ಲೆ
Team Udayavani, Mar 28, 2022, 6:10 AM IST
ಏನೇನು ಬದಲಾವಣೆ?
ಭಕ್ತರಿಗಾಗಿ ವಸತಿ ಗೃಹಗಳು, ನೀರಿನ ಸೌಲಭ್ಯ, ಅನ್ನಛತ್ರ ಭವನ, ಭಕ್ತರು ದೇವರ ದರ್ಶನಕ್ಕಾಗಿ ಸಾಲಿನಲ್ಲಿ ನಿಲ್ಲಲು ಸೂಕ್ತ ನೆರಳಿನ ವ್ಯವಸ್ಥೆ.
ವಿಮಾನ ಗೋಪುರ ಕಾಮಗಾರಿ ಪ್ರಗತಿಯಲ್ಲಿ
ಆಂಧ್ರದ ತಿರುಮಲೆಯಂತೆ ಖ್ಯಾತಿ ಗಳಿಸಿರುವ ಇನ್ನೊಂದು ಯಾತ್ರಾ ಸ್ಥಳವೆಂದರೆ ಅದು ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ. ದೇಗುಲ ಭೂಮಿ ತೆರವು ಮಾಡಿ, ಅಭಿವೃದ್ಧಿ ಕಾರ್ಯಗಳು ಆರಂಭವಾಗಿವೆ. ಆ ಪೈಕಿ ಕಳೆದ ಹತ್ತಾರು ವರ್ಷಗಳಿಂದ ಅಗಬೇಕಾಗಿದ್ದ ದೇವಾಲಯ ಸುತ್ತಲಿನ ಕಾಂಪೌಂಡ್ ಗೋಡೆ ಕಾಮಗಾರಿ ಆರಂಭವಾಯಿತಾದರೂ ಅನುದಾನದ ಕೊರತೆಯಿಂದ ನಿಂತ ನೀರಾಗಿದೆ. ದೇವಾಲಯದ ಮುಂಭಾಗದಲ್ಲಿ 108 ಅಡಿಗಳ ವಿಮಾನ ಗೋಪುರ ಕಾಮಗಾರಿಯು ಸ್ಥಳೀಯ ಶಾಸಕರ ಉಸ್ತುವಾರಿಯಲ್ಲಿ ಪ್ರಗತಿಯ ಹಂತದಲ್ಲಿದೆ.
ಅನುದಾನದ ಅಗತ್ಯವಿದೆ
ದೇವಾಲಯ ಗರ್ಭಗುಡಿಯು ಶಿಥಿಲವಾಗಿರುವ ಬಗ್ಗೆ ವರದಿ ಆಧರಿಸಿದ ಧಾರ್ಮಿಕ ದತ್ತಿ ಪೀಠವು ಸಂಪೂರ್ಣ ಪರಿಶೀಲನೆ ನಡೆಸಿತ್ತಾದರೂ ಯಾವುದೇ ಆದೇಶ ನೀಡದೆ ಮೌನವಾಗಿದೆ. 108 ಅಡಿಗಳ ವಿಮಾನ ಗೋಪುರ 28 ಕೋಟಿ ರೂ. ತಡೆಗೋಡೆ ನಿರ್ಮಾಣದ ಜತೆಗೆ ಭಕ್ತರೇ ನೀಡಿರುವ ಅನ್ನದಾನ ಛತ್ರದ 2.37 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿ, ದೇಗುಲ ಹುಂಡಿ ಹಣದಲ್ಲಿ ನಡೆಯುತ್ತಿದೆ. ಸರ್ಕಾರವು ವಿಶೇಷ ಅನುದಾನ ಅಥವಾ ದೇವಾಲಯ ಹುಂಡಿ ಹಣ, ಅನ್ನದಾನದ ಛತ್ರದ ಹಣದಲ್ಲಿಯಾದರೂ ಮೂಲ ಸೌಲಭ್ಯ ಕಲ್ಪಿಸಿದಲ್ಲಿ ರಾಜ್ಯದಲ್ಲಿಯೇ ಮಾದರಿ ಯಾತ್ರ ಸ್ಥಳ ಆಗುವುದರಲ್ಲಿ ಯಾವುದೇ ಸಂದೇಹವಿ ಲ್ಲ. ದೇವಾಲಯ ಸುತ್ತಲೂ ಇರುವ 16 ಎಕರೆ ಜಾಗದಲ್ಲಿ ಧಾರ್ಮಿಕ ಮಂದಿರಗಳು ಪ್ರವಚನ ಆಲಯಗಳು, ಕಲ್ಯಾಣ ಮಂಟಪಗಳನ್ನು ನಿರ್ಮಿಸಲು ಅವಕಾಶವಿದ್ದು, ಇದೆಲ್ಲ ದೇವಾಲಯದ ಅರ್ಥಿಕ ಅಭಿವೃದ್ಧಿಗೆ ಅನುಕೂಲವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ