ಸುಖ ನಿದ್ರೆಯಲ್ಲಿದ್ದವರ ಪ್ರಾಣ ತೆಗೆದ ವಿಷ


Team Udayavani, May 8, 2020, 10:01 AM IST

ಸುಖ ನಿದ್ರೆಯಲ್ಲಿದ್ದವರ ಪ್ರಾಣ ತೆಗೆದ ವಿಷ

ಬುಧವಾರ ಮಧ್ಯರಾತ್ರಿ ಆರ್‌.ಆರ್‌. ವೆಂಕಟಾಪುರಂ ಎಂಬ ಆ ಹಳ್ಳಿಯಲ್ಲಿ ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಬುಧವಾರ ತಡ ರಾತ್ರಿ ಸುಮಾರು 2.30 ಆಗಿರಬಹುದು. ಇಡೀ ಹಳ್ಳಿಯಲ್ಲಿ ಅದೇನೋ ದಟ್ಟ ಹೊಗೆಯಂಥ ಧೂಮ ಆವರಿಸಿತ್ತು. ನಿದ್ರೆಯಲ್ಲಿದ್ದ ಯಾರಿಗೂ ಇದರ ಅರಿವಾಗಿರಲಿಲ್ಲ.

ನಿತ್ಯಕರ್ಮಕ್ಕಾಗಿ ಎದ್ದು ಮನೆಗಳಲ್ಲಿ ಲೈಟ್‌ ಆನ್‌ ಮಾಡಿಕೊಂಡು ನೀರು ಕುಡಿಯಲೋ, ನಿತ್ಯ ಕರ್ಮಕ್ಕಾಗಿಯೋ ಮನೆಯಲ್ಲಿ ಓಡಾಡಿದವರಿಗೆ ತಮ್ಮ ಓಣಿಯಲ್ಲೆಲ್ಲಾ ಏನೋ ಹೊಗೆ ತುಂಬಿಕೊಂಡಂಥ ವಾತಾವರಣ ಕಂಡುಬಂದಿತ್ತು. ಹಲವಾರು ಜನರು ಯಾರಧ್ದೋ ಮನೆಯಲ್ಲಿ ಶಾರ್ಟ್‌ ಸರ್ಕಿಟ್‌ ಆಗಿರಬಹುದು ಅಥವಾ ದೂರದಲ್ಲೆಲ್ಲೋ ಹುಲ್ಲಿನ ಬಣವೆಗೆ ಬೆಂಕಿ ಏನಾದರೂ ಹೊತ್ತಿಕೊಂಡಿರಬಹುದು. ಹಾಗಾಗಿಯೇ, ಹಳ್ಳಿಯಲ್ಲೆಲ್ಲಾ ಹೊಗೆ ತುಂಬಿಕೊಂಡಿದೆ ಎಂದು ಭಾವಿಸಿ ಮತ್ತೆ ಮುಸುಕು ಹಾಕಿಕೊಂಡು ಮಲಗಿಬಿಟ್ಟರು.

ಕೆಲವೇ ನಿಮಿಷಗಳಲ್ಲಿ ತಡೆಯಲಾರದಂಥ ಘಾಟು ವಾಸನೆ ಆವರಿಸಿತು. ಒಂದೆರಡು ಬಾರಿ ಆ ಘಾಟು ವಾಸನೆಯನ್ನು ಉಸಿರಾಡಿದ ಬೆನ್ನಲ್ಲೇ ಏಕೋ ಶ್ವಾಸಕೋಶಗಳು ಬಿಗಿದುಕೊಂಡ ಅನುಭವ, ಉಸಿರಾಟಕ್ಕೆ ತೊಂದರೆ… ಅದರ ಮರುಕ್ಷಣದಲ್ಲೇ ಅಕ್ಕಪಕ್ಕದ ಮನೆಗಳಿಂದ ಚೀತ್ಕಾರ… ನೋವಿನ ಕೂಗಾಟಗಳು.

ಎಲ್ಲರೂ ಇದ್ದಕ್ಕಿದ್ದಂತೆ ತಡಬಡಾಯಿಸಿ ಹೊರಗೆ ಬಂದು ನೋಡಿದರೆ ತಮ್ಮ ಮನೆಗಳಿಂದ ಹೊರಗಡೆ ಬರುತ್ತಿದ್ದವರಲ್ಲಿ ಹಲವಾರು ಮಂದಿ ಬೀದಿಗಳಲ್ಲೇ ಕುಸಿದು ಬೀಳುತ್ತಿದ್ದರು. ಇದನ್ನು ನೋಡಿದ ಹಲವಾರು ಜನರು ಏನಾಯಿತು ಎಂದು ಅಂದುಕೊಳ್ಳುವಷ್ಟರಲ್ಲಿ ಇವರಿಗೂ ತಲೆ ಸುತ್ತು ಬಂದು ಅವರೂ ಕುಸಿದುಬಿದ್ದರು.

ಅಲ್ಲಿದ್ದವರಿಗೆ ಅದು ಹಳ್ಳಿಗೆ ತುಸು ದೂರದಲ್ಲೇ ಇರುವ ಎಲ್‌ಜಿ ಪಾಲಿಮರ್ಸ್‌ ಕಂಪೆನಿಯಿಂದ ಏನೋ ಅವಘಡ ಆಗಿದೆ ಎಂಬುದು ನಿಧಾನವಾಗಿ ಅರಿವಾಗುತ್ತಿದ್ದಂತೆ, ಓಡಿ… ಎಲ್ಲರೂ ದೂರ ಓಡಿ ಹೋಗಿ ಎಂದು ಕೂಗುಗಳು ಕೇಳಲಾರಂಭಿಸಿದವು. ಎಲ್ಲರೂ ಸಿಕ್ಕ ಸಿಕ್ಕ ಕಡೆಗೆ ಓಡಿ ಹೋಗಲೆತ್ನಿಸಿದರು. ಆದರೆ, ಓಡಲೂ ಶಕ್ತಿಯಿಲ್ಲದೆ ಹಲವಾರು ಜನರು ಕೆಳಗೆ ಬಿದ್ದು ಉಸಿರಾಟದ ತೊಂದರೆಯಿಂದ ವಿಲವಿಲನೆ ಒದ್ದಾಡುತ್ತಾ ಪ್ರಾಣ ಬಿಟ್ಟರು. ಮಕ್ಕಳು, ಹೆಂಗಸರು, ಯುವಕರು, ವೃದ್ಧರು ಎಲ್ಲರೂ ಹಿಡಿಜೀವವನ್ನು ಅಂಗೈಯಲ್ಲಿ ಇಟ್ಟುಕೊಂಡು ಓಡಲೆತ್ನಿಸಿದರೂ ಪ್ರಯೋಜನವಾಗಲಿಲ್ಲ. ಅದರ ಪರಿಣಾಮವಾಗಿ, ಹಳ್ಳಿಯ ಓಣಿಗಳಲ್ಲಿ, ರಸ್ತೆಗಳಲ್ಲಿ, ಚರಂಡಿಗಳಲ್ಲಿ ಎಲ್ಲೆಂದರಲ್ಲಿ ಜನರು ಬಸವಳಿದು ಬಿದ್ದರು.

ಟಾಪ್ ನ್ಯೂಸ್

Odisha ಕಾಲೇಜಿನ ವಿಡಿಯೋ ಉಡುಪಿಯದ್ದು ಎಂದು ವೈರಲ್: ಕೇಸ್ ದಾಖಲು

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Odisha ಕಾಲೇಜಿನ ವಿಡಿಯೋ ಉಡುಪಿಯದ್ದು ಎಂದು ವೈರಲ್: ಕೇಸ್ ದಾಖಲು

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.