ಗೂಗಲ್ ತೋರಿದ ದಾರಿ!? …


Team Udayavani, Apr 3, 2022, 3:01 PM IST

13map

ಇಂದಿನ ಕಾಲಘಟ್ಟದಲ್ಲಿ ತಂತ್ರಜ್ಞಾನವು ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಅದರಲ್ಲೂ ಯಾವುದೇ ಮಾಹಿತಿಯನ್ನು ಪಡೆಯಲು ಅಥವಾ ಹಂಚಿಕೊಳ್ಳಲು ಅಂತರ್ಜಾಲ ಪ್ರಮುಖ ಸಾಧನವಾಗಿ ಬಳಕೆಯಾಗುತ್ತಿದೆ. ಇದನ್ನು ಅತಿಯಾಗಿ ಅನುಸರಿಸುವುದರಿಂದ ಕೆಲವೊಂದು ಎಡವಟ್ಟುಗಳೂ ನಡೆಯುತ್ತದೆ. ನನ್ನ ಜೀವನದಲ್ಲಿ ನಡೆದ ಈ ರೀತಿಯ ಒಂದು ಘಟನೆ ನಾನಿಂದು ಹೇಳಹೊರಟಿದ್ದೇನೆ.

ಚೆಸ್ ಟೂರ್ನಮೆಂಟ್ ಗೆ ದೂರದ ಊರಾದ ಗುಂಟೂರಿಗೆ ಹೋಗಿದ್ದ ಸಂದರ್ಭ. ಸ್ಪರ್ಧೆ ಮುಗಿಸಿ ತಂಡದೊಂದಿಗೆ ಸೂರಿಗೆ ಮರಳಲು ರೈಲ್ವೆ ಸ್ಟೇಷನ್ ಗೆ ಹೊರಟೆವು. ಅಲ್ಲಿಗೆ ತಲುಪಿದ ಮೇಲೆ ನಮಗೆ ತಿಳಿದದ್ದು ರೈಲು ಬರಲು ಇನ್ನೂ 1 ಗಂಟೆ ಇತ್ತು. ಮಾತು-ಕತೆ, ಹಾಡು-ನಗುವಿನಲ್ಲಿ ಮುಳುಗಿದ್ದ ನಮಗೆ ಶಾಪಿಂಗ್ ಮಾಡುವ ಐಡಿಯಾ ಬಂದಿತ್ತು. ತಕ್ಷಣ ನಮ್ಮ ತಂಡದ ಗೂಗಲ್ ಎಕ್ಸ್ಪರ್ಟ್‌ ಒಬ್ಬಳು ಗೂಗಲ್ ಸರ್ಚ್ ಮಾಡಿ ‘ಫೋರಂ ಮಾಲ್’ ಹತ್ತಿರದಲ್ಲೇ ಇದೆ ಎಂದು ಘೋಷಿಸಿಬಿಟ್ಟಳು. ಅಲ್ಲೇ ಪಕ್ಕದಲ್ಲಿ ಹೋಗುತ್ತಿದ್ದ ಆಟೋ ನಿಲ್ಲಿಸಿದೆವು. ಭಾಷೆ ಗೊತ್ತಿಲ್ಲವಾದ್ದರಿಂದ ‘ಸರ್ ಫೋರಂ ಮಾಲ್?’ ಎಂದು ಸನ್ನೆ ಮಾಡಿ ಕೇಳಿದೆವು. ಅವರು ‘ಡಿ ಮಾರ್ಟ್?’ ಅಂತ ಕೇಳಿದರು. ಇವ್ನಿಗೆ ಗೊತ್ತಿಲ್ಲ ಅನ್ಸುತ್ತೆ ಅಂದುಕೊಂಡು ಇನ್ನೊಂದು ಆಟೋ ಹಿಡಿದೆವು. ಅವರ ಕಡೆಯಿಂದಲೂ ಅದೇ ರೀತಿಯ ಪ್ರತಿಕ್ರಿಯೆ ಬಂದಿತ್ತು. ಮುಂದೆ ಗುರಿ ಹಿಂದೆ ಗುರು ಎಂಬಂತೆ ನಮ್ಮೊಂದಿಗೆ ಇದ್ದದ್ದು ಗೂಗಲ್.  ಮ್ಯಾಪ್ ಹಾಕಿಕೊಂಡು ಕಾಲ್ನಡಿಗೆಯಲ್ಲೇ ಹೊರಟೆವು. ಮುಂದೆ ಸಾಗಿದಂತೆ ನಗರದ ಗಲ್ಲಿ ಪ್ರದೇಶ ತಲುಪಿದ್ದೆವು. ಮುಖ್ಯ ರಸ್ತೆಯ ಸಂಪರ್ಕ ಕಳೆದುಕೊಂಡಂತೆ ಭಾಸವಾಗುವಂತ ದಾರಿ ಆದಾಗಿತ್ತು. ಎದುರು ಪಾಳು ಬಿದ್ದ ಪ್ರದೇಶ, ಆದರೂ  ನಡೆದು ಹೋಗಬಹುದೆಂಬ ಕುರುಹಿನಂತಿದ್ದ ದಾರಿ. ಅಲ್ಲೇ ಪೆಟ್ರೋಲ್ ಬಂಕ್ ಕಂಡು ನಿಟ್ಟುಸಿರು ಬಿಟ್ಟೆವು. ಗೂಗಲ್ ಮ್ಯಾಪ್ 2 ನಿಮಿಷದ ದಾರಿ ಎಂದು ತೋರಿಸುತ್ತಿತ್ತು. ಅದಾಗಲೇ ಖರೀದಿಸುವ ವಸ್ತುಗಳ ಪಟ್ಟಿ ತಯಾರಾಗಿತ್ತು. ಮ್ಯಾಪ್ನಲ್ಲಿ ಲೊಕೇಶನ್ ತಲುಪಿದ ಸೂಚನೆ ನೋಡಿ ಸುತ್ತಲೂ ಕಣ್ಣಾಯಿಸಿದಾಗ ತೋರಿದ್ದು ಅಪೂರ್ಣಗೊಂಡ ಕಟ್ಟಡ! ಕಾಮಗಾರಿ ಪ್ರಗತಿಯಲ್ಲಿದೆ ಎಂಬ ಫಲಕ. ವಿಪರ್ಯಾಸವೆಂದರೆ ನಿರ್ಮಾಣ ಸ್ಥಿತಿಯಲ್ಲಿದ್ದ ಆ ಕಟ್ಟಡವೇ ಫೋರಂ ಮಾಲ್! ಅಂದುಕೊಂಡ ಲೊಕೇಶನ್ ತಲುಪಿದರೂ, ಪ್ರತಿಫಲ ದೊರೆತಿರಲಿಲ್ಲ.

-ಪ್ರೀತಿ ಹಡಪದ, ಉಜಿರೆ

ಟಾಪ್ ನ್ಯೂಸ್

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.