ಟ್ರೋಲ್‌ ಸಂಸ್ಕೃತಿಗೆ ಕಡಿವಾಣ ಅಗತ್ಯ


Team Udayavani, Nov 12, 2022, 5:45 AM IST

ಟ್ರೋಲ್‌ ಸಂಸ್ಕೃತಿಗೆ ಕಡಿವಾಣ ಅಗತ್ಯ

ಒಂದು ಮಾತಿದೆ – ರಾತ್ರಿ ಕಂಡ ಬಾವಿಯಲ್ಲಿ ಹಗಲು ಬೀಳುವುದು ಎಂದು. ಈಗೀಗ ನಮ್ಮ ಸುಶಿಕ್ಷಿತ, ಬುದ್ಧಿವಂತ ಯುವಜನತೆ ಟ್ರೋಲ್‌ ಪ್ರಿಯರಾಗುತ್ತಿರುವುದನ್ನು ಕಂಡಾಗ ಈ ಮಾತು ನೆನಪಾಗುತ್ತದೆ.

ಟ್ರೋಲ್‌ ಮಾಡುವುದು ಈಗೊಂದು ಒಂದು ಫ್ಯಾಷನ್‌ನಂತಾಗಿದೆ. ತಮ್ಮ ವಿರೋಧಿಗಳು (ಅದು ವೈಯಕ್ತಿಕ ಇರ ಬಹುದು, ರಾಜಕೀಯ, ವೃತ್ತಿ ಇಂಥ ಯಾವುದೇ ಕ್ಷೇತ್ರದ ವಿರೋಧಿಗಳೂ ಆಗಿರಬಹುದು) ಏನು ಹೇಳಿದರೂ ಅದಕ್ಕೆ ರೆಕ್ಕೆಪುಕ್ಕ ಸೇರಿಸಿ, ಯಾವ್ಯಾವುದೋ ಹಾಸ್ಯ ಕಲಾವಿದರ ಚಿತ್ರವನ್ನೂ ಸೇರಿಸಿ ಕೊಂಡು ತಮಗೆ ತೋಚಿದಂತೆ ಬರೆದು ಅವಮಾನಪಡಿಸುವ ಪ್ರವೃತ್ತಿ ಹೆಚ್ಚಾಗು ತ್ತಿದೆ. ಮಾತಾಡುವಾಗ ಒಂದಿಷ್ಟು ಎಡವಿ ದರೂ ಅದನ್ನೂ ತುಂಬಾ ಕೀಳು ಮಟ್ಟ ದಲ್ಲಿ ಚಿತ್ರಿಸಿ ಟ್ರೋಲ್‌ ಮಾಡಲಾಗುತ್ತದೆ. ಇದು ಈಗ ಎಲ್ಲ ಇತಿಮಿತಿಯನ್ನೂ ದಾಟಿ ಸಾಗುತ್ತಿದ್ದು, ಸಮಾಜದ ಆರೋಗ್ಯಕ್ಕೆ ದೊಡ್ಡ ಸವಾಲಾಗುವ ಲಕ್ಷಣ ಕಂಡು ಬರುತ್ತಿದೆ. ಕೆಲವು ಸಂದರ್ಭಗಳಲ್ಲಿ ತಮ್ಮ ಆಪ್ತ ಬಳಗದವರನ್ನೂ ಟ್ರೋಲ್‌ಗೆ ಬಳಸುವುದೂ ಇದೆ.

ನಾವು ಬುದ್ಧಿವಂತರಾದರೂ ವಿವೇಕ ದಿಂದ ವರ್ತಿಸುವ ಬಗ್ಗೆ ಅಜ್ಞಾನಿಗಳೇ ಆಗಿದ್ದೇವೆ. ಎಲ್ಲವೂ ಅವಸರದ ನಿರ್ಧಾರ. ನಾವು ಮಾಡುವ ಕೆಲಸದಿಂದ ಆಗಬಹುದಾದ ಪರಿಣಾಮ, ಅಪಾಯ, ಒಳಿತು-ಕೆಡುಕಿನ ಬಗ್ಗೆ ಚಿಂತಿಸುವುದೇ ಇಲ್ಲ. ಆದ್ದರಿಂದಲೇ ಟ್ರೋಲ್‌ ಮಾಡಿ ಕಾನೂನು ಸುಳಿಗೆ ಸಿಕ್ಕಿಬಿದ್ದ ಸಾಕಷ್ಟು ಉದಾಹರಣೆಗಳಿವೆ. ಒಂದು ಕ್ಷಣದ ಅವಿವೇಕದ ಕೆಲಸದಿಂದ ಅನಗತ್ಯವಾಗಿ ಸಮಸ್ಯೆಯನ್ನು ಮೈಗೆಳೆದುಕೊಳ್ಳುವುದು ನಿಜಕ್ಕೂ ಮೂರ್ಖತನವೇ.

ಗಣ್ಯಾತಿಗಣ್ಯರನ್ನೂ ಇಂಥ ಟ್ರೋಲ್‌ಗೆ ಒಳಪಡಿಸಿ ಅವರ ವೈಯಕ್ತಿಕ ಘನತೆ ಹಾಗೂ ಅವರು ಹೊಂದಿರುವ ಹುದ್ದೆಯ ಘನತೆಯನ್ನೂ ನಾವು ಕೇವಲವಾಗಿ ಮಾಡುವುದಿದೆ. ಇದು ನಿಜಕ್ಕೂ ಅಕ್ಷಮ್ಯ. ಎಷ್ಟೋ ಬಾರಿ ಬೇನಾಮಿ ಹೆಸರಿನಿಂದ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಖಾತೆ ತೆರೆದು ಇಂಥ ತೀಟೆಯನ್ನು ತೀರಿಸುವುದೂ ಇದೆ. ಒಬ್ಬ ಇಂಥ ದ್ದೊಂದು ತಪ್ಪು ಮಾಡಿದರೆ ಹಿಂದು ಮುಂದು ನೋಡದೆ ಅದಕ್ಕೆ ಅದೇ ರೀತಿಯಲ್ಲಿ ಪ್ರತಿಕ್ರಿಯಿಸಿ ಅದನ್ನು ಅಳತೆಗೆ ಸಿಗದಷ್ಟು ಉದ್ದ, ಎತ್ತರಕ್ಕೆ ಎಳೆಯು ವವರೂ ಇದ್ದಾರೆ. ಕೆಲವರು ಮೂಲ ಹೇಳಿಕೆಯನ್ನು ತಿರುಚಿ ಟ್ರೋಲ್‌ ಮಾಡು ವುದೂ ಇದೆ. ನಮ್ಮ ದೇಶದಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂಬ ಭಾವನೆ ಹಾಗೂ ಕಾನೂನಿನ ಭೀತಿ ಯಿಲ್ಲದೆ ಇರುವುದು ಕೂಡ ಇಂಥ ಕೃತ್ಯಗಳು ಹೆಚ್ಚಾಗಲು ಪ್ರಮುಖ ಕಾರಣ.

ಟ್ರೋಲಿಗರಿಗಿಂತ ಹೆಚ್ಚಾಗಿ ಟ್ರೋಲ್‌ಗೆ ಒಳಗಾದವರು ಅನುಭವಿಸುವ ಕಿರಿ ಕಿರಿ ಅಸಹನೀಯ. ಟ್ರೋಲ್‌ಗೆ ಒಳಗಾದ ವರೂ ಒಂದು ಕುಟುಂಬದ ಸದಸ್ಯ ಎಂಬುದನ್ನು ಮರೆತು ನಮ್ಮ ಜನರು ವರ್ತಿಸುತ್ತಿರುವುದು ಆಕ್ಷೇಪಾರ್ಹ ಹಾಗೂ ಅಪಾಯಕಾರಿ ನಡೆಯಾಗಿದೆ.

ಬೇಜವಾಬ್ದಾರಿ ವ್ಯಕ್ತಿಗಳು ಸಾಮಾಜಿಕ ಮಾಧ್ಯಮಗಳನ್ನು ಒಳಿತಿಗಿಂತ ಹೆಚ್ಚಾಗಿ ಕೆಡುಕಿಗೆ ಬಳಸುತ್ತಿರುವುದು ಈಗಾಗಲೇ ಸಾಬೀತಾಗಿದೆ. ಅದರಲ್ಲಿ ಅವರು ಹೊಂದಿರುವ ಸೃಷ್ಟಿಶೀಲತೆಯೂ ಆಶ್ಚರ್ಯ ಮೂಡಿಸುತ್ತಿದೆ. ಇಂಥ ಬುದ್ಧಿ ವಂತರು ಟ್ರೋಲ್‌ ಮಾಡುವುದರ ಬಗೆಗಿನ ಅಪಾಯವನ್ನು ಯಾಕೆ ತಿಳಿದು ಕೊಳ್ಳುತ್ತಿಲ್ಲ ಎಂಬುದು ಆಶ್ಚರ್ಯದ ಸಂಗತಿ. ಒಂದು ಸಣ್ಣ ಟ್ರೋಲ್‌ ಕಿಡಿ ಭುಗಿ ಲೆದ್ದು ಎಷ್ಟೆಷ್ಟೋ ಅನಾಹುತ ಮಾಡಿರುವ ಉದಾಹರಣೆಗಳೂ ನಮ್ಮ ಮುಂದಿವೆ. ಆದರೆ ಅದೆಲ್ಲ ನಮಗೆ ಸಂಬಂಧ ಪಟ್ಟ ದ್ದಲ್ಲ ಎಂಬ ಭಾವನೆ ನಮ್ಮನ್ನು ಮತ್ತಷ್ಟು ಅಪಾಯಕ್ಕೆ ನೂಕುತ್ತಿವೆ.

ಜಾಗೃತಿ ಅಗತ್ಯ
ಟ್ರೋಲ್‌ ಮಾಡುವುದರ ಬಗೆಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಇದರ ಮೂಲಕ ಆಗುವಂಥ ಮಾನಹಾನಿ, ಅದಕ್ಕೆ ಕಾನೂನಿನಲ್ಲಿರು ವಂಥ ಶಿಕ್ಷೆಯ ಅವಕಾಶಗಳ ಬಗ್ಗೆ ಸಮಾಜಕ್ಕೆ ತಿಳಿಸುವ ಕೆಲಸ ಆಗಬೇಕಿದೆ. ಜತೆಗೆ ಸಮಾಜದ ಹಿತ ಹಾಗೂ ಆರೋಗ್ಯಕ್ಕೆ ಚ್ಯುತಿ ತರುವ ಇಂಥ ಟ್ರೋಲ್‌ಗೆ ಬ್ರೇಕ್‌ ಹಾಕಲು ಪೊಲೀಸರು ಸ್ವಯಂಪ್ರೇರಿತ ದೂರು ದಾಖಲು ಮಾಡಿ ಕೊಂಡು ಕಾನೂನು ಕ್ರಮ ಕೈಗೊಳ್ಳು ವುದೂ ಅಗತ್ಯವಾಗಿದೆ. ಇಂಥವರಿಗೆ ಕಾನೂನಿನ ಬಿಸಿ ಮುಟ್ಟದೆ ಇದ್ದರೆ ಅದು ಸರಿದಾರಿಗೆ ಬರುವುದು ಕಷ್ಟ. ಟ್ರೋಲಿಗ ರಿಗೆ ಇದೇ ರೀತಿ ಸ್ವಾತಂತ್ರ್ಯ ಮುಂದು ವರಿಸಿದರೆ ಮುಂದೆ ಸಾಕಷ್ಟು ದೊಡ್ಡ ಸಾಮಾಜಿಕ ಅಪಾಯಕ್ಕೆ ನಾವೆಲ್ಲರೂ ಸಾಕ್ಷಿಯಾಗಬೇಕಾದೀತು. ಆದ್ದರಿಂದ ಯುವ ಜನರು ಇಂಥದ್ದಕ್ಕೆಲ್ಲ ಸ್ಪಂದಿಸ ಬಾರದು. ಈ ಹೊತ್ತಿನಲ್ಲಿ ಕೇಮಾರು ಸಾಂದೀಪನಿ ಆಶ್ರಮದ ಈಶವಿಠಲದಾಸ ಶ್ರೀಗಳು ಉಪನ್ಯಾಸವೊಂದರಲ್ಲಿ ಹೇಳಿದ “ನಾವು ಟ್ರೋಲ್‌ ಮಾಡೆಲ್‌ ಆಗ ಬಾರದು, ರೋಲ್‌ ಮಾಡೆಲ್‌ ಆಗ ಬೇಕು’ ಎಂಬ ಸಾಮಾಜಿಕ ಕಾಳಜಿಯ ಮಾತು ನೆನಪಾಗುತ್ತದೆ. ಈ ಮಾತಿನಂತೆ ನಡೆದಾಗ ಜೀವನದ ಸೌಂದರ್ಯದ ಅನುಭವವಾದೀತು.

-ಪುತ್ತಿಗೆ ಪದ್ಮನಾಭ ರೈ,
ಮಣಿಪಾಲ

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.