37 ದಿನಗಳ ಸುದೀರ್ಘ ಹೋರಾಟದಲ್ಲಿ 134 ಅಡಿ ಉದ್ದದ ಅನಕೊಂಡವನ್ನು ಹೊಡೆದು ಕೊಂದದ್ದು ನಿಜವೇ?

250 ಜನ ಹಾಗೂ 2500 ಪ್ರಾಣಿಗಳನ್ನು ಕೊಂದು ತಿಂದ ಅಮೆಝಾನ್ ಕಾಡಿನ 2000 ಕಿಲೋ ತೂಕದ ದೈತ್ಯ ಹಾವಿನ ಅಸಲಿಯತ್ತು ಇಲ್ಲಿದೆ!

Team Udayavani, Oct 23, 2019, 8:54 PM IST

Anaconda-730

ವಿಶ್ವದ ಅತ್ಯಂತ ಉದ್ದದ ಅನಕೊಂಡ ಹಾವನ್ನು ಆಫ್ರಿಕಾದ ರಾಯಲ್ ಬ್ರಿಟಿಷ್ ಕಮಾಂಡೋ ಪಡೆಯ ಯೋಧರು ಸತತ 37 ದಿನಗಳ ಸುದೀರ್ಘ ಹೋರಾಟದಲ್ಲಿ ಕೊಂದು ಕೆಡಹಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಮಾಕಾಂತ್ ಕಜಾರಿಯಾ ಎಂಬ ವ್ಯಕ್ತಿ ಮಾಡಿರುವ ಈ ಪೋಸ್ಟನ್ನು ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ. ಹಾಗಾದರೆ ಇದರ ಅಸಲಿಯತ್ತೇನು ನೋಡೋಣ ಬನ್ನಿ.

‘ಆಫ್ರಿಕಾದ ಅಮೆಝಾನ್ ನದಿಯಲ್ಲಿ ಪತ್ತೆಯಾಗಿದ್ದ 134 ಅಡಿ ಉದ್ದ ಮತ್ತು ಬರೋಬ್ಬರಿ 2067 ಕಿಲೋ ತೂಗುತ್ತಿದ್ದ ಅನಕೊಂಡಾ ಹಾವೊಂದು 250 ಜನರನ್ನು ಹಾಗೂ 2300 ಪ್ರಾಣಿಗಳನ್ನು ತಿಂದು ತೇಗಿತ್ತು. ಹಾಗಾಗಿ ಈ ದೈತ್ಯ ಹಾವನ್ನು ಬೇಟೆಯಾಡಲು ಹೊರಟ ಆಫ್ರಿಕಾದ ರಾಯಲ್ ಬ್ರಿಟಿಷ್ ಕಮಾಂಡೋ ಪಡೆಯ ಯೋಧರು ಸತತ 37 ದಿನಗಳ ಸುದೀರ್ಘ ಹೋರಾಟದ ಬಳಿಕ ಕೊನೆಗೂ ಇದನ್ನು ಬೇಟೆಯಾಡಿ ಕೊಲ್ಲುವಲ್ಲಿ ಯಶಸ್ವಿಯಾಗಿದ್ದಾರೆ’ ಎಂಬ ಬರಹವಿದ್ದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮತ್ತು ಈ ಬರಹದ ಜೊತೆಗೆ ಈ ತಥಾಕಥಿತ ದೈತ್ಯ ಹಾವಿನ ಮೃತದೇಹದ ಸುತ್ತ ಜನರು ನಿಂತಿರುವ ಫೊಟೋವನ್ನು ಸಹ ಪೋಸ್ಟ್ ಮಾಡಲಾಗಿದೆ.
ವಿಶೇಷವೆಂದರೆ 2015ನೇ ಇಸವಿಯಲ್ಲಿ ಅಪ್ಲೋಡ್ ಆಗಿರುವ ಈ ಪೋಸ್ಟ್ ಈಗಲೂ ಸಹ ಫೇಸ್ಬುಕ್ ನಲ್ಲಿ ಆಗಾಗ ನಮ್ಮ ಕಣ್ಣಿಗೆ ಬೀಳುತ್ತಿದೆ. ಮತ್ತು ಈಗಲೂ ಈ ಪೋಸ್ಟ್ ನೋಡಿದವರು ಒಮ್ಮೆ ಇದನ್ನು ಓದಿ, ‘ಅಬ್ಬಾ..’ ಎಂದು ಉದ್ಘರಿಸಿ ‘ಶೇರ್’ ಬಟನ್ ಒತ್ತುತ್ತಿದ್ದಾರೆ!

ಆದರೆ ಈ ಪೋಸ್ಟ್ ನ ಸತ್ಯಾಸತ್ಯತೆಯ ಬೆನ್ನು ಹಿಡಿದು ಹೊರಟ ರಾಷ್ಟ್ರಮಟ್ಟದ ಖಾಸಗಿ ವೆಬ್ ಸೈಟ್ ಒಂದು ಈ ಪೋಸ್ಟ್ ನ ಅಸಲಿಯತ್ತನ್ನು ಬಯಲುಗೊಳಿಸಿದೆ. ಈ ವೆಬ್ ಸೈಟ್ ನಡೆಸಿರುವ ಫ್ಯಾಕ್ಟ್ ಚೆಕ್ ಪ್ರಕಾರ ಇದೊಂದು ಫೊಟೋ ಶಾಪ್ ಮಾಡಿರುವ ಚಿತ್ರವಾಗಿದ್ದು, ನಿಜವಾಗಿಯೂ ಇಷ್ಟು ದೈತ್ಯ ಗಾತ್ರದ ಅನಕೊಂಡ ಹಾವು ಇದುವರೆಗೂ ಪತ್ತೆಯಾಗಿಲ್ಲ. ಮತ್ತು ಈ ಪೋಸ್ಟ್ ನಲ್ಲಿರುವ ಅಷ್ಟೂ ಮಾಹಿತಿಗಳು ತಪ್ಪು ಎಂದು ಸಾಬೀತುಗೊಂಡಿದೆ.

ಹಾಗಾದರೆ ಈ ಪೋಸ್ಟ್ ನಲ್ಲಿರುವ ತಪ್ಪು ಅಂಶಗಳೇನು ಎಂದು ನೋಡುವುದಾದರೆ…:
– ಅಮೆಝಾನ್ ನದಿ ಹರಿಯುವುದು ದಕ್ಷಿಣ ಅಮೆರಿಕಾದಲ್ಲೇ ಹೊರತು ಆಫ್ರಿಕಾ ಖಂಡದಲ್ಲಿ ಅಲ್ಲ.

– ಇಷ್ಟೊಂದು ಮನುಷ್ಯರನ್ನು ಹಾಗೂ ಪ್ರಾಣಿಗಳನ್ನು ದೈತ್ಯ ಹಾವೊಂದು ಕೊಂದು ತಿಂದಿದೆ ಎಂಬ ವಿಷಯ ಇದುವರೆಗೂ ಒಂದೇ ಒಂದು ಮಾಧ್ಯಮಗಳಲ್ಲಿ ವರದಿಯಾಗಿಲ್ಲ.

– ಇನ್ನು ಈ ದೈತ್ಯ ಅನಕೊಂಡ ಹಾವನ್ನು ಆಫ್ರಿಕಾದ ರಾಯಲ್ ಬ್ರಿಟಿಷ್ ಕಮಾಂಡೊ ದಳದವರು ಹೊಡೆದು ಹಾಕಿದ್ದಾರೆ ಎನ್ನಲಾಗುತ್ತಿದೆ. ಆದರೆ ನಿಜವಾಗಿ ಇಂತಹ ಹೆಸರಿನ ಯಾವುದೇ ಕಮಾಂಡೊ ಪಡೆ ಅಸ್ತಿತ್ವದಲ್ಲೇ ಇಲ್ಲ.

– ಇನ್ನು 37 ದಿನಗಳ ಸುದೀರ್ಘ ಹೋರಾಟದಲ್ಲಿ ಈ ಹಾವನ್ನು ಹೊಡೆದಿರುವುದೇ ನಿಜವಾಗಿದ್ದಲ್ಲಿ, ಅಷ್ಟೊಂದು ಸುದೀರ್ಘ ಹೋರಾಟದ ಅವಧಿಯಲ್ಲಿ ಫೊಟೋದಲ್ಲಿರುವ ಹಾವಿನ ಶರೀರದ ಮೇಲೆ ಒಂದಾದರೂ ಗಾಯಗಳಿರಬೇಕಿತ್ತಲ್ಲ ಎಂದು ನೋಡಿದರೆ, ಫೊಟೋದಲ್ಲಿ ಸತ್ತು ಬಿದ್ದಿರುವ ಈ ದೈತ್ಯ ಹಾವಿನ ಮೈಮೇಲೆ ಯಾವುದೇ ರೀತಿಯ ಗಾಯಗಳಿಲ್ಲ.

– ಇನ್ನು ನ್ಯಾಷನಲ್ ಜಿಯೋಗ್ರಫಿ ಚಾನೆಲ್ ಪ್ರಕಾರ ಅಮೆಝಾನ್ ಅರಣ್ಯ ಪ್ರದೇಶದಲ್ಲಿ ಇದುವರೆಗೆ ಸಿಕ್ಕಿರುವ ಅನಕೊಂಡ ಹಾವುಗಳ ಪೈಕಿ ಅತೀ ಉದ್ದದ ಹಾವೆಂದರೆ ಅದು 30 ಅಡಿಗಳ ಗ್ರೀನ್ ಅನಕೊಂಡ. ಹಾಗಾಗಿ 134 ಅಡಿಯ ಅನಕೊಂಡ ಇದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

– ಇನ್ನು ಫೊಟೋಶಾಪ್ ಕೈಚಳಕದಲ್ಲೂ ಹಲವಾರು ತಪ್ಪುಗಳನ್ನು ಈ ಫೊಟೋ ಒಳಗೊಂಡಿದೆ. ಈ ಚಿತ್ರದಲ್ಲಿ ದೈತ್ಯ ಅನಕೊಂಡ ಹಾವಿನ ಮೂತಿ ಭಾಗ ಅಸ್ಪಷ್ಟವಾಗಿ ಗೋಚರಿಸುತ್ತದೆ.

ವಿಶ್ವದ ಈ ದೈತ್ಯ ಹಾವಿನ ಕುರಿತಾದ ಹಲವು ವಿಡಿಯೋಗಳು ಇಂಟರ್ನೆಟ್ ನಲ್ಲಿ ಈಗಲೂ ಹರಿದಾಡುತ್ತಿದೆ. ಅಂತಾರಾಷ್ಟ್ರೀಯ ಫ್ಯಾಕ್ಟ್ ಚೆಕ್ ಸಂಸ್ಥೆ ಸ್ನೋಪ್ಸ್ ಸಹ ಈ ಸುದ್ದಿಯನ್ನು ಕಪೋಲಕಲ್ಪಿತ ಎಂದು ಈ ಹಿಂದೆಯೇ ವರದಿ ಮಾಡಿತ್ತು. ಒಟ್ಟಿನಲ್ಲಿ ಈ ಮಾಹಿತಿ ತಂತ್ರಜ್ಞಾನ ಯುಗದಲ್ಲೂ ಅಸಂಬದ್ಧ ಮಾಹಿತಿಯನ್ನು ಹೊಂದಿರುವ ಪೋಸ್ಟ್ ಒಂದು ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಮತ್ತು ಜನರು ಈಗಲೂ ಈ ಪೋಸ್ಟ್ ಅನ್ನು ಶೇರ್ ಮಾಡುತ್ತಿರುವುದು ಮಾತ್ರ ವಿಚಿತ್ರವೇ ಸರಿ.

ಇನ್ನು ಮುಂದೆ ನಿಮ್ಮ ವಾಲ್ ನಲ್ಲಿ ಈ ಪೋಸ್ಟ್ ಕಂಡುಬಂದರೆ ‘ಜಸ್ಟ್ ಇಗ್ನೋರ್ ಇಟ್!’

ಟಾಪ್ ನ್ಯೂಸ್

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.